ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ ಕುಟುಂಬ
ರೈಲು ದುರಂತದಲ್ಲಿ ಬದುಕುಳಿದವರು ಬಿಚ್ಚಿಟ್ಟ ಕರಾಳ ಸತ್ಯ!
ಒಡಿಶಾ ರೈಲು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆ
ಕೋಲ್ಕತ್ತಾ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಸಮೀಪ ನಡೆದ ಎಕ್ಸ್ಪ್ರೆಸ್ ರೈಲು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದುವರೆಗೂ 280ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ಅವಘಡದಲ್ಲಿ ಸುಮಾರು 900ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಹಲವರಿಗಾಗಿ ರಕ್ಷಣಾ ಕಾರ್ಯಾಚಾರಣೆ ಮುಂದುವರಿದೆ. ಈ ಘೋರ ದುರಂತದಿಂದ ಬದುಕಿ ಬಂದ ಪಶ್ಚಿಮ ಬಂಗಾಳದ ಒಂದೇ ಕುಟುಂಬದ ಮೂವರು ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರ್ ಜಿಲ್ಲೆಯ ಮಹಿಸಾದಾಲ್ನಲ್ಲಿರೋ ಮಲುಬಾಸನ್ ಎಂಬ ಗ್ರಾಮದ ಒಂದೇ ಕುಟುಂಬದ ಮೂವರು ಬದುಕುಳಿದವರು. ಸುಬ್ರೋತೋ ಪಾಲ್, ದೆಬೋಶ್ರೀ ಪಾಲ್ ಎಂಬ ದಂಪತಿ ಮತ್ತವರ ಮಗ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಹೇಗೋ ರೈಲು ದುರಂತದಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಮಾತಾಡಿದ ಸುಬ್ರೋತೋ ಪಾಲ್, ನಮ್ಮ ಮಗನನ್ನು ಚೆನ್ನೈನಲ್ಲಿರೋ ವೈದ್ಯರನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದೆವು. ಖರಗ್ಪುರ ರೈಲ್ವೇ ನಿಲ್ದಾಣದಿಂದಲೇ ನಾವು ಚೆನ್ನೈ ಹೊರಟಿದ್ದೆವು. ಬಾಲಸೋರ್ ಟ್ರೈನ್ ಸ್ಟೇಷನ್ ಬಳಿಕ ಸ್ವಲ್ಪ ದೂರ ಬರುತ್ತಿದ್ದಂತೆ ರೈಲು ಅಲುಗಾಡಲು ಶುರುವಾಯಿತು. ಇಡೀ ಕಂಪಾರ್ಟ್ಮೆಂಟ್ ತುಂಬಾ ಹೊಗೆ ಕಾಣಿಸಿಕೊಳ್ಳಲು ಆರಂಭವಾಯ್ತು. ನಮ್ಮಿಂದ ಏನು ನೋಡಲಾಗಲಿಲ್ಲ. ಯಾರೋ ಸ್ಥಳೀಯರು ಬಂದು ನಮ್ಮನ್ನು ಎಳೆದು ಟ್ರೈನ್ನಿಂದ ಹೊರಗೆ ಹಾಕಿದಂತಾಯ್ತು. ದೇವರೆ ನಮಗೆ 2ನೇ ಜೀವ ಕೊಟ್ಟರು. ಹೇಗೋ ಬದುಕಿ ಉಳಿದೆವು. ಆದರೆ, ಈ ಘೋರ ದುರಂತದಿಂದ ಬದುಕಿದ್ದೇ ಪವಾಡ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ ಕುಟುಂಬ
ರೈಲು ದುರಂತದಲ್ಲಿ ಬದುಕುಳಿದವರು ಬಿಚ್ಚಿಟ್ಟ ಕರಾಳ ಸತ್ಯ!
ಒಡಿಶಾ ರೈಲು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆ
ಕೋಲ್ಕತ್ತಾ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಸಮೀಪ ನಡೆದ ಎಕ್ಸ್ಪ್ರೆಸ್ ರೈಲು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದುವರೆಗೂ 280ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ಅವಘಡದಲ್ಲಿ ಸುಮಾರು 900ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಹಲವರಿಗಾಗಿ ರಕ್ಷಣಾ ಕಾರ್ಯಾಚಾರಣೆ ಮುಂದುವರಿದೆ. ಈ ಘೋರ ದುರಂತದಿಂದ ಬದುಕಿ ಬಂದ ಪಶ್ಚಿಮ ಬಂಗಾಳದ ಒಂದೇ ಕುಟುಂಬದ ಮೂವರು ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರ್ ಜಿಲ್ಲೆಯ ಮಹಿಸಾದಾಲ್ನಲ್ಲಿರೋ ಮಲುಬಾಸನ್ ಎಂಬ ಗ್ರಾಮದ ಒಂದೇ ಕುಟುಂಬದ ಮೂವರು ಬದುಕುಳಿದವರು. ಸುಬ್ರೋತೋ ಪಾಲ್, ದೆಬೋಶ್ರೀ ಪಾಲ್ ಎಂಬ ದಂಪತಿ ಮತ್ತವರ ಮಗ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಹೇಗೋ ರೈಲು ದುರಂತದಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಮಾತಾಡಿದ ಸುಬ್ರೋತೋ ಪಾಲ್, ನಮ್ಮ ಮಗನನ್ನು ಚೆನ್ನೈನಲ್ಲಿರೋ ವೈದ್ಯರನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದೆವು. ಖರಗ್ಪುರ ರೈಲ್ವೇ ನಿಲ್ದಾಣದಿಂದಲೇ ನಾವು ಚೆನ್ನೈ ಹೊರಟಿದ್ದೆವು. ಬಾಲಸೋರ್ ಟ್ರೈನ್ ಸ್ಟೇಷನ್ ಬಳಿಕ ಸ್ವಲ್ಪ ದೂರ ಬರುತ್ತಿದ್ದಂತೆ ರೈಲು ಅಲುಗಾಡಲು ಶುರುವಾಯಿತು. ಇಡೀ ಕಂಪಾರ್ಟ್ಮೆಂಟ್ ತುಂಬಾ ಹೊಗೆ ಕಾಣಿಸಿಕೊಳ್ಳಲು ಆರಂಭವಾಯ್ತು. ನಮ್ಮಿಂದ ಏನು ನೋಡಲಾಗಲಿಲ್ಲ. ಯಾರೋ ಸ್ಥಳೀಯರು ಬಂದು ನಮ್ಮನ್ನು ಎಳೆದು ಟ್ರೈನ್ನಿಂದ ಹೊರಗೆ ಹಾಕಿದಂತಾಯ್ತು. ದೇವರೆ ನಮಗೆ 2ನೇ ಜೀವ ಕೊಟ್ಟರು. ಹೇಗೋ ಬದುಕಿ ಉಳಿದೆವು. ಆದರೆ, ಈ ಘೋರ ದುರಂತದಿಂದ ಬದುಕಿದ್ದೇ ಪವಾಡ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ