newsfirstkannada.com

ಲವರ್​ಗೆ ಮೆಸೇಜ್ ಮಾಡಿದ್ದಕ್ಕೆ ರೂಮ್​ ಮೇಟ್​ಗೆ ಚಾಕು ಇರಿದ ಸ್ನೇಹಿತ

Share :

Published June 1, 2023 at 2:36am

Update September 27, 2023 at 10:37pm

    ವಾರ್ನಿಂಗ್​ ಕೊಟ್ರು ಸ್ನೇಹಿತನ ಲವ್ವರ್​ಗೆ ಮೆಸೇಜ್​ ಮಾಡಿದ

    ಹೇಳದ್ದನ್ನು ಕೇಳದೇ ಹೋದಾಗ ರೂಂ ಮೇಟ್​ಗೆ ಚಾಕು ಇರಿದ

    ಲವ್ವರ್​ ತಂಟೆಗೆ ಹೋಗಬೇಡ ಅಂದ್ರು ಸುಮ್ಮನಿರದ ರೂಂ ಮೇಟ್​

ಮೈಸೂರು: ಲವರ್​ಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಪ್ರಕರಣ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.ಗಾಯಗೊಂಡ ಶಿವಕುಮಾರ್ ಎಂಬಾತನಿಗೆ ಚಾಕು ಇರಿತಕ್ಕೆ ಒಳಗಾಗಿದ್ದು, ಆತನನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಿಯಾ ಹಾಗೂ ಶ್ರೇಯಸ್ ಇಬ್ಬರು ಪ್ರೀತಿಸುತ್ತಿದ್ದರು. ಮತ್ತೊಂದೆಡೆ ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರು ರೂಮ್ ಮೇಟ್ ಗಳು. ಹೀಗಾಗಿ ಜನತಾ ನಗರದ ಮನೆಯೊಂದರಲ್ಲಿ ಕೊಠಡಿ ಬಾಡಿಗೆ ಪಡೆದು ಪ್ರಿಯಾ ಹಾಗೂ ಶ್ರೇಯಸ್ ತಂಗಿದ್ದರು.

 

ಶ್ರೇಯಸ್​ ರೂಂಮೇಟ್​ ಆಗಿದ್ದ ಶಿವಕುಮಾರ್ ಸ್ನೇಹಿತನ ಲವರ್ ಜೊತೆ ಸಂಪರ್ಕ ಬೆಳೆಸಿದ. ಬಳಿಕ ಆಕೆಯ ಜೊತೆ ಚಾಟ್ ಮಾಡುತ್ತಿದ್ದ.ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಲವರ್ ತಂಟೆಗೆ ಬಾರದಂತೆ ಶಿವಕುಮಾರ್ ಗೆ ಎಚ್ಚರಿಕೆ  ಕೂಡ ನೀಡಿದ್ದನು.

ಹೀಗಿದ್ದರು ಶಿವಕುಮಾರ್ ಆಗಾಗ ಪ್ರಿಯಾಗೆ ಮೆಸೇಜ್ ಮಾಡುತ್ತಿದ್ದ. ಇದೇ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಿವಕುಮಾರ್ ಗೆ ಶ್ರೇಯಸ್ ಚಾಕುವಿನಿಂದ ಇರಿದಿದ್ದಾನೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲವರ್​ಗೆ ಮೆಸೇಜ್ ಮಾಡಿದ್ದಕ್ಕೆ ರೂಮ್​ ಮೇಟ್​ಗೆ ಚಾಕು ಇರಿದ ಸ್ನೇಹಿತ

https://newsfirstlive.com/wp-content/uploads/2023/06/Mysore-Stabbed-case.jpg

    ವಾರ್ನಿಂಗ್​ ಕೊಟ್ರು ಸ್ನೇಹಿತನ ಲವ್ವರ್​ಗೆ ಮೆಸೇಜ್​ ಮಾಡಿದ

    ಹೇಳದ್ದನ್ನು ಕೇಳದೇ ಹೋದಾಗ ರೂಂ ಮೇಟ್​ಗೆ ಚಾಕು ಇರಿದ

    ಲವ್ವರ್​ ತಂಟೆಗೆ ಹೋಗಬೇಡ ಅಂದ್ರು ಸುಮ್ಮನಿರದ ರೂಂ ಮೇಟ್​

ಮೈಸೂರು: ಲವರ್​ಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಪ್ರಕರಣ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.ಗಾಯಗೊಂಡ ಶಿವಕುಮಾರ್ ಎಂಬಾತನಿಗೆ ಚಾಕು ಇರಿತಕ್ಕೆ ಒಳಗಾಗಿದ್ದು, ಆತನನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಿಯಾ ಹಾಗೂ ಶ್ರೇಯಸ್ ಇಬ್ಬರು ಪ್ರೀತಿಸುತ್ತಿದ್ದರು. ಮತ್ತೊಂದೆಡೆ ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರು ರೂಮ್ ಮೇಟ್ ಗಳು. ಹೀಗಾಗಿ ಜನತಾ ನಗರದ ಮನೆಯೊಂದರಲ್ಲಿ ಕೊಠಡಿ ಬಾಡಿಗೆ ಪಡೆದು ಪ್ರಿಯಾ ಹಾಗೂ ಶ್ರೇಯಸ್ ತಂಗಿದ್ದರು.

 

ಶ್ರೇಯಸ್​ ರೂಂಮೇಟ್​ ಆಗಿದ್ದ ಶಿವಕುಮಾರ್ ಸ್ನೇಹಿತನ ಲವರ್ ಜೊತೆ ಸಂಪರ್ಕ ಬೆಳೆಸಿದ. ಬಳಿಕ ಆಕೆಯ ಜೊತೆ ಚಾಟ್ ಮಾಡುತ್ತಿದ್ದ.ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಲವರ್ ತಂಟೆಗೆ ಬಾರದಂತೆ ಶಿವಕುಮಾರ್ ಗೆ ಎಚ್ಚರಿಕೆ  ಕೂಡ ನೀಡಿದ್ದನು.

ಹೀಗಿದ್ದರು ಶಿವಕುಮಾರ್ ಆಗಾಗ ಪ್ರಿಯಾಗೆ ಮೆಸೇಜ್ ಮಾಡುತ್ತಿದ್ದ. ಇದೇ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಿವಕುಮಾರ್ ಗೆ ಶ್ರೇಯಸ್ ಚಾಕುವಿನಿಂದ ಇರಿದಿದ್ದಾನೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More