ಬೇರೆಯವರ ವ್ಯವಹಾರಕ್ಕೆ ತಲೆ ಹಾಕಿದ್ರೆ ತೊಂದರೆ ಆಗಬಹುದು
ಕೋರ್ಟ್ನಲ್ಲಿ ಕೆಲವು ಗೊಂದಲಗಳ ಸೂಚನೆಯಿದೆ ಜಾಗ್ರತೆ..!
ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ ಉಂಟಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಗುರವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ
ಇರಲಿದೆ.
ಮೇಷ ರಾಶಿ

- ಇಂದು ಕೌಟುಂಬಿಕ ವಾತಾವರಣ ಚೆನ್ನಾಗಿರುತ್ತದೆ
- ಹಿರಿಯರು ನಿಮ್ಮ ಜೊತೆಯಲ್ಲಿ ಸಂತೋಷವಾಗಿರುತ್ತಾರೆ
- ಸ್ನೇಹಿತರ ಒಡನಾಟ ನಿಮಗೆ ಹಿತವಾಗಿರುತ್ತದೆ
- ಇಂದು ವ್ಯವಹಾರಿಕವಾಗಿ ಕೆಲವು ಗೊಂದಲಗಳಿರಬಹುದು
- ಮಕ್ಕಳ ಮಾತಿಗೆ ಒಪ್ಪಿದರೆ ಸಮಾಧಾನವಿರುತ್ತದೆ
- ಮನೆಯಲ್ಲಿ ಶುಭ ಕಾರ್ಯದ ಸೂಚನೆಯಿದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ

- ಶಾರೀರಿಕವಾಗಿ ಸಮಾಧಾನ ಇರುವುದಿಲ್ಲ
- ಕೆಲಸದ ಒತ್ತಡ ಮತ್ತು ಸಾಂಸಾರಿಕ ಜಂಜಾಟ ಬೇಸರ ಉಂಟುಮಾಡಬಹುದು
- ಬೇರೆಯವರಿಗೆ ಹಣದ ಭರವಸೆ ನೀಡಬೇಡಿ
- ಎಲ್ಲಾ ಕೆಲಸಗಳನ್ನು ಯೋಚಿಸಿ ನಿರ್ಧಾರ ಮಾಡಿ
- ಹಳೆಯ ಕೆಲವು ಯೋಜನೆಗಳು ನಿಮಗೆ ಉಪಕಾರವಾಗಬಹುದು
- ಆಹಾರ ವ್ಯತ್ಯಾಸವಾಗಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಮಿಥುನ

- ವ್ಯಾವಹಾರಿಕವಾಗಿ ಹೊಸ ಚೇತರಿಕೆ ಕಾಣಬಹುದು
- ಹಿಂದೆ ಆದ ನಷ್ಟವನ್ನು ಇಂದು ಸರಿದೂಗಿಸಿಕೊಳ್ಳಬಹುದು
- ವಿವಾಹದ ವಿಚಾರ ಮುನ್ನೆಲೆಗೆ ಬರಬಹುದು
- ವಿದ್ಯಾರ್ಥಿಗಳಿಗೆ ಓದಿನ ಕೊರತೆ
- ಮಹಿಳಾ ಉದ್ಯೋಗಿಗಳಿಗೆ ಶುಭವಿದೆ
- ಹಣ, ಆಭರಣ ಅಥವಾ ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ
- ಸ್ವಯಂವರ ಪಾರ್ವತಿಯನ್ನ ಪ್ರಾರ್ಥನೆ ಮಾಡಿ
ಕಟಕ

- ಸ್ವಂತ ಉದ್ಯೋಗದವರಿಗೆ ಅನುಕೂಲಕರ ದಿನ
- ಮಾನಸಿಕ ಗೊಂದಲಗಳನ್ನು ದೂರ ಮಾಡಿಕೊಳ್ಳಿ
- ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳಬಹುದು
- ಅನಗತ್ಯವಾದ ವ್ಯವಹಾರಗಳನ್ನು ಬಿಟ್ಟುಬಿಡಿ
- ಭೂ ಖರೀದಿಯ ಬಗ್ಗೆ ಚಿಂತನೆ ಮಾಡಬಹುದು
- ಸಣ್ಣಪುಟ್ಟ ವಿಚಾರಗಳು ಸವಾಲಾಗಿ ಪರಿಣಮಿಸಬಹುದು
- ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ
ಸಿಂಹ

- ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ವಿಫಲರಾಗುತ್ತೀರಿ
- ಇಂದು ಒಂಟಿತನದಿಂದ ಹೊರಬನ್ನಿ
- ಯೋಚನೆಗಿಂತ ಯೋಜನೆ ಮುಖ್ಯ ಗಮನಿಸಿ
- ಇಂದು ಯಾವುದು ಕೂಡ ಅತಿಯಾದರೆ ಒಳ್ಳೆಯದಲ್ಲ
- ನಿಮ್ಮ ಮೂಲ ಕರ್ತವ್ಯ ಏನು ಎಂಬುದನ್ನು ತಿಳಿದುಕೊಳ್ಳಿ
- ಓದಿನ ಬಗ್ಗೆ ಹೆಚ್ಚಿನ ಆಸಕ್ತಿಯಿರಲಿ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹ ಪ್ರಾರ್ಥನೆ ಮಾಡಿ
ಕನ್ಯಾ

- ಇಂದು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸವಾಲನ್ನು ಎದುರಿಸುತ್ತೀರಿ
- ಅಕ್ಕ ಪಕ್ಕದವರೊಂದಿಗೆ ಉತ್ತಮವಾದ ಬಾಂಧವ್ಯವಿರಲಿ
- ಹಿರಿಯರು ನಿಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಾರೆ
- ಬೇರೆಯವರನ್ನ ಯಾವುದಕ್ಕೂ ಅವಲಂಬಿಸಬೇಡಿ
- ಇಂದು ಹಲವಾರು ಕೆಲಸಗಳು ಬೇಸರ ಉಂಟುಮಾಡಬಹುದು
- ಸರಿಯಾದ ನಿರ್ಧಾರದಿಂದ ಮಾತ್ರ ಕೆಲಸ ಸಾಧ್ಯವಾಗಬಹುದು
- ಗಣಪತಿ ಪ್ರಾರ್ಥನೆ ಮಾಡಿ
ತುಲಾ

- ಪ್ರಮುಖ ಕೆಲಸಗಳಿಗಾಗಿ ಪ್ರಯಾಣ ಮಾಡಬಹುದು ಶುಭವಿದೆ
- ಸ್ಪರ್ಧಾತ್ಮಕ ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿದರೆ ಜಯವಿದೆ
- ಜನರಿಂದ ಹೊಗಳಿಕೆ ಅದರಿಂದ ಸಂತಸ ಉಂಟಾಗಬಹುದು
- ಮನೆಯ ಹಿರಿಯರ ಜೊತೆ ಹೆಚ್ಚಿನ ಒಡನಾಟವಿರಲಿ
- ವ್ಯವಹಾರಿಕವಾಗಿ ಉತ್ತಮ ಸಾಧನೆ ಮಾಡಬಹುದು
- ನಿಮ್ಮ ಪರಿಶ್ರಮ ಸಾರ್ಥಕ ಎಂಬ ಭಾವನೆ ಬರಬಹುದು
- ಕುಲದೇವತಾರಾಧನೆ ಮಾಡಿ
ವೃಶ್ಚಿಕ

- ಹಳೆಯ ವಿಚಾರಗಳಿಂದ ಬೇಸರವಾಗಬಹುದು
- ಹೊಟ್ಟೆ ನೋವಿಗೆ ಸಂಬಂಧಿಸಿದ ತೊಂದರೆ ಕಾಡಬಹುದು
- ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ ಉಂಟಾಗಬಹುದು
- ಇಂದು ಸಣ್ಣ ತಪ್ಪುಗಳೇ ದೊಡ್ಡದಾಗಬಹುದು
- ಮಾನಸಿಕವಾದ ಕಿರಿಕಿರಿ ಇರುತ್ತದೆ
- ಸಹೋದ್ಯೋಗಿಗಳಿಂದ ಕಲಹ ಉಂಟಾಗಬಹುದು
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ನಿಮ್ಮ ಅಂತರಾಳದ ಮಾತುಗಳಿಂದ ಸಮಾಧಾನ
- ಮಕ್ಕಳು ನಿಮ್ಮ ಬಗ್ಗೆ ಆಸಕ್ತಿ ವಹಿಸುತ್ತಾರೆ
- ಸಾಮಾಜಿಕ ವಲಯ ವಿಸ್ತಾರವಾಗುತ್ತದೆ
- ವ್ಯವಹಾರಿಕವಾಗಿ ಉತ್ತಮ ಫಲಿತಾಂಶ ಪಡೆಯುತ್ತೀರಿ
- ಪ್ರಮುಖ ಕಾರ್ಯಗಳಲ್ಲಿ ಆಸಕ್ತಿ ವಹಿಸಬಹುದು
- ಕಾಲು ನೋವು ನಿಮ್ಮನ್ನು ಬಾಧಿಸಬಹುದು
- ಶನೇಶ್ವರನನ್ನ ಪ್ರಾರ್ಥನೆ ಮಾಡಿ, ಎಳ್ಳೆಣ್ಣೆಯಿಂದ ದೀಪ ಹಚ್ಚಿ
ಮಕರ

- ವ್ಯವಹಾರಿಕವಾಗಿ ಸಾಲ ಬೆಳೆಯಬಹುದು
- ಬೇರೆಯವರಿಗೆ ಸಹಾಯ ಮಾಡಲು ಮನಸ್ಸಿರುವುದಿಲ್ಲ
- ಸ್ಥಗಿತಗೊಂಡ ಕೆಲಸಗಳ ಆರಂಭಕ್ಕೆ ತುಂಬಾ ಸಾಹಸ ಪಡಬಹುದು
- ಕೋರ್ಟ್ನಲ್ಲಿ ಕೆಲವು ಗೊಂದಲಗಳ ಸೂಚನೆಯಿದೆ ಜಾಗ್ರತೆವಹಿಸಿ
- ಹಣ ಖರ್ಚಾಗುತ್ತದೆ ಆದರೆ ಕೆಲಸವಾಗುವುದಿಲ್ಲ
- ಜವಾಬ್ದಾರಿಗಳ ಬಗ್ಗೆ ಹೆಚ್ಚು ಗಮನಹರಿಸಿ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಕುಜಗ್ರಹ ಪ್ರಾರ್ಥನೆ ಮಾಡಿ
ಕುಂಭ

- ಮಾನಸಿಕ ದೃಢತೆಯನ್ನು ಕಾಪಾಡಿಕೊಳ್ಳಿ
- ಸಾಂಸಾರಿಕವಾದ ಬಿರುಕನ್ನು ಸರಿಪಡಿಸಿಕೊಳ್ಳಿ
- ಯಾವುದೇ ರೀತಿಯ ವಂಚನೆಯ ಯೋಚನೆ ಬೇಡ
- ಅಧ್ಯಯನ ಬಗ್ಗೆ ವಿದ್ಯಾರ್ಥಿಗಳು ಗಮನಿಸಬೇಕು
- ಬೇರೆಯವರ ವ್ಯವಹಾರಕ್ಕೆ ತಲೆಹಾಕಿ ತೊಂದರೆಯಾಗಬಹುದು
- ಮಾತೆಯರಿಗೆ ವಿಶೇಷವಾದ ಧನಲಾಭವಿದೆ
- ಶಾರದಾ ಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ
ಮೀನ

- ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತೀರಿ
- ಮನೆಯ ವಾತಾವರಣ ಚೆನ್ನಾಗಿರುತ್ತದೆ
- ವಿರೋಧಿಗಳಿಂದ ತುಂಬಾ ಟೀಕೆಗೆ ಒಳಗಾಗಬಹುದು
- ಬಂಧುಗಳಿಗೆ ಕೆಲವು ಸಂಕಷ್ಟ ಎದುರಾಗಬಹುದು
- ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ
- ಸಾರ್ವಜನಿಕವಾಗಿ ಮನ್ನಣೆ ಪಡೆಯುತ್ತೀರಿ
- ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ