ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರ
ಅನಾರೋಗ್ಯ ಪೀಡಿತರಿಗೆ ಸಮಸ್ಯೆ
ಯಾರ ಭವಿಷ್ಯ ಭಯಾನಕವಾಗಿದೆ..?
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣಪಕ್ಷ, ಪಂಚಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ

- ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಸೂಕ್ತವಾದ ಸಮಯ
- ರಾಜಕೀಯ ವ್ಯಕ್ತಿಗಳಿಗೆ ಉನ್ನತವಾದ ಸ್ಥಾನ ಸಿಗಲಿದೆ
- ಸಾಂಸಾರಿಕವಾಗಿ ಸಮಾಧಾನ ಇರುತ್ತದೆ
- ಜವಾಬ್ದಾರಿ ಮತ್ತು ಕರ್ತವ್ಯದ ದೃಷ್ಟಿಯಿಂದ ಶ್ರದ್ಧೆಯಿಂದ ನಿಮ್ಮ ಕೆಲಸವನ್ನು ನಿರ್ವಹಿಸಿ
- ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆ ಆಗಬಹುದು
- ಹಣದ ವಿಚಾರವಾಗಿ ತೊಂದರೆ ಇರುವುದಿಲ್ಲ
- ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಈ ದಿನ ಆರ್ಥಿಕವಾಗಿ ಏರುಪೇರಾಗಲಿದೆ
- ಎಲ್ಲಾ ಕೆಲಸಗಳು ಶುಭವಾಗಿ ನಡೆಯುತ್ತದೆ
- ಸಾಂಸಾರಿಕವಾಗಿ ಸಮಾಧಾನ ಇರುತ್ತದೆ
- ನಿರೀಕ್ಷೆಗಿಂತ ಹೆಚ್ಚು ಲಾಭ ಪಡೆಯಬಹುದು
- ಅಧಿಕಾರಿಗಳ ಸಹಾಯ ಪರಿಪೂರ್ಣವಾಗಿ ಸಿಗಲಿದೆ
- ಯಾರನ್ನು ಕೂಡ ಸುಲಭವಾಗಿ ನಂಬಬೇಡಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ನಿಮ್ಮ ಪ್ರತಿಭೆಯನ್ನು ಹೆಚ್ಚು ಮಾಡಿಕೊಳ್ಳವುದರಲ್ಲಿ ಅವಕಾಶವಿದೆ
- ಮಹಿಳೆಯರಿಗೆ ವೃತ್ತಿ ಜೀವನದಲ್ಲಿ ಬೇಸರ ಉಂಟಾಗಬಹುದು
- ಜಟಿಲವಾದ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಬಗೆಹರಿಸಿಕೊಳ್ಳಿ
- ಮಕ್ಕಳಿಗಾಗಿ ಹಣ ಖರ್ಚಾಗಬಹುದು
- ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಆಗಲಿದೆ
- ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಆತಂಕ ಮನಸ್ಸಲ್ಲಿ ಇರುತ್ತದೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ

- ವ್ಯಾವಹಾರಿಕವಾಗಿ ದುರ್ಬಲರು ಅಂತ ಅನಿಸಬಹುದು
- ಬೆನ್ನು ನೋವು ನಿಮಗೆ ಸಮಸ್ಯೆಯಾಗಬಹುದು
- ಎಲ್ಲ ಕೆಲಸಗಳನ್ನು ಸರಿಯಾಗಿ ಯೋಚಿಸಿ ಮಾಡಿ
- ಮಕ್ಕಳ ಸಹಕಾರ ಸಂಪೂಣರ್ವಾಗಿ ಸಿಗುತ್ತದೆ
- ಮನೆಯಲ್ಲಿ ಅಭಿಪ್ರಾಯ ಭೇದದಿಂದ ಬೇಸರ ಇರಲಿದೆ
- ಸಾಯಂಕಾಲದ ಹೊತ್ತಿಗೆ ಆಶ್ಚರ್ಯಕರ ಸಂಗತಿ ನೋಡುವಿರಿ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಕೆಲವು ಕೆಲಸಗಳು ನಿಮ್ಮ ಇಷ್ಟದಂತೆ ನೆರವೇರಲಿವೆ
- ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಅನುಪಯುಕ್ತ ಯೋಚನೆಗಳು ಬೇಡ
- ನಿಮ್ಮ ಮಾತಿನಿಂದ ಹಲವಾರು ಜನ ಆಕರ್ಷಿತರಾಗಬಹುದು
- ದೂರದ ಪ್ರಯಾಣದ ಸಾಧ್ಯತೆ ಇದೆ
- ನಾಯಕತ್ವದ ವಿಚಾರದಲ್ಲಿ ನಿಮ್ಮ ಹೆಸರು ಮುನ್ನಲೆಗೆ ಬರಬಹುದು
- ಕುಲದೇವತಾ ಆರಾಧನೆ ಮಾಡಿ
ಕನ್ಯಾ

- ಹೊಸ ತಂತ್ರಜ್ಞಾನ ಬಳಸುವುದರಲ್ಲಿ ಯಶಸ್ಸು ಹೊಂದುತ್ತೀರಿ
- ಆಸ್ತಿ ವಿಚಾರವಾಗಿ ಹೆಚ್ಚು ವಿವಾದ ಆಗಬಹುದು
- ಭವಿಷ್ಯದ ವಿಚಾರವನ್ನು ಯೋಚನೆ ಮಾಡಿ ಹೋರಾಟ ನಡೆಸಬೇಕು
- ಕುಟುಂಬದಲ್ಲಿ ನಿಮ್ಮ ವಿಚಾರದಲ್ಲಿ ಅತೃಪ್ತರಾಗಿರುತ್ತಾರೆ
- ವೈಯಕ್ತಿಕವಾದ ಕೆಲಸದಲ್ಲಿ ಕೆಲವರ ಹಸ್ತಕ್ಷೇಪವಾಗಬಹುದು
- ಮನೆಯಲ್ಲಿ ಮಂಗಳ ಕಾರ್ಯದ ವಿಚಾರ ಕಷ್ಟವಾಗಬಹುದು
- ನಾಗರಾಧನೆ ಮಾಡಿ
ತುಲಾ

- ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನಿಸುವವರಿಗೆ ಶುಭವಿದೆ
- ವೃತ್ತಿಯಲ್ಲಿ ಗಣನೀಯ ಬದಲಾವಣೆ ಆಗಲಿದೆ
- ದೊಡ್ಡ ವ್ಯಕ್ತಿಗಳ ಭೇಟಿಯಿಂದ ಅನುಕೂಲ ಆಗಲಿದೆ
- ಹೊಸ ಹೂಡಿಕೆಯನ್ನು ಮಾಡಲು ಅವಕಾಶಗಳಿವೆ
- ಪ್ರಾಕೃತಿಕವಾದ ಎಲ್ಲಾ ವಿಚಾರಗಳಿಗೆ ಸಿದ್ಧವಾಗಿರಬೇಕು
- ವೈಯಕ್ತಿಕವಾಗಿ ಬೆಳವಣಿಗೆಗೆ ಎಲ್ಲಾ ರೀತಿಯ ಅನುಕೂಲವಿದೆ
- ಸರಸ್ವತಿ ದೇವಿಯನ್ನು ಆರಾಧನೆ ಮಾಡಿ
ವೃಶ್ಚಿಕ

- ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು
- ದೂರದಲ್ಲಿರುವ ಸ್ನೇಹಿತರು ನಿಮಗೆ ಸಹಾಯ ಮಾಡಬಹುದು
- ಔಷಧಿಗಳಿಗಾಗಿ ಹಣ ಹೆಚ್ಚು ಖರ್ಚಾಗಲಿದೆ
- ಇಂದು ವಾದ ವಿವಾದಗಳಲ್ಲಿ ಸೋಲನ್ನು ಅನುಭವಿಸುತ್ತೀರಿ
- ಪೋಷಕರ ಬಗ್ಗೆ ಬೇಸರ ಆಗಲಿದೆ
- ನಿಮ್ಮ ನಿರ್ಧಾರವನ್ನು ಸ್ಪಷ್ಟ ಪಡಿಸಿ ಅನುಕೂಲವಿದೆ
- ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನುಸು

- ಮನೆಯಲ್ಲಿ ಯಾವುದೋ ಬದಲಾವಣೆ ಅಥವಾ ವಿಚಾರ ಮನಸ್ಸಿಗೆ ಬರಬಹುದು
- ಮಕ್ಕಳಿಗಾಗಿ ಹಲವಾರು ಹೂಡಿಕೆಗಳನ್ನು ಮಾಡುತ್ತೀರಿ
- ಇಂದು ದಿನದ ಆರಂಭ ಚೆನ್ನಾಗಿರುತ್ತೆ
- ಶತ್ರುಗಳು ಅಥವಾ ವಿರೋಧಿಗಳು ನಿಮ್ಮ ಬಗ್ಗೆ ಹೆಚ್ಚು ಗಮನಿಸುತ್ತಿರುತ್ತಾರೆ
- ಯಾವುದೇ ತೊಂದರೆ ಆಗುವುದಿಲ್ಲ ಆದರೂ ಭಯವಿದೆ
- ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
- ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ

- ಸಾಂಸಾರಿಕವಾಗಿ ಎಲ್ಲವೂ ಚೆನ್ನಾಗಿರುತ್ತದೆ
- ನಿಮ್ಮ ಆಲೋಚನೆಯಲ್ಲಿ ಬದಲಾವಣೆಯಾಗಬಹುದು
- ಕೆಲವು ಮುಖ್ಯಸ್ಥರ ಭೇಟಿಗೆ ಅವಕಾಶವಿದೆ
- ನಿಮ್ಮ ಯೋಜನೆಯಲ್ಲಿ ಗೆಲುವಿನ ಸಾಧ್ಯತೆ ಇದೆ
- ವ್ಯಾವಹಾರಿಕವಾಗಿ ಹಲವಾರು ರೀತಿಯಲ್ಲಿ ಉತ್ತಮ ಬದಲಾವಣೆ ಅಗಲಿದೆ
- ಮಕ್ಕಳಿಂದ ಕೆಲವು ಸಮಸ್ಯೆಯಾಗಬಹುದು
- ಶಕ್ತಿದೇವತೆಯ ಆರಾಧನೆ ಮಾಡಿ
ಕುಂಬ

- ಕಲಾಕ್ಷೇತ್ರದಲ್ಲಿರುವವರಿಗೆ ಉತ್ತಮವಾದ ಆದಾಯ,ಸ್ಥಾನ-ಮಾನ, ಮರ್ಯಾದೆ, ಗೌರವ ಸಿಗಲಿದೆ
- ಹಳೆಯ ಗುರುತಿನಿಂದ ಲಾಭವನ್ನು ಪಡೆಯಬಹುದು
- ಮಕ್ಕಳಿಂದ ಅನುಕೂಲ ಆಗುತ್ತದೆ
- ಕೆಲಸ ನಿಮ್ಮಿತ್ತವಾಗಿ ಪ್ರಯಾಣವನ್ನು ಬೆಳೆಸಬಹುದು
- ಯಾವುದೇ ಆಸೆಗಳು ಈ ದಿನ ಈಡೇರಬಹುದು
- ಸ್ನೇಹಿತರ ಭೇಟಿ ಆಗಲಿದೆ ಕೆಲವು ಸಹಾಯವನ್ನು ಕೇಳಬಹುದು
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ಮನಸ್ಸಿಗೆ ಸಮಾಧಾನ ಆಗುವ ವಾತಾವರಣ
- ಆದಾಯದ ಜೊತೆಗೆ ಹೆಚ್ಚಿನ ಖರ್ಚು ಆಗಲಿದೆ
- ನಿಮ್ಮ ಬಾಂಧವ್ಯ ಎಲ್ಲರೊಂದಿಗೆ ಉತ್ತಮವಾಗಿರುತ್ತದೆ
- ವಿನಾಕಾರಣ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
- ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾದರು ಅನುಕೂಲವಿದೆ
- ಸಾಯಂಕಾಲ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ