ನಾನೇನೆ ಸಂಪಾದಿಸಿದರೂ ನನ್ನದಲ್ಲ ಎಂಬ ಚಿಂತನೆ ಮನಸ್ಸಿಗೆ ಬರಲಿದೆ
ಸುಮ್ಮನೆ ದ್ವೇಷ, ಕಿಚ್ಚು ಕೆರಳಿಸುವುದಕ್ಕೆ ಅವಕಾಶ ಮಾಡಿಕೊಡಬೇಡಿ
ಈ ರಾಶಿಯವ್ರು ಹಳೆಯ ನೆನಪುಗಳ ಜೊತೆ ಸಿಹಿಕಹಿ ಮೆಲುಕು ಹಾಕುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.
ಮೇಷ ರಾಶಿ

- ಈ ದಿನ ಹಲವು ದಿವಸಗಳ ಕನಸಿಗಾಗಿ ಹೋರಾಟ ಮಾಡುತ್ತೀರಿ
- ವಿದ್ಯಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
- ಬೇರೆಯವರಿಗೆ ಉಪದೇಶ ಮಾಡಬೇಡಿ
- ಶಿಸ್ತು ಬದ್ಧವಾದ ಕೆಲಸ ನಿರ್ವಹಿಸಿ
- ಮನೆಯವರ ಸಹಕಾರ ಪರಿಪೂರ್ಣವಾಗಿರಲಿದೆ
- ಆರೋಗ್ಯದ ಬಗ್ಗೆ ಗಮನವಿರಲಿ
- ಧಾರಣಾ ಸರಸ್ವತಿಯನ್ನು ಆರಾಧನೆ ಮಾಡಿ
ವೃಷಭ

- ಕೆಲಸದ ಒತ್ತಡ ತುಂಬಾ ಇರುವುದರಿಂದ ಬೇಸರ ಆಗಲಿದೆ
- ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತೀರಿ
- ಮನೆಯಲ್ಲಿ ದೊಡ್ಡ ಯೋಜನೆಗೆ ಸಹಕಾರ ಆಗಲಿದೆ
- ಮಕ್ಕಳ ವಿಚಾರದಲ್ಲಿ ಸ್ವಲ್ಪ ಅಸಮಾಧಾನ
- ಶರೀರದಲ್ಲಿ ಏನೋ ಒಂದು ರೀತಿಯ ಅನುಭವ ಆಗಬಹುದು
- ನಿಮ್ಮ ಮನಸ್ಸಿನ ನೋವನ್ನು ಹೇಳಿಕೊಳ್ಳಿ
- ನವಗ್ರಹರನ್ನು ಆರಾಧನೆ ಮಾಡಿ
ಮಿಥುನ

- ಯಶಸ್ಸಿನ ಹಾದಿಯನ್ನು ಮಾತ್ರ ಗಮನಿಸುತ್ತೀರಿ
- ಪರಿಶ್ರಮವಿದ್ದರೆ ಮಾತ್ರ ಗುರಿ ಎಂಬುದು ತಿಳಿದಿರಲಿ
- ಮಹಿಳೆಯರಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಆಗಲಿದೆ
- ಸಮಾಜಮುಖಿ ಕಾರ್ಯಕ್ಕೆ ಮುಂಚೂಣಿಯಲ್ಲಿರುತ್ತೀರಿ
- ಸಾರ್ವಜನಿಕವಾಗಿ ಉತ್ತಮ ಸಂದೇಶ ರವಾನೆ ಮಾಡಿ
- ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿದೆ
- ದುರ್ಗಾರಾಧನೆ ಮಾಡಿ
ಕಟಕ

- ಕಾರ್ಯಸಿದ್ದಿಗಾಗಿ ಹೋರಾಟ ಮಾಡಿ ಜಯ ಪಡೆಯುತ್ತೀರಿ
- ಬಂಧುಗಳ ಅಪಹಾಸ್ಯದ ಮಧ್ಯೆಯೂ ಗುರಿ ತಲುಪುತ್ತೀರಿ
- ಮನೆಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೀರಿ
- ನಿಮ್ಮ ಪರಿವಾರದ ಮಾತು ಸ್ಫೂರ್ತಿಯಾಗಲಿದೆ
- ಹಲವರಿಗೆ ನೀವು ಮಾರ್ಗದರ್ಶಕ ಆಗುತ್ತೀರಿ
- ನಿಮ್ಮ ನಿಷ್ಠೆ, ನಿಮ್ಮ ಛಲ ನಿಮ್ಮ ಪ್ರಗತಿಗೆ ಕಾರಣ ಆಗಲಿದೆ
- ಇಷ್ಟ ದೇವತಾ ಆರಾಧನೆ ಮಾಡಿ
ಸಿಂಹ

- ಧನಲಾಭವಿದೆ ಆದರೆ ಅದು ನಿಮಗೆ ತೃಣ ಸಮಾನ
- ಸಮಾಜಕ್ಕೆ ಏನಾದರೂ ಶಾಶ್ವತವಾಗಿ ಕೊಡುಗೆ ಕೊಡಬೇಕೆಂಬ ತುಡಿತ ನಿಮ್ಮದಾಗಿರಲಿದೆ
- ನಾನೇನೆ ಸಂಪಾದಿಸಿದರು ಅದು ನನ್ನದಲ್ಲ ಎಂಬ ಚಿಂತನೆ ಮನಸ್ಸಿಗೆ ಬರಲಿದೆ
- ಹಲವರು ಹಿಂಬಾಲಕರಿಗೆ ಉಪದೇಶವನ್ನು ಮಾಡುತ್ತೀರಿ
- ನಿಮ್ಮ ಉದ್ದೇಶ ಒಳ್ಳೆಯದಾಗಿರಲಿ ಎಂದು ಪ್ರಾರ್ಥನೆ ಮಾಡಿ
- ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
- ಸದ್ಗುರುಗಳ ಪ್ರಾರ್ಥನೆ ಮಾಡಿ
ಕನ್ಯಾ

- ನಿಮ್ಮ ವಿಚಾರ ನಿಮ್ಮ ಸ್ವಾರ್ಥದ್ದಾಗಿರುತ್ತದೆ
- ಬೇರೆಯವರ ಮಾತಿಗೆ ನೀವು ಆದ್ಯತೆ ನೀಡಬೇಕು
- ಪ್ರಯಾಣದ ಬಗ್ಗೆ ಒಲವನ್ನು ತೋರಿಸುತ್ತೀರಿ ಆದರೆ ಅದು ಬೇಡ
- ವಾಹನದಿಂದ ಸಮಸ್ಯೆಯಾಗಬಹುದು
- ದಾಂಪತ್ಯದಲ್ಲಿ ಜಗಳವನ್ನು ಕಡಿಮೆ ಮಾಡಿಕೊಳ್ಳಿ
- ದ್ವೇಷಕ್ಕೆ, ಕಿಚ್ಚಿಗೆ ಕೆರಳಿಸುವುದಕ್ಕೆ ಅವಕಾಶ ಮಾಡಿಕೊಡಬೇಡಿ
- ಸ್ವಯಂವರ ಪಾರ್ವತಿಯ ಪ್ರಾರ್ಥನೆ ಮಾಡಿ
ತುಲಾ

- ಹಿರಿಯರ ವೃತ್ತಿಯಿಂದ ಸಮಾಧಾನ ಮತ್ತು ಗೌರವ ಲಭ್ಯ ಆಗಲಿದೆ
- ಹಲವರ ಭೇಟಿ ನಿಮ್ಮ ಅನುಕೂಲಕ್ಕೆ ದಾರಿ ಮಾಡಿಕೊಡಲಾಗುತ್ತದೆ
- ನಿಮ್ಮ ದೀರ್ಘಕಾಲದ ಆಲೋಚನೆಗಳು ನನಸಾಗುವ ಸಮಯ
- ಹಲವರಿಂದ ಗೌರವ ಮಾನ್ಯತೆ ಸಿಗಲಿದೆ
- ನಿಮ್ಮ ವ್ಯಯಕ್ತಿಕವಾಗಿ ಸಂಪಾದಿಸಿದ ವಿಶೇಷತೆಗಳನ್ನ ಬೇರೆಯವರಿಗೆ ಹಂಚುವ ಪ್ರಯತ್ನ ಮಾಡಿ
- ಅಕಾಲದಲ್ಲಿಯ ಘಟನೆಗಳು ಪ್ರಭಾವವನ್ನು ಬೀರಬಹುದು
- ಹಳೆಯ ನೆನಪುಗಳು ಸಿಹಿಕಹಿಗಳ ಮೆಲುಕನ್ನು ಹಾಕುತ್ತೀರಿ
- ಕುಲದೇವತಾರಾಧನೆ ಮಾಡಿ
ವೃಶ್ಚಿಕ

- ನಿಮ್ಮ ಒಳ್ಳೆತನ ಬೇರೆಯವರಿಗೆ ಅನುಕೂಲ ಆಗಲಿದೆ
- ಮಾನಸಿಕವಾದ ಕೋಪ ನಿಮ್ಮನ್ನೇ ತಿನ್ನಲಿದೆ
- ಮನ ಬಿಚ್ಚಿ ಮಾತಾಡಿ ನಿಮ್ಮ ಗುರಿಯ ಬಗ್ಗೆ ಗಮನವಿರಲಿ
- ನಿರುದ್ಯೋಗ, ಮದುವೆ ವಿಚಾರ ನಿಮಗೆ ನಿರಾಸೆಯನ್ನು ಉಂಟು ಮಾಡಲಿದೆ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಯಾವುದೇ ಕಠಿಣ ಅಥವಾ ತಪ್ಪು ನಿರ್ಧಾರವನ್ನು ಮಾಡಬೇಡಿ
- ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ
ಧನುಸ್ಸು

- ಮಾತೆತ್ತಿದರೆ ಜಗಳದ ಸಂಭವವಿದೆ ತಾಳ್ಮೆಯಿರಲಿ
- ಈ ದಿನ ಮೌನವಾಗಿರುವುದು ಬಹಳ ಒಳ್ಳೆಯದು
- ಗೊತ್ತಿಲ್ಲದ ವಿಚಾರಕ್ಕೆ ವಾದಿಸಬೇಡಿ
- ಮನೆ ಅಥವಾ ಮನದಲ್ಲಿ ಅಶಾಂತಿ
- ಎಲ್ಲ ಕಡೆ ಸೋಲಿನ ಭೀತಿ
- ಮನಶ್ಚಾಂಚಲ್ಯ ಕೊನೆಗೆ ತಪ್ಪಿನ ಅರಿವು ಆಗಲಿದೆ
- ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ
ಮಕರ

- ಸಾಂಸಾರಿಕ ವಿಚಾರದಲ್ಲಿ ತಿಳುವಳಿಕೆಯ ಮಾತು
- ಅನ್ಯೋನ್ಯತೆಗಾಗಿ ಹುಡುಕಾಟವನ್ನು ಮಾಡುತ್ತೀರಿ
- ಎಲ್ಲವೂ ಕೂಡ ಸ್ವಾಭಾವಿಕವಾಗಿದ್ದರೆ ಹೆದರಿಕೆ ಇಲ್ಲ
- ಕೇವಲ ವ್ಯವಹಾರದಿಂದ ಮಾತ್ರ ಜೀವನ ಅಲ್ಲ
- ನಿಮ್ಮ ಬಗ್ಗೆ ನೀವೇ ಚೆನ್ನಾಗಿ ತಿಳಿದುಕೊಳ್ಳಬೇಕು
- ಅನಿವಾರ್ಯವಾದರು ಕೂಡ ದಾರಿಯನ್ನು ಬಿಟ್ಟು ಹೋಗಬಾರದು
- ಶಕ್ತಿ ದೇವತಾ ಉಪಾಸನೆಯನ್ನು ಮಾಡಿ
ಕುಂಭ

- ಅಧಿಕಾರಿ ವರ್ಗದಿಂದ ದೂರವಾಗುತ್ತೀರಿ
- ಸರಳ ಸ್ವಾಭಾವಿಕವಾಗಿ ನಡೆದುಕೊಳ್ಳಿ
- ಅತಿ ಆಸೆಯಿಂದ ಗೆದ್ದರೂ ಶಾಶ್ವತವಲ್ಲ
- ಕೆಲವು ಕಾನೂನು ವಿಚಾರ ನಿಮ್ಮ ಪರವಾಗಿದೆ
- ದ್ವೇಷಿಗಳು ಹೆಚ್ಚಾಗುತ್ತಾರೆ ಮಾನಸಿಕ ಹಿಂಸೆಯಾಗಲಿದೆ
- ಎಲ್ಲವನ್ನು ಎದುರಿಸುವ ಸಾಮರ್ಥ್ಯದ ಬಗ್ಗೆ ಚಿಂತಿಸಿ
- ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನಾ

- ಶತ್ರುಗಳ ವಿರುದ್ಧ ಜಯವಿದೆ
- ಅನಾರೋಗ್ಯ ಪೀಡಿತರಿಗೆ ಸಮಸ್ಯೆಯಾಗಬಹುದು
- ಪಿತ್ರಾರ್ಜಿತ ಆಸ್ತಿ ಲಭ್ಯವಿದೆ ಸರಿಯಾದ ನಿರ್ಧಾರ ಮಾಡಿ
- ನಿಮ್ಮ ಆಶ್ರಯ ಕೆಲವರಿಗೆ ಬೇಕಾಗಬಹುದು
- ನಿಮ್ಮ ಕೋಪಕ್ಕೆ ಯಾರು ಹತ್ತಿರ ಬರುವುದಿಲ್ಲ
- ಮಕ್ಕಳ ಬಗ್ಗೆ ಉತ್ತಮವಾದ ಅಭಿಪ್ರಾಯವಿರಲಿ
- ಗೋವಿಗೆ ಆಹಾರವನ್ನು ನೀಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ