ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬಹುದು
ಆರ್ಥಿಕ ವಿಚಾರಕ್ಕೆ ಹೋರಾಟ ನಡೆಸಬಹುದು
ಕುಟುಂಬದಲ್ಲಿ ಕಲಹದ ಅವಕಾಶವಿದೆ ಎಚ್ಚರ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ

- ಆಸ್ತಿಯ ವಿಚಾರದಲ್ಲಿ ಕುತಂತ್ರ ನಡೆದು ಸಮಸ್ಯೆ ಉಂಟಾಗಬಹುದು
- ಇಂದು ಬೆಂಕಿ ಮತ್ತು ನೀರಿನಿಂದ ದೂರವಿರಿ
- ಯಾವುದೇ ರೀತಿಯ ಕಿರಿಕಿರಿ ಮಾಡಿಕೊಳ್ಳಬೇಡಿ
- ಮನೆಯಲ್ಲಿ ಅಸಮಾಧಾನಕರ ವಾತಾವರಣ
- ಮಕ್ಕಳಿಂದ ಶುಭವಾರ್ತೆ ಕೇಳಬಹುದು
- ಆರ್ಥಿಕ ವಿಚಾರಕ್ಕೆ ಹೋರಾಟ ನಡೆಸಬಹುದು
- ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ವೃಷಭ

- ನಿಮ್ಮ ಬಗ್ಗೆ ಬಂಧುಗಳಲ್ಲಿ ವಿಶೇಷವಾದ ಚರ್ಚೆ ನಡೆಯಬಹುದು
- ಹಣದ ವಿಚಾರಕ್ಕೆ ಸ್ವಲ್ಪ ಮಾತುಕತೆ ನಡೆಯಬಹುದು
- ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬಹುದು
- ಇಂದು ಮನೆಯಲ್ಲಿ ಶುಭ ವಾತಾವರಣ
- ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಪ್ರಗತಿ
- ನೌಕರಿಯಲ್ಲಿ ಸಮಾಧಾನವಿರುವ ದಿನ
- ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಆರ್ಥಿಕ ಸಂಕಷ್ಟ ದೂರವಾಗುವ ಸಮಯ
- ಇಂದು ಮಾನಸಿಕವಾಗಿ ಏನೋ ಒಂದು ರೀತಿಯ ನೋವು, ಕಳವಳ
- ಕುಟುಂಬದಲ್ಲಿ ಕಲಹದ ಅವಕಾಶವಿದೆ ಎಚ್ಚರ
- ಮೋಜು, ಮಸ್ತಿಗಳಿಂದ ತೊಂದರೆಯಿದೆ
- ಸ್ತ್ರೀಯರಿಗೆ ಧನ ಲಾಭದ ಯೋಗವಿದೆ
- ಮಕ್ಕಳ ಚಟುವಟಿಕೆ ಸಮಾಧಾನ ಕೊಡಬಹುದು
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ
ಕಟಕ

- ಇಂದು ಹಣ ಹೂಡಿಕೆಯಿಂದ ಲಾಭವಿದೆ
- ವಿಷಯ ಕೊರತೆಯಿಂದ ನಷ್ಟ ಉಂಟಾಗಬಹುದು
- ಸಂಶಯದ ಮನೋಭಾವ ಒಳ್ಳೆಯದಲ್ಲ
- ಮಕ್ಕಳ ಜೊತೆ ಹೊಂದಾಣಿಕೆಯಿರಲಿ
- ವ್ಯವಹಾರಿಕವಾಗಿ ಅಭಿವೃದ್ಧಿ ಹೊಂದುವ ಯೋಗವಿದೆ
- ಸೇವಕ ವರ್ಗದಿಂದ ಸಮಸ್ಯೆ ಉಂಟಾಗಬಹುದು
- ಗೋಪಾಲಕೃಷ್ಣನನ್ನು ಪ್ರಾರ್ಥನೆ ಮಾಡಿ
ಸಿಂಹ

- ಆರ್ಥಿಕವಾಗಿ ತಿರುಗಾಟದಿಂದ ಬೇಸರ ಉಂಟಾಗಬಹುದು
- ಶೀತ ಸಂಬಂಧಿ ಸಮಸ್ಯೆ ಕಾಡಬಹುದು
- ಬಂಧುಗಳ ಜೊತೆ ಮಾತುಕತೆಯಿಂದ ಸಂತಸ ಉಂಟಾಗಬಹುದು
- ಮಿತ್ರರ ಜೊತೆ ಕಲಹವಾಗುವ ಸಾಧ್ಯತೆಯಿದೆ
- ನಿಮ್ಮ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ
- ಬೇರೆ ಚಟುವಟಿಕೆಗಳಲ್ಲೂ ನಿರ್ದಿಷ್ಟವಾಗಿ ತೊಡಗಿಸಿಕೊಳ್ಳಿ
- ಕುಲದೇವತಾರಾಧನೆ ಮಾಡಿ
ಕನ್ಯಾ

- ಇಂದು ಮಕ್ಕಳಿಂದ ಸಹಾಯ, ಸಹಕಾರ ಸಿಗುತ್ತದೆ
- ಯಶಸ್ಸಿನ ಬಗ್ಗೆ ಚಿಂತನೆ ಮಾಡುತ್ತೀರಿ
- ಆಸ್ತಿಯ ವಿಚಾರದಲ್ಲಿ ಸಮಸ್ಯೆಯಾಗಬಹುದು
- ವಾಹನ ಅಪಘಾತವಾಗುವ ಸಾಧ್ಯತೆಯಿದೆ
- ರಾಜಕಾರಣಿಗಳ ಸಂಪರ್ಕವಾಗುತ್ತೆ ನಿಮ್ಮ ಕೆಲಸಕ್ಕೆ ಭರವಸೆ ನೀಡಬಹುದು
- ಇಂದು ಅವಮಾನಕ್ಕೆ ಅವಕಾಶಗಳಿವೆ
- ರುದ್ರ ದೇವರ ಪ್ರಾರ್ಥನೆ ಮಾಡಿ
ತುಲಾ

- ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
- ಅಪ್ರಿಯವಾದ ಕೆಲಸಗಳನ್ನ ಅನಿವಾರ್ಯವಾಗಿ ಮಾಡಬೇಕಾಗಬಹುದು
- ಮಕ್ಕಳ ಸಹಾಯ ಸಹಕಾರ ಸಿಗಬಹುದು
- ಬೇರೆಯವರಿಗೆ ಸಲಹೆ ನೀಡಬೇಡಿ
- ಕುಟುಂಬದಲ್ಲಿ ಶಾಂತಿಯ ವಾತಾವರಣವಿರುತ್ತದೆ
- ಅಧಿಕಾರಿಗಳಿಂದ ಬೇಸರವಾಗಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ತಂದೆ ಮಕ್ಕಳ ಮಧ್ಯದಲ್ಲಿ ವಾಗ್ವಾದ ನಡೆದು ಬೇಸರವಾಗಬಹುದು
- ದೂರ ಪ್ರಯಾಣದ ಸಾಧ್ಯತೆಯಿದೆ
- ಅಪಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
- ಅವಕಾಶ ಕೈತಪ್ಪುವ ಭೀತಿ ಉಂಟಾಗಬಹುದು
- ಮಾನಸಿಕವಾಗಿ ನೆಮ್ಮದಿಯಿಲ್ಲದ ದಿನ
- ಕೆಟ್ಟ ನಿರ್ಧಾರಗಳಿಗೆ ಅವಕಾಶ ಬೇಡ
- ಶಕ್ತಿ ದೇವತಾ ಆರಾಧನೆ ಮಾಡಿ
ಧನುಸ್ಸು

- ಇಂದು ಧನಾಗಮವಾಗುವ ಸಾಧ್ಯತೆಯಿದೆ
- ಉತ್ತಮ ಅವಕಾಶಗಳಿಗೆ ಅನುಕೂಲವಿದೆ
- ಪ್ರೇಮಿಗಳಿಗೆ ಅನುಕೂಲ ಜೊತೆ ಶುಭವಿದೆ
- ಉದ್ಯೋಗದಲ್ಲಿ ಸೋಲು ಅದರಿಂದ ನಿರಾಸೆ ಉಂಟಾಗಬಹುದು
- ಕುಟುಂಬದಲ್ಲಿ ಆತಂಕ ಮನೆಮಾಡಬಹುದು
- ಆಹಾರದಲ್ಲಿ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು ಗಮನಿಸಿ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಮಕರ

- ಇಂದು ದಾಂಪತ್ಯ ಸಮಸ್ಯೆಕ್ಕೆ ಪರಿಹಾರ ಸಿಗಬಹುದು
- ಇಂದು ತಿಳಿಯದ ಕೆಲಸಗಳನ್ನ ಮಾಡಬೇಡಿ
- ಪ್ರೇಮಿಗಳಿಗೆ ಸವಾಲುಗಳು ಹೆಚ್ಚಾಗುವ ದಿನ
- ಸ್ವಂತ ಉದ್ಯಮಿಗಳಿಗೆ ಲಾಭವಿದೆ
- ತಾಂತ್ರಿಕವಾಗಿ ಸಮಸ್ಯೆಗಳು ಕಾಡಬಹುದು
- ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವ ದಿನ ಆದರೆ ಸಮಧಾನವಿಲ್ಲ
- ವಿಷ್ಣು ಸಹಸ್ರನಾಮವನ್ನ ಶ್ರವಣ ಮಾಡಿ
ಕುಂಭ

- ಆರೋಗ್ಯದಲ್ಲಿ ವ್ಯತ್ಯಾಸದಿಂದ ಭಯ ಕಾಡಬಹುದು
- ಶತ್ರುಗಳಿಂದ ಮೋಸದ ಸಾಧ್ಯತೆಯಿದೆ ಜಾಗ್ರತೆ
- ಇಂದು ಅಪವಾದಕ್ಕೆ ಒಳಗಾಗಬಹುದು
- ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬಹುದು
- ಬಂಧುಗಳಲ್ಲಿ ವಿರಸ ಉಂಟಾಗಬಹುದು
- ಕೈ ಹಾಕಿದ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು
- ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ಮೀನ

- ಮಕ್ಕಳ ಜೀವನದಲ್ಲಿ ಸಮಸ್ಯೆಯಾಗಬಹುದು
- ಬಂಧುಗಳಿಂದ ಅಪಹಾಸ್ಯಕ್ಕೆ ಅವಕಾಶವಿದೆ
- ವ್ಯವಹಾರಿಕವಾಗಿ ಉತ್ತಮ ವಾತಾವರಣವಿದೆ
- ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತಿಸಬಹುದು
- ಹಳೆಯ ಮಿತ್ರರ ಭೇಟಿಯಿಂದ ಸಂತಸವಾಗಬಹುದು
- ಧರ್ಮಕಾರ್ಯಕ್ಕೆ ಹಣ ಖರ್ಚು ಮಾಡಬಹುದು
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ