ಮಕ್ಕಳ ಜೊತೆಯಲ್ಲಿ ಪ್ರಯಾಣ ಮಾಡುವ ಸಾಧ್ಯತೆ ತೊಂದರೆ!
ಶತ್ರು ಕಾಟ ನಿರಂತರವಾಗಿರುವುದರಿಂದ ಸಮಸ್ಯೆಯಾಗಬಹುದು
ಪ್ರೀತಿ ಪಾತ್ರರೊಂದಿಗೆ ಸಂತೋಷದ ಕ್ಷಣವನ್ನು ಕಳೆಯುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ

- ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ಸ್ಥಾನಮಾನ ಸಿಗಲಿದೆ
- ದ್ರವ್ಯ ಲಾಭ ಆಗುವುದರಿಂದ ಭಯ ಉಂಟಾಗಬಹುದು
- ಜೀವನಕ್ಕೆ ಉತ್ತಮವಾದ ತಿರುವು ಕೊಡುವ ಸಮಯ
- ಪ್ರೀತಿ ಪಾತ್ರರೊಂದಿಗೆ ಸಂತೋಷದ ಕ್ಷಣವನ್ನು ಕಳೆಯುತ್ತೀರಿ
- ಬಂಧುಗಳಲ್ಲಿ ವಿಶೇಷವಾದ ಆಕರ್ಷಣೆ ಹೊಂದುತ್ತೀರಿ
- ವಿದ್ಯಾರ್ಥಿಗಳಿಗೆ ಬಹುಮಾನ ಅಥವಾ ಉಡುಗೊರೆ ಸಿಗುವ ಸಾಧ್ಯತೆ ಇದೆ
- ಶಾರದಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಮನಸ್ಸಿಗೆ ಮಾತ್ರ ಸಮಾಧಾನವಿಲ್ಲ
- ಆರ್ಥಿಕವಾಗಿ ಸುಧಾರಣೆಯಾಗಲಿದೆ
- ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯ ಇರಲಿದೆ
- ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಇರಲಿದೆ
- ಸತಿಪತಿಯರಲ್ಲಿ ಅನ್ಯೋನತೆ ಕಾಣಲಿದೆ
- ಪ್ರಯಾಣ ಸಂಭವ ಶುಭವಾಗಲಿದೆ
- ಕುಲದೇವತಾ ಆರಾಧನೆ ಮಾಡಿ
ಮಿಥುನ

- ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಶುಭವಿದೆ
- ದೂರದ ಪ್ರಯಾಣ ಬೇಡ
- ಶತ್ರು ಕಾಟ ನಿರಂತರವಾಗಿರುವುದರಿಂದ ಸಮಸ್ಯೆಯಾಗಬಹುದು
- ತೀರ್ಥಕ್ಷೇತ್ರಗಳ ದರ್ಶನಕ್ಕೆ ಚಿಂತನೆಯನ್ನು ಮಾಡಿ
- ಸಮಾಜದಲ್ಲಿ ಜವಾಬ್ದಾರಿಯ ಸ್ಥಾನವನ್ನು ಹೊಂದಿರುತ್ತೀರಿ
- ರಾಜಕೀಯ ವ್ಯಕ್ತಿಗಳಿಗೆ ಹಳೆಯ ವಿಚಾರ ಸಮಸ್ಯೆಯಾಗಬಹುದು
- ಪ್ರತ್ಯಂಗಿರಾದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ

- ವ್ಯಾವಹಾರವಾಗಿ ಯಶಸ್ಸನ್ನು ಹೊಂದುವುದರ ಜೊತೆಗೆ ಸವಾಲುಗಳನ್ನು ಎದುರಿಸುತ್ತೀರಿ
- ಮಾತಿನಿಂದ ಕೆಲವು ಸಮಸ್ಯೆಗಳಾಗಬಹುದು
- ದೂರದ ಸಂಬಂಧಿಕರಲ್ಲಿ ಜಗಳ ಆಗುವ ಸಾಧ್ಯತೆ ಇದೆ
- ವೈಯಕ್ತಿಕ ವಿಚಾರಗಳಿಂದ ಅವಮಾನ ಆಗಬಹುದು
- ಮುಚ್ಚಿಟ್ಟಿದ್ದ ವಿಚಾರಗಳು ಹೊರ ಬರಲಿದೆ
- ತಾಳ್ಮೆಯಿಂದ ವರ್ತಿಸಿ ಅಶುಭವಾದ ದಿನ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ವ್ಯಾವಹಾರಿಕವಾಗಿ ಹೊಸ ತಿರುವು ಶುಭವಿದೆ
- ವಿದ್ಯಾರ್ಥಿಗಳಲ್ಲಿ ಪ್ರವಾಸದ ವಿಚಾರವನ್ನು ಚರ್ಚೆ ಮಾಡುತ್ತೀರಿ
- ಕಾರ್ಯಕ್ಷೇತ್ರದಲ್ಲಿ ಸಂತಸ ಆಗಲಿದೆ
- ಶತ್ರುಗಳಿಗೆ ಸರಿಯಾದ ಉತ್ತರವನ್ನು ನೀಡುವಿರಿ
- ಮಂಗಳ ಕಾರ್ಯದಲ್ಲಿ ಭಾಗಿಗಳಾಗುತ್ತೀರಿ
- ಹಲವಾರು ಜನರಲ್ಲಿ ನಿಮ್ಮ ವಿಚಾರ ಬರುತ್ತದೆ
- ಮಹಾ ಗಣಪತಿಯನ್ನು ಆರಾಧನೆ ಮಾಡಿ
ಕನ್ಯಾ

- ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಬರಲಿದೆ
- ಪ್ರತಿಭೆಗೆ ತಕ್ಕ ಫಲವಿಲ್ಲ ಅದರಿಂದ ಬೇಸರ ಆಗಲಿದೆ
- ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು
- ರೋಗಬಾಧೆ ಇರುತ್ತದೆ ಗಮನಿಸಿಕೊಳ್ಳಿ
- ವೈಯಕ್ತಿಕ ಬೆಳವಣಿಗೆಗೆ ಅಡ್ಡಿಯಾಗಬಹುದು
- ಮಕ್ಕಳ ಬಗ್ಗೆ ವಿಶ್ವಾಸವಿರಲಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ತುಲಾ

- ನಿರುದ್ಯೋಗಿಗಳಿಗೆ ಸ್ವಲ್ಪ ನಿರಾಳ
- ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
- ಅಧಿಕವಾದ ಖರ್ಚು ಆಗಲಿದೆ
- ಮಕ್ಕಳ ವಿದ್ಯಾ ಪ್ರಗತಿ ನಿಮಗೆ ಸಮಾಧಾನ ಕೊಡಲಿದೆ
- ಬೇರೆಯವರಿಗೆ ಸಹಾಯ ಮಾಡುತ್ತೀರಿ
- ನಾಯಕತ್ವದ ಕೆಲಸದಲ್ಲಿ ಶ್ರಮ ಪಡುತ್ತೀರಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಆತುರದ ನಿರ್ಧಾರದಿಂದ ಸಮಸ್ಯೆಯಾಗಬಹುದು
- ಅವಕಾಶಗಳು ಕೈತಪ್ಪುವ ಸಾಧ್ಯತೆ ಇದೆ
- ಎಲ್ಲಾ ರೀತಿಯಲ್ಲೂ ಎಚ್ಚರಿಕೆಯಿಂದಿರಿ
- ಮಕ್ಕಳ ಜೊತೆಯಲ್ಲಿ ಪ್ರಯಾಣ ಮಾಡುವ ಸಾಧ್ಯತೆ ತೊಂದರೆಯು ಆಗಬಹುದು
- ಮನೆಯಲ್ಲಿ ಹೊಂದಾಣಿಕೆ ಇರಲಿ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಅತಿಯಾದ ನಂಬಿಕೆಯಿಂದ ದ್ರೋಹ ಆಗಬಹುದು
- ಇಂದು ವಿರೋಧಿಗಳಿಂದ ಕುತಂತ್ರ
- ಆತ್ಮೀಯರ ಭೇಟಿ ಮಾಡುವುದರಿಂದ ಸಮಾಧಾನ ಆಗಲಿದೆ
- ಇಷ್ಟವಾದ ಕೆಲಸಕ್ಕೆ ಅಡ್ಡಿಯಾಗಬಹುದು
- ಹಲವಾರು ರೀತಿಯ ಯೋಜನೆಗಳಿಗೆ ಭಂಗವಾಗಲಿದೆ
- ಮನೆಯಲ್ಲಿ ಭಿನ್ನಾಭಿಪ್ರಾಯಕ್ಕೆ ವಿರಾಮ ಹಾಕಿ
- ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ
ಮಕರ

- ಇಂದು ವಿವಾದಗಳಿಂದ ದೂರವಿರಿ
- ನಂಬಿಕೆ ಕೆಲಸ ಮಾಡುವುದಿಲ್ಲ
- ನಿಮ್ಮ ಕೆಲಸವನ್ನು ಬೇರೆಯವರಿಗೆ ಹೇಳಬೇಡಿ
- ಮಾನಸಿಕವಾಗಿ ವ್ಯಥೆ ಪಡುತ್ತೀರಿ
- ವ್ಯಾವಹಾರಿಕವಾಗಿ ಸ್ವಲ್ಪ ಸಾಧನೆಯನ್ನು ಮಾಡುತ್ತೀರಿ
- ಆಸೆಗೆ ಮಿತಿ ಇಲ್ಲದ ಕಾರಣ ನಿರಾಸೆ ಹೊಂದುತ್ತೀರಿ
- ಲಲಿತ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಮಕ್ಕಳಿಂದ ಅನುಕೂಲ ಆದರೆ ಭಯ
- ವಿದ್ಯಾಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
- ಇಂದು ಆಕಸ್ಮಿಕ ಧನಲಾಭ ಆಗಲಿದೆ
- ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ
- ಅನಾರೋಗ್ಯದಿಂದ ಪಾರಾಗುತ್ತೀರಿ
- ಸಮಾಜದಲ್ಲಿ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಟೀಕೆಗೆ ಒಳಗಾಗುತ್ತೀರಿ
- ನವಗ್ರಹರ ಆರಾಧನೆ ಮಾಡಿ
ಮೀನ

- ಯತ್ನ ಕಾರ್ಯದಲ್ಲಿ ಜಯವಿದೆ ಆದರೆ ತುಂಬಾ ಶ್ರಮ ಪಡಬೇಕು
- ಎಲ್ಲರ ಮನಸ್ಸಿನಲ್ಲಿ ನಿಮ್ಮ ದೌರ್ಬಲ್ಯದ ವಿಚಾರವನ್ನು ಮಾತನಾಡುತ್ತಾರೆ
- ಸ್ತ್ರೀಯರಿಗೆ ವಸ್ತ್ರ ಮತ್ತು ಧನಲಾಭ
- ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ಶುಭದಿನ
- ಭೂ ವಿಚಾರದಲ್ಲಿ ಯಾವುದೇ ಕುತಂತ್ರಗಳು ಬೇಡ
- ಹಿರಿಯರ ಆಸ್ತಿ, ಧನ ಈ ವಿಚಾರದಲ್ಲಿ ಮನಸ್ತಾಪ ಆಗಲಿದೆ
- ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ