ಸಂಸಾರಿಕವಾಗಿ ಅಗತ್ಯವಾದ ಸೌಲಭ್ಯಗಳನ್ನು ಗಮನಿಸಿ
ಒಳ್ಳೆಯ ಸುದ್ದಿಗಳಿಂದ ಮನಸ್ಸು ಉಲ್ಲಾಸ ಆಗಬಹುದು
ಸಂಗಾತಿಯು ನಿಮ್ಮ ಭಾವನೆಗಳನ್ನು ಗೌರವಿಸಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ

- ಹೊಸ ಯೋಜನೆಗಳ ಬಗ್ಗೆ ಕುತೂಹಲ ಇರುತ್ತದೆ
- ಸಂಗಾತಿಯು ನಿಮ್ಮ ಭಾವನೆಗಳನ್ನು ಗೌರವಿಸಬಹುದು
- ಸಾಂಸಾರಿಕವಾಗಿ ಸುಖ ನೆಮ್ಮದಿ ಇರುತ್ತದೆ
- ಆದಾಯದ ಮೂಲದ ಬಗ್ಗೆ ಚಿಂತಿಸುತ್ತೀರಿ
- ಅಕ್ರಮ ವ್ಯಾಪಾರ ಮಾಡುವವರಿಗೆ ಶಿಕ್ಷೆಯ ಸೂಚನೆ ಇದೆ ಗಮನಿಸಿಕೊಳ್ಳಿ
- ವ್ಯವಹಾರದಲ್ಲಿ ಆಯ್ಕೆಗಳಿವೆ ನಿರ್ಧಾರ ನಿಮಗೆ ಬಿಟ್ಟಿದ್ದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವೃಷಭ

- ಕಾರ್ಯಕ್ಷೇತ್ರದಲ್ಲಿ ಒತ್ತಡ ಕಡಿಮೆಯಾಗಬಹುದು
- ನಿಧಾನದ ಫಲಿತಾಂಶ ನಿಮಗೆ ಸಿಗಲಿದೆ
- ಹೊಸ ಮನೆಯ ಖರೀದಿ ಅಥವಾ ಮನೆಯ ನವೀಕರಣದ ಚಿಂತನೆ ಮಾಡುವ ಅವಕಾಶವಿದೆ
- ಒಳ್ಳೆಯ ಸುದ್ದಿಗಳಿಂದ ಮನಸ್ಸು ಉಲ್ಲಾಸ ಆಗಬಹುದು
- ವಿದ್ಯಾರ್ಥಿಗಳಿಗೆ ಏಕಾಗ್ರತೆ ಕಡಿಮೆಯಾಗಬಹುದು
- ದೂರದ ಊರಿನ ಪ್ರವಾಸಕ್ಕೆ ಚಿಂತಿಸುವಿರಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ನಿಮ್ಮ ವೈಯಕ್ತಿಕವಾದ ವಿಚಾರ ಬಹಿರಂಗವಾಗದಂತೆ ಗಮನಿಸಿ
- ಆಳವಾದ ಜ್ಞಾನ ಸಂಪಾದನೆಗೆ ಪ್ರಯತ್ನಿಸಿ
- ವಿದ್ಯಾರ್ಥಿಗಳಿಗೆ ಕೆಲವು ಗೊಂದಲಗಳಿರಬಹುದು
- ಸಾಂಸಾರಿಕವಾಗಿ ಅಗತ್ಯವಾದ ಸೌಲಭ್ಯಗಳನ್ನು ಗಮನಿಸಿ
- ತಾಯಿಯವರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
- ಉದ್ಯೋಗದಲ್ಲಿ ತುಂಬಾ ಉತ್ಸುಕರಾಗುತ್ತೀರಿ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ಕಟಕ

- ನಿಮ್ಮ ಕೆಲಸದ ಬಗ್ಗೆ ಸರಿಯಾದ ನಿರ್ಣಯವಿರಲಿ
- ವ್ಯಾಪಾರದಲ್ಲಿ ಹೂಡಿಕೆ ಮಾಡಲು ಆಸೆ ಆದರೆ ಹಿಂಜರಿಕೆಯಾಗಲಿದೆ
- ಖರ್ಚಿಗೆ ಕಡಿವಾಣ ಹಾಕಿ ಮನಸ್ಸಿಗೆ ನೆಮ್ಮದಿ ಸಿಗಲಿದೆ
- ಸಮಯ ನಿಮ್ಮ ಪರವಾಗಿದೆ ವಿನಿಯೋಗ ಮಾಡಿಕೊಳ್ಳಿ
- ಗೌರವದ ಬಗ್ಗೆ ತುಂಬಾ ಕಾಳಜಿ ಇರಲಿದೆ
- ಮಕ್ಕಳು ನಿಮ್ಮ ದಾರಿಗೆ ಬರುತ್ತಾರೆ
- ಈಶ್ವರನ ಆರಾಧನೆ ಮಾಡಿ
ಸಿಂಹ

- ಬಂಧುಗಳಲ್ಲಿ ವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುತ್ತೀರಿ
- ಹಣ ಅಥವಾ ದ್ರವ್ಯಗಳಿದ್ದರೆ ಮತ್ತೆ ಪಡೆಯುತ್ತೀರಿ
- ಮನೆಯಲ್ಲಿ ಅಗತ್ಯವಾದ ವಸ್ತುಗಳನ್ನು ಸರಿಯಾಗಿ ಗಮನಿಸಿ
- ನಿಮ್ಮ ಕೆಲಸದಿಂದ ನಿಮಗೆ ತೃಪ್ತಿ ಸಿಗಬಹುದು
- ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿರಬೇಕು
- ಮನೆ ಮತ್ತು ಕಚೇರಿಯಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆ ಇರುತ್ತದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಇಂದು ಪ್ರೇಮಿಗಳಿಗೆ ಸಮಸ್ಯೆಯ ದಿನ
- ಯಾರಿಗೂ ಯಾವ ಭರವಸೆಯನ್ನು ನೀಡಬೇಡಿ
- ನಿಷ್ಠೂರವಾದ ಒರಟಾದ ಪದಗಳನ್ನು ಉಪಯೋಗಿಸದಿರಿ
- ಕೆಲಸದ ಸ್ಥಳದಲ್ಲಿ ಕ್ಷುಲ್ಲಕವಾದ ರಾಜಕೀಯಗಳು ನಡೆಯಲಿದೆ ಜಾಗ್ರತೆವಹಿಸಿ
- ನಿಮ್ಮ ಆಹಾರದ ಬಗ್ಗೆ ಗಮನವಿರಲಿ
- ಯಾವುದೇ ರೀತಿಯ ಆಪತ್ತಿಗೆ ಅವಕಾಶವನ್ನು ಮಾಡಿಕೊಡಬೇಡಿ
- ಗಣಪತಿಯ ಪ್ರಾರ್ಥನೆ ಮಾಡಿ
ತುಲಾ

- ನಿಮ್ಮ ಕೆಲವು ಸಲಹೆಗಳಿಂದ ಜನ ಉಪಯೋಗವನ್ನ ಪಡೆಯಬಹುದು
- ನಿಮ್ಮ ಪ್ರತಿಭೆಗೆ ತಕ್ಕ ಆದಾಯ ಇರುವುದಿಲ್ಲ
- ಪ್ರೀತಿ, ಪ್ರೇಮ ವಿಚಾರದಲ್ಲಿ ಇಂದು ನೀವು ಗೆಲ್ಲುತ್ತೀರಿ
- ಅನುಮಾನವಿರುವವರು ನಿಮ್ಮ ಹತ್ತಿರ ಬರುವುದಿಲ್ಲ
- ಇಂದು ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಶುಭ ಕಾರ್ಯಗಳ ವಿಚಾರವಾಗಿ ಚರ್ಚೆ ಮಾಡಬಹುದು
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ವೃಶ್ಚಿಕ

- ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕಾಣಬಹುದಾದ ದಿನ
- ಜವಾಬ್ದಾರಿಯುತ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಿ
- ಮನೆಯಲ್ಲಿ ವಾಗ್ಯುದ್ಧ ನಡೆಯಬಹುದು
- ವಿದ್ಯಾರ್ಥಿಗಳಿಗೆ ಬೇಸರ ಜೊತೆಗೆ ತಮ್ಮ ಪ್ರಯತ್ನ ವ್ಯರ್ಥವಾಗುವ ದಿನ
- ನಿಮ್ಮ ಕೆಲಸದ ಗುಣಮಟ್ಟದಿಂದ ಆದಾಯ ಹೆಚ್ಚಳವಾಗಬಹುದು
- ತಾಳ್ಮೆ ಇದ್ದರೆ ಇನ್ನೂ ಹೆಚ್ಚು ಗಳಿಸಬಹುದು
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಕುಜಗ್ರಹ ಪ್ರಾರ್ಥನೆ ಮಾಡಿ
ಧನುಸ್ಸು

- ಏಕ ನಕ್ಷತ್ರ, ಏಕ ರಾಶಿ ದಂಪತಿಗಳಿಗೆ ಸ್ವಲ್ಪ ಸಮಸ್ಯೆ ಕಾಡಬಹುದು
- ನಿಮ್ಮ ಹಠವನ್ನು ಬಿಡಿ ಅಥವಾ ಸ್ವಲ್ಪ ಕಡಿಮೆ ಮಾಡಿಕೊಂಡರೆ ಒಳ್ಳೆಯದು
- ಎಲ್ಲರ ಜೊತೆ ನಿಷ್ಠೂರವಾಗುತ್ತೀರಿ
- ಮನೆಯಲ್ಲಿ ಶೀತಲ ಸಮರಕ್ಕೆ ಅವಕಾಶವಿದೆ
- ಇಂದು ನಿಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಮನವಿರಲಿ
- ಬೇರೆಯವರ ಮಾತಿನಿಂದ ನಿಮ್ಮ ಮನಸ್ಸು ಹಾಳಾಗಬಹುದು
- ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ಮಕರ

- ಈ ದಿನದ ಪೂರ್ವಾರ್ಧ ಚೆನ್ನಾಗಿದೆ ಉಪಯೋಗಿಸಿಕೊಳ್ಳಿ
- ನಿಮ್ಮ ಹಕ್ಕುಗಳು ಬಲವಾಗಿರುವಂತೆ ಕಾಣುತ್ತದೆ
- ಉನ್ನತ ಹುದ್ದೆಯಲ್ಲಿರುವವರು ನಿರ್ಲಕ್ಷ್ಯ ಮಾಡಬಾರದು
- ಸಂತೋಷಕ್ಕೆ ಅಡ್ಡಿ ಬಾರದಂತೆ ಎಚ್ಚರವಹಿಸಿ
- ಚರ್ಚೆಗಳಿಂದ ದೂರವಿರುವುದು ಒಳ್ಳೆಯದು
- ಮಧ್ಯಾಹ್ನದ ನಂತರ ಒತ್ತಡಗಳು ಹೆಚ್ಚಾಗಬಹುದು
- ಕುಲದೇವತಾರಾಧನೆ ಮಾಡಿ
ಕುಂಭ

- ತಪ್ಪುಗಳನ್ನು ಸರಿಪಡಿಸಲು ಪ್ರಯತ್ನ ಮಾಡಿ
- ಹಳೆಯ ಸಾಲವಿದ್ದರೆ ಈ ದಿನ ತೀರಿಸುವ ಪ್ರಯತ್ನ ಮಾಡಿ
- ಆರ್ಥಿಕ ಪರಿಸ್ಥಿತಿಯ ಬಗ್ಗೆ ಕೆಲವು ಚರ್ಚೆ ಮಾಡಬಹುದು
- ಆತ್ಮೀಯರ ವರ್ತನೆ ನಿಮ್ಮ ಮನಸ್ಸನ್ನು ಕಲುಷಿತ ಮಾಡಬಹುದು
- ಕಾಲೋಚಿತ ರೋಗಗಳಿಗೆ ಗುರಿಯಾಗುವ ಸಾಧ್ಯತೆಯಿದೆ
- ಧರ್ಮ ಶ್ರದ್ಧೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಿ
- ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಶುಕ್ರಗ್ರಹ ಪ್ರಾರ್ಥನೆ ಮಾಡಿ
ಮೀನಾ

- ಕೆಲಸದ ಸ್ಥಳದಲ್ಲಿ ಶಾಂತವಾಗಿದ್ದರೆ ಒಳ್ಳೆಯದು
- ಧನ ಲಾಭವಿದೆ ಆದರೆ ನಿಮಗೆ ಸಮಾಧಾನ ಇರುವುದಿಲ್ಲ
- ಸಹೋದ್ಯೋಗಿಗಳ ವರ್ತನೆ ನಿಮಗೆ ಭಯ ತರಬಹುದು
- ನಿಮ್ಮ ಸಮಸ್ಯೆಗಳನ್ನು ಹೇಳಲು, ಹಂಚಿಕೊಳ್ಳಲು ಜನರಿಲ್ಲ
- ನೈಸರ್ಗಿಕ ದೃಶ್ಯಾವಳಿಗಳನ್ನು ನೋಡಿ ಸಮಾಧಾನ ಪಡಬಹುದು
- ಇಂದು ಯಾವುದಕ್ಕೂ ಎಚ್ಚರಿಕೆಯಿಂದ ಇರಬೇಕಾದ ದಿನ
- ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ