ಮನೆಯ ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿ
ಪ್ರೇಮಿಗಳಲ್ಲಿ ಪರಸ್ಪರ ಮನಸ್ತಾಪ ಉಂಟಾಗಬಹುದು
ವ್ಯಾವಹಾರಿಕವಾಗಿ ಹಣ ಹೂಡಿಕೆಯಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ

- ನಿಮ್ಮ ಪ್ರಾಮಾಣಿಕವಾದ ಕೆಲಸದಿಂದ ನಿಮಗೆ ಗೌರವ ಸಿಗಬಹುದು
- ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲದ ದಿನ
- ಪ್ರೇಮಿಗಳಲ್ಲಿ ಪರಸ್ಪರ ಮನಸ್ತಾಪ ಉಂಟಾಗಬಹುದು
- ಇಂದು ಸ್ನೇಹಿತರ ಆಗಮನದಿಂದ ಬೇಡದ ವಿಚಾರವನ್ನು ಚರ್ಚೆ ಮಾಡುತ್ತೀರಿ
- ಇಂದು ಹಿರಿಯರ ಸಲಹೆ ಅಗತ್ಯವಾಗಿರಲಿದೆ
- ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಲಿದೆ
- ಗಣಪತಿಯನ್ನು ಆರಾಧನೆ ಮಾಡಿ
ವೃಷಭ

- ದಿನದ ಆರಂಭ ತುಂಬಾ ಶುಭವಾಗಿದೆ
- ಇಂದು ವ್ಯಾವಹಾರಿಕವಾಗಿ ಲಾಭವಿದೆ
- ಜನರಿಂದ ಹೊಗಳಿಕೆ ಸಿಗಬಹುದು
- ಹೊರಗಿನ ಆಹಾರವನ್ನು ಸೇವಿಸಬೇಡಿ ಒಳ್ಳೆಯದಲ್ಲ
- ದುಡಿದ ಹಣ ಖರ್ಚಾಯಿತಲ್ಲ ಎಂಬ ಯೋಚನೆ ನಿಮ್ಮನ್ನು ಕಾಡಬಹುದು
- ಇಂದು ಮಾನಸಿಕ ಸಮಾಧಾನ ಇರುವುದಿಲ್ಲ
- ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಮಿಥುನ

- ಅಪೂರ್ಣ ಕಾರ್ಯಗಳಿದ್ದರೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ
- ಸಾರ್ವಜನಿಕ ಸಂಪರ್ಕವನ್ನು ಹೆಚ್ಚು ಮಾಡಿಕೊಳ್ಳಿ
- ಕುಟುಂಬದವರ ಬೆಂಬಲದಿಂದ ಎಲ್ಲಾ ಕೆಲಸಗಳು ಆಗಲಿದೆ
- ಇಂದು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ
- ವ್ಯಾವಹಾರಿಕವಾಗಿ ಹಣ ಹೂಡಿಕೆಯಾಗಬಹುದು
- ಹಳೆಯ ಸ್ನೇಹಿತರಿಂದ ಸಹಾಯ ಸಿಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ನಿಮ್ಮ ದಿನಚರಿಯನ್ನ ಶಿಸ್ತುಬದ್ಧವಾಗಿ ಮಾಡಿಕೊಳ್ಳಿ
- ಶತ್ರುಗಳ ಚಟುವಟಿಕೆಯನ್ನು ನಿರ್ಲಕ್ಷ್ಯ ಮಾಡಬೇಡಿ
- ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಇರಲಿ
- ಮನೆಯ ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿ
- ಯಾವುದೇ ದೊಡ್ಡ ವ್ಯವಹಾರಕ್ಕೆ ಮುಂದಾಗಬೇಡಿ
- ಜೊತೆಯಲ್ಲಿ ಇರುವವರಿಂದ ಸ್ವಲ್ಪ ತೊಂದರೆಯಿದೆ
- ದುರ್ಗಾದೇವಿಯನ್ನ ಆರಾಧನೆ ಮಾಡಿ
ಸಿಂಹ

- ಹೊಸದಾಗಿ ಮಾಡಲು ಪ್ರಯತ್ನಿಸುತ್ತೀರಿ ಅದರಿಂದ ಜಯವಿದೆ
- ಇಂದು ವಿಶೇಷ ಜನಾಕರ್ಷಣೆಯಾಗಬಹುದು
- ಸಮಾಜದಲ್ಲಿ ಪ್ರತಿಷ್ಠೆ, ಗೌರವ ಹೆಚ್ಚಾಗಬಹುದು
- ಕಾನೂನು ವಿಚಾರದಲ್ಲಿ ಧೋರಣೆ ಬೇಡ
- ಕಾಲೋಚಿತವಾದ ರೋಗಗಳಿಂದ ಬಳಲುತ್ತಿರುವವರಿಗೆ ಸಹಾಯ ಮಾಡಿ
- ಇಂದು ಶತ್ರುಗಳನ್ನು ಎದುರಿಸುತ್ತೀರಿ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಇಂದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
- ತಲೆ ನೋವಿನ ಸಮಸ್ಯೆ ಕಾಡಬಹುದು
- ಅಪರಿಚಿತರಿಂದ ನಯವಂಚನೆ ಸಾಧ್ಯತೆಯಿದೆ
- ವ್ಯಾಪಾರಕ್ಕಾಗಿ ಸ್ನೇಹಿತರ ಸಹಾಯ ಮಾಡಬಹುದು
- ಮಕ್ಕಳಿಂದ ಹಣ ಸಹಾಯದ ನಿರೀಕ್ಷೆ ಮಾಡಬಹುದು
- ಸ್ಥಿರಾಸ್ತಿಯ ಚಿಂತನೆಯಿಂದ ಹೆಮ್ಮೆ ಪಡುತ್ತೀರಿ
- ಶಿವಾರಾಧನೆಯನ್ನು ಮಾಡಿ
ತುಲಾ

- ಇಂದು ಸಾಂಸಾರಿಕವಾಗಿ ಖುಷಿ ಇರಲಿದೆ
- ಕಡಿಮೆ ಪರಿಶ್ರಮದಿಂದ ಉತ್ತಮ ಕೆಲಸಗಳಾಗುತ್ತದೆ
- ಕೆಲಸದಲ್ಲಿ ಬಡ್ತಿಯನ್ನು ಪಡೆಯಬಹುದು
- ಸಾಮಾಜಿಕ ಜೀವನದಲ್ಲಿ ಗೌರವ ಸಿಗಬಹುದು
- ಅನಿರೀಕ್ಷಿತ ಧನ ಲಾಭವಾಗಬಹುದು
- ದೂರದ ಸಂಬಂಧಿಕರಿಗೆ ಸಮಸ್ಯೆ, ತೊಂದರೆ ಆಗಬಹುದು
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ವೃಶ್ಚಿಕ

- ಹಿರಿಯರ ಮಾರ್ಗದರ್ಶನದ ನಂತರ ಕಾರ್ಯ ಪ್ರವೃತ್ತರಾಗಬೇಕು
- ತುಂಬಾ ಅಲೆದಾಡಬೇಕಾದ ದಿನ
- ಪ್ರೇಮಿಗಳು ತುಂಬಾ ಭಾವುಕರಾಗಬಹುದು
- ಹಣದ ಲಾಭಕ್ಕೆ ಅವಕಾಶಗಳಿವೆ
- ಮಕ್ಕಳ ಜೊತೆಯಲ್ಲಿ ಸಮಯ ಕಳೆಯುತ್ತೀರಿ
- ವ್ಯಾವಹಾರಿಕವಾಗಿ ಚೆನ್ನಾಗಿರುವ ದಿನ
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಠನೆ ಮಾಡಿ
ಧನುಸ್ಸು

- ಇಂದು ಹೆಚ್ಚು ಶ್ರಮವಾಗುವ ಕೆಲಸ ಬೇಡ
- ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ
- ಸಹೋದ್ಯೋಗಿಗಳಿಂದ ಸಮಸ್ಯೆ ಉಂಟಾಗಬಹುದು
- ಮನೆಯ ತಪ್ಪನ್ನ ತಿದ್ದುವಲ್ಲಿ ಯಶಸ್ವಿಯಾಗಬಹುದು
- ಮಕ್ಕಳಿಂದ ಸಂತೋಷ ಸಿಗಬಹುದು
- ವಿದ್ಯಾರ್ಥಿಗಳಿಗೆ ಶುಭದಾಯಕ ದಿನ
- ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ
ಮಕರ

- ಸರ್ಕಾರಿ ನೌಕರರಿಗೆ ಉತ್ತಮವಾದ ಸಮಯ
- ಸಾಯಂಕಾಲದ ಹೊತ್ತಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಸಮಸ್ಯೆ ಆಗಬಹುದು
- ಹಣಕ್ಕಾಗಿ ತುಂಬಾ ಯೋಚನೆ ಮಾಡುತ್ತೀರಿ ಯೋಜನೆಗಳನ್ನು ಹಾಕುತ್ತೀರಿ
- ದುಡಿಯುವಾಗ ದುಡಿದು ಬಿಡಬೇಕು ಎಂಬ ಭಾವನೆ ಬರಬಹುದು
- ನೀವು ನೀವಾಗಿರಲು ಪ್ರಯತ್ನಿಸಿ ಅದರಿಂದ ಶುಭವಿದೆ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ

- ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ಕೆಲಸಕ್ಕೆ ಚಾಲನೆ ಸಿಗಬಹುದು
- ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ
- ಇಂದು ಹಣಗಳಿಸಲು ಅವಕಾಶಗಳಿವೆ
- ನಿಮ್ಮ ಸಮಸ್ಯೆಗಳು ಮಾತ್ರ ಪರಿಹಾರವಾಗುವುದಿಲ್ಲ
- ಪ್ರೇಮಿಗಳಲ್ಲಿ ವಿರಸ ಉಂಟಾಗುವುದರಿಂದ ದೂರವಾಗಬಹುದು
- ಅವಕಾಶದ ನಿರೀಕ್ಷೆಯಲ್ಲಿದ್ದರೆ ನಿರಾಸೆ ಆಗಬಹುದು
- ಮನೋಭವನನ್ನು ಪ್ರಾರ್ಥನೆ ಮಾಡಿ
ಮೀನಾ

- ಇಂದು ತುಂಬಾ ಮಂಗಳಕರವಾದ ದಿನ
- ಕಾರ್ಯಕ್ಷೇತ್ರದಲ್ಲಿ ಪ್ರಗತಿಯ ದಿನ
- ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಸಿಗಲಿದೆ
- ಗಂಟಲಿನ ಮತ್ತು ಶೀತದ ಸಮಸ್ಯೆ ಕಾಡಬಹುದು
- ಪೋಷಕರ ಜೊತೆ ಮನಸ್ತಾಪ ಬೇಡ
- ಹಣದ ವಿಚಾರವಾಗಿ ತುಂಬಾ ಲೆಕ್ಕ ಹಾಕುತ್ತೀರಿ
- ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ