newsfirstkannada.com

ನಿಮ್ಮ ಕೈಯಲ್ಲಿ ಹಣ ಇದೆಯೆಂದು ಗೊತ್ತಾದರೆ ಕಳ್ಳರು ಹೀಗೆಲ್ಲ ಮಾಡಿ ದರೋಡೆ ಮಾಡ್ತಾರೆ ಹುಷಾರ್..!

Share :

21-11-2023

    ಬರೋಬ್ಬರಿ 3 ಲಕ್ಷ ರೂಪಾಯಿ ಎಗರಿಸಿದ ಕಳ್ಳರು

    ಬಿಬಿಎಂಪಿ ನೌಕರನ ಹಣ ಮುಂಡಾಯಿಸಿದ ಕಿರಾತಕರು

    ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಬೆಂಗಳೂರು: ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸಿ 3 ಲಕ್ಷ ರೂಪಾಯಿ ಎಗರಿಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 13 ರಂದು ನಡೆದಿದೆ.

ಬಿಬಿಎಂಪಿ ನೌಕರ ಗುರುಮೂರ್ತಿ ಬ್ಯಾಂಕ್​ನಿಂದ 3 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿದ್ದರು. ಹಣ ಡ್ರಾ ಮಾಡ್ತಿರೋದು ಗೊತ್ತಾಗುತ್ತಿದ್ದಂತೆ ಕಳ್ಳರು ದ್ವಿಚಕ್ರ ವಾಹನವನ್ನು ಪಂಚರ್ ಮಾಡಿದ್ದಾರೆ. ಬ್ಯಾಂಕ್​ನಿಂದ ಹಣ ಡ್ರಾ ಆಗ್ತಿದ್ದಂತೆ ಗುರುಮೂರ್ತಿ ತಮ್ಮ ಗಾಡಿ ಇದ್ದಲ್ಲಿಗೆ ಬಂದಿದ್ದರು.

ಅಲ್ಲಿ ತಮ್ಮ ದ್ವಿಚಕ್ರ ವಾಹನ ಪಂಚರ್ ಆಗಿರೋದನ್ನು ಗಮನಿಸುತ್ತಾರೆ. ಅಂತೆಯೇ ಪಂಚರ್ ಹಾಕಿಸಿ ಗಾಡಿಯನ್ನು ತೆಗೆದುಕೊಂಡು ಬರುತ್ತಾರೆ. ಮಧ್ಯಾಹ್ನ 12:30ರ ವೇಳೆಗೆ ಅಮೃತಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ ಗಾಡಿ ನಿಲ್ಲಿಸಿ ಆಫೀಸ್​ಗೆ ಹೋಗುತ್ತಾರೆ. ವಾಪಸ್ 10 ನಿಮಿಷದ ಬಳಿಕ ಗುರುಮೂರ್ತಿ ವಾಪಸ್ ಬಂದು ನೋಡುವಷ್ಟರಲ್ಲಿ ಡಿಕ್ಕಿಯಲ್ಲಿದ್ದ 3 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದಾರೆ. ಕಳ್ಳರ ಚಲನ ವಲನ ದೃಶ್ಯ, ದ್ಚಿಚಕ್ರ ವಾಹನ ಪಂಚರ್ ಮಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮ ಕೈಯಲ್ಲಿ ಹಣ ಇದೆಯೆಂದು ಗೊತ್ತಾದರೆ ಕಳ್ಳರು ಹೀಗೆಲ್ಲ ಮಾಡಿ ದರೋಡೆ ಮಾಡ್ತಾರೆ ಹುಷಾರ್..!

https://newsfirstlive.com/wp-content/uploads/2023/08/CKM-_MONEY_-MURDER_1.jpg

    ಬರೋಬ್ಬರಿ 3 ಲಕ್ಷ ರೂಪಾಯಿ ಎಗರಿಸಿದ ಕಳ್ಳರು

    ಬಿಬಿಎಂಪಿ ನೌಕರನ ಹಣ ಮುಂಡಾಯಿಸಿದ ಕಿರಾತಕರು

    ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಬೆಂಗಳೂರು: ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸಿ 3 ಲಕ್ಷ ರೂಪಾಯಿ ಎಗರಿಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 13 ರಂದು ನಡೆದಿದೆ.

ಬಿಬಿಎಂಪಿ ನೌಕರ ಗುರುಮೂರ್ತಿ ಬ್ಯಾಂಕ್​ನಿಂದ 3 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿದ್ದರು. ಹಣ ಡ್ರಾ ಮಾಡ್ತಿರೋದು ಗೊತ್ತಾಗುತ್ತಿದ್ದಂತೆ ಕಳ್ಳರು ದ್ವಿಚಕ್ರ ವಾಹನವನ್ನು ಪಂಚರ್ ಮಾಡಿದ್ದಾರೆ. ಬ್ಯಾಂಕ್​ನಿಂದ ಹಣ ಡ್ರಾ ಆಗ್ತಿದ್ದಂತೆ ಗುರುಮೂರ್ತಿ ತಮ್ಮ ಗಾಡಿ ಇದ್ದಲ್ಲಿಗೆ ಬಂದಿದ್ದರು.

ಅಲ್ಲಿ ತಮ್ಮ ದ್ವಿಚಕ್ರ ವಾಹನ ಪಂಚರ್ ಆಗಿರೋದನ್ನು ಗಮನಿಸುತ್ತಾರೆ. ಅಂತೆಯೇ ಪಂಚರ್ ಹಾಕಿಸಿ ಗಾಡಿಯನ್ನು ತೆಗೆದುಕೊಂಡು ಬರುತ್ತಾರೆ. ಮಧ್ಯಾಹ್ನ 12:30ರ ವೇಳೆಗೆ ಅಮೃತಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ ಗಾಡಿ ನಿಲ್ಲಿಸಿ ಆಫೀಸ್​ಗೆ ಹೋಗುತ್ತಾರೆ. ವಾಪಸ್ 10 ನಿಮಿಷದ ಬಳಿಕ ಗುರುಮೂರ್ತಿ ವಾಪಸ್ ಬಂದು ನೋಡುವಷ್ಟರಲ್ಲಿ ಡಿಕ್ಕಿಯಲ್ಲಿದ್ದ 3 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದಾರೆ. ಕಳ್ಳರ ಚಲನ ವಲನ ದೃಶ್ಯ, ದ್ಚಿಚಕ್ರ ವಾಹನ ಪಂಚರ್ ಮಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More