ತಿಲಕ್ ವರ್ಮಾ ಲೈಫ್ ಬದಲಿಸಿತು ಕೋಚ್ ಹೇಳಿದ ಒಂದು ಮಾತು
ಬ್ಯಾಟ್ ಖರೀದಿಗೆ ದುಡ್ಡು ಇರಲಿಲ್ಲ ಎಂದಾಗ ಕೋಚ್ ಪ್ಲಾನ್ ಕೊಟ್ರು
ತಿಲಕ್ ಆಟದಲ್ಲಿ ಅಂಥದ್ದೇನಿತ್ತೆಂದು ಕೋಚ್ ಸೆಲೆಕ್ಟ್ ಮಾಡಿದ್ರು ಗೊತ್ತಾ?
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ತಿಲಕ್ ವರ್ಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಸಿಕ್ಕಾಪಟ್ಟೆ ಎಕ್ಸ್ಪೆಕ್ಟೇಶನ್ ಬಿಲ್ಡ್ ಮಾಡಿರುವ ಈ ಆಟಗಾರನ ಕ್ರಿಕೆಟ್ ಜರ್ನಿನೇ ಒಂದು ಬಲು ರೋಚಕ. ಕ್ರಿಕೆಟರ್ ಆಗಬೇಕೆಂಬ ಕನಸು ಕಂಡ 10 ವರ್ಷದಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ತಿಲಕ್ ವರ್ಮಾ ಸಾಗಿ ಬಂದ ಕಲ್ಲು-ಮುಳ್ಳಿನ ಹಾದಿ ಹೇಗಿತ್ತು..?
‘ಭಾರತದ ಫ್ಯೂಚರ್ ಸ್ಟಾರ್ ಎಲ್ಲಾ ಮಾದರಿಗೆ ಸೂಕ್ತ ಬ್ಯಾಟ್ಸ್ಮನ್’
ವರ್ಷಾರಂಭದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ದಿಗ್ಗಜ ಬ್ಯಾಟ್ಸ್ಮನ್ ಸುನೀಲ್ ಗವಾಸ್ಕರ್ ಯಂಗ್ಗನ್ ತಿಲಕ್ ವರ್ಮಾ ಬಗ್ಗೆ ಆಡಿದ ಮಾತುಗಳಿವು. ಸದ್ಯ ಇವರು ಹೇಳಿದ್ದು ನಿಜವಾಗಿದೆ. 2023ನೇ ಐಪಿಎಲ್ನಲ್ಲಿ 343 ರನ್ ಚಚ್ಚಿದ ಫೈರಿ ಲೆಫ್ಟಿ ಬ್ಯಾಟ್ಸ್ಮನ್ ತಿಲಕ್ ವರ್ಮಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರೋ ವೆಸ್ಟ್ಇಂಡೀಸ್ ಎದುರಿನ ಟಿ20 ಸರಣಿಗೆ ತಿಲಕ್ ಸೆಲೆಕ್ಟ್ ಆಗಿದ್ದು, ಭಾರತ ಪರ ಆಡುವ ಬಿಗ್ ಡ್ರೀಮ್ ನನಸಾಗುವ ಕಾಲ ಬಂದಿದೆ.
11ನೇ ವರ್ಷಕ್ಕೆ ಟೆನಿಸ್ ಬಾಲ್ ಆಡಿ 20ಕ್ಕೆ ಭಾರತಕ್ಕೆ ಸೆಲೆಕ್ಟ್..!
ಅಂತರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯು ಮಾಡಲು ಸಜ್ಜಾಗಿರೋ ತಿಲಕ್ ವರ್ಮಾರ ಕ್ರಿಕೆಟ್ ಜರ್ನಿ ಶುರುವಾಗಿದ್ದೇ 11ನೇ ವರ್ಷಕ್ಕೆ. ಟೈಮ್ಪಾಸ್ಗಾಗಿ ಫ್ರೆಂಡ್ಸ್ ಜೊತೆ ಟೆನಿಸ್ ಕ್ರಿಕೆಟ್ ಆಡ್ತಿದ್ದ ತಿಲಕ್ ಒಮ್ಮೆ ಕೋಚ್ ಸಲಾಮ್ ಬಯಾಶ್ ಕಣ್ಣಿಗೆ ಬೀಳ್ತಾರೆ. ತಿಲಕ್ರ ಬ್ಯಾಟಿಂಗ್ ಸ್ಟ್ರೈಲ್ಗೆ ಫಿದಾ ಆದ ಕೋಚ್, ಕೂಡಲೇ ಅವರ ತಂದೆಗೆ ಫೋನ್ ಮಾಡಿ ತಿಲಕ್ರನ್ನ ತಮ್ಮ ಅಕಾಡೆಮಿಗೆ ಕಳುಹಿಸುವಂತೆ ಮನವಿ ಮಾಡಿಕೊಳ್ತಾರೆ. ಆಗ ತಿಲಕ್ ತಂದೆ ಆನ್ಸರ್ ಕೇಳಿ ಕೋಚ್ ಸಲಾಮ್ ಬಯಾಶ್ ಒಂದು ಕ್ಷಣ ಶಾಕ್ ಆಗಿ ಬಿಡ್ತಾರೆ.
ಮಗನ ಮಹಾದಾಸೆಗೆ ತಂದೆಯೇ ಅಡ್ಡಗಾಲು.!
ಕೋಚ್ ಸಲಾಮ್ ಬಯಾಶ್ ಏನೋ ತಿಲಕ್ ವರ್ಮಾಗೆ ಕ್ರಿಕೆಟ್ ಆಸೆಯನ್ನ ಹುಟ್ಟಿಸ್ತಾರೆ. ಆದ್ರೆ ತಿಲಕ್ ತಂದೆ ನಂಬೂರಿ ನಾಗರಾಜು ಮಗನನ್ನ ಕ್ರಿಕೆಟರ್ ಮಾಡಲು ಒಪ್ಪಲ್ಲ. ಯಾಕಂದ್ರೆ ನಂಬೂರಿ ನಾಗರಾಜು ಓರ್ವ ಸಾಮಾನ್ಯ ಎಲಿಕ್ಟ್ರಿಶಿಯನ್. ಸಣ್ಣ ದುಡಿಮೆ. ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲಾಗಿತ್ತು. ಆದ್ರೆ, ಕೋಚ್ ಹೇಳಿದ ಆ ಒಂದು ಧೈರ್ಯ ಮಾತು ತಿಲಕ್ ಕ್ರಿಕೆಟರ್ ಆಗುವ ಕನಸಿಗೆ ರೆಕ್ಕೆಪುಕ್ಕ ಕಟ್ಟಿತು.
‘ತಿಲಕ್ ತಂದೆ ಆರಂಭದಲ್ಲಿ ಒಪ್ಪಿರಲಿಲ್ಲ’
ಹಣಕಾಸಿನ ತೊಂದರೆಯಿಂದ ತಿಲಕ್ ವರ್ಮಾ ತಂದೆ ಆರಂಭದಲ್ಲಿ ಇದಕ್ಕೆ ಒಪ್ಪಿರಲಿಲ್ಲ. ಯಾಕಂದ್ರೆ, ನನ್ನ ಕೋಚಿಂಗ್ ಸೆಂಟರ್ 40 ಕಿಲೋ ಮೀಟರ್ ದೂರದಲ್ಲಿತ್ತು. ಆದ್ರೆ, ಅವರ ಮನೆ ನಾನಿರುವ ಜಾಗದಿಂದ 2 ಕಿ.ಮೀ ದೂರದಲ್ಲಿತ್ತು. ಹೀಗಾಗಿ ತಿಲಕ್ರ ಸಾರಿಗೆ ವೆಚ್ಚದ ಜವಾಬ್ದಾರಿ ನಾನೇ ವಹಿಸುಕೊಳ್ಳುವೆ. ನಿಮಗೆ ಪಿಕ್ ಅಪ್ ಮತ್ತು ಡ್ರಾಪ್ ಸಮಸ್ಯೆ ಇರಲಾರದು. ಜೊತೆಗೆ ಅವನ ಶುಲ್ಕವನ್ನ ನಾನೇ ಭರಿಸುವೆ ಎಂದು ಹೇಳಿದೆ. ಕೊನೆಗೆ ತಿಲಕ್ ವರ್ಮಾ ತಂದೆ ಒಪ್ಪಿಕೊಂಡರು.
ಸಲಾಮ್ ಬಯಾಶ್, ತಿಲಕ್ ವರ್ಮಾ ಕೋಚ್
ನಿತ್ಯ 40 ಕಿ.ಮೀ ಪ್ರಯಾಣ.. ಬೈಕ್ನಲ್ಲೇ ತಿಲಕ್ ನಿದ್ರೆ..!
ಸಲಾಮ್ ಬಯಾಶ್ ಅವರ ಗರಡಿಯಲ್ಲಿ ಬೆಳೆದ ತಿಲಕ್ ವರ್ಮಾಗೆ ಆರಂಭದಲ್ಲಿ ಪ್ರಯಾಣವೇ ದೊಡ್ಡ ಸವಾಲಾಗಿತ್ತು. ಯಾಕಂದ್ರೆ ಲಿಂಗಂಪಳ್ಳಿ ಟ್ರೈನಿಂಗ್ ಅಕಾಡೆಮಿ ತಿಲಕ್ ಮನೆಯಿಂದ 40 ಕಿ.ಮೀ ದೂರದಲ್ಲಿತ್ತು. ಬೆಳಗ್ಗೆ 5 ಗಂಟೆಗೆ ಎದ್ದು ಕೋಚ್ ಜೊತೆ ಬೈಕ್ನಲ್ಲಿ ತೆರಳುತ್ತಿದ್ದ ತಿಲಕ್ ಅದೆಷ್ಟೋ ಬಾರಿ ರೈಡಿಂಗ್ ವೇಳೆನೆ ನಿದ್ರಿಸಿದ ಉದಾಹರಣೆಗಳಿವೆ.
‘ಬೈಕ್ನಲ್ಲಿ ತಿಲಕ್ ವರ್ಮಾ ನಿದ್ರಿಸುತ್ತಿದ್ದರು’
ನನ್ನ ಹಿಂದೆ ಕುಳಿತುಕೊಳ್ಳುತ್ತಿದ್ದ ತಿಲಕ್ ವರ್ಮಾ ಕೆಲವೊಮ್ಮೆ ನಿದ್ರಿಸುತ್ತಿದ್ದರು. ಹಾಗಾಗಿ ನಾನು ಬಹಳ ಎಚ್ಚರಿಕೆಯಿಂದ ಬೈಕ್ ಚಲಿಸುತ್ತಿದ್ದೆ. ಎಷ್ಟೋ ಬಾರಿ ಗಾಡಿ ನಿಲ್ಲಿಸಿ, ಮುಖ ತೊಳೆಸಿಕೊಂಡು ಕರ್ಕೊಂಡು ಹೋಗಿದ್ದೇನೆ.
ಸಲಾಮ್ ಬಯಾಶ್, ತಿಲಕ್ ವರ್ಮಾ ಕೋಚ್
ಬ್ಯಾಟ್ ಕೊಳ್ಳಲು ದುಡ್ಡಿಲ್ಲ.. ಕೋಚ್ ಮಾಡಿದ್ರು ಸೂಪರ್ ಪ್ಲಾನ್
ಕಡು ಬಡತನದಲ್ಲಿ ಬೆಳೆದ ತಿಲಕ್ ವರ್ಮಾಗೆ ಆರಂಭದಲ್ಲಿ ಒಂದು ಬ್ಯಾಟ್ ಕೊಳ್ಳಲು ದುಡ್ಡಿರ್ಲಿಲ್ಲ. ಆಗ ಕೋಚ್ ಒಂದು ಸೂಪರ್ ಪ್ಲಾನ್ ಮಾಡಿದ್ರು. ಅದೇನಂದ್ರೆ ಟೂನರ್ಮೆಂಟ್ಗಳಲ್ಲಿ ನೀನು ಸೆಂಚುರಿ ಹೊಡೆದ್ರೆ ಬ್ಯಾಟ್ ಕೊಡಿಸುವೆ ಎಂದು ಹೇಳಿದ್ರು. ಸಲಾಂ ಬಯಾಶ್ ಇಷ್ಟು ಹೇಳಿದ್ದೇ ತಡ ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ 900 ರನ್ ಚಚ್ಚಿ ಹೈದ್ರಾಬಾದ್ ರಣಜಿ ತಂಡದಲ್ಲಿ ಸ್ಥಾನ ಪಡೆದ್ರು. ಬಳಿಕ ಐಪಿಎಲ್ನಲ್ಲಿ ರನ್ ಭರಾಟೆ. ಅಲ್ಲಿಂದ ಸೀದಾ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ.
20ರ ತಿಲಕ್ ವರ್ಮಾ ಬೆಂಕಿಯಲ್ಲಿ ಅರಳಿದ ಹೂವು ಅನ್ನೋದ್ರಲ್ಲ ಎರಡು ಮಾತಿಲ್ಲ. ಕಲ್ಲು ಮುಳ್ಳಿನ ಹಾದಿ ಸವೆದಿರೋ ಲೆಫ್ಟಿ ಬ್ಯಾಟ್ಸ್ಮನ್ ಟೀಮ್ ಇಂಡಿಯಾದಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಲಿ. ತಿವಿಕ್ರಮನಾಗಿ ಮೆರೆದಾಡಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ತಿಲಕ್ ವರ್ಮಾ ಲೈಫ್ ಬದಲಿಸಿತು ಕೋಚ್ ಹೇಳಿದ ಒಂದು ಮಾತು
ಬ್ಯಾಟ್ ಖರೀದಿಗೆ ದುಡ್ಡು ಇರಲಿಲ್ಲ ಎಂದಾಗ ಕೋಚ್ ಪ್ಲಾನ್ ಕೊಟ್ರು
ತಿಲಕ್ ಆಟದಲ್ಲಿ ಅಂಥದ್ದೇನಿತ್ತೆಂದು ಕೋಚ್ ಸೆಲೆಕ್ಟ್ ಮಾಡಿದ್ರು ಗೊತ್ತಾ?
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ತಿಲಕ್ ವರ್ಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಸಿಕ್ಕಾಪಟ್ಟೆ ಎಕ್ಸ್ಪೆಕ್ಟೇಶನ್ ಬಿಲ್ಡ್ ಮಾಡಿರುವ ಈ ಆಟಗಾರನ ಕ್ರಿಕೆಟ್ ಜರ್ನಿನೇ ಒಂದು ಬಲು ರೋಚಕ. ಕ್ರಿಕೆಟರ್ ಆಗಬೇಕೆಂಬ ಕನಸು ಕಂಡ 10 ವರ್ಷದಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ತಿಲಕ್ ವರ್ಮಾ ಸಾಗಿ ಬಂದ ಕಲ್ಲು-ಮುಳ್ಳಿನ ಹಾದಿ ಹೇಗಿತ್ತು..?
‘ಭಾರತದ ಫ್ಯೂಚರ್ ಸ್ಟಾರ್ ಎಲ್ಲಾ ಮಾದರಿಗೆ ಸೂಕ್ತ ಬ್ಯಾಟ್ಸ್ಮನ್’
ವರ್ಷಾರಂಭದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ದಿಗ್ಗಜ ಬ್ಯಾಟ್ಸ್ಮನ್ ಸುನೀಲ್ ಗವಾಸ್ಕರ್ ಯಂಗ್ಗನ್ ತಿಲಕ್ ವರ್ಮಾ ಬಗ್ಗೆ ಆಡಿದ ಮಾತುಗಳಿವು. ಸದ್ಯ ಇವರು ಹೇಳಿದ್ದು ನಿಜವಾಗಿದೆ. 2023ನೇ ಐಪಿಎಲ್ನಲ್ಲಿ 343 ರನ್ ಚಚ್ಚಿದ ಫೈರಿ ಲೆಫ್ಟಿ ಬ್ಯಾಟ್ಸ್ಮನ್ ತಿಲಕ್ ವರ್ಮಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರೋ ವೆಸ್ಟ್ಇಂಡೀಸ್ ಎದುರಿನ ಟಿ20 ಸರಣಿಗೆ ತಿಲಕ್ ಸೆಲೆಕ್ಟ್ ಆಗಿದ್ದು, ಭಾರತ ಪರ ಆಡುವ ಬಿಗ್ ಡ್ರೀಮ್ ನನಸಾಗುವ ಕಾಲ ಬಂದಿದೆ.
11ನೇ ವರ್ಷಕ್ಕೆ ಟೆನಿಸ್ ಬಾಲ್ ಆಡಿ 20ಕ್ಕೆ ಭಾರತಕ್ಕೆ ಸೆಲೆಕ್ಟ್..!
ಅಂತರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯು ಮಾಡಲು ಸಜ್ಜಾಗಿರೋ ತಿಲಕ್ ವರ್ಮಾರ ಕ್ರಿಕೆಟ್ ಜರ್ನಿ ಶುರುವಾಗಿದ್ದೇ 11ನೇ ವರ್ಷಕ್ಕೆ. ಟೈಮ್ಪಾಸ್ಗಾಗಿ ಫ್ರೆಂಡ್ಸ್ ಜೊತೆ ಟೆನಿಸ್ ಕ್ರಿಕೆಟ್ ಆಡ್ತಿದ್ದ ತಿಲಕ್ ಒಮ್ಮೆ ಕೋಚ್ ಸಲಾಮ್ ಬಯಾಶ್ ಕಣ್ಣಿಗೆ ಬೀಳ್ತಾರೆ. ತಿಲಕ್ರ ಬ್ಯಾಟಿಂಗ್ ಸ್ಟ್ರೈಲ್ಗೆ ಫಿದಾ ಆದ ಕೋಚ್, ಕೂಡಲೇ ಅವರ ತಂದೆಗೆ ಫೋನ್ ಮಾಡಿ ತಿಲಕ್ರನ್ನ ತಮ್ಮ ಅಕಾಡೆಮಿಗೆ ಕಳುಹಿಸುವಂತೆ ಮನವಿ ಮಾಡಿಕೊಳ್ತಾರೆ. ಆಗ ತಿಲಕ್ ತಂದೆ ಆನ್ಸರ್ ಕೇಳಿ ಕೋಚ್ ಸಲಾಮ್ ಬಯಾಶ್ ಒಂದು ಕ್ಷಣ ಶಾಕ್ ಆಗಿ ಬಿಡ್ತಾರೆ.
ಮಗನ ಮಹಾದಾಸೆಗೆ ತಂದೆಯೇ ಅಡ್ಡಗಾಲು.!
ಕೋಚ್ ಸಲಾಮ್ ಬಯಾಶ್ ಏನೋ ತಿಲಕ್ ವರ್ಮಾಗೆ ಕ್ರಿಕೆಟ್ ಆಸೆಯನ್ನ ಹುಟ್ಟಿಸ್ತಾರೆ. ಆದ್ರೆ ತಿಲಕ್ ತಂದೆ ನಂಬೂರಿ ನಾಗರಾಜು ಮಗನನ್ನ ಕ್ರಿಕೆಟರ್ ಮಾಡಲು ಒಪ್ಪಲ್ಲ. ಯಾಕಂದ್ರೆ ನಂಬೂರಿ ನಾಗರಾಜು ಓರ್ವ ಸಾಮಾನ್ಯ ಎಲಿಕ್ಟ್ರಿಶಿಯನ್. ಸಣ್ಣ ದುಡಿಮೆ. ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲಾಗಿತ್ತು. ಆದ್ರೆ, ಕೋಚ್ ಹೇಳಿದ ಆ ಒಂದು ಧೈರ್ಯ ಮಾತು ತಿಲಕ್ ಕ್ರಿಕೆಟರ್ ಆಗುವ ಕನಸಿಗೆ ರೆಕ್ಕೆಪುಕ್ಕ ಕಟ್ಟಿತು.
‘ತಿಲಕ್ ತಂದೆ ಆರಂಭದಲ್ಲಿ ಒಪ್ಪಿರಲಿಲ್ಲ’
ಹಣಕಾಸಿನ ತೊಂದರೆಯಿಂದ ತಿಲಕ್ ವರ್ಮಾ ತಂದೆ ಆರಂಭದಲ್ಲಿ ಇದಕ್ಕೆ ಒಪ್ಪಿರಲಿಲ್ಲ. ಯಾಕಂದ್ರೆ, ನನ್ನ ಕೋಚಿಂಗ್ ಸೆಂಟರ್ 40 ಕಿಲೋ ಮೀಟರ್ ದೂರದಲ್ಲಿತ್ತು. ಆದ್ರೆ, ಅವರ ಮನೆ ನಾನಿರುವ ಜಾಗದಿಂದ 2 ಕಿ.ಮೀ ದೂರದಲ್ಲಿತ್ತು. ಹೀಗಾಗಿ ತಿಲಕ್ರ ಸಾರಿಗೆ ವೆಚ್ಚದ ಜವಾಬ್ದಾರಿ ನಾನೇ ವಹಿಸುಕೊಳ್ಳುವೆ. ನಿಮಗೆ ಪಿಕ್ ಅಪ್ ಮತ್ತು ಡ್ರಾಪ್ ಸಮಸ್ಯೆ ಇರಲಾರದು. ಜೊತೆಗೆ ಅವನ ಶುಲ್ಕವನ್ನ ನಾನೇ ಭರಿಸುವೆ ಎಂದು ಹೇಳಿದೆ. ಕೊನೆಗೆ ತಿಲಕ್ ವರ್ಮಾ ತಂದೆ ಒಪ್ಪಿಕೊಂಡರು.
ಸಲಾಮ್ ಬಯಾಶ್, ತಿಲಕ್ ವರ್ಮಾ ಕೋಚ್
ನಿತ್ಯ 40 ಕಿ.ಮೀ ಪ್ರಯಾಣ.. ಬೈಕ್ನಲ್ಲೇ ತಿಲಕ್ ನಿದ್ರೆ..!
ಸಲಾಮ್ ಬಯಾಶ್ ಅವರ ಗರಡಿಯಲ್ಲಿ ಬೆಳೆದ ತಿಲಕ್ ವರ್ಮಾಗೆ ಆರಂಭದಲ್ಲಿ ಪ್ರಯಾಣವೇ ದೊಡ್ಡ ಸವಾಲಾಗಿತ್ತು. ಯಾಕಂದ್ರೆ ಲಿಂಗಂಪಳ್ಳಿ ಟ್ರೈನಿಂಗ್ ಅಕಾಡೆಮಿ ತಿಲಕ್ ಮನೆಯಿಂದ 40 ಕಿ.ಮೀ ದೂರದಲ್ಲಿತ್ತು. ಬೆಳಗ್ಗೆ 5 ಗಂಟೆಗೆ ಎದ್ದು ಕೋಚ್ ಜೊತೆ ಬೈಕ್ನಲ್ಲಿ ತೆರಳುತ್ತಿದ್ದ ತಿಲಕ್ ಅದೆಷ್ಟೋ ಬಾರಿ ರೈಡಿಂಗ್ ವೇಳೆನೆ ನಿದ್ರಿಸಿದ ಉದಾಹರಣೆಗಳಿವೆ.
‘ಬೈಕ್ನಲ್ಲಿ ತಿಲಕ್ ವರ್ಮಾ ನಿದ್ರಿಸುತ್ತಿದ್ದರು’
ನನ್ನ ಹಿಂದೆ ಕುಳಿತುಕೊಳ್ಳುತ್ತಿದ್ದ ತಿಲಕ್ ವರ್ಮಾ ಕೆಲವೊಮ್ಮೆ ನಿದ್ರಿಸುತ್ತಿದ್ದರು. ಹಾಗಾಗಿ ನಾನು ಬಹಳ ಎಚ್ಚರಿಕೆಯಿಂದ ಬೈಕ್ ಚಲಿಸುತ್ತಿದ್ದೆ. ಎಷ್ಟೋ ಬಾರಿ ಗಾಡಿ ನಿಲ್ಲಿಸಿ, ಮುಖ ತೊಳೆಸಿಕೊಂಡು ಕರ್ಕೊಂಡು ಹೋಗಿದ್ದೇನೆ.
ಸಲಾಮ್ ಬಯಾಶ್, ತಿಲಕ್ ವರ್ಮಾ ಕೋಚ್
ಬ್ಯಾಟ್ ಕೊಳ್ಳಲು ದುಡ್ಡಿಲ್ಲ.. ಕೋಚ್ ಮಾಡಿದ್ರು ಸೂಪರ್ ಪ್ಲಾನ್
ಕಡು ಬಡತನದಲ್ಲಿ ಬೆಳೆದ ತಿಲಕ್ ವರ್ಮಾಗೆ ಆರಂಭದಲ್ಲಿ ಒಂದು ಬ್ಯಾಟ್ ಕೊಳ್ಳಲು ದುಡ್ಡಿರ್ಲಿಲ್ಲ. ಆಗ ಕೋಚ್ ಒಂದು ಸೂಪರ್ ಪ್ಲಾನ್ ಮಾಡಿದ್ರು. ಅದೇನಂದ್ರೆ ಟೂನರ್ಮೆಂಟ್ಗಳಲ್ಲಿ ನೀನು ಸೆಂಚುರಿ ಹೊಡೆದ್ರೆ ಬ್ಯಾಟ್ ಕೊಡಿಸುವೆ ಎಂದು ಹೇಳಿದ್ರು. ಸಲಾಂ ಬಯಾಶ್ ಇಷ್ಟು ಹೇಳಿದ್ದೇ ತಡ ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ 900 ರನ್ ಚಚ್ಚಿ ಹೈದ್ರಾಬಾದ್ ರಣಜಿ ತಂಡದಲ್ಲಿ ಸ್ಥಾನ ಪಡೆದ್ರು. ಬಳಿಕ ಐಪಿಎಲ್ನಲ್ಲಿ ರನ್ ಭರಾಟೆ. ಅಲ್ಲಿಂದ ಸೀದಾ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ.
20ರ ತಿಲಕ್ ವರ್ಮಾ ಬೆಂಕಿಯಲ್ಲಿ ಅರಳಿದ ಹೂವು ಅನ್ನೋದ್ರಲ್ಲ ಎರಡು ಮಾತಿಲ್ಲ. ಕಲ್ಲು ಮುಳ್ಳಿನ ಹಾದಿ ಸವೆದಿರೋ ಲೆಫ್ಟಿ ಬ್ಯಾಟ್ಸ್ಮನ್ ಟೀಮ್ ಇಂಡಿಯಾದಲ್ಲಿ ಸಿಕ್ಕ ಅವಕಾಶದಲ್ಲಿ ಮಿಂಚಲಿ. ತಿವಿಕ್ರಮನಾಗಿ ಮೆರೆದಾಡಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ