ಮಾನಸಿಕ ಸ್ಥಿತಿ ಋಣಾತ್ಮಕವಾಗಿರುತ್ತದೆ ಗಮನಿಸಿಕೊಳ್ಳಿ
ನಿಮ್ಮ ತತ್ವ ಸಿದ್ಧಾಂತಗಳು ಜತೆ ರಾಜಿ ಮಾಡಿಕೊಳ್ಳಬೇಡಿ
ಮಕ್ಕಳ ಅಥವಾ ಸ್ನೇಹಿತರ ವರ್ತನೆ ಅತೃಪ್ತಿ ಅನಿಸಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಮಖಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ

- ಮನೆಯವರ ಸಲಹೆ, ನಿರ್ಧಾರ, ಮಾಹಿತಿಗಳನ್ನು ತಿಳಿಯದೆ ವೈಯಕ್ತಿಕ ನಿರ್ಧಾರ ಮಾಡಬೇಡಿ
- ಭೂ ಸಂಬಂಧಿ ವ್ಯವಹಾರಕ್ಕೆ ಮನಸ್ಸನ್ನು ಮಾಡುತ್ತೀರಿ
- ಸಾಮೂಹಿಕ ಪ್ರಯಾಣದ ಬಗ್ಗೆ ಚಿಂತಿಸುತ್ತೀರಿ
- ಬೇರೆಯವರನ್ನು ನಿಮ್ಮ ತೊಂದರೆಗೆ ಕಾರಣ ಮಾಡಬೇಡಿ
- ಸರಿಯಾಗಿ ಯೋಚನೆ ಮಾಡಿ ನಿರ್ಧಾರ ಮಾಡಿ
- ಉನ್ನತ ಶಿಕ್ಷಣಕ್ಕೆ ಒಳ್ಳೆಯ ಅವಕಾಶವಿದೆ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುವುದರಿಂದ ಶುಭವಿದೆ
- ಮನೆಯಲ್ಲಿ ಕೆಲವು ನಿರ್ಧಾರಗಳಿಗೆ ಅಡ್ಡಿಯಾಗಬಹುದು
- ವ್ಯಾವಹಾರಿಕವಾಗಿ ಲಾಭ ಅದರಿಂದ ಹೆಮ್ಮೆ ಪಡುತ್ತೀರಿ
- ಆಂತರಿಕವಾಗಿ ಸಂತೋಷ ಪಡುತ್ತೀರಿ ಆದರೆ ವ್ಯಕ್ತಪಡಿಸುವಲ್ಲಿ ವಿಫಲ ಆಗುತ್ತೀರಿ
- ಮನೆಯಲ್ಲಿ ಸಾತ್ವಿಕ ಕೋಪದ ವಾತಾವರಣವಿದೆ
- ತಂದೆ ತಾಯಿಯ ಜೊತೆ ತಾತ್ಕಾಲಿಕ ವಿರಸ ಇರಲಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ವೃತ್ತಿ ಅಥವಾ ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ
- ವ್ಯಾಪಾರಸ್ಥರಿಗೆ ಸ್ವಲ್ಪ ಮಟ್ಟಿನ ಲಾಭ ಆಗುವುದರಿಂದ ಸುಧಾರಣೆ ಕಾಣುತ್ತೀರಿ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮತ್ತು ಇಂಜಿನಿಯರ್ಸ್ಗೆ ಸಮಸ್ಯೆಯಾಗಬಹುದು
- ಯಾವ ವಿಚಾರದಲ್ಲೂ ಅಜಾಗರೂಕತೆ ತೋರದಿರಿ
- ಮಾನಸಿಕ ಸ್ಥಿತಿ ಋಣಾತ್ಮಕವಾಗಿರುತ್ತದೆ ಗಮನಿಸಿಕೊಳ್ಳಿ
- ನಿರುದ್ಯೋಗಿಗಳಿಗೆ ಕೆಲವು ವಿಚಾರಗಳು ಸಮಾಧಾನ ಕೊಡಬಹುದು
- ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ವ್ಯಾವಹಾರಿಕವಾಗಿ ಅಥವಾ ಆಂತರಿಕವಾದ ವಿಚಾರದಲ್ಲಿ ತೃಪ್ತಿ ಪಡಿಸಲು ಹೋಗಿ ನಿರಾಸೆ ಆಗುತ್ತೀರಿ
- ಸಾಮಾಜಿಕವಾಗಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ
- ಜವಾಬ್ದಾರಿಯ ಕೆಲಸಗಳಿಂದ ಹೆಚ್ಚು ಆತಂಕ ಭಯ ಇರಲಿದೆ
- ಮಾತು ಮಿತವಾಗಿರಲಿ ಅವಮಾನಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
- ಬೇರೆಯವರ ಒತ್ತಡಕ್ಕೆ ಮಣಿಯ ಬೇಕಾಗುತ್ತದೆ
- ನಿಮ್ಮ ತತ್ವ ಸಿದ್ಧಾಂತಗಳು ಜೊತೆ ರಾಜಿ ಮಾಡಿಕೊಳ್ಳಬೇಡಿ
- ಕುಲದೇವತಾ ಆರಾಧನೆ ಮಾಡಿ
ಸಿಂಹ

- ಕೆಲವು ತಾತ್ವಿಕ ವಿಚಾರಗಳಿಂದ ಪ್ರಭಾವಿತರಾಗುತ್ತೀರಿ
- ಹೆಣ್ಣು ಮಕ್ಕಳಿಗೆ ವಿವಾಹದ ಶುಭ ಸೂಚನೆಯಿದೆ
- ಮಕ್ಕಳ ಅಥವಾ ಸ್ನೇಹಿತರ ವರ್ತನೆ ಅತೃಪ್ತಿ ಅನಿಸಬಹುದು
- ಹಿರಿಯರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತೀರಿ
- ಒತ್ತಡಕ್ಕೆ ಸಿಲುಕಿ ಮಾನಸಿಕ ಬೇಸರ ಆಗಲಿದೆ
- ಯಾವ ಕಾರಣಕ್ಕೂ ಸಿಟ್ಟನ್ನು ಮಾಡಿಕೊಳ್ಳಬೇಡಿ ಉದ್ವೇಗವನ್ನು ತಂದುಕೊಳ್ಳಬಾರದು
- ನವಗ್ರಹರನ್ನು ಆರಾಧನೆ ಮಾಡಿ
ಕನ್ಯಾ

- ಪ್ರೇಮಿಸಿ ಮದುವೆ ಆದವರಿಗೆ ಹೊಂದಾಣಿಕೆಯ ಕೊರತೆಯಾಗಲಿದೆ
- ಸಾಂಸಾರಿಕ ವಿಚಾರದಲ್ಲಿ ಯಾವ ಕೆಟ್ಟ ನಿರ್ಧಾರ ಬೇಡ
- ಉದ್ಯೋಗಿಗಳಿಗೆ ಕೆಲವು ಸವಲತ್ತುಗಳು ಸಿಗಬಹುದು
- ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿದೆ ಆದರೆ ಕೆಲಸವಿಲ್ಲ
- ಮನೆಯ ಮಂಗಳ ಕಾರ್ಯದ ವಿಚಾರಕ್ಕೆ ಜಗಳ ಆಗಬಹುದು
- ಮನೆಯ ಮನದ ಅಸಂತೋಷವನ್ನು ದೂರ ಮಾಡುವುದು ನಿಮ್ಮ ಕೈಯಲ್ಲಿದೆ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ತುಲಾ

- ಅಂದುಕೊಂಡ ಕೆಲಸ ಪೂರ್ಣ ಆಗಲಿದೆ
- ನಿರೀಕ್ಷಿತ ಧನಲಾಭ ಆಗುವುದರಿಂದ ಸಂತೋಷ ಆಗಲಿದೆ
- ಮನೆಯಲ್ಲಿ ಎಲ್ಲವೂ ಸರಿಯಾಗುತ್ತಿದೆ ಎಂಬ ಅನುಭವ ಆಗಲಿದೆ
- ಹಿರಿಯರು ನಿಮ್ಮ ಮಾತಿನಂತೆ ಮುಂದುವರಿಯುತ್ತಾರೆ
- ಸಹೋದರರ ನಿರ್ಧಾರ ಒಳ್ಳೆಯದಾಗಿ ಪರಿಣಾಮ ಬೀರಲಿದೆ
- ಭೂ ಸಂಬಂಧಿ ವಿಚಾರ ಖುಷಿಯಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ವೃಶ್ಚಿಕ

- ಕೆಲವು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಿ
- ಸಮರ್ಪಣಾ ಭಾವನೆಯಿಂದ ಕೆಲಸ ಮಾಡಿ ಶುಭವಿದೆ
- ಸಕ್ಕರೆ ಖಾಯಿಲೆ ಇರುವವರಿಗೆ ತೊಂದರೆಯಾಗಬಹುದು
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ ಬೇಸರ ಆಗಲಿದೆ
- ಅಗತ್ಯ ಬದಲಾವಣೆಗಳನ್ನು ಬಯಸುತ್ತೀರಿ ಆದರೆ ಅದಕ್ಕೆ ಅವಕಾಶವಿಲ್ಲ
- ಪಾಲಿಗೆ ಬಂದದ್ದನ್ನು ಅನುಭವಿಸಿಯೇ ತೀರಬೇಕು
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ನಿಮಗೆ ನಾಯಕತ್ವದ ಲಕ್ಷಣಗಳು ಇವೆ ಆದರೆ ನೀವು ಮುಂದೆ ಬರಬೇಕು
- ಹಲವಾರು ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುತ್ತೀರಿ
- ಕುಟುಂಬ ಜೀವನದಲ್ಲಿ ಶಾಂತಿ ಕಾಣುತ್ತೀರಿ
- ನಿಗಧಿತವಾದ ಗುರಿ ಸಾಧಿಸುವಲ್ಲಿ ನೀವು ಮುಂದು ಇರುತ್ತೀರಿ
- ಆಲಸ್ಯ ಬೇಡ ಚಟುವಟಿಕೆಯಿಂದಿರಿ
- ಕೆಲಸದ ಗುಣಮಟ್ಟ ನಿಮಗೆ ಗೌರವ ತರಲಿದೆ
- ಈಶ್ವರನ ಆರಾಧನೆ ಮಾಡಿ
ಮಕರ

- ಮಾನಸಿಕವಾದ ಸ್ಥಿತಿ ಧನಾತ್ಮಕವಾಗಿರಲಿ
- ಪ್ರಯಾಣದಲ್ಲಿ ಸಮಯವನ್ನು ಕಳೆಯುತ್ತೀರಿ
- ಉನ್ನತ ಸ್ಥಾನಮಾನಗಳಿದ್ದರೂ ಸಮಾಧಾನವಿಲ್ಲ
- ಹಲವರು ಪರೋಕ್ಷವಾಗಿ ನಿಮ್ಮನ್ನು ಪರೀಕ್ಷಿಸಬಹುದು
- ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ
- ಇಂದು ಸ್ವಾಭಾವಿಕವಾಗಿ ವರ್ತಿಸಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಗೌರವ ಅವಮಾನ ಎರಡನ್ನು ಕಾಣುತ್ತೀರಿ
- ಸ್ಥಿರವಾದ ಮನಸ್ಸಿನಿಂದ ಮಾತ್ರ ನೆಮ್ಮದಿ ಸಿಗಲಿದೆ
- ಮನೆಯವರ ಸಹಕಾರ ಇರುವುದರಿಂದ ಸಮಾಧಾನ ಆಗಲಿದೆ
- ಕೆಲಸಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿ
- ನಿಮ್ಮ ಮಿತಿಯಾದ ಮಾತು ಅನುಕೂಲವನ್ನು ಮಾಡಿಕೊಡಲಿದೆ
- ಕೆಲವು ಮೌಲ್ಯಯುತ ವಿಚಾರಗಳಲ್ಲಿ ಭಾಗಿಗಳಾಗುತ್ತೀರಿ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಮೀನ

- ನಿಮ್ಮ ಆಸೆಗಳು,ಆಕಾಂಕ್ಷೆಗಳು,ಆಲೋಚನೆಗಳು ಸಹಕಾರ ಆಗುವ ದಿನ
- ಮನೆಯಿಂದ ನೀವು ಕೆಲವು ನಿರೀಕ್ಷೆಯನ್ನು ಮಾಡುತ್ತೀರಿ
- ನಿಮ್ಮ ಘಟನೆಗೆ ತಕ್ಕ ಗೌರವ ಇರಲಿದೆ
- ನಿಮ್ಮ ಅನುಭವ ಪರಿಪೂರ್ಣವಾಗಿ ಕೆಲಸ ಮಾಡಲಿದೆ
- ಬೇರೆಯವರ ಮಾತಿಗೆ ಬೆಲೆ ಕೊಡಿ ಒಳ್ಳೆಯದಾಗಲಿದೆ
- ಯಾವುದು ನನ್ನಿಂದ ದೂರವಾಗುತ್ತದೆ ಎಂಬ ಭಯ ಕಾಡಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ