newsfirstkannada.com

ಕಂಡಕ್ಟರ್ ಯೂನಿಫಾರ್ಮ್ ಧರಿಸಿ KSRTC ಬಸ್‌ನಲ್ಲಿ ಫ್ರೀ ಓಡಾಟ; ಕಿಲಾಡಿ ತಗ್ಲಾಕೊಂಡಿದ್ದು ಹೇಗೆ ಗೊತ್ತಾ?

Share :

02-11-2023

    ಅನುಮಾನ ಬಂದು ವಿಚಾರಣೆ ಮಾಡಿದಾಗ ಬಯಲಾಯ್ತು ಸತ್ಯ

    ಕಂಡಕ್ಟರ್ ಎಂದು ಸುಳ್ಳು ಹೇಳಿ ಸರ್ಕಾರಿ ಬಸ್​ಗಳಲ್ಲಿ ತಿರುಗಾಟ.!

    ಯೂನಿಫಾರ್ಮ್ ಧರಿಸಿ ಟಿಕೆಟ್ ಖರೀದಿಸದೇ ಬಸ್​ನಲ್ಲಿ ಪ್ರಯಾಣ

ಬೆಂಗಳೂರು: KSRTCಯ ಕಂಡಕ್ಟರ್​ ಯೂನಿಫಾರ್ಮ್ ಧರಿಸಿಕೊಂಡು ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಫ್ರಿಯಾಗಿ ಓಡಾಡುತ್ತಿದ್ದ ಕಿಲಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಬೆಳಗಾವಿಯ ಅಥಣಿ ಮೂಲದ ಆನಂದ್ ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದ ಆರೋಪಿ. ತುಮಕೂರು ಡಿಪೋದ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಂಡಕ್ಟರ್​ ಟಿಕೆಟ್​ ಕೇಳಿದ್ದಾರೆ. ಈ ವೇಳೆ ನಾನು ಕಂಡಕ್ಟರ್​ ಎಂದು ಹೇಳಿದ್ದಾನೆ. ಆದ್ರೆ ಬಸ್​ ಕಂಡಕ್ಟರ್​ಗೆ ಅನುಮಾನ ಬಂದು ಟೋಕನ್ ನಂಬರ್ ಏನು ಎಂದು ಕೇಳಿದ್ದಾರೆ. ಬಳಿಕ ಇನ್ನೊಂದೆರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಆದ್ರೆ ಯಾವುದಕ್ಕೂ ಆಸಾಮಿ ಏನು ಕೂಡ ಉತ್ತರ ಕೊಟ್ಟಿಲ್ಲ. ಅಲ್ಲದೇ ಫೇಕ್ ಬಸ್​ ಟಿಕೆಟ್​ಗಳನ್ನು ಕೂಡ ತನ್ನ ಬಳಿ ಇಟ್ಟುಕೊಂಡು ಓಡಾಡುತ್ತಿದ್ದನು. ಹೀಗಾಗಿ ಫೇಕ್​ ಕಂಡಕ್ಟರ್ ಎಂದು ಗೊತ್ತಾಗಿ ಆರೋಪಿಯನ್ನು ಹಿಡಿದು ಗೊರಗುಂಟೆಪಾಳ್ಯ ಡಿಪೋ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು.

ಬಳಿಕ ಡಿಪೋ ಅಧಿಕಾರಿಗಳು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿರುವ ಪೊಲೀಸರು ಆರೋಪಿ ಹೆಸರು ಆನಂದ್ ಎಂದು ಗೊತ್ತಾಗಿದೆ. ಅಥಣಿ ಮೂಲದ ಈತ ಬೆಂಗಳೂರಿನ ಗೊರಗುಂಟೆಪಾಳ್ಯದ ಗ್ಯಾರೇಜ್​ವೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಸದ್ಯ ಆರೋಪಿಯು ಪೊಲೀಸರ ವಶದಲ್ಲಿದ್ದು ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಡಕ್ಟರ್ ಯೂನಿಫಾರ್ಮ್ ಧರಿಸಿ KSRTC ಬಸ್‌ನಲ್ಲಿ ಫ್ರೀ ಓಡಾಟ; ಕಿಲಾಡಿ ತಗ್ಲಾಕೊಂಡಿದ್ದು ಹೇಗೆ ಗೊತ್ತಾ?

https://newsfirstlive.com/wp-content/uploads/2023/11/BNG_FAKE_CONDUCTORE.jpg

    ಅನುಮಾನ ಬಂದು ವಿಚಾರಣೆ ಮಾಡಿದಾಗ ಬಯಲಾಯ್ತು ಸತ್ಯ

    ಕಂಡಕ್ಟರ್ ಎಂದು ಸುಳ್ಳು ಹೇಳಿ ಸರ್ಕಾರಿ ಬಸ್​ಗಳಲ್ಲಿ ತಿರುಗಾಟ.!

    ಯೂನಿಫಾರ್ಮ್ ಧರಿಸಿ ಟಿಕೆಟ್ ಖರೀದಿಸದೇ ಬಸ್​ನಲ್ಲಿ ಪ್ರಯಾಣ

ಬೆಂಗಳೂರು: KSRTCಯ ಕಂಡಕ್ಟರ್​ ಯೂನಿಫಾರ್ಮ್ ಧರಿಸಿಕೊಂಡು ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಫ್ರಿಯಾಗಿ ಓಡಾಡುತ್ತಿದ್ದ ಕಿಲಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಬೆಳಗಾವಿಯ ಅಥಣಿ ಮೂಲದ ಆನಂದ್ ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದ ಆರೋಪಿ. ತುಮಕೂರು ಡಿಪೋದ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಂಡಕ್ಟರ್​ ಟಿಕೆಟ್​ ಕೇಳಿದ್ದಾರೆ. ಈ ವೇಳೆ ನಾನು ಕಂಡಕ್ಟರ್​ ಎಂದು ಹೇಳಿದ್ದಾನೆ. ಆದ್ರೆ ಬಸ್​ ಕಂಡಕ್ಟರ್​ಗೆ ಅನುಮಾನ ಬಂದು ಟೋಕನ್ ನಂಬರ್ ಏನು ಎಂದು ಕೇಳಿದ್ದಾರೆ. ಬಳಿಕ ಇನ್ನೊಂದೆರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಆದ್ರೆ ಯಾವುದಕ್ಕೂ ಆಸಾಮಿ ಏನು ಕೂಡ ಉತ್ತರ ಕೊಟ್ಟಿಲ್ಲ. ಅಲ್ಲದೇ ಫೇಕ್ ಬಸ್​ ಟಿಕೆಟ್​ಗಳನ್ನು ಕೂಡ ತನ್ನ ಬಳಿ ಇಟ್ಟುಕೊಂಡು ಓಡಾಡುತ್ತಿದ್ದನು. ಹೀಗಾಗಿ ಫೇಕ್​ ಕಂಡಕ್ಟರ್ ಎಂದು ಗೊತ್ತಾಗಿ ಆರೋಪಿಯನ್ನು ಹಿಡಿದು ಗೊರಗುಂಟೆಪಾಳ್ಯ ಡಿಪೋ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು.

ಬಳಿಕ ಡಿಪೋ ಅಧಿಕಾರಿಗಳು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿರುವ ಪೊಲೀಸರು ಆರೋಪಿ ಹೆಸರು ಆನಂದ್ ಎಂದು ಗೊತ್ತಾಗಿದೆ. ಅಥಣಿ ಮೂಲದ ಈತ ಬೆಂಗಳೂರಿನ ಗೊರಗುಂಟೆಪಾಳ್ಯದ ಗ್ಯಾರೇಜ್​ವೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಸದ್ಯ ಆರೋಪಿಯು ಪೊಲೀಸರ ವಶದಲ್ಲಿದ್ದು ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More