ರೈತರನ್ನು ಆತಂಕಕ್ಕೆ ದೂಡ್ತಿದೆ ವಿಮಾನ ಹಾರಾಟ
ಅಂದು ದೊಡ್ಡ ವಿಮಾನ, ಇಂದು ಚಿಕ್ಕ ವಿಮಾನ
ಜಮೀನುಗಳ ಮೇಲೆ ಹಾರಾಡಿದ ವಿಡಿಯೋ ಇಲ್ಲಿದೆ
ಗದಗ: ಜಮೀನುಗಳಲ್ಲಿ ಚಿಕ್ಕ ವಿಮಾನ ಹಾರಾಡಿದ್ದು ಗದಗ ಜಿಲ್ಲೆಯ ಮುಂಡರಗಿ ಭಾಗದ ರೈತರು ಆತಂಕಕ್ಕೊಳಗಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ವಿಮಾನ ಹಾರಾಟದಿಂದ ಆತಂಕ ಸೃಷ್ಟಿಯಾಗಿದ್ದ ಬೆನ್ನಲ್ಲೇ ಈಗ ಚಿಕ್ಕ ವಿಮಾನ ಹಾರಾಡಿದೆ.
ಯಾಕೆ ನಮ್ಮ ಜಮೀನುಗಳಲ್ಲಿ ಈ ವಿಮಾನ ಹಾರಿಸ್ತಿದ್ದೀರಿ ಅಂತ ಕೇಳಿದ್ದಕ್ಕೆ ಸ್ಪಷ್ಟವಾದ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಭೂಮಾಪನ ಇಲಾಖೆಯಿಂದ ಸರ್ವೇ ಕಾರ್ಯ ನಡೆಯುತ್ತಿದೆ ಅಂತ ಸ್ಪಷ್ಟನೆ ನೀಡ್ತಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಈ ರೀತಿ ನಮ್ಮ ಜಮೀನುಗಳಲ್ಲಿಯೇ ಸರ್ವೇ ಮಾಡ್ತಿದ್ದಾರೆ. ಯಾರು ಆದೇಶ ಮಾಡಿದ್ದಾರೆ ಅನ್ನೋದಕ್ಕೆ ಸ್ಪಷ್ಟತೆ ಇಲ್ಲ.
ಈ ಬಗ್ಗೆ ಮುಂಡರಗಿ ತಹಶೀಲ್ದಾರ್ ಶೃತಿ ಮಳ್ಳಪ್ಪನವರ್ ಸ್ಪಷ್ಟನೆ ನೀಡಿ ಮರುಭೂಪನ ಮಾಡಲು ಗದಗ ಜಿಲ್ಲೆಯಾದ್ಯಂತ ಸರ್ವೆ ನಡೆಯುತ್ತಿದೆ ಯಾರು ಭಯ ಪಡಬಾರದು ಎಂದಿದ್ದಾರೆ.
ಜಮೀನುಗಳ ಮೇಲೆ ಮತ್ತೆ ಹಾರಾಡಿದ ಚಿಕ್ಕ ವಿಮಾನ.. ರೈತರು ಕಂಗಾಲ್.. ಅಸಲಿಗೆ ನಡೆದಿದ್ದೇನು..? #flight https://t.co/OGEAaP7Bf9 pic.twitter.com/0zm4mm3lhb
— NewsFirst Kannada (@NewsFirstKan) June 25, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೈತರನ್ನು ಆತಂಕಕ್ಕೆ ದೂಡ್ತಿದೆ ವಿಮಾನ ಹಾರಾಟ
ಅಂದು ದೊಡ್ಡ ವಿಮಾನ, ಇಂದು ಚಿಕ್ಕ ವಿಮಾನ
ಜಮೀನುಗಳ ಮೇಲೆ ಹಾರಾಡಿದ ವಿಡಿಯೋ ಇಲ್ಲಿದೆ
ಗದಗ: ಜಮೀನುಗಳಲ್ಲಿ ಚಿಕ್ಕ ವಿಮಾನ ಹಾರಾಡಿದ್ದು ಗದಗ ಜಿಲ್ಲೆಯ ಮುಂಡರಗಿ ಭಾಗದ ರೈತರು ಆತಂಕಕ್ಕೊಳಗಾಗಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ವಿಮಾನ ಹಾರಾಟದಿಂದ ಆತಂಕ ಸೃಷ್ಟಿಯಾಗಿದ್ದ ಬೆನ್ನಲ್ಲೇ ಈಗ ಚಿಕ್ಕ ವಿಮಾನ ಹಾರಾಡಿದೆ.
ಯಾಕೆ ನಮ್ಮ ಜಮೀನುಗಳಲ್ಲಿ ಈ ವಿಮಾನ ಹಾರಿಸ್ತಿದ್ದೀರಿ ಅಂತ ಕೇಳಿದ್ದಕ್ಕೆ ಸ್ಪಷ್ಟವಾದ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಭೂಮಾಪನ ಇಲಾಖೆಯಿಂದ ಸರ್ವೇ ಕಾರ್ಯ ನಡೆಯುತ್ತಿದೆ ಅಂತ ಸ್ಪಷ್ಟನೆ ನೀಡ್ತಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಈ ರೀತಿ ನಮ್ಮ ಜಮೀನುಗಳಲ್ಲಿಯೇ ಸರ್ವೇ ಮಾಡ್ತಿದ್ದಾರೆ. ಯಾರು ಆದೇಶ ಮಾಡಿದ್ದಾರೆ ಅನ್ನೋದಕ್ಕೆ ಸ್ಪಷ್ಟತೆ ಇಲ್ಲ.
ಈ ಬಗ್ಗೆ ಮುಂಡರಗಿ ತಹಶೀಲ್ದಾರ್ ಶೃತಿ ಮಳ್ಳಪ್ಪನವರ್ ಸ್ಪಷ್ಟನೆ ನೀಡಿ ಮರುಭೂಪನ ಮಾಡಲು ಗದಗ ಜಿಲ್ಲೆಯಾದ್ಯಂತ ಸರ್ವೆ ನಡೆಯುತ್ತಿದೆ ಯಾರು ಭಯ ಪಡಬಾರದು ಎಂದಿದ್ದಾರೆ.
ಜಮೀನುಗಳ ಮೇಲೆ ಮತ್ತೆ ಹಾರಾಡಿದ ಚಿಕ್ಕ ವಿಮಾನ.. ರೈತರು ಕಂಗಾಲ್.. ಅಸಲಿಗೆ ನಡೆದಿದ್ದೇನು..? #flight https://t.co/OGEAaP7Bf9 pic.twitter.com/0zm4mm3lhb
— NewsFirst Kannada (@NewsFirstKan) June 25, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ