ನಿಮ್ಮ ವಿರುದ್ಧ ಕೆಲ ಪ್ರತಿಸ್ಪರ್ಧಿಗಳು, ದೊಡ್ಡವರು ಸೋಲುತ್ತಾರೆ
ರಾಜಕಾರಣಿಗಳಿಗೆ ಸ್ವಲ್ಪ ಸವಾಲುಗಳು ಎದುರಾಗಬಹುದು..!
ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗಿ ಸಂತೋಷವಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜ್ಯೇಷ್ಠಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.
ಮೇಷ ರಾಶಿ

- ಇಂದು ಮನ ಶಾಂತಿಯಿರಲಿ ಶುಭವಿದೆ
- ಹಿಂದೆ ಮಾಡಿದ ತಪ್ಪಿನಿಂದ ಕೆಲವು ಸಮಸ್ಯೆಗಳಾಗಬಹುದು
- ಹಣಕಾಸಿನ ಬಗ್ಗೆ ಚಿಂತೆ ಮಾಡಬಹುದು
- ಮನೆಯ ಖರ್ಚಿನಿಂದ ಬೇಸತ್ತು ಹೋಗಬಹುದು
- ಸ್ನೇಹಿತರೊಂದಿಗೆ ನಿಮ್ಮ ಕೆಲವು ವಿಚಾರಗಳನ್ನು ಚರ್ಚೆ ಮಾಡಿ
- ಮಕ್ಕಳ ಅಭ್ಯುದಯ ನಿಮಗೆ ಆನಂದ ತರಬಹುದು
- ನವಗ್ರಹಾರಾಧನೆ ಮಾಡಿ
ವೃಷಭ

- ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗಿ ಸಂತೋಷವಾಗಬಹುದು
- ಭಿನ್ನಾಭಿಪ್ರಾಯಗಳು ದೂರವಾಗವಾಗಲಿವೆ
- ಬೇಡದ ವಿಚಾರಗಳಲ್ಲಿ ಸಮಯ ಕಳೆಯಬೇಡಿ
- ದಿನವು ಕೆಲವು ಒಳ್ಳೆಯ ಸುದ್ದಿಗಳೊಂದಿಗೆ ಪ್ರಾರಂಭವಾಗಬಹುದು
- ಕೆಲಸದ ಸ್ಥಳಗಳಲ್ಲಿ ನಿಮಗೆ ನೆಮ್ಮದಿ ಸಿಗಬಹುದು
- ಇಂದು ನಿರೀಕ್ಷೆಗಿಂತ ಹೆಚ್ಚು ಪಡೆಯುತ್ತೀರಿ
- ಕುಲದೇವತಾರಾಧನೆ ಮಾಡಿ
ಮಿಥುನ

- ಹಿರಿಯರ ಆದೇಶವನ್ನು ಪಾಲಿಸಬೇಕಾಗಿರುವ ದಿನ
- ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲವಾಗಬಹುದು
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ನಿಮ್ಮ ಕೆಲಸದ ಬಗ್ಗೆ ನಿಷ್ಠರಾಗಿರಿ
- ಮನಸ್ಸಿನಲ್ಲಿ ತೃಪ್ತಿಭಾವ ಇರಲಿ
- ರಾಜಕಾರಣಗಳಿಗೆ ಸ್ವಲ್ಪ ಸವಾಲುಗಳು ಎದುರಾಗಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ

- ವ್ಯವಹಾರದಲ್ಲಿ ವಿಷಯ ತಿಳಿಯದೇ ನಷ್ಟವಾಗಬಹುದು
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ ಆದರೆ ನಿಧಾನ
- ಸಹೋದ್ಯೋಗಿಗಳಿಗೆ ಸಹಾಯ ಮಾಡುತ್ತೀರಿ
- ಮನೆಯಲ್ಲಿ ಉಳಿದವರ ಮನಸ್ಸು ಅರ್ಥ ಮಾಡಿಕೊಳ್ಳುಲು ಪ್ರಯತ್ನಿಸಿ
- ಅನಗತ್ಯ ವಾದದಿಂದ ಅವಮಾನವಾಗಬಹುದು
- ತಂದೆ ಮತ್ತು ಮಕ್ಕಳಲ್ಲಿ ಹೊಂದಾಣಿಕೆಯಿರಲಿ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯ, ಶನಿಗ್ರಹ ಪ್ರಾರ್ಥನೆ ಮಾಡಿ
ಸಿಂಹ

- ಇಂದು ಹಣದ ವಿಚಾರವಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ
- ಉತ್ತಮ ಸಲಹೆಯಿಂದ ಪ್ರಭಾವಿತರಾಗುತ್ತೀರಿ
- ಅನಗತ್ಯ ಗೊಂದಲಗಳನ್ನು ನಿವಾರಣೆ ಮಾಡುತ್ತೀರಿ
- ಕೌಟುಂಬಿಕ ಸಮಸ್ಯೆಗಳಿಗೆ ಸಣ್ಣ ಪರಿಹಾರವಿದೆ
- ಸಮಾಜದಲ್ಲಿ ಉತ್ತಮ ಸ್ಠಾನಮಾನ ಹೊಂದುತ್ತೀರಿ
- ಇಂದು ನಿಮ್ಮನ್ನು ಹಲವರು ಜನರು ಹಿಂಬಾಲಿಸಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ನಿಂತು ಹೋಗಿದ್ದ ಕೆಲಸಗಳಿಗೆ ಇಂದು ಮರು ಚಾಲನೆ ಸಿಗಬಹುದು
- ಕಣ್ಣಿಗೆ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
- ಮನೆಯಲ್ಲಿ ಹೊಂದಾಣಿಕೆಗೆ ಪ್ರಯತ್ನಿಸಿ
- ಇಂದು ಮಕ್ಕಳಿಂದ ತುಂಬಾ ಬೇಸರವಾಗಬಹುದು
- ಮಕ್ಕಳು ದಾರಿ ತಪ್ಪಿದ್ದಾರೆಂಬ ಅನುಮಾನ ಕಾಡಬಹುದು
- ನಿಮ್ಮ ಪ್ರಯತ್ನಕ್ಕೆ ಧನಾತ್ಮಕ ಫಲವಿಲ್ಲ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ತುಲಾ

- ನಿಮ್ಮ ವಿರುದ್ಧ ಕೆಲ ಪ್ರತಿಸ್ಪರ್ಧಿಗಳು, ದೊಡ್ಡವರು ಸೋಲುತ್ತಾರೆ
- ಮನೆಯಲ್ಲಿ ಸಂಪೂರ್ಣ ಬೆಂಬಲವಿರುತ್ತದೆ
- ಸರ್ಕಾರಿ ನೌಕರರಿಗೆ ಬಡ್ತಿಗೆ ಅವಕಾಶವಿದೆ
- ಸಹೋದರರಿಂದ ಹಣದ ಸಹಾಯ ಸಿಗಬಹುದು
- ನಿಮ್ಮ ಸಲಹೆಯಿಂದ ಜನರಿಗೆ ಪ್ರಯೋಜನವಾಗಬಹುದು
- ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತನೆ ಮಾಡಿ
- ಲಕ್ಷ್ಮಿನಾರಾಯಣ ಸ್ತೋತ್ರ ಪಠಣೆ ಮಾಡಿ
ವೃಶ್ಚಿಕ

- ಮಕ್ಕಳು ಮತ್ತು ಪೋಷಕರ ನಡುವೆ ತಿಕ್ಕಾಟವಾಗಬಹುದು
- ಮಧ್ಯಾಹ್ನದ ನಂತರ ಅಚ್ಚರಿಯ ಸಂಗತಿ ಕಾದಿದೆ
- ದಿನ ತುಂಬಾ ಚೆನ್ನಾಗಿದೆಯೆಂದು ಭಾವಿಸಿ
- ದೂರದ ಪ್ರಯಾಣಕ್ಕೆ ಯೋಜನೆಯಿದೆ
- ಮದುವೆಯ ವಿಚಾರದಲ್ಲಿ ಅಸಮಾಧಾನವಾಗಬಹುದು
- ಮಾನಸಿಕ ಒತ್ತಡ ಅಥವಾ ಹಿಂಸೆಗೆ ಒಳಗಾಗಬಹುದು
- ಲಲಿತಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ
ಧನುಸ್ಸು

- ಸ್ವಂತ ಉದ್ಯೋಗಸ್ಥರಿಗೆ ಹಣದ ಅಭಾವ ಅದರಿಂದ ಹಿನ್ನಡೆ
- ಸಾಹಸದ ಯಾವ ಕೆಲಸಗಳನ್ನು ಕೂಡ ಮಾಡಬೇಡಿ
- ಮನಸ್ಸಿನ ಇಚ್ಫೆಗಳು ಪೂರ್ಣವಾಗದೆ ಬೇಸರವಾಗಬಹುದು
- ಮನೆಯವರ ಅಸಹಕಾರದಿಂದ ನಿರಾಸೆಯಾಗಬಹುದು
- ಅಹಂಭಾವ, ಸಿಟ್ಟು ಬೇಡ ಅದರಿಂದ ತೊಂದರೆಯಿದೆ
- ಅಧಿಕಾರಿಗಳ ಜೊತೆ ಉತ್ತಮ ಬಾಂಧವ್ಯವಿರಲಿ
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಮಕರ

- ಹಣದ ಹರಿವು ಚೆನ್ನಾಗಿದೆ ಯಾವ ಯೋಚನೆಗಳಿಲ್ಲ
- ಮಕ್ಕಳ ಬಗ್ಗೆ ಸರಿಯಾಗಿ ಚಿಂತಿಸಿ ಸರಿಯಾದ ತೀರ್ಮಾನ ಮಾಡಿ
- ಉದ್ಯೋಗಿಗಳು ನಿಮ್ಮ ಜೊತೆ ಸಂತೋಷವಾಗಿರುತ್ತಾರೆ
- ಬೇರೆ ಊರಿಗೆ ಪ್ರಯಾಣದ ಸಾಧ್ಯತೆ ಇದೆ
- ಸಾರ್ವಜನಿಕವಾದ ಹೇಳಿಕೆ ಕೊಡುವಾಗ ಎಚ್ಚರಿಕೆಯಿರಲಿ
- ಬೇರೆಯವರಿಗೆ ತಪ್ಪು ಸಂದೇಶವನ್ನ ಯಾವುದೇ ಕಾರಣಕ್ಕೂ ಕೊಡಬೇಡಿ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಕುಂಭ

- ನಿಮ್ಮ ಕೆಲಸದಿಂದ ಜನರಿಗೆ ಸ್ಫೂರ್ತಿ ಬರುತ್ತದೆ
- ಮನೆಯಲ್ಲಿಯ ವಾತಾವರಣ ಚೆನ್ನಾಗಿರುತ್ತದೆ
- ಅವಿವಾಹಿತರ ಕಷ್ಟ ಕೇಳುವವರಿರುವುದಿಲ್ಲ
- ನಿಮ್ಮ ಕೋಪ ನಿಯಂತ್ರಣದಲ್ಲಿರಲಿ
- ಕೆಟ್ಟ ನಿರ್ಧಾರಗಳ ಬಗ್ಗೆ ಚಿಂತನೆ ಮಾಡಿ ಅದನ್ನ ದೂರಮಾಡಿ
- ಮಕ್ಕಳ ಜೊತೆ ಕಳೆಯುವ ಸಮಯ ಸಂತೋಷದಾಯಕವಾಗಿರುತ್ತದೆ
- ಶರಭೇಶ್ವರನನ್ನು ಆರಾಧನೆ ಮಾಡಿ
ಮೀನಾ

- ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ಪ್ರಶಂಸೆ ಮಾಡುತ್ತಾರೆ
- ಸಾತ್ವಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಬರಬಹುದು
- ಹೊರಗಿನ ಆಡಂಬರವನ್ನು ಈ ದಿನ ಬಯಸುವುದಿಲ್ಲ
- ರುಚಿಕರ ತಿನಿಸಿಗಾಗಿ ಗಲಾಟೆಯಾಗಬಹುದು
- ನಿಮ್ಮ ಹಠವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು
- ಒತ್ತಡದಿಂದ ಹತಾಶರಾಗಿ ಮಾತನಾಡಬಹುದು ಅದಕ್ಕೆ ಅವಕಾಶ ಕೊಡಬೇಡಿ
- ಈಶ್ವರಾರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ