ಬೆಳ್ಳಿ ವಿಗ್ರಹಗಳೇ ಈ ಖತರ್ನಾಕ್ ಕಳ್ಳನ ಟಾರ್ಗೆಟ್
ಶ್ರೀ ಶರಣಬಸವೇಶ್ವರರ ಅವಳಿ ಬೆಳ್ಳಿ ಮೂರ್ತಿ ಕದ್ದ ಕಳ್ಳ
ಕೊನೆಗೂ ಪೊಲೀಸ್ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದ ಈ ಖದೀಮ
ಕಲಬುರಗಿ: ಶ್ರೀ ಶರಣಬಸವೇಶ್ವರರ ಅವಳಿ ಬೆಳ್ಳಿ ಮೂರ್ತಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸ್ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಕುಖ್ಯಾತ ಕಳ್ಳ ಗಣೇಶ್ ಜಾಧವ್ ಬಂಧಿತ ಆರೋಪಿ. ನಿಂಬರ್ಗಾ ಮತ್ತು ಹಡಲಗಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಂಬರ್ಗಾ ಠಾಣೆ ಪೊಲೀಸರಿಂದ ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ.
2021ರ ನವೆಂಬರ್ ತಿಂಗಳಲ್ಲಿ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರರ ದೇಗುಲಕ್ಕೆ ಕನ್ನ ಹಾಕಿ 4 ಕೆಜಿ ಬೆಳ್ಳಿಯ ಅವಳಿ ಮೂರ್ತಿಗಳನ್ನ ಕಳ್ಳತನ ಮಾಡಿ ಪರಾರಿಯಾಗಿದ್ದ.
ಇದರ ಜೊತೆಗೆ ಹಡಲಗಿ ಗ್ರಾಮದ ಮನೆಯೊಂದಕ್ಕೆ ಕನ್ನ ಹಾಕಿ 20 ಗ್ರಾಂ. ಚಿನ್ನ ದೋಚಿದ್ದ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಂಬರ್ಗಾ ಪೊಲೀಸ್ ಅಧಿಕಾರಿಗಳು 20 ಗ್ರಾಂ. ಚಿನ್ನ, 4 ಕೆಜಿಯ ಬೆಳ್ಳಿ ಅವಳಿ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳ್ಳಿ ವಿಗ್ರಹಗಳೇ ಈ ಖತರ್ನಾಕ್ ಕಳ್ಳನ ಟಾರ್ಗೆಟ್
ಶ್ರೀ ಶರಣಬಸವೇಶ್ವರರ ಅವಳಿ ಬೆಳ್ಳಿ ಮೂರ್ತಿ ಕದ್ದ ಕಳ್ಳ
ಕೊನೆಗೂ ಪೊಲೀಸ್ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದ ಈ ಖದೀಮ
ಕಲಬುರಗಿ: ಶ್ರೀ ಶರಣಬಸವೇಶ್ವರರ ಅವಳಿ ಬೆಳ್ಳಿ ಮೂರ್ತಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸ್ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ ಕುಖ್ಯಾತ ಕಳ್ಳ ಗಣೇಶ್ ಜಾಧವ್ ಬಂಧಿತ ಆರೋಪಿ. ನಿಂಬರ್ಗಾ ಮತ್ತು ಹಡಲಗಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಂಬರ್ಗಾ ಠಾಣೆ ಪೊಲೀಸರಿಂದ ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ.
2021ರ ನವೆಂಬರ್ ತಿಂಗಳಲ್ಲಿ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರರ ದೇಗುಲಕ್ಕೆ ಕನ್ನ ಹಾಕಿ 4 ಕೆಜಿ ಬೆಳ್ಳಿಯ ಅವಳಿ ಮೂರ್ತಿಗಳನ್ನ ಕಳ್ಳತನ ಮಾಡಿ ಪರಾರಿಯಾಗಿದ್ದ.
ಇದರ ಜೊತೆಗೆ ಹಡಲಗಿ ಗ್ರಾಮದ ಮನೆಯೊಂದಕ್ಕೆ ಕನ್ನ ಹಾಕಿ 20 ಗ್ರಾಂ. ಚಿನ್ನ ದೋಚಿದ್ದ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಂಬರ್ಗಾ ಪೊಲೀಸ್ ಅಧಿಕಾರಿಗಳು 20 ಗ್ರಾಂ. ಚಿನ್ನ, 4 ಕೆಜಿಯ ಬೆಳ್ಳಿ ಅವಳಿ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ