ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು
ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ
ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ
ಮೇಷ ರಾಶಿ

- ಇಂದು ವ್ಯವಹಾರದಲ್ಲಿ ಪಾರದರ್ಶಕತೆಯನ್ನ ಕಾಪಾಡಿಕೊಳ್ಳಬೇಕು
- ಮುಖ್ಯವಾದ ವಿಚಾರಗಳನ್ನು ಸುರಕ್ಷಿತವಾಗಿರಿಸಿ
- ಹಣದ ಸಮಸ್ಯೆ ಇದ್ದರೆ ದೂರವಾಗಬಹುದು
- ನಿಮ್ಮ ಗೌಪ್ಯ ವಿಷಯಗಳು ಹೊರಬರುವ ಸಾಧ್ಯತೆಯಿದೆ
- ಯೋಚನೆ ಮಾಡದೆ ಯಾವುದೇ ನಿರ್ಧಾರಗಳು ಬೇಡ
- ಮಕ್ಕಳಿಂದ ಯೋಚನೆ ಬೇಸರವಾಗಬಹುದು
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಪ್ರತಿ ಸಮಸ್ಯೆಯನ್ನ ಸಮರ್ಥವಾಗಿ ಬಗೆಹರಿಸುವ ದಿನ
- ಮಕ್ಕಳಿಗೆ ಉಡುಗೊರೆ ಕೊಡಬಹುದು
- ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಬಹುದು
- ಹಣಕಾಸು ವಿಚಾರದಲ್ಲಿ ತುಂಬಾ ಚೆನ್ನಾಗಿರುತ್ತದೆ
- ಜವಾಬ್ದಾರಿಯುತ ಕೆಲಸಗಳು ನಿಮ್ಮ ಹೆಗಲೇರಬಹುದು
- ಹಳೆಯ ನೆನಪುಗಳಿಂದ ಸಂತಸವಾಗಬಹುದು
- ಆಂಜನೇಯನನ್ನು ಸ್ಮರಣೆ ಮಾಡಿ
ಮಿಥುನ

- ನಿಮ್ಮ ಪ್ರತಿಭೆ ಬಗ್ಗೆ ನಿಮಗೆ ಹೆಮ್ಮೆ ಇರಲಿ
- ನಿಮ್ಮನ್ನ ಸಮಾಜದಲ್ಲಿ ಗೌರವಿಸಬಹುದು
- ಕಠಿಣ ಪರಿಶ್ರಮದ ಮೇಲೆ ಫಲ ನಿಂತಿರುತ್ತದೆ
- ರಾತ್ರಿ ಪ್ರಯಾಣ ಬೇಡ ತೊಂದರೆಯಿದೆ
- ಹಣ ಹೂಡಿಕೆಯ ಬಗ್ಗೆ ಸರಿಯಾದ ತನಿಖೆ ನಡೆಸಿ ಮುಂದುವರೆಯಿರಿ
- ಆರ್ಥಿಕ ನಷ್ಟಕ್ಕೆ ಅವಕಾಶವನ್ನ ಮಾಡಿ ಕೊಡಬೇಡಿ
- ಶಿವರಾಧನೆ ಮಾಡಿ
ಕಟಕ

- ಇಂದು ಹಣದ ಸಮಸ್ಯೆ ಸುತ್ತುವರಿಯುತ್ತದೆ
- ವಿಷಯ ಸಂಗ್ರಹ ಬಹಳ ಮುಖ್ಯವಾಗಬಹುದು
- ನಿಯಮಗಳನ್ನು ಉಲ್ಲಂಘಿಸಬೇಡಿ ಅದರಿಂದ ತೊಂದರೆಯಿದೆ
- ಸ್ವಯಂ ವಾಹನ ಚಾಲನೆ ಒಳ್ಳೆಯದಲ್ಲ
- ಸಹೋದರ ವರ್ಗಗಳಿಂದ ಒತ್ತಡವಿರಬಹುದು
- ಕಾನೂನಿನ ವಿಚಾರದಲ್ಲಿ ಹಿನ್ನಡೆ ಆದರು ಕೂಡ ಸಮಾಧಾನ ಸಿಗಬಹುದು
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಸಿಂಹ

- ಪ್ರೇಮಿಗಳಲ್ಲಿ ಪರಸ್ಪರ ಅನ್ಯೂನತೆ ಕಾಣಬಹುದು
- ವೃತ್ತಿಯಲ್ಲಿ ಬಡ್ತಿ ಸಿಗಬಹುದು
- ಮನೆಯ ಹಿರಿಯರಿಗೆ ನಿಮ್ಮಿಂದ ಸಂತೋಷವಾಗಬಹುದು
- ಉದ್ಯೋಗಕ್ಕೆ ಸಂಬಂಧಿಸಿದಂತೆ ಅವಕಾಶ ಸಿಗಬಹುದು
- ವ್ಯಾವಹಾರಿಕವಾದ ಅಡೆತಡೆಗಳನ್ನ ನಿವಾರಣೆ ಮಾಡಿಕೊಳ್ಳಿ
- ಹಿರಿಯರಿಂದ ಉಡುಗೊರೆ ಪಡೆಯಬಹುದು
- ಇಷ್ಟ ದೇವತಾರಾಧನೆ ಮಾಡಿ
ಕನ್ಯಾ

- ಆರೋಗ್ಯದಲ್ಲಿ ತುಂಬಾ ಏರುಪೇರಾಗಬಹುದು
- ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭವಾಗಬಹುದು
- ಆತ್ಮೀಯರನ್ನು ಕುಟುಂಬದಿಂದ ದೂರ ಮಾಡಿಕೊಳ್ಳುವ ಸಂದರ್ಭ ಹೆಚ್ಚಾಗಿವೆ
- ಬೇರೆಯವರ ಆಕಾಂಕ್ಷೆಗಳನ್ನ ಈಡೇರಿಸುವಲ್ಲಿ ವಿಫಲರಾಗಬಹುದು
- ದೂರದ ಪ್ರಯಾಣ ಸಾಧ್ಯತೆ ಹೆಚ್ಚಾಗಿದೆ
- ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುವುದಿಲ್ಲ
- ನವಗ್ರಹರಾಧನೆ ಮಾಡಿ
ತುಲಾ

- ಮನೆಯಲ್ಲಿ ಚರ್ಚಿಸದೆ ಯಾವ ನಿರ್ಧಾರವನ್ನ ಮಾಡಿಬೇಡಿ
- ಬೇರೆಯವರ ಮಾತು ಕೋಪಗೊಳ್ಳುವಂತೆ ಮಾಡಬಹುದು
- ವ್ಯರ್ಥ ವಿಚಾರಗಳಿಂದ ದೂರ ಉಳಿಯಿರಿ
- ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯವಾಗಬಹುದು
- ಯಾವುದೇ ಅನುಮಾನದ ಕೆಲಸಗಳನ್ನು ಮಾಡಬೇಡಿ
- ಸಾಯಂಕಾಲ ಸಿಹಿ ಸುದ್ದಿಯಿದೆ ಅದರಿಂದ ಅನುಕೂಲವಾಗಬಹುದು
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ವ್ಯವಹಾರಿಕ ಮತ್ತು ಸಾಮಾಜಿಕವಾಗಿ ನಿಮಗೆ ವಿರೋಧಿಗಳು ಹೆಚ್ಚಾಗಬಹುದು
- ಪ್ರೇಮಿಗಳಲ್ಲಿ ಪರಸ್ಪರ ಅನುಮಾನ ಹುಟ್ಟಬಹುದು
- ತತ್ವ ವಿಚಾರ ಮಾತಾಡುವ ಸಂದರ್ಭ ಬರಬಹುದು
- ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ
- ಮನಸ್ಸಿಗೆ ಸರಿ ಹೊಂದುವ ತೀರ್ಮಾನವಿರಲಿ
- ಧನ್ವಂತರಿಯನ್ನ ಪ್ರಾರ್ಥನೆ ಮಾಡಿ
ಧನುಸ್ಸು

- ಅವಿವಾಹಿತರಿಗೆ ವಿವಾಹ ಯೋಗ ಬರಬಹುದು
- ಸರ್ಕಾರಿ ನೌಕರಿಗೆ ಹೊರೆ ಹೆಚ್ಚಾಗಬಹುದು
- ಮಕ್ಕಳ ವಿಚಾರದಲ್ಲಿ ಸಂತೋಷವಿದೆ ಕಾಳಜಿವಹಿಸಿ
- ಬುದ್ಧಿವಂತಿಕೆಯಿಂದ ಮಾತುಗಳನ್ನಾಡಿ ಉಪಯೋಗವಿದೆ
- ವ್ಯವಹಾರಿಕವಾಗಿ ಯಶಸ್ಸಿದೆ ಅದನ್ನ ಬಳಸಿಕೊಳ್ಳಿ
- ಶುಭ ಕಾರ್ಯಗಳಲ್ಲಿ ಭಾಗಿಗಳಾಗಬಹುದು
- ಲಕ್ಷ್ಮೀನಾರಾಯಣ ಸ್ತೋತ್ರ ಶ್ರವಣ ಮಾಡಿ
ಮಕರ

- ಸಾಂಸಾರಿಕವಾಗಿ ಹೊಂದಿಕೊಳ್ಳಲು ಪ್ರಯತ್ನಿಸಬಹುದು
- ವಿರೋಧಿಗಳು ನಿಮ್ಮ ಪ್ರತಿಭೆಯನ್ನು ಪ್ರೋತ್ಸಾಹಿಸಬಹುದು
- ನಿಮ್ಮ ಜೀವನ ಮಟ್ಟ ಚೆನ್ನಾಗಿರುತ್ತದೆ
- ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆ ಉದ್ಯೋಗ ಅವಕಾಶವಿದೆ
- ಸಂತಾನ ಅಪೇಕ್ಷಿಗಳಿಗೆ ಶುಭ ಸೂಚನೆಯಿದೆ
- ಕಠಿಣವಾದ ಯಾವ ನಿರ್ಧಾರಗಳನ್ನ ಮಾಡಬೇಡಿ
- ನವಗ್ರಹ ಆರಾಧನೆ ಮಾಡಿ
ಕುಂಭ

- ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
- ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುವಂತೆ ಮಾಡಿ
- ವ್ಯಾಪಾರದ ಉದ್ದೇಶದಿಂದ ಪ್ರಯಾಣ ಮಾಡಬಹುದು
- ಹೊಸ ವ್ಯವಹಾರಗಳಿಗೆ ಅವಕಾಶವಿದೆ
- ಮಾತಿನಲ್ಲಿ ತಾಳ್ಮೆಯಿರಲಿ ಗೌರವ ಸಿಗಬಹುದು
- ಅಧಿಕಾರವಿದ್ದರೂ ಕೂಡ ವಿಧೇಯರಾಗಿರಬೇಕಾಗುತ್ತದೆ
- ಕುಲದೇವತಾರಾಧನೆ ಮಾಡಿ
ಮೀನಾ

- ಕಾರ್ಯಕ್ಷೇತ್ರದಲ್ಲಿ ನಿಮ್ಮ ಶಿಸ್ತು ಕೆಲಸ ಮಾಡುತ್ತದೆ
- ಪ್ರೇಮಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಕಾಣಬಹುದು
- ಆರೋಗ್ಯ ಸಂಬಂಧಿತ ವಿಚಾರಗಳು ತೊಂದರೆ ಮಾಡಬಹುದು
- ನಿಮ್ಮ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ
- ಹೊಸ ಸ್ನೇಹಿತರ ಸಂಪರ್ಕ ಸಿಗಬಹುದು
- ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ
- ಗಣಪತಿಯನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ