ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ದಿನ
ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು!
ಬೇರೆಯವರಿಗೋಸ್ಕರ ನೀವು ಸಾಲ ಮಾಡಬೇಕಾಗುತ್ತದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.
ಮೇಷ ರಾಶಿ

- ಮನೆ ಮಡದಿ ಮಕ್ಕಳ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೆ ದೂರ ಆಗಲಿದೆ
- ಹಣ ಹೂಡಿಕೆ ಮಾಡಲು ಮನಸ್ಸು ಮಾಡಬಹುದು
- ವ್ಯಾವಹಾರಿಕವಾಗಿ ಉತ್ತಮವಾದ ವಿಚಾರವನ್ನು ನಿರೀಕ್ಷಿಸಬಹುದು
- ರಾಜಕೀಯ ಮತ್ತು ರಾಜಕಾರಣಿಗಳಿಗೆ ತಿರುವು ಸಿಗಲಿದೆ
- ಅದೃಷ್ಟದ ಬೆಂಬಲ ನಿಮ್ಮ ಜೊತೆ ಇರುವಂತೆ ಭಾಸವಾಗಲಿದೆ
- ಸಾಮಾಜಿಕವಾಗಿ ತುಂಬಾ ಎಚ್ಚರಿಕೆಯಿಂದ ಇರಬೇಕು
- ಕುಲದೇವತಾ ಆರಾಧನೆ ಮಾಡಿ
ವೃಷಭ

- ಏನೋ ಬದಲಾವಣೆಗೆ ಪ್ರಯತ್ನಿಸುತ್ತೀರಿ ಆದರೆ ಸಾಧ್ಯ ಆಗುವುದಿಲ್ಲ
- ವ್ಯವಹಾರವನ್ನು ವಿಸ್ತರಿಸಲು ಅವಕಾಶವಿದೆ
- ವಿದ್ಯಾರ್ಥಿಗಳಿಗೆ ಸ್ವಲ್ಪ ಗೊಂದಲ ಇರಲಿದೆ
- ಕಷ್ಟದಲ್ಲಿರುವವರು ನಿಮ್ಮ ಆಶ್ರಯ ಕೇಳಬಹುದು
- ಮನೆಯಲ್ಲಿನ ವಾತಾವರಣಕ್ಕೆ ಬೇರೆಯವರಿಂದ ಸಮಸ್ಯೆಯಾಗಬಹುದು
- ಕೆಲಸದಲ್ಲಿ ಅಭಿವೃದ್ಧಿ, ಧನಾಗಮನದಿಂದ ಸಂತೋಷ ಆಗಲಿದೆ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ನೀವು ಮಾಡುವ ಕೆಲಸವನ್ನು ಹಲವಾರು ಜನ ಗಮನಿಸುತ್ತಿರುತ್ತಾರೆ
- ಇಂದು ವೈದ್ಯ ವೃತ್ತಿಯವರಿಗೆ ಅನುಕೂಲವಿದೆ
- ತಾಯಿಯ ಕಡೆಯಿಂದ ಹಣ ಅಥವಾ ಆಸ್ತಿ ಸಿಗುವ ಸಾಧ್ಯತೆ ಇದೆ
- ನಿಮ್ಮ ಜಾಣ್ಮೆ ನಿಮಗೆ ವರದಾನವಾಗಲಿದೆ
- ದೊಡ್ಡವರ,ಅಧಿಕಾರಿಗಳ ಸಂಪೂರ್ಣ ಸಹಕಾರ ನಿಮ್ಮ ಪರವಾಗಿರಲಿದೆ
- ಮಕ್ಕಳ ಬಗ್ಗೆ ಸ್ವಲ್ಪ ಗಮನವಿರಲಿ ಆತಂಕ ಬೇಡ
- ಭೂವರಾಹನನ್ನು ಪ್ರಾರ್ಥನೆ ಮಾಡಿ
ಕಟಕ

- ನಿಮ್ಮ ನ್ಯೂನತೆಗಳನ್ನು ಗುರುತಿಸಿ ಗಮನ ಕೊಡಿ ಸರಿಪಡಿಸಿಕೊಳ್ಳಿ
- ವೈಯಕ್ತಿಕವಾದ ವಿಚಾರಕ್ಕೆ ಬೇರೆಯವರ ಸಹಾಯ ಬೇಡ
- ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ
- ಖರ್ಚಿನ ಮೇಲಿನ ನಿಯಂತ್ರಣ ಸಾಧ್ಯ ಆಗುವುದಿಲ್ಲ
- ಸಹೋದರ ವರ್ಗದಲ್ಲಿ ವ್ಯಾವಹಾರಿಕವಾಗಿ ಭಿನ್ನಾಭಿಪ್ರಾಯ
- ಮನೆಯಲ್ಲಿ ದೊಡ್ಡ ವ್ಯವಹಾರದ ನಿರ್ಧಾರವನ್ನು ಮಾಡುತ್ತೀರಿ
- ದುರ್ಗಾ ಆರಾಧನೆ ಮಾಡಿ
ಸಿಂಹ

- ವ್ಯಾವಹಾರಿಕ ಪ್ರಗತಿಯಿಂದ ಸಂತೋಷ ಆಗಲಿದೆ
- ಮಾತಿನಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
- ಹಣಕಾಸಿನ ವಿಚಾರದಲ್ಲಿ ಸಮಾಧಾನವಿರುತ್ತದೆ
- ಏಕಾಗ್ರತೆಯಿಂದ ಎಲ್ಲವನ್ನೂ ಸಾಧಿಸುತ್ತೀರಿ
- ಸಾರ್ವಜನಿಕ ಹಿತಾಸಕ್ತಿಯಿಂದ ಯಾವುದೇ ಕೆಲಸವನ್ನು ಮಾಡಿ ಶುಭ ಆಗಲಿದೆ
- ಅಂದು ಕೊಂಡಿದ್ದನ್ನು ಸಾಧಿಸದೆ ಬಿಡುವುದಿಲ್ಲ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಬಂಧುಗಳಲ್ಲಿ ವಿಶ್ವಾಸವನ್ನು ಇಟ್ಟುಕೊಳ್ಳಿ
- ಶಾರೀರಿಕವಾಗಿ ಗಮನಿಸಿಕೊಳ್ಳಿ ತೊಂದರೆಯಿದೆ
- ದಾಂಪತ್ಯದಲ್ಲಿ ಕೆಲವು ದೋಷಗಳು ಕಾಣಬಹುದು
- ಮಕ್ಕಳಿಂದ ತಿಳುವಳಿಕೆಯನ್ನು ಹೇಳಿಸಿಕೊಳ್ಳುವ ಪರಿಸ್ಥಿತಿ ಬರಲಿದೆ
- ಮಂಗಳಕಾರ್ಯಕ್ಕೆ ಅಡೆತಡೆ ಕಾಣಬಹುದು
- ಮನೋನಿಗ್ರಹದಿಂದ ನಿಮ್ಮ ಕಾರ್ಯ ಸಾಧನೆ ಆಗಲಿದೆ
- ಲಕ್ಷ್ಮೀ ನಾರಾಯಣ ಸ್ತೋತ್ರವನ್ನು ಪಠಿಸಿ
ತುಲಾ

- ಮನೋಬಲ ಹೆಚ್ಚಾಗುವ ಸಾಧ್ಯತೆ
- ಮಹೋನ್ನತ ಕಾರ್ಯಕ್ಕೆ ಅವಕಾಶವಿದೆ
- ಮಹಿಳೆಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಗಮನಿಸಿ
- ಬೇರೆಯವರ ದೌರ್ಬಲ್ಯ ನಿಮಗೆ ಉಪಯೋಗ ಆಗಲಿದೆ
- ಕೆಲಸ, ಹಣ, ಸಂತೋಷ ಎಲ್ಲವೂ ನಿಮ್ಮದಾಗಲಿದೆ
- ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯಲಿದೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಬೇರೆಯವರ ಮಾತುಗಳನ್ನು ಮಾನ್ಯ ಮಾಡಿ
- ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳಿರುತ್ತದೆ
- ಮನಸ್ಸನ್ನು ಕೇಂದ್ರೀಕರಿಸಿ ಕಾರ್ಯವನ್ನು ಮಾಡಿ
- ಮಾನಸಿಕ ಅಶಾಂತಿಯನ್ನು ದೂರ ಮಾಡಿಕೊಳ್ಳಿ
- ನೆರೆಹೊರೆಯವರ ಜೊತೆ ಕಲಹಕ್ಕೆ ಅವಕಾಶವಿದೆ
- ಹಿರಿಯರು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು
- ನವಗ್ರಹರನ್ನು ಆರಾಧನೆ ಮಾಡಿ
ಧನುಸ್ಸು

- ಉತ್ತಮರ ಆಶೀರ್ವಾದದಿಂದ ಅನುಕೂಲ ಆಗಲಿದೆ
- ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಹೊಂದುತ್ತೀರಿ
- ರಾಸಾಯನಿಕ ವಸ್ತುಗಳಿಂದ ತೊಂದರೆ ಆಗಬಹುದು
- ಮಾತಿನ ಮೇಲೆ ನಿಗಾ ಇರಬೇಕು
- ಬೇರೆಯವರಿಗೋಸ್ಕರ ನೀವು ಸಾಲ ಮಾಡಬೇಕಾಗುತ್ತದೆ
- ಸಾಂಕ್ರಾಮಿಕ ರೋಗಗಳಿಂದ ಸಮಸ್ಯೆಯಾಗಬಹುದು
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಕರ

- ವಿವಾಹ ವಿಚಾರದಲ್ಲಿ ಶುಭ ಸಮಾಚಾರ
- ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ
- ವಿದ್ಯಾರ್ಥಿಗಳಿಗೆ ಸವಾಲುಗಳು ಎದುರಾಗಲಿದೆ
- ಬೇರೆಯವರಲ್ಲಿ ಕ್ಷಮೆಯನ್ನು ಕೇಳುವ ಸ್ಥಿತಿಯನ್ನು ತಂದುಕೊಳ್ಳುತ್ತೀರಿ
- ಹಠ ಮಾಡಬೇಡಿ ತಾಳ್ಮೆ ಇರಲಿ
- ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ದಿನ
- ಸ್ವಯಂವರ ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಬಂಧುಗಳಿಂದ ಅಗತ್ಯವಾದ ಸಹಕಾರ ಸಿಗಲಿದೆ
- ರಾಜಕಾರಣಿಗಳಿಗೆ ಉತ್ತಮವಾದ ಸಮಯ
- ವ್ಯಾಪಾರಸ್ಥರಿಗೆ ಅಧಿಕವಾದ ಲಾಭ ಜೊತೆಗೆ ಭಯ ಇರಲಿದೆ
- ಅನಗತ್ಯವಾದ ಖರ್ಚಿಗೆ ನೂರಾರು ದಾರಿ
- ಪೂರ್ವ ನಿಯೋಜಿತ ಕೆಲಸಗಳಲ್ಲಿ ಪ್ರಗತಿ ಇರಲಿದೆ
- ಸರ್ಕಾರಿ ಕೆಲಸದಲ್ಲಿ ನಿಧಾನಗತಿ
- ನವಗ್ರಹರ ಆರಾಧನೆಯನ್ನು ಮಾಡಿ
ಮೀನಾ

- ಸಮಾಜದಲ್ಲಿ ಗೌರವ, ಮನ್ನಣೆಗಳಿರುತ್ತದೆ
- ಉದ್ಯೋಗಸ್ಥ ಮಹಿಳೆಯರಿಗೆ ಸಮಸ್ಯೆಯಾಗಬಹುದು
- ನಂಬಿಕಸ್ಥರಿಂದಲೇ ಅಶಾಂತಿ
- ಅನಾವಶ್ಯಕ ವಿಚಾರಗಳಿಂದ ದೂರ ಉಳಿಯಿರಿ
- ನೀವು ಸಮಯ ಸಾಧಕರಾಗಿ ವರ್ತಿಸದಿರಿ
- ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ