ತೆಲುಗು ನಾಡಲ್ಲಿ ಮಿಂಚಲು ಸಜ್ಜಾಗಿದ್ದಾರೆ ಕನ್ನಡ ಕಿರುತೆರೆ ನಟರು
ತೆಲುಗಿನಲ್ಲಿ ಮಾಧವ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ನಟ ವಿನಯ್
ಕನ್ನಡದವ್ರು ಗಡಿ ದಾಟಿ ಪ್ರತಿಭೆಯನ್ನ ಪ್ರದರ್ಶನ ಮಾಡುತ್ತಿದ್ದಾರೆ..!
ಕನ್ನಡದ ಕಲಾವಿದರಿಗೆ ಪರ ಭಾಷೆ ಇಂಡಸ್ಟ್ರೀ ರೆಡ್ ಕಾರ್ಪೇಟ್ ಹಾಸಿ ಕಾಯ್ತಾ ಇರುತ್ತೆ. ಅದೆಷ್ಟೋ ನಟರು ತೆಲುಗು ಕಿರುತೆರೆಯ ಮುಖ್ಯ ಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರ ಮನಸ್ಸು ಸ್ಪೆಷಲ್ ಸ್ಥಾನವನ್ನ ಪಡೆದಿದ್ದಾರೆ. ಸದ್ಯ ಈ ಸಾಲಿಗೆ ಮತ್ತೋರ್ವ ನಟ ಸೇರ್ಪಡೆಯಾಗಿದ್ದಾರೆ. ಅವರೇ ನಟ ವಿನಯ್ ಕಶ್ಯಪ್.
ಹೌದು, ನಟಿ ನಿಶಾ, ಪವಿತ್ರ, ನಟ ಯಶವಂತ್, ರಾಕಿ, ರಾಘವೇಂದ್ರ ಹೀಗೆ ಸಾಲು ಸಾಲು ಕನ್ನಡದ ಪ್ರತಿಭೆಗಳು ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ಯ ಈ ಸಾಲಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ ಹಿಟ್ಲರ್ ಕಲ್ಯಾಣ ಸೀರಿಯಲ್ನ ಚೆಲುವ ವಿನಯ್. ಕನ್ನಡತಿ, ಹಿಟ್ಲರ್ ಕಲ್ಯಾಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸುರುವ ವಿನಯ್ ಇದೇ ಮೊದಲ ಬಾರಿಗೆ ತೆಲುಗುಗೆ ಕಾಲಿಡುತ್ತಿದ್ದಾರೆ.
ಜ್ಹೀ ತೆಲುಗುನಲ್ಲಿ ಪ್ರಸಾರವಾಗುತ್ತಿರುವ ಮಿಠಾಯಿ ಕೊಟ್ಟು ಚಿಟ್ಟಮ್ಮ ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ಖಡಕ್ ಖದರ್ ಇರೋ ಮಾಧವ ಎಂಬ ಪಾತ್ರಕ್ಕೆ ಕಶ್ಯಪ್ ಬಣ್ಣ ಹಚ್ಚಿದ್ದಾರೆ.
ಎಂಜನೀಯರಿಂಗ್ಗೆ ಗುಡ್ ಬೈ ಹೇಳಿ ನಟನೆಯತ್ತ ಮುಖ ಮಾಡಿರುವ ವಿನಯ್ ಕಶ್ಯಪ್ ಈಗ ಕನ್ನಡಕ್ಕೆ ಸೀಮಿತವಾಗಿಲ್ಲ. ಗಡಿ ದಾಟಿ ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಈ ಹೊಸ ಜರ್ನಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ತೆಲುಗು ನಾಡಲ್ಲಿ ಮಿಂಚಲು ಸಜ್ಜಾಗಿದ್ದಾರೆ ಕನ್ನಡ ಕಿರುತೆರೆ ನಟರು
ತೆಲುಗಿನಲ್ಲಿ ಮಾಧವ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ನಟ ವಿನಯ್
ಕನ್ನಡದವ್ರು ಗಡಿ ದಾಟಿ ಪ್ರತಿಭೆಯನ್ನ ಪ್ರದರ್ಶನ ಮಾಡುತ್ತಿದ್ದಾರೆ..!
ಕನ್ನಡದ ಕಲಾವಿದರಿಗೆ ಪರ ಭಾಷೆ ಇಂಡಸ್ಟ್ರೀ ರೆಡ್ ಕಾರ್ಪೇಟ್ ಹಾಸಿ ಕಾಯ್ತಾ ಇರುತ್ತೆ. ಅದೆಷ್ಟೋ ನಟರು ತೆಲುಗು ಕಿರುತೆರೆಯ ಮುಖ್ಯ ಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರ ಮನಸ್ಸು ಸ್ಪೆಷಲ್ ಸ್ಥಾನವನ್ನ ಪಡೆದಿದ್ದಾರೆ. ಸದ್ಯ ಈ ಸಾಲಿಗೆ ಮತ್ತೋರ್ವ ನಟ ಸೇರ್ಪಡೆಯಾಗಿದ್ದಾರೆ. ಅವರೇ ನಟ ವಿನಯ್ ಕಶ್ಯಪ್.
ಹೌದು, ನಟಿ ನಿಶಾ, ಪವಿತ್ರ, ನಟ ಯಶವಂತ್, ರಾಕಿ, ರಾಘವೇಂದ್ರ ಹೀಗೆ ಸಾಲು ಸಾಲು ಕನ್ನಡದ ಪ್ರತಿಭೆಗಳು ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ಯ ಈ ಸಾಲಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ ಹಿಟ್ಲರ್ ಕಲ್ಯಾಣ ಸೀರಿಯಲ್ನ ಚೆಲುವ ವಿನಯ್. ಕನ್ನಡತಿ, ಹಿಟ್ಲರ್ ಕಲ್ಯಾಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸುರುವ ವಿನಯ್ ಇದೇ ಮೊದಲ ಬಾರಿಗೆ ತೆಲುಗುಗೆ ಕಾಲಿಡುತ್ತಿದ್ದಾರೆ.
ಜ್ಹೀ ತೆಲುಗುನಲ್ಲಿ ಪ್ರಸಾರವಾಗುತ್ತಿರುವ ಮಿಠಾಯಿ ಕೊಟ್ಟು ಚಿಟ್ಟಮ್ಮ ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ಖಡಕ್ ಖದರ್ ಇರೋ ಮಾಧವ ಎಂಬ ಪಾತ್ರಕ್ಕೆ ಕಶ್ಯಪ್ ಬಣ್ಣ ಹಚ್ಚಿದ್ದಾರೆ.
ಎಂಜನೀಯರಿಂಗ್ಗೆ ಗುಡ್ ಬೈ ಹೇಳಿ ನಟನೆಯತ್ತ ಮುಖ ಮಾಡಿರುವ ವಿನಯ್ ಕಶ್ಯಪ್ ಈಗ ಕನ್ನಡಕ್ಕೆ ಸೀಮಿತವಾಗಿಲ್ಲ. ಗಡಿ ದಾಟಿ ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಈ ಹೊಸ ಜರ್ನಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ