newsfirstkannada.com

ಬೆಲ್​ ಬಾಟಂ ಸಿನಿಮಾ ರಿಲೀಸ್​​ ಆದಾಗ ರಿಷಬ್ ಶೆಟ್ಟಿ​​ಗೆ ಅವಮಾನ; ಬೌನ್ಸರ್ಸ್​​ ಕಥೆ ಬಿಚ್ಚಿಟ್ಟ ಟಿ.ಕೆ ದಯಾನಂದ್​​

Share :

15-08-2023

    ನ್ಯೂಸ್​ಫಸ್ಟ್​ ಜತೆಗೆ ಕಥೆಗಾರ ಟಿ.ಕೆ ದಯಾನಂದ್​ ಮಾತು

    ರಿಷಬ್​ ಶೆಟ್ಟಿ ಹಾಸ್ಯಕರ ಘಟನೆ ಬಗ್ಗೆ ಬಿಚ್ಚಿಟ್ಟ ದಯಣ್ಣ..!

    ಥಿಯೇಟರ್​​ಗೆ ರಿಷಬ್​​ ಬೌನ್ಸರ್ಸ್​​ ಕರೆ ತಂದಿದ್ದೇಕೆ..?

ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಟಿ.ಕೆ ದಯಾನಂದ್​​. ಬೆಂಕಿಪಟ್ಣ ಸಿನಿಮಾ ಮೂಲಕ ನಿರ್ದೇಶಕರಾಗಿ ತನ್ನ ಸಿನಿ ಕರಿಯರ್​ ಶುರು ಮಾಡಿದ ಟಿ.ಕೆ ದಯಾನಂದ್​​​ ಆರಂಭದಲ್ಲಿ ಹೇಳಿಕೊಳ್ಳುವಷ್ಟು ಸಕ್ಸಸ್​ ಆಗಿರಲಿಲ್ಲ. ಬಳಿಕ ಸಿನಿಮಾ ಡೈರೆಕ್ಷನ್​ ಮಾಡಲು ಅವಕಾಶ ಸಿಕ್ಕರೂ ಕಥೆಗಾರನಾಗಿ ಟಿ.ಕೆ ದಯಾನಂದ್​​ ಮುಂದುವರಿದರು. ಇದಾದ ಬಳಿಕ ಮೊದಲ ಬಾರಿಗೆ ಬೆಲ್​​ ಬಾಟಂ ಸಿನಿಮಾದ ಕಥೆ ಬರೆದರು. ಈ ಸಿನಿಮಾ ಟಿ.ಕೆ ದಯಾನಂದ್​ ಅವರಿಗೆ ಬ್ರೇಕ್​ ನೀಡಿತ್ತು.

ಬೆಲ್​​ ಬಾಟಂ ಬಳಿಕ ಇದರ ಪಾರ್ಟ್​​​ 2 ಕಥೆ, ಆಕ್ಟ್​​ 1972, ಆಶೋಕ ಬ್ಲೇಡ್​​, ಈಗ ಟೋಬಿ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ನಟಿಸುತ್ತಿರೋ ವಾರಿಯರ್​ ಎಂಬ ಸಿನಿಮಾದ ಕಥೆ ಕೂಡ ಇವರದ್ದೇ. ಈ ಖ್ಯಾತ ಕಥೆಗಾರ ಟಿ.ಕೆ ದಯಾನಂದ್​ ಮೊದಲ ಬಾರಿಗೆ ನ್ಯೂಸ್​ಫಸ್ಟ್​​ ಜತೆ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಮಾತಾಡಿದ್ದಾರೆ. ಅದರಲ್ಲೂ ಬೆಲ್​ ಬಾಟಂ ಸಿನಿಮಾ ಹಿಟ್​ ಆಗುವ ಮುನ್ನವೇ ನಟ ರಿಷಬ್​ ಶೆಟ್ಟಿ ಬೌನರ್ಸ್​​ ಕರೆ ತಂದಿದ್ದ ಬಗ್ಗೆ ಬಾಯಿಬಿಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಟಿ.ಕೆ ದಯಾನಂದ್​​, ಬೆಲ್ ಬಾಟಂ ಸಿನಿಮಾ ರಿಲೀಸ್​​ ಆದ​ ಮೊದಲ ದಿನಾನೇ ಫ್ಲಾಪ್​ ಆಯಿತು. ಪ್ರೀಮಿಯರ್​ನಲ್ಲೂ ಅಂತಹ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ಹೀಗಾಗಿ ಸ್ಪಲ್ಪ ಅಳುಕು ಶುರುವಾಯ್ತು. ಮರುದಿನ ಫಸ್ಟ್​​ ಡೇ ಮಾರ್ನಿಂಗ್​​ ಶೋನಲ್ಲಿ ಫುಲ್​ ಖಾಲಿ ಖಾಲಿ ಇತ್ತು. ಈ ಸಿನಿಮಾ ಸೊಲುತ್ತೆ ಎಂದು ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಆದರೆ, ಎಲ್ಲರಿಗೂ ಶಾಕ್​ ಎಂಬಂತೆ ಸಿನಿಮಾ ಹಿಟ್​ ಆಯ್ತು ಎಂದರು.

ಹೀಗೆ ಮುಂದುವರಿದು ಮಾತಾಡಿದ ದಯಾನಂದ್​ ಅವರು, ರಿಷಬ್​ ಶೆಟ್ಟಿ ತಾನು ಹೀರೋ ಎಂದು ಬೌನರ್ಸ್​ ಕರೆದುಕೊಂಡು ಬಗ್ಗೆ ಹಾಸ್ಯಕರ ಘಟನೆ ಬಿಚ್ಚಿಟ್ಟರು. ರಿಷಬ್​ ಶೆಟ್ಟಿ ನಾನು ಹೀರೋ ಆಗಿ ಬಂದರೇ ತುಂಬಾ ಜನ ಬರುತ್ತಾರೆ ಎಂದು ಭಾವಿಸಿ ಬೌನರ್ಸ್​ ಕೂಡ ಕರೆದುಕೊಂಡು ಬಂದಿದ್ದರು. ಆದರೆ ಚಿತ್ರ ಮಂದಿರದಲ್ಲಿ ಸ್ಪಲ್ಪ ಜನ ಮಾತ್ರ ಇದ್ದರು. ಇದರಿಂದ ರಿಷಬ್​ ಮತ್ತು ನಮಗೆ ಬಹಳ ಬೇಸರ ಆಗಿತ್ತು. ಈ ಘಟನೆಯನ್ನು ಈಗಲೂ ರಿಷಬ್​​ ಸಿಕ್ಕಾಗ ನೆನೆಯುತ್ತಾರೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಲ್​ ಬಾಟಂ ಸಿನಿಮಾ ರಿಲೀಸ್​​ ಆದಾಗ ರಿಷಬ್ ಶೆಟ್ಟಿ​​ಗೆ ಅವಮಾನ; ಬೌನ್ಸರ್ಸ್​​ ಕಥೆ ಬಿಚ್ಚಿಟ್ಟ ಟಿ.ಕೆ ದಯಾನಂದ್​​

https://newsfirstlive.com/wp-content/uploads/2023/08/TK-Dayanand-1.jpg

    ನ್ಯೂಸ್​ಫಸ್ಟ್​ ಜತೆಗೆ ಕಥೆಗಾರ ಟಿ.ಕೆ ದಯಾನಂದ್​ ಮಾತು

    ರಿಷಬ್​ ಶೆಟ್ಟಿ ಹಾಸ್ಯಕರ ಘಟನೆ ಬಗ್ಗೆ ಬಿಚ್ಚಿಟ್ಟ ದಯಣ್ಣ..!

    ಥಿಯೇಟರ್​​ಗೆ ರಿಷಬ್​​ ಬೌನ್ಸರ್ಸ್​​ ಕರೆ ತಂದಿದ್ದೇಕೆ..?

ಕನ್ನಡ ಚಿತ್ರರಂಗದ ಖ್ಯಾತ ಕಥೆಗಾರ ಟಿ.ಕೆ ದಯಾನಂದ್​​. ಬೆಂಕಿಪಟ್ಣ ಸಿನಿಮಾ ಮೂಲಕ ನಿರ್ದೇಶಕರಾಗಿ ತನ್ನ ಸಿನಿ ಕರಿಯರ್​ ಶುರು ಮಾಡಿದ ಟಿ.ಕೆ ದಯಾನಂದ್​​​ ಆರಂಭದಲ್ಲಿ ಹೇಳಿಕೊಳ್ಳುವಷ್ಟು ಸಕ್ಸಸ್​ ಆಗಿರಲಿಲ್ಲ. ಬಳಿಕ ಸಿನಿಮಾ ಡೈರೆಕ್ಷನ್​ ಮಾಡಲು ಅವಕಾಶ ಸಿಕ್ಕರೂ ಕಥೆಗಾರನಾಗಿ ಟಿ.ಕೆ ದಯಾನಂದ್​​ ಮುಂದುವರಿದರು. ಇದಾದ ಬಳಿಕ ಮೊದಲ ಬಾರಿಗೆ ಬೆಲ್​​ ಬಾಟಂ ಸಿನಿಮಾದ ಕಥೆ ಬರೆದರು. ಈ ಸಿನಿಮಾ ಟಿ.ಕೆ ದಯಾನಂದ್​ ಅವರಿಗೆ ಬ್ರೇಕ್​ ನೀಡಿತ್ತು.

ಬೆಲ್​​ ಬಾಟಂ ಬಳಿಕ ಇದರ ಪಾರ್ಟ್​​​ 2 ಕಥೆ, ಆಕ್ಟ್​​ 1972, ಆಶೋಕ ಬ್ಲೇಡ್​​, ಈಗ ಟೋಬಿ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ನಟಿಸುತ್ತಿರೋ ವಾರಿಯರ್​ ಎಂಬ ಸಿನಿಮಾದ ಕಥೆ ಕೂಡ ಇವರದ್ದೇ. ಈ ಖ್ಯಾತ ಕಥೆಗಾರ ಟಿ.ಕೆ ದಯಾನಂದ್​ ಮೊದಲ ಬಾರಿಗೆ ನ್ಯೂಸ್​ಫಸ್ಟ್​​ ಜತೆ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಮಾತಾಡಿದ್ದಾರೆ. ಅದರಲ್ಲೂ ಬೆಲ್​ ಬಾಟಂ ಸಿನಿಮಾ ಹಿಟ್​ ಆಗುವ ಮುನ್ನವೇ ನಟ ರಿಷಬ್​ ಶೆಟ್ಟಿ ಬೌನರ್ಸ್​​ ಕರೆ ತಂದಿದ್ದ ಬಗ್ಗೆ ಬಾಯಿಬಿಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಟಿ.ಕೆ ದಯಾನಂದ್​​, ಬೆಲ್ ಬಾಟಂ ಸಿನಿಮಾ ರಿಲೀಸ್​​ ಆದ​ ಮೊದಲ ದಿನಾನೇ ಫ್ಲಾಪ್​ ಆಯಿತು. ಪ್ರೀಮಿಯರ್​ನಲ್ಲೂ ಅಂತಹ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ಹೀಗಾಗಿ ಸ್ಪಲ್ಪ ಅಳುಕು ಶುರುವಾಯ್ತು. ಮರುದಿನ ಫಸ್ಟ್​​ ಡೇ ಮಾರ್ನಿಂಗ್​​ ಶೋನಲ್ಲಿ ಫುಲ್​ ಖಾಲಿ ಖಾಲಿ ಇತ್ತು. ಈ ಸಿನಿಮಾ ಸೊಲುತ್ತೆ ಎಂದು ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಆದರೆ, ಎಲ್ಲರಿಗೂ ಶಾಕ್​ ಎಂಬಂತೆ ಸಿನಿಮಾ ಹಿಟ್​ ಆಯ್ತು ಎಂದರು.

ಹೀಗೆ ಮುಂದುವರಿದು ಮಾತಾಡಿದ ದಯಾನಂದ್​ ಅವರು, ರಿಷಬ್​ ಶೆಟ್ಟಿ ತಾನು ಹೀರೋ ಎಂದು ಬೌನರ್ಸ್​ ಕರೆದುಕೊಂಡು ಬಗ್ಗೆ ಹಾಸ್ಯಕರ ಘಟನೆ ಬಿಚ್ಚಿಟ್ಟರು. ರಿಷಬ್​ ಶೆಟ್ಟಿ ನಾನು ಹೀರೋ ಆಗಿ ಬಂದರೇ ತುಂಬಾ ಜನ ಬರುತ್ತಾರೆ ಎಂದು ಭಾವಿಸಿ ಬೌನರ್ಸ್​ ಕೂಡ ಕರೆದುಕೊಂಡು ಬಂದಿದ್ದರು. ಆದರೆ ಚಿತ್ರ ಮಂದಿರದಲ್ಲಿ ಸ್ಪಲ್ಪ ಜನ ಮಾತ್ರ ಇದ್ದರು. ಇದರಿಂದ ರಿಷಬ್​ ಮತ್ತು ನಮಗೆ ಬಹಳ ಬೇಸರ ಆಗಿತ್ತು. ಈ ಘಟನೆಯನ್ನು ಈಗಲೂ ರಿಷಬ್​​ ಸಿಕ್ಕಾಗ ನೆನೆಯುತ್ತಾರೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More