ನಿಜವಾಗಿ ಸಿಗಬೇಕಾದ ಆಸ್ತಿಗಾಗಿ ಹೋರಾಟ ಮಾಡಬಹುದು
ಮನಸ್ಸು ಎಷ್ಟೇ ಗಟ್ಟಿಯಾದರೂ ನೋವು ಇದ್ದೆ ಇರುವ ದಿನ
ತಂದೆ ತಾಯಿಯ ಆರೈಕೆ ನಿಮಗೆ ಪುಷ್ಟಿಯನ್ನು ಕೊಡಲಿದೆ..!
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ ಇರಲಿದೆ.
ಮೇಷ ರಾಶಿ

- ನಿಜವಾಗಿ ಸಿಗಬೇಕಾದ ಆಸ್ತಿಗಾಗಿ ಹೋರಾಟ ಮಾಡಬಹುದು
- ಅನಿರೀಕ್ಷಿತ ಗೌರವ ಸಂದಾಯದ ಸಾಧ್ಯತೆ
- ಮನಸ್ಸು ಎಷ್ಟೇ ಗಟ್ಟಿಯಾದರೂ ನೋವು ಇದ್ದೆ ಇರುವ ದಿನ
- ಸಂಕಟದ ಅನುಭವ ಆಗಬಹುದು
- ಭೂಮಿಯ ಶುಭಯೋಗ ಕಾಣಬಹುದು
- ತಾಯಿಯ ಕಡೆಯಿಂದ ಸಂಪೂರ್ಣ ಸಹಾಯ ಸಹಕಾರ ಸಿಗಬಹುದು
- ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ವೃಷಭ

- ರಾಜಕೀಯ ವ್ಯಕ್ತಿಗಳಿಂದ ಕೆಲವು ಕೆಲಸಗಳಾಗಬಹುದು ಅದರಿಂದ ಸಮಾಧಾನ
- ಕಛೇರಿಯಲ್ಲಿ ಹೊಸ ಚಟುವಟಿಕೆ, ಯೋಜನೆಗಳು ಪ್ರಾರಂಭವಾಗಬಹುದು
- ವಿದೇಶ ಪ್ರವಾಸದ ಸುಳಿವು ಅದರಿಂದ ಸಂತಸ ವಾಗಬಹುದು
- ಮಾನಸಿಕವಾಗಿ ಗಟ್ಟಿಯಾದ ನಿರ್ಧಾರಗಳಿರಲಿ
- ಎಲ್ಲಾ ವಿಚಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸಿ
- ಮಕ್ಕಳ ಅಭ್ಯುದಯ ಚೆನ್ನಾಗಿರುತ್ತದೆ
- ಕುಲದೇವರಾಧನೆ ಮಾಡಿ
ಮಿಥುನ

- ಎಲ್ಲಾ ಕಡೆ ಕಿರಿಕಿರಿಯ ದಿನ ತುಂಬಾ ಬೇಸರ ಉಂಟಾಗಬಹುದು
- ಕೋಪ ಹೆಚ್ಚಾಗಿ ತೊಂದರೆ ಅನುಭವಿಸಬಹುದು
- ಆರ್ಥಿಕ ಕುಸಿತದಿಂದ ಅಸಮಾಧಾನವಾಗಬಹುದು
- ಬೇರೆಯವರ ಹಿತಕ್ಕಾಗಿ ನೀವು ನಿಷ್ಠೂರವಾಗಬಹುದು
- ಬಂಧುಗಳು ನಾಟಕವಾಡುತ್ತಾರೆ ಆದರೆ ಅವರ ನಿಜ ಬಣ್ಣ ಬಯಲಾಗಬಹುದು
- ಪ್ರಯಾಣದಿಂದ ಸಂತಸ ಖರ್ಚು ಹೆಚ್ಚಾಗಬಹುದು
- ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ
ಕಟಕ

- ಸಂಸಾರದಲ್ಲಿ ಹಳೆಯ ವಿಚಾರಗಳು ಮುನ್ನೆಲೆಗೆ ಬಂದು ಬೇಸರವಾಗಬಹುದು
- ಮರೆಯಲು ಸಾಧ್ಯವಾಗದ ಘಟನೆ ನಡೆಯುವ ಸಂಭವವಿದೆ
- ಇಂದು ಮಕ್ಕಳಿಂದ ಸಮಾಧಾನ ಸಿಗಬಹುದು
- ನಿಮ್ಮ ಬುದ್ಧಿವಂತಿಕೆಯಿಂದ ವ್ಯವಹಾರದಲ್ಲಿ ಅನುಕೂಲವಾಗಬಹುದು
- ಮನೆಯ ವಿಚಾರದಲ್ಲಿ ತೃಪ್ತಿ ಸಿಗಬಹುದು
- ಆರ್ಥಿಕ ಸುಧಾರಣೆಯಿಂದ ಸಂತೋಷವಾಗಬಹುದು
- ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಸಿಂಹ

- ಯಾವುದೇ ರೀತಿಯ ಸ್ಪರ್ಧೆಗಳ ಕಡೆ ಗಮನಕೊಡಬೇಡಿ
- ವಿದ್ಯಾಭ್ಯಾಸದಲ್ಲಿ ಪ್ರಗತಿಯಿದೆ ಸಂತೋಷ ಆಗಲಿದೆ
- ತಂದೆ ತಾಯಿಯ ಆರೈಕೆ ನಿಮಗೆ ಪುಷ್ಟಿಯನ್ನು ಕೊಡಲಿದೆ
- ಮುಂದಿನ ಜೀವನ ಮನಸ್ಸಿನಲ್ಲಿರಲಿ
- ಸ್ವಂತ ಉದ್ಯೋಗ ಮಾಡುವವರಿಗೆ ಯಶಸ್ಸು ಸಿಗಲಿದೆ
- ದೂರದ ಆಲೋಚನೆಗೆ ಅನುಕೂಲವಿದೆ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಮನೆ,ವ್ಯವಹಾರ ವೃತ್ತಿಯಲ್ಲಿ ಬದಲಾವಣೆಗೆ ಅವಕಾಶವಿದೆ
- ವ್ಯಾಪಾರದಲ್ಲಿ ಜಾಗರೂಕತೆಯಿಂದ ಇರಬೇಕು
- ಮಕ್ಕಳಿಂದ ನಿಷ್ಠೂರ, ಜಗಳದ ಸಾಧ್ಯತೆ ಹೆಚ್ಚಾಗಿ ಕಾಣಲಿದೆ
- ಆರೋಗ್ಯದಲ್ಲಿ ವ್ಯತ್ಯಯ ಆಗುವುದರಿಂದ ಬೇಸರ ಆಗಲಿದೆ
- ಪ್ರಯಾಣದ ಅನುಕೂಲವಿದೆ ಸಂತೋಷ ಪಡುತ್ತೀರಿ
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ
- ಮೃತ್ಯುಂಜಯನನ್ನು ಜಪ ಮಾಡಿ
ತುಲಾ

- ಕಾನೂನಿನ ಹೋರಾಟದಲ್ಲಿ ಜಯ ಸಿಗಲಿದೆ
- ಮನಸ್ಸಿನಲ್ಲಿ ತುಂಬಾ ಒಳ್ಳೆಯ ಆಲೋಚನೆಗಳು ಸದಾ ಹಾಗೆ ಉಳಿಯಲಿ
- ಅಭಿವೃದ್ದಿಯ ಪಥವನ್ನು ತುಳಿಯುತ್ತೀರಿ
- ಮಕ್ಕಳು, ಮನೆಯವರು ಸಹಕರಿಸುತ್ತಾರೆ
- ಇಂದು ಅಪರಿಚಿತ ವ್ಯಕ್ತಿಗಳು ಸಹಾಯ ಮಾಡಬಹುದು
- ಸಾಂಸಾರಿಕವಾಗಿ ನೆಮ್ಮದಿಯ ಕ್ಷಣಗಳು
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ

- ನಿಮ್ಮಲ್ಲಿರುವ ಒಳ್ಳೆತನ ಬೇರೆಯವರಿಗೆ ದುರ್ಬಲವಾಗಿ ಕಾಣಬಹುದು
- ಇಂದು ಉದ್ಯಮಿಗಳಿಗೆ ಅನುಕೂಲವಿದೆ
- ಕ್ರೀಡಾಪಟುಗಳಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು
- ತಾಯಿಯವರಿಂದ ಆರ್ಥಿಕ ಸಹಾಯ ಆಗಲಿದೆ
- ಅನಿರೀಕ್ಷಿತ ಆಪತ್ತನ್ನು ಎದುರಿಸುತ್ತೀರಿ
- ಸ್ನೇಹಿತರ ಜೊತೆ ಜಗಳವನ್ನು ಮಾಡಿಕೊಳ್ಳಬೇಡಿ
- ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಆಗದೆ ಬೇಸರ ಆಗಲಿದೆ
- ಉತ್ತಮವಾದ ಸ್ಥಾನಮಾನ ಇದ್ದರೂ ಉಪಯೋಗಿಸಿಕೊಳ್ಳುವ ಬುದ್ದಿವಂತಿಕೆ ಇರುವುದಿಲ್ಲ
- ಮನಸ್ಸು ಸರಿಯಾಗಿರದೆ ಎಲ್ಲವನ್ನೂ ಗೊಂದಲ ಮಾಡಿಕೊಳ್ಳುತ್ತೀರಿ
- ಇಂದು ಆಲಸ್ಯವನ್ನು ದೂರಮಾಡಿ
- ಧನಾತ್ಮಕ ಚಿಂತನೆಯಿರಲಿ
- ಆರೋಗ್ಯದಲ್ಲಿ ಏರುಪೇರು ಆಗಲಿದೆ
- ಮನಸ್ಸು ಸರಿಯಾದರೆ ಸಮಸ್ಯೆಗಳು ಬಗೆಹರಿಯಲಿದೆ
- ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ಮಕರ

- ಆರ್ಥಿಕವಾಗಿ ಅನಿರೀಕ್ಷಿತವಾದ ಲಾಭಗಳು ದೊರೆಯಲಿದೆ
- ಮಕ್ಕಳು ಉತ್ತಮವಾದ ಸಾಧನೆ ಮಾಡಿ ನಿಮಗೆ ಸಂತೋಷ ಪಡಿಸುತ್ತಾರೆ
- ಕೆಲಸ ಅಥವಾ ವೃತ್ತಿಯಲ್ಲಿ ಯಶಸ್ಸು ಕಾಣುತ್ತೀರಿ
- ಹಲವರು ಹಿಂಬಾಲಕರಿಗೆ ಮಾತ್ರ ಬೇಸರ ಮಾಡುತ್ತೀರಿ
- ಮಾನಸಿಕವಾದ ನೆಮ್ಮದಿಗೆ ಹೋರಾಟ ಮಾಡಿ ವ್ಯವಹಾರಕ್ಕಲ್ಲ
- ಸ್ಥಿರಾಸ್ತಿಯ ವಿಚಾರ ತಲೆನೋವು ಆಗಿಬಿಟ್ಟಿದೆ
- ಸಾಯಿಬಾಬರನ್ನು ಪ್ರಾರ್ಥನೆ ಮಾಡಿ
ಕುಂಭ

- ಸಾಂಸರಿಕವಾಗಿ ನೆಮ್ಮದಿಯ ವಾತಾವರಣ
- ಆರೋಗ್ಯ ಸುಧಾರಣೆ ಆಗುವುದರಿಂದ ನೆಮ್ಮದಿ ಇರಲಿದೆ
- ಹಿರಿಯರ ಮಾತಿನಿಂದ ನೋವು ಉಂಟಾಗಲಿದೆ
- ಮೇಲಾಧಿಕಾರಿಗಳ ಸಹಾಯ ಇರಲಿದೆ
- ಅನಾವಶ್ಯಕವಾಗಿ ಸಮಯವನ್ನು ಕಳೆಯಬೇಡಿ
- ಸ್ವಯಂ ಪ್ರಯತ್ನ ಫಲಕಾರಿಯಾಗುವುದಿಲ್ಲ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ಧನ ದ್ರವ್ಯ ಲಾಭದಿಂದ ಅಹಂಕಾರ ಬರಬಹುದು
- ಜೀವನಕ್ಕೆ ಉತ್ತಮವಾದ ತಿರುವು ಸಿಗಲಿದೆ
- ಅಧಿಕ ಒತ್ತಡ, ಶತ್ರುಬಾಧೆ ಕಾಡಬಹುದು
- ಶುಭ ಸಂಧರ್ಭಗಳಿದ್ದರೂ ಕೂಡ ಮನಸ್ಸಿರುವುದಿಲ್ಲ
- ಪ್ರೀತಿ ಪಾತ್ರರು ನಿಮ್ಮ ಜೊತೆಗಿರುವುದರಿಂದ ಸಮಾಧಾನ ಸಿಗಲಿದೆ
- ಕೈಲಾದ ಸಹಾಯವನ್ನು ಮಾಡಿ ಪುಣ್ಯ ಸಂಪಾದಿಸಿ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ