ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ
ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ
ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30ರವರೆಗೆ ಇರಲಿದೆ.
ಮೇಷ ರಾಶಿ

- ನಿಮ್ಮನ್ನು ಪರೀಕ್ಷಿಸಲೆಂದೇ ಕೆಲವು ಕಷ್ಟಗಳು ಎದುರಾಗಲಿದೆ
- ಮಕ್ಕಳ ಮತ್ತು ಮನೆಯವರ ಸಹಕಾರವಿದೆ
- ದೊಡ್ಡ ಉದ್ದಿಮೆದಾರರಿಗೆ ಶುಭವಿದೆ
- ರಾಜಕೀಯದಲ್ಲಿ ನಿಷ್ಠೆಯಿರುವವರಿಗೆ ಗೌರವವಿದೆ
- ಖರ್ಚಾದಷ್ಟು ಹಣ ಬರುತ್ತದೆಂಬ ಆತ್ಮವಿಶ್ವಾಸ ಇರುತ್ತದೆ
- ಯಾವ ಅಡೆತಡೆಗಳಿಗೂ ಹೆದರದಿರಿ ಶುಭವಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಎಲ್ಲಾ ವಾದ-ವಿವಾದದಲ್ಲಿ ಗೆಲ್ಲುತ್ತೀರಿ ಆದರೆ ಹಠಬೇಡ
- ಹಲವು ರೀತಿಯ ಗೊಂದಲಗಳು ನಿವಾರಣೆಯಾಗಲಿದೆ
- ಇಂದು ಪ್ರಯಾಣದಿಂದ ಖುಷಿಯಾಗಲಿದೆ
- ಎರಡನೇ ಮದುವೆ ಆದವರಿಗೆ ಸಮಸ್ಯೆಯಾಗಲಿದೆ
- ಮಕ್ಕಳಿಂದ ಸಮಾಧಾನದ ಸಂಗತಿ
- ದ್ರವ್ಯ ಲಾಭ, ಧನಲಾಭದಿಂದ ಸಂತೋಷ ಆಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಕುಟುಂಬದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ
- ಹಳೆಯ ಪದ್ಧತಿಯಂತೆ ಆಚರಣೆಗಳಿರಲಿ
- ಬೇರೆಯವರ ತಪ್ಪುಗಳನ್ನು ತಿದ್ದಲು ಹೋಗಬೇಡಿ
- ನಿಮ್ಮ ಮಾತಿಗೆ ಬೆಲೆ ಇರುವುದಿಲ್ಲ ಗಮನಿಸಿಕೊಳ್ಳಿ
- ಎಲ್ಲಾ ಕೆಲಸ ಕಾರ್ಯಗಳು ಬಲವಂತದಿಂದ ಆಗುತ್ತದೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
- ದುರ್ಗಾರಾಧನೆ ಮಾಡಿ
ಕಟಕ

- ಮನೆಯ ಜಗಳ ಬೀದಿಗೆ ಬರುವುದು ಬೇಡ
- ನಿಮ್ಮ ವಿರೋಧಿಗಳು ನಿಮ್ಮನ್ನು ಕೆರಳಿಸಲು ಕಾಯುತ್ತಿರುತ್ತಾರೆ
- ಸಹೋದರ ವರ್ಗದವರಿಗೆ ಹೊಟ್ಟೆಕಿಚ್ಚು
- ಮಕ್ಕಳ ವರ್ತನೆ ನಿಮಗೆ ಸಂತೋಷ ಆಗಲಿದೆ
- ಕಾನೂನಿನ ವಿಚಾರ ಮುನ್ನಲೆಗೆ ಬರುತ್ತದೆ
- ಸೇವಕ ವರ್ಗದವರಿಂದ ತೊಂದರೆಯಾಗಬಹುದು
- ಶಿವಾರಾಧನೆ ಮಾಡಿ
ಸಿಂಹ

- ನಿಮ್ಮ ಶಿಸ್ತು ಹಲವರಿಗೆ ಮಾದರಿಯಾಗಲಿದೆ
- ಯಾವುದೇ ರೀತಿಯ ಬದಲಾವಣೆಗೆ ಮನಸ್ಸು ಮಾಡಬೇಡಿ
- ನಿಮ್ಮವರೇ ನಿಮಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾರೆ
- ಹಲವು ಮುಖ್ಯವಾದ ವ್ಯಕ್ತಿಗಳನ್ನು ಆಕರ್ಷಿಸುತ್ತೀರಿ
- ಎಲ್ಲಾ ಕೆಲಸಗಳನ್ನು ಬಹಳ ಸರಳವಾಗಿ ನೆರವೇರಿಸುತ್ತೀರಿ
- ನಿಮ್ಮ ಜಾಣ್ಮೆಗೆ ಸೋಲದವರಿಲ್ಲ ಶುಭವಿದೆ
- ಇಷ್ಟದೇವತಾ ಆರಾಧನೆ ಮಾಡಿ
ಕನ್ಯಾ

- ಮನೆಯಲ್ಲಿ ಭಿನ್ನಾಭಿಪ್ರಾಯಗಳಿಂದ ಸಮಸ್ಯೆಯಾಗಬಹುದು
- ವಿವಾಹ ಮಂಗಳ ಕಾರ್ಯಕ್ಕೆ ಹಲವಾರು ಅಡ್ಡಿಗಳಾಗಬಹುದು
- ನಿಮ್ಮ ಕರ್ತವ್ಯವನ್ನು ಮರೆಯುತ್ತೀರಿ
- ಆರ್ಥಿಕವಾಗಿ ತೊಂದರೆ ಇಲ್ಲ ಮಾನಸಿಕವಾಗಿ ನೆಮ್ಮದಿ ಇಲ್ಲ
- ಹೊಂದಾಣಿಕೆಯಿಂದ ಸಾಂಸಾರಿಕ ಜೀವನವನ್ನು ನಡೆಸಿ
- ಬೇರೆಯವರ ಬಗ್ಗೆ ಉತ್ತಮ ಅಭಿಪ್ರಾಯವಿರಲಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ತುಲಾ

- ನಿರುದ್ಯೋಗಿಗಳಿಗೆ ಉತ್ತಮವಾದ ಅವಕಾಶ ಇರಲಿದೆ
- ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
- ಮನೆಯಲ್ಲಿ ಅಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತೀರಿ
- ಯಾವುದೇ ವಿಚಾರದಲ್ಲಿ ರಾಜಿಯನ್ನು ಮಾಡಿಕೊಳ್ಳಬೇಡಿ
- ವೃತ್ತಿಯಲ್ಲಿ ಅನುಕೂಲವಿರುತ್ತದೆ
- ಹಿಂದೆ ಮಾಡಿದ ಹಣ ಹೂಡಿಕೆಯಿಂದ ಲಾಭ ಸಿಗಲಿದೆ
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ

- ಮಕ್ಕಳಿಗಾಗಿ ಪಟ್ಟ ಕಷ್ಟ ಸಾರ್ಥಕವೆನಿಸುವ ದಿನ
- ಅನಿರೀಕ್ಷಿತ ಧನಾಗಮನದಿಂದ ಸಂತೋಷ ಆಗಲಿದೆ
- ತಂದೆಯವರಿಗೆ ಅಪಘಾತ ಆಗುವ ಸೂಚನೆ ಇದೆ ಎಚ್ಚರಿಕೆವಹಿಸಿ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
- ವಿದೇಶ ಪ್ರವಾಸ ಮಾಡಲು ಇಚ್ಛಿಸಿದವರಿಗೆ ಶುಭವಿದೆ
- ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆ ಹರಿಸಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಎಲ್ಲಾ ವಿಚಾರಗಳಲ್ಲೂ ದೃಢವಾದ ನಿರ್ಧಾರ ಮಾಡಿ
- ಹಣಕಾಸಿನ ವಿಚಾರಕ್ಕೆ ಜಗಳ ಆಗಬಹುದು
- ಆಲಸ್ಯವನ್ನು ದೂರ ಮಾಡಿ ಚಟುವಟಿಕೆಯಿಂದಿರಿ
- ದೊಡ್ಡವರ ಜೊತೆಯಲ್ಲಿ ವಿಧೇಯರಾಗಿರಿ
- ಮಕ್ಕಳು ನಿಮ್ಮ ವಿಚಾರದಲ್ಲಿ ಸಹಕರಿಸುತ್ತಾರೆ
- ಹಳೆಯ ಸ್ನೇಹಿತರಿಂದ ಸ್ವಲ್ಪ ಸಹಾಯ ಆಗಲಿದೆ
- ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಕರ

- ದೊಡ್ಡ ವಿಚಾರಗಳಿಂದ ವಿಮುಖರಾಗುತ್ತೀರಿ
- ಮನೆಯಲ್ಲಿ ಜಗಳ ಆಗದಂತೆ ನೋಡಿಕೊಳ್ಳಿ
- ಆಸ್ತಿಯ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು
- ಸ್ನೇಹಿತರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ
- ತಂದೆಯವರ ಮಾತು ನಿಮಗೆ ಇಷ್ಟ ಆಗುವುದಿಲ್ಲ
- ಆಕಸ್ಮಿಕವಾಗಿ ವಿಚಿತ್ರ ಘಟನೆ ನಡೆಯಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಹಲವು ದಿವಸಗಳ ಕನಸು ನೆರವೇರಬಹುದು
- ಮಕ್ಕಳಿಂದ ಕೆಲವು ಸಮಸ್ಯೆ ಆಗಲಿದೆ
- ದಾಂಪತ್ಯದಲ್ಲಿ ಅತಿಯಾದ ವಾದ-ವಿವಾದಗಳು ಆಗಲಿದೆ
- ಮಕ್ಕಳ ಮೇಲೆ ಕೆಲವು ದುಷ್ಪರಿಣಾಮಕ್ಕೆ ದಾರಿಯಾಗಲಿದೆ
- ರಿಯಲ್ ಎಸ್ಟೇಟ್ ಏಜೆಂಟ್ಸ್ ಗೆ ಲಾಭವಿದೆ
- ರಾಜಕಾರಣಿಗಳು ತುಂಬಾ ಕಷ್ಟ ಪಡಬೇಕಾಗುತ್ತದೆ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ಮೀನಾ

- ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ
- ಉದ್ಯೋಗದಲ್ಲಿ ಅಥವಾ ವೃತ್ತಿಯಲ್ಲಿ ಜಯ ಸಾಧಿಸುವಿರಿ
- ಶಿಸ್ತನ್ನು ಕಾಪಾಡಿ ಗೌರವವಿದೆ
- ಮಕ್ಕಳಿಂದ ಏನನ್ನು ನಿರೀಕ್ಷಿಸಬೇಡಿ
- ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಿರುವ ದಿನ
- ದೊಡ್ಡ ಸಾಧಕರ ಬೇಟಿಗೆ ಅವಕಾಶವಿದೆ
- ಧಾರಣಾ ಸರಸ್ವತಿದೇವಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ