ವ್ಯಾವಹಾರಿಕವಾಗಿ ಅನೇಕ ಯೋಜನೆಗಳಿಂದ ಶುಭವಿದೆ
ಆಸ್ತಿ ವಿಚಾರದಲ್ಲಿ ಗುಟ್ಟಿನ ಮಾತು ನಡೆಯಬಹುದು..!
ಉದ್ಯಮಿಗಳಿಗೆ ಲಾಭದ ದೃಷ್ಟಿಯಿಂದ ಅವಕಾಶಗಳಿವೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ

- ನಿಮ್ಮ ಹಕ್ಕಿನ ಬಗ್ಗೆ ಜಾಗೃತವಾಗಿರಿ
- ಮನಸ್ಸಿನಲ್ಲಿ ಹೊಸ ಕಾರ್ಯಗಳನ್ನು ಮಾಡಬೇಕೆಂಬ ಉತ್ಸುಕತೆ ಇರಲಿದೆ
- ಕಚೇರಿಯಲ್ಲಿ ಮೇಲಾಧಿಕಾರಿಗಳ ಒತ್ತಡ ಇರಲಿದೆ
- ಸ್ವಾರ್ಥಕ್ಕಾಗಿ ಕೆಲಸ ಮಾಡಿದರೆ ಜನರಿಂದ ದೂರ ಆಗ್ತೀರಿ
- ಆಹಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ
- ಹಣದ ಹಿಂದೆ ಹೋದರೆ ಅವಮಾನ ಆಗಬಹುದು
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಅಪರಿಚಿತರ ಬಗ್ಗೆ ಅನುಕಂಪ ತೋರಿಸಬೇಡಿ, ಸಹಾಯ ಮಾಡಬೇಡಿ
- ನಿಮ್ಮ ಬಗ್ಗೆ ಇರುವ ಅನುಮಾನ ದೂರ ಆಗಲಿದೆ
- ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡುತ್ತೀರಿ
- ಮಾತಿನ ಚಕಮಕಿಗೆ ಅವಕಾಶ ಮಾಡಿಕೊಳ್ಳಬೇಡಿ
- ಆಸ್ತಿ ವಿಚಾರದಲ್ಲಿ ಗುಟ್ಟಿನ ಮಾತು ನಡೆಯಬಹುದು
- ಸಾಮಾಜಿಕ ಗೌರವಕ್ಕೆ ಭಾಜನರಾಗುತ್ತೀರಿ
- ಭೂವರಹಾ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಇಂದು ಬಂಧುಗಳು ನಿಮ್ಮ ಮನೆಗೆ ಬರಬಹುದು
- ಸಾಂಸಾರಿಕವಾಗಿ ಶಾಂತಿಯ ವಾತಾವರಣ ಇರಲಿದೆ
- ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣ ಮಾಡಲು ಅವಕಾಶವಿದೆ
- ಉದ್ಯಮಿಗಳಿಗೆ ಲಾಭದ ದೃಷ್ಟಿಯಿಂದ ಅವಕಾಶಗಳಿವೆ
- ಬೇರೆಯವರಿಂದ ಯಾವುದೇ ಕೆಲಸವನ್ನು ನಿರೀಕ್ಷೆ ಮಾಡದಿರಿ
- ಆರ್ಥಿಕ ಅಭಿವೃದ್ಧಿಯ ಚಿಂತನೆ ನಡೆಸುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕಟಕ

- ವ್ಯಾವಹಾರಿಕವಾಗಿ ಅನೇಕ ಯೋಜನೆಗಳಿಂದ ಶುಭವಿದೆ
- ತಮಾಷೆ ಅಥವಾ ಹಾಸ್ಯದಿಂದ ಸಮಯ ಕಳೆಯುತ್ತೀರಿ
- ಹೊಸ ಆದಾಯದ ಮೂಲ ಸಿಗಲಿದೆ
- ಪ್ರಮುಖವಾದ ಕೆಲಸಗಳಿಗಾಗಿ ದೂರದ ಪ್ರಯಾಣ ಮಾಡುತ್ತೀರಿ
- ಅಪರಿಚಿತರಿಂದ ಸಹಾಯ ಪಡೆಯಬಹುದು
- ಮನೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
- ಕುಲದೇವತಾ ಆರಾಧನೆ ಮಾಡಿ
ಸಿಂಹ

- ಬಂಧುಗಳಲ್ಲಿ ವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುತ್ತೀರಿ
- ಹಣ ಅಥವಾ ದ್ರವ್ಯಗಳಿದ್ದರೆ ಮತ್ತೆ ಪಡೆಯುತ್ತೀರಿ
- ಮನೆಯಲ್ಲಿ ಅಗತ್ಯವಾದ ವಸ್ತುಗಳನ್ನು ಸರಿಯಾಗಿ ಗಮನಿಸಿ
- ನಿಮ್ಮ ಕೆಲಸದಿಂದ ನಿಮಗೆ ತೃಪ್ತಿ ಸಿಗಬಹುದು
- ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿರಬೇಕು
- ಮನೆ ಮತ್ತು ಕಚೇರಿಯಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆ ಇರುತ್ತದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಕೆಲಸ ಪೂರ್ಣವಾಗದೆ ಮನೋವ್ಯಥೆ ಆಗಲಿದೆ
- ಸಾಂಸಾರಿಕವಾಗಿ ಅಸಮಾಧಾನ ಕೋಪ ಬರಲಿದೆ
- ಒತ್ತಡ ದೂರ ಮಾಡಿಕೊಳ್ಳುವವರೆಗೂ ನಿಮಗೆ ಪರಿಹಾರವಿಲ್ಲ
- ಈ ದಿನ ತಾಳ್ಮೆ ಕೆಲಸ ಮಾಡಿದರೆ ನಿಮಗೆ ಯಶಸ್ಸು ಸಿಗಲಿದೆ
- ಹಿರಿಯರು ಮೇಲಾಧಿಕಾರಿಗಳು ಗಮನ ನಿಮ್ಮ ಕೆಲಸದ ಮೇಲಿರುತ್ತದೆ
- ಸಹೋದ್ಯೋಗಿಗಳಿಗೆ ಕೆಲವು ಸವಾಲುಗಳನ್ನು ಕೊಡುತ್ತೀರಿ
- ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ
ತುಲಾ

- ಅನಗತ್ಯ ಖರ್ಚನ್ನು ನಿಯಂತ್ರಣ ಮಾಡಿ
- ಶಾಷ್ಟ್ರೀಯ ಸಂಗೀತ ಕೇಳುವುದರಿಂದ ಆತ್ಮವಿಶ್ವಾಸ ಹೆಚ್ಚಾಗಬಹುದು
- ಆರ್ಥಿಕ ಸ್ಥಿತಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತೀರಿ
- ಕಠಿಣವಾದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇರಲಿದೆ
- ಮಾನಸಿಕ ಉದ್ದಿಗ್ನತೆಗೆ ಅವಕಾಶವಿದೆ
- ಅಂದುಕೊಂಡ ಕೆಲಸ ಸಕಾಲದಲ್ಲಿ ಆಗದೆ ಬೇಸರ ಆಗಲಿದೆ
- ಇಷ್ಟು ದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ

- ಸಾಂಸಾರಿಕವಾಗಿ ಉತ್ತಮವಾದ ಯೋಜನೆಯಿಂದ ಸಫಲ ಆಗುತ್ತೀರಿ
- ಸ್ನೇಹಿತರ ಉತ್ತಮವಾದ ಸಲಹೆ ಕೆಲಸಕ್ಕೆ ಬರಲಿದೆ
- ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲವಿದೆ
- ಜನರಲ್ಲಿ ವಿಶೇಷವಾದ ಅಭಿಮಾನವನ್ನು ಹೊಂದಿರುತ್ತೀರಿ
- ಮಕ್ಕಳ ವೃತ್ತಿ ಅಥವಾ ಉದ್ಯೋಗಕ್ಕೆ ತೊಂದರೆ ಆಗಬಹುದು
- ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದ ಶುಭವಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಉದ್ಯೋಗದಲ್ಲಿ ಉನ್ನತವಾದ ಸ್ಥಾನಮಾನ ಸಿಗಲಿದೆ
- ನಿಮ್ಮ ವೈಯಕ್ತಿಕ ಒತ್ತಡವನ್ನು ಕೆಲಸದ ಮೇಲೆ ಹಾಕಬೇಡಿ
- ಸ್ನೇಹಿತರ ವರ್ತನೆಯಿಂದ ಬೇಸರ ಅಗುವುದರಿಂದ ಕೋಪ ಬರಲಿದೆ
- ಪ್ರೇಮಿಗಳಿಗೆ ನಿರಾಸೆ ಆಗಬಹುದು
- ಸಹೋದ್ಯೋಗಿಗಳ ಜೊತೆ ಸ್ಪರ್ಧಿಸಲಾಗದೆ ಬೇಸರ ಆಗಬಹುದು
- ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ ಸಮಾಧಾನವಿರಲಿ
- ಮನೋಭವನನ್ನು ಪ್ರಾರ್ಥನೆ ಮಾಡಿ
ಮಕರ

- ಆಲಸ್ಯವನ್ನು ದೂರ ಮಾಡಿ ಯಶಸ್ವಿಗೆ ಅವಕಾಶವಿದೆ
- ಮಕ್ಕಳನ್ನು ಅವಹೇಳನ ಮಾಡುವ ಬದಲು ತಿಳುವಳಿಕೆ ಹೇಳಿ
- ಯೋಚಿಸಿದ ಕಾರ್ಯಗಳು ನಿಧಾನಗತಿಯನ್ನು ಪಡೆದುಕೊಳ್ಳುತ್ತದೆ
- ವ್ಯಾವಹಾರಿಕವಾಗಿ ಸಂಕಷ್ಟ ಎದುರಾಗಲಿದೆ
- ಬೇರೆಯವರನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡಬೇಡಿ
- ಮಾನಸಿಕವಾಗಿ ತುಂಬಾ ಗೊಂದಲದಲ್ಲಿ ಇರುತ್ತೀರಿ
- ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಚಂದ್ರ ಗ್ರಹವನ್ನು ಪ್ರಾರ್ಥನೆ ಮಾಡಿ
ಕುಂಭ

- ನಿಮ್ಮ ವ್ಯಕ್ತಿತ್ವದಿಂದ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
- ಪ್ರೀತಿ ಪ್ರೇಮದ ವಿಚಾರಗಳಲ್ಲಿ ಗೌರವವನ್ನು ಕಾಪಾಡಿಕೊಳ್ಳಿ
- ಮಾನಸಿಕ ಕಿರಿಕಿರಿ ಮಾತ್ರ ತಪ್ಪಿದ್ದಲ್ಲ
- ಇಂದು ಪ್ರಯಾಣಕ್ಕೆ ಶುಭವಿದೆ
- ವ್ಯಾವಹಾರಿಕವಾಗಿ ಬದಲಾವಣೆಗೆ ಅವಕಾಶವಿದೆ
- ಮನೆಯವರ ಸಂಪೂರ್ಣ ಸಹಕಾರವಿದ್ದರೂ ಸಮಾಧಾನ ಇರುವುದಿಲ್ಲ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಮೀನಾ

- ಮನೆ, ಮನ ಇವರೆಡರಲ್ಲೂ ಕೂಡ ಧನಾತ್ಮಕ ಬದಲಾವಣೆಯಾಗಬಹುದು
- ಯಾರ ಮಾತನ್ನು ಉಪೇಕ್ಷೆ ಮಾಡಬೇಡಿ
- ನಿಮ್ಮ ಕಾರ್ಯವೈಖರಿಯ ಬಗ್ಗೆ ಹೆಮ್ಮೆ ಇರಲಿ
- ಹಲವರಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ
- ಕೋಪ ದ್ವೇಷವನ್ನು ದೂರ ಮಾಡಿ
- ಸಮಾಜದಿಂದ ನಿಮಗಿರುವಂತಹ ಒಳ್ಳೆತನವನ್ನು ತಾಳ್ಮೆಯಿಂದ ಸ್ವೀಕರಿಸಿ
- ನರಸಿಂಹಸ್ವಾಮಿ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ