ಈ ರಾಶಿಯವರಿಗೆ ಮಕ್ಕಳಿಂದ ಚಿಂತೆ ಅತಿಯಾಗಿ ಕಾಡಬಹುದು
ಆಕಸ್ಮಿಕವಾಗಿ ಧನಲಾಭವಾಗತ್ತೆ ಜೊತೆಗೆ ಭಯವು ಇರುತ್ತದೆ..!
ಈ ರಾಶಿಯವರು ಹಳೆಯ ವ್ಯವಹಾರದಿಂದ ಲಾಭ ಕಾಣಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಕೃಷ್ಣ ಪಕ್ಷ , ದ್ವಾದಶಿ-ತಿಥಿ, ಭರಣಿ- ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.
ಮೇಷ ರಾಶಿ

- ಇಂದು ನಿರುದ್ಯೋಗಿಗಳಿಗೆ ಸ್ವಲ್ಪ ಸಮಯ ಚೆನ್ನಾಗಿಲ್ಲ
- ಪೋಷಕರ ಸಲಹೆಗಳನ್ನ ಗೌರವದಿಂದ ಸ್ವೀಕರಿಸಿ ಅನುಕೂಲವಿದೆ
- ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ
- ಶುಭ ಕಾರ್ಯಗಳನ್ನು ತಿರಸ್ಕರಿಸಬೇಡಿ
- ವೈವಾಹಿಕ ಸಮಸ್ಯೆಗಳು ಬಗೆಹರಿಯಬಹುದು
- ಕಾನೂನಿನ ವಿಚಾರಗಳು ಜಟಿಲವಾಗಬಹುದು
- ಸ್ವಯಂವರ ಪಾರ್ವತಿಯನ್ನ ಪ್ರಾರ್ಥನೆ ಮಾಡಿ
ವೃಷಭ

- ವೃತ್ತಿ ಜೀವನದ ವಿಚಾರದಲ್ಲಿ ಸಮಾಧಾನ ಸಿಗಬಹುದು
- ಶೀತ ಸಂಬಂಧಿ ಅನಾರೋಗ್ಯ ಕಾಡಬಹುದು
- ಸ್ನೇಹಿತರಿಂದ ಉತ್ತಮವಾದ ಬೆಂಬಲ ಸಿಗಬಹುದು
- ಯಾವುದೇ ಸಮಸ್ಯಗೆ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿ
- ರಾಜಕಾರಣಿಗಳಿಗೆ ಉತ್ತಮ ಸಂಪರ್ಕ ಸಿಗಬಹುದು
- ಮಕ್ಕಳ ಜೊತೆಯಲ್ಲಿ ಅನ್ಯೋನ್ಯತೆ ಇರಲಿ
- ಕುಲದೇವತಾರಾಧನೆ ಮಾಡಿ
ಮಿಥುನ

- ಕಾನೂನು ವಿಚಾರಗಳಲ್ಲಿ ಎಚ್ಚರಿಕೆಯಿರಲಿ
- ಆಹಾರದಿಂದ ಅನಾರೋಗ್ಯ ಸಾಧ್ಯತೆ
- ಸಂಶೋಧನೆಯ ಮನಸ್ಥಿತಿಯಲ್ಲಿರುತ್ತೀರಿ
- ಹಣಕಾಸು ವಿಚಾರ ಗಮನಿಸಿ ಯೋಜನೆ ಹಾಕಿ
- ಅನುಪಯುಕ್ತ ಕೆಲಸಗಳಿಗಾಗಿ ಹಣ ಖರ್ಚಾಗಬಹುದು
- ಮಕ್ಕಳು ಉತ್ತಮ ಗೌರವ ತರುತ್ತಾರೆ
- ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಕಟಕ

- ನಿರುದ್ಯೋಗಿಗಳಿಗೆ ಸ್ವಲ್ಪ ಸವಾಲು ಎದುರಾಗಬಹುದು
- ನಿಮ್ಮ ಕೆಲಸದ ಬಗ್ಗೆ ನಿಗಾವಹಿಸಿ
- ಮನೆಯ ಸದಸ್ಯರಿಗೆ ಸುಳ್ಳು ಹೇಳಬೇಡಿ
- ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ
- ಸ್ವಾರ್ಥ ಸ್ನೇಹಿತರು ನಿಮ್ಮನ್ನು ತಿರಸ್ಕರಿಸಬಹುದು
- ಕಾಲು, ಬೆನ್ನು ನೋವು ಕಾಣಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಹಣ ಹೂಡಿಕೆಯಿಂದ ನಿಮಗೆ ಲಾಭವಿದೆ
- ಉದ್ಯೋಗದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
- ಹಲವು ದಿನಗಳ ಆಸೆ ಇಂದು ಪೂರೈಸಬಹುದು
- ಸಾಂಸಾರಿಕ ಜೀವನದಲ್ಲಿ ಇಂದು ಒತ್ತಡ ಕಡಿಮೆ ಸಾಧ್ಯತೆ
- ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಚರ್ಚೆ ಅದರಿಂದ ಕೋಪ ಬರಬಹುದು
- ಸ್ನೇಹಿತರ ಕೆಲವು ಸಲಹೆ ನಿಮಗೆ ಸಮಾಧಾನವಾಗುವುದಿಲ್ಲ
- ಅಯ್ಯಪ್ಪ ಸ್ವಾಮಿಯನ್ನ ಆರಾಧನೆ ಮಾಡಿ
ಕನ್ಯಾ

- ಇಂದು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬೇಡಿ
- ಸಾಲದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ
- ನಿಮ್ಮ ಮಾತನ್ನು ಹಲವರು ವಿರೋಧಿಸಬಹುದು
- ನೀವು ವೈಯಕ್ತಿಕ ಹಿತಾಸಕ್ತಿಗೆ ಬೆಲೆ ಕೊಡಬಹುದು
- ಆರೋಗ್ಯದಲ್ಲಿ ಏರುಪೇರಾಗಬಹುದು
- ಇಂದು ನಿಮ್ಮ ಮನೆಯವರೇ ನಿಮ್ಮನ್ನು ದೂಷಿಸಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ತುಲಾ

- ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಸಿದ್ಧತೆ ಬೇಕಾಗಬಹುದು
- ಮಕ್ಕಳ ಕೆಟ್ಟ ಅಭ್ಯಾಸಗಳನ್ನು ನಿರ್ಲಕ್ಷ್ಯ ಮಾಡಬೇಡಿ
- ಇಂದು ನಿಮ್ಮ ಮಾತು ಬಹಳ ಸರಳ ಮತ್ತು ಮೃದುವಾಗಿರಲಿ
- ಬೇರೆಯವರಿಗೆ ತಿಳುವಳಿಕೆ ಹೇಳಲು ಹೋಗಬೇಡಿ
- ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಬಹುದು
- ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
- ಈಶ್ವರಾಧನೆ ಮಾಡಿ
ವೃಶ್ಚಿಕ

- ಕೆಲಸದ ಸ್ಥಳದಲ್ಲಿ ಯಾವುದಾದರು ಸಮಸ್ಯೆಗಳಿದ್ದರೆ ಪರಿಹರಿಸುತ್ತೀರಿ
- ಇಂದು ತುಂಬಾ ಪರಿಶ್ರಮದ ದಿನ
- ರಿಯಲ್ ಎಸ್ಟೇಟ್ ಉದ್ಯಮಿಗಳು ಬಹಳ ಎಚ್ಚರಿಕೆಯಿಂದಿರಬೇಕು
- ಹಳೆಯ ಸ್ನೇಹಿತರ ಭೇಟಿಯಿಂದ ಮತ್ತೆ ಸಮಸ್ಯೆಗೆ ಅವಕಾಶ ಸಾಧ್ಯತೆ
- ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಅದರಿಂದ ಬೇಸರ ಸಾಧ್ಯತೆ
- ನಿರುದ್ಯೋಗ ಅಥವಾ ಮದುವೆ ವಿಚಾರ ಕಾಡಬಹುದು
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ಧನುಸ್ಸು

- ನಿಮ್ಮ ಜೀವನ ಶೈಲಿಯಲ್ಲಿ ಹೊಸತನ ಬೇಕು ಪ್ರಯತ್ನಿಸಿ
- ಸರ್ಕಾರಿ ನೌಕರರಿಗೆ ಸ್ವಲ್ಪ ಸಮಸ್ಯೆ ಆಗಬಹುದು
- ಮಾರ್ಕೆಟಿಂಗ್ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಬಹುದು
- ವೈವಾಹಿಕ ಜೀವನ ಬೇಸರ ತರಿಸುತ್ತದೆ
- ವ್ಯಾಪಾರದ ದೃಷ್ಠಿಯಿಂದ ಪ್ರಯಾಣ ಮಾಡುವ ಸಾಧ್ಯತೆಯಿದೆ
- ಹೊಸ ಕೆಲಸವನ್ನು ಆರಂಭಿಸುವ ಮುನ್ನ ಯೋಚಿಸಿ
- ಲಲಿತಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ
ಮಕರ

- ಸ್ವಾರ್ಥಿಗಳೊಂದಿಗೆ ಸಮಸ್ಯೆ ಎದುರಿಸಬೇಕಾಗಬಹುದು
- ಇಂದು ಸುಳ್ಳು ಹೇಳುವುದನ್ನ ತಪ್ಪಿಸಿ
- ಕುಟುಂಬದವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
- ಮಕ್ಕಳಿಂದ ಚಿಂತೆ ಅತಿಯಾಗಿ ಕಾಡಬಹುದು
- ವಿದ್ಯಾರ್ಥಿಗಳಿಗೆ ವ್ಯಾಸಂಗದ ಸಮಸ್ಯೆ
- ಇಂದು ಆರ್ಥಿಕವಾಗಿ ತೊಂದರೆಯಿಲ್ಲ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಕುಂಭ

- ಮನೆ, ಮನ, ವ್ಯವಹಾರ ಶುದ್ಧವಾಗಿರಲಿ
- ಇಂದು ಆಪದ್ಧನ ನಿಮ್ಮ ಕೈಹಿಡಿಯುತ್ತದೆ
- ದೀರ್ಘಕಾಲದ ರೋಗಿಗಳಿಗೆ ಸಮಸ್ಯೆ
- ಆಕಸ್ಮಿಕವಾಗಿ ಧನಲಾಭವಾಗತ್ತೆ ಜೊತೆಗೆ ಭಯವು ಇರುತ್ತದೆ
- ಜೀವನದ ಮೌಲ್ಯ ಗೊತ್ತಾಗುವ ಸಮಯ
- ಮಕ್ಕಳಿಂದ ದೂರವಾಗಬಹುದು, ನಿಷ್ಠುರವಾಗಬಹುದು
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಮೀನಾ

- ನಿಮ್ಮ ವೈಯಕ್ತಿಕ ವಿಚಾರಗಳನ್ನು ಪ್ರಸ್ತುತ ಪಡಿಸಬೇಡಿ
- ಆರೋಗ್ಯದಲ್ಲಿ ವ್ಯತ್ಯಯ ಅದರಿಂದ ಚಿಂತೆ ಸಾಧ್ಯತೆ
- ಹಣಕಾಸಿನ ವಿಚಾರದಲ್ಲಿ ತೊಂದರೆಯಿಲ್ಲ
- ಅಧಿಕಾರಿಗಳೊಂದಿಗೆ ಸಹನೆಯಿಂದ ವರ್ತಿಸಿ
- ಮನೆಯಲ್ಲಿ ಹೆದರಿಕೆಯ ವಾತಾವರಣ
- ಹಳೆಯ ವ್ಯವಹಾರದಿಂದ ಲಾಭ ಕಾಣಬಹುದು
- ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ