newsfirstkannada.com

IND vs WI T20: ಇಂದು ಬಲಿಷ್ಠ ಕೆರಿಬಿಯನ್ ಪಡೆ ಎದುರಿಸಲಿದೆ ಪಾಂಡ್ಯ ಟೀಮ್; ಗಿಲ್​, ಜೈಶ್ವಾಲ್, ಕಿಶನ್​ ಓಪನಿಂಗ್​ ಬರೋದು ಯಾರು?

Share :

03-08-2023

    ಟಿ20ಗೆ ಯುವಕರನ್ನು ಆಯ್ಕೆ ಮಾಡೋದೆ ಕ್ಯಾಪ್ಟನ್​ಗೆ ತಲೆ ಬಿಸಿ

    ಕೆರಿಬಿಯನ್ ವಿರುದ್ಧ ಭಾರತ ಸೋತರೆ ಮುಖಭಂಗ ಗ್ಯಾರಂಟಿ

    ಮೂವರು ಓಪನರ್ಸ್‌​, ಮೂವರು ಮಿಡಲ್​ ಆರ್ಡರ್​ ಸಾಧ್ಯನಾ?

ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​, ಏಕದಿನ ಸರಣಿ ಗೆದ್ದು ಬೀಗಿರುವ ಟೀಮ್​ ಇಂಡಿಯಾಗೆ ಇಂದಿನಿಂದ ಅಸಲಿ ಸವಾಲು ಎದುರಾಗಲಿದೆ. ಅಪಾರ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಟೀಮ್​ ಇಂಡಿಯಾ ಇದೀಗ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಸ್ವಲ್ಪ ಯಾಮಾರಿದ್ರೆ, ಸೋಲಿನ ಮುಖಭಂಗ ಅನುಭವಿಸಬೇಕಾಗುತ್ತದೆ.

ಇಂಡೋ- ವಿಂಡೀಸ್​​ ಟೆಸ್ಟ್​ ಹಾಗೂ ಏಕದಿನ ಸರಣಿಯನ್ನ ಕಬ್ಜ ಮಾಡಿಕೊಂಡ ಟೀಮ್​ ಇಂಡಿಯಾ ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಚುಟುಕು ಸರಣಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ಯಂಗ್​ ಇಂಡಿಯಾ ಇದೆ. ಆದ್ರೆ, ಅಸಲಿ ಅಖಾಡಕ್ಕೆ ಇಳಿಯೋಕೆ ಮುನ್ನವೇ ಹಲವು ಸವಾಲುಗಳು ಕ್ಯಾಪ್ಟನ್ ಹಾರ್ದಿಕ್​ ತಲೆನೋವು ತಂದಿಟ್ಟಿವೆ. ಈ ಗೊಂದಲಗಳಿಗೆ ಸೂಕ್ತವಾದ ಪರಿಹಾರ ಕಂಡುಕೊಂಡು ಕಣಕ್ಕಿಳಿದ್ರೆ ಮಾತ್ರ ಟಿ20 ಸರಣಿ ಗೆಲುವು ನಮ್ಮದಾಗಲಿದೆ.

ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ

ಇರೋ ಮೂವರಲ್ಲಿ ಓಪನರ್ಸ್​​​ ಯಾರು.?

ಟ್ರಿನಿಡಾಡ್​ನಲ್ಲಿ ಇಂದು ನಡೆಯೋ ಮೊದಲ ಪಂದ್ಯಕ್ಕೂ ಮುನ್ನ ಹಾರ್ದಿಕ್​ಗಿರೋ ಮೊದಲ ಸವಾಲ್ ಓಪನರ್ಸ್​ ಆಯ್ಕೆ. ಏಕದಿನ ಸರಣಿಯ ಸಕ್ಸಸ್​​ಫುಲ್​ ಜೋಡಿ ಇಶಾನ್​ ಕಿಶನ್​, ಶುಭ್​ಮನ್​ ಗಿಲ್​ ಸದ್ಯ ಸಾಲಿಡ್​ ರಿದಮ್​​ನಲ್ಲಿದ್ದಾರೆ. ಆದ್ರೆ, ಯಂಗ್​ ಡೈನಾಮಿಕ್​​ ಯಶಸ್ವಿ ಜೈಸ್ವಾಲ್​ ಕೂಡ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಶುಭ್​ಮನ್​​ -ಕಿಶನ್​ ಜೋಡಿಗೆ ಹಾರ್ದಿಕ್​ ಮಣೆ ಹಾಕ್ತಾರಾ.? ಅಥವಾ ಜೈಸ್ವಾಲ್​ಗೆ ಚಾನ್ಸ್​​ ಕೊಡ್ತಾರಾ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ಮಿಡಲ್​ ಆರ್ಡರ್​​ನಲ್ಲಿ ಯಾರಿಗೆ ಚಾನ್ಸ್​.?

ವಿಕೆಟ್​​ ಕೀಪರ್​ ಸಂಜು ಸ್ಯಾಮ್ಸನ್​, ಯಂಗ್​ ಡೈನಾಮಿಕ್​ ತಿಲಕ್​ ವರ್ಮಾ ಹಾಗೂ ವೈಸ್​​ ಕ್ಯಾಪ್ಟನ್​ ಸೂರ್ಯ ಕುಮಾರ್​ ಯಾದವ್ ನಡುವೆ ಮಿಡಲ್​ ಆರ್ಡರ್​ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಸಂಜು ಸ್ಯಾಮ್ಸನ್​ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ರೆ, ತಿಲಕ್​​ ವರ್ಮಾಗೂ ಚಾನ್ಸ್​​ ಸಿಗೋ ಸಾಧ್ಯತೆ ದಟ್ಟವಾಗಿವೆ. ಇನ್ನು, ಸೂರ್ಯ ಕುಮಾರ್​ ಫಿನಿಷರ್​ ರೋಲ್​ ಪ್ಲೇ ಮಾಡೋದು ಬಹುತೇಕ ಪಕ್ಕಾ.

ಆಲ್​​ರೌಂಡರ್​ ಕೋಟಾದಲ್ಲಿ ಹಾರ್ದಿಕ್​- ಅಕ್ಷರ್.!

ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಲ್​​ರೌಂಡರ್​​ ಜವಾಬ್ದಾರಿಯನ್ನ ನಿಭಾಯಿಸಿಲಿದ್ದಾರೆ. ಇನ್ನು, ಜಡೇಜಾಗೆ ಟಿ20 ಸರಣಿಯಿಂದ ರೆಸ್ಟ್​ ನೀಡಿರೋದ್ರಿಂದ, ಸ್ಪಿನ್ ಆಲ್​​ರೌಂಡರ್​ ಆಗಿ ಅಕ್ಷರ್​ ಪಟೇಲ್​ ಎಂಟ್ರಿ ಕೊಡೋದು ಕನ್​ಫರ್ಮ್​.!

ಸ್ಪೆಷಲಿಸ್ಟ್​ ಸ್ಪಿನ್ನರ್​ ಆಯ್ಕೆಯೇ ಕಗ್ಗಂಟು.!

15 ಆಟಗಾರರ ತಂಡದಲ್ಲಿ ಮೂವರು ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಿದ್ದಾರೆ. ಕುಲ್​ದೀಪ್​ ಯಾದವ್​, ಯುಜುವೇಂದ್ರ ಚಹಲ್​ ಹಾಗೂ ರವಿ ಬಿಷ್ನೋಯ್​ ತಂಡದಲ್ಲಿದ್ದ್ದು, ಇವರಲ್ಲಿ ಯಾರಿಗೆ ಚಾನ್ಸ್​ ಸಿಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಕುಲ್​ದೀಪ್​ ಏಕದಿನ ಸರಣಿಯಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ್ರೆ, ಚಹಲ್​ ಸರಣಿ ಪೂರ್ತಿ ಬೆಂಚ್​ ಕಾದಿದ್ದಾರೆ. ಕಮ್​ಬ್ಯಾಕ್​ ಮಾಡಿರೋ ಬಿಷ್ನೋಯ್​ ಕೂಡ ಪ್ಲೇಯಿಂಗ್​ ಇಲೆವೆನ್​ ಸ್ಥಾನದ ಕನವರಿಕೆಯಲ್ಲಿದ್ದಾರೆ.

ಭಾರತ ತಂಡದ ಆಟಗಾರರು

T20ಗೂ ಡೆಬ್ಯೂ ಮಾಡ್ತಾರಾ ಮುಖೇಶ್​ ಕುಮಾರ್.?

ಆರ್ಷ್​ದೀಪ್​ ಸಿಂಗ್​, ಉಮ್ರಾನ್​ ಮಲಿಕ್, ಆವೇಶ್​ ಖಾನ್​ ಹಾಗೂ ಮುಖೇಶ್​ ಕುಮಾರ್​ ಸ್ಥಾನ ಗಿಟ್ಟಿಸಿಕೊಂಡಿರುವ ವೇಗಿಗಳಾಗಿದ್ದಾರೆ. ಟೆಸ್ಟ್​ ಹಾಗೂ ಏಕದಿನ ಸರಣಿಯಲ್ಲಿ ಸಖತ್​​ ಪರ್ಫಾಮೆನ್ಸ್​ ನೀಡಿರುವ ಮುಖೇಶ್​​ ಕುಮಾರ್​​​ ಸ್ಥಾನಗಿಟ್ಟಿಸಿಕೊಳ್ಳೋ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸ್ಪೀಡ್​ ಸ್ಟರ್​​ ಉಮ್ರಾನ್​ ಮಲಿಕ್​ಗೆ ಸ್ಥಾನ ಸಿಗೋ ಸಾಧ್ಯತೆಯಿದ್ದು, ಕಮ್​ಬ್ಯಾಕ್​ ಮಾಡಿರೋ ಆರ್ಷ್​ದೀಪ್​, ಆವೇಶ್​ ಖಾನ್​ ಸೆಲೆಕ್ಷನ್​ ಸದ್ಯ ಹೆಡ್ಡೇಕ್​ ತಂದಿಟ್ಟಿದೆ.

T20 ಮಾದರಿಯಲ್ಲಿ ವಿಂಡೀಸ್​​ ಬಲಿಷ್ಟ.!

ಟೆಸ್ಟ್​ ಹಾಗೂ ಏಕದಿನ ಮಾದರಿಗೆ ಹೋಲಿಸಿದ್ರೆ, ವೆಸ್ಟ್​ ಇಂಡೀಸ್​ ತಂಡ ಹೆಚ್ಚು ಬಲಿಷ್ಠವಾಗಿದೆ. ಟೀಮ್​ ಇಂಡಿಯಾದಲ್ಲಿ ಯಂಗ್​​ಸ್ಟರ್​ಗಳು ತುಂಬಿದ್ರೆ, ವಿಂಡೀಸ್​ ಪಡೆಯಲ್ಲಿ ಟಿ20 ಸ್ಪೆಷಲಿಸ್ಟ್​ಗಳ ದಂಡೇ ಇದೆ. ಬಲಿಷ್ಟ ಟೀಮ್​ ಸೆಲೆಕ್ಷನ್​ ಜೊತೆಗೆ ನಿಕೋಲಸ್​ ಪೂರನ್​, ಶಿಮ್ರಾನ್​ ಹೆಟ್ಮೆಯರ್​ರಂತ ಸ್ಫೋಟಕ ಆಟಗಾರರನ್ನ ಕಟ್ಟಿ ಹಾಕಲು ರಣತಂತ್ರ ರೂಪಿಸೋದು ಕೂಡ ಹಾರ್ದಿಕ್​ ಮುಂದಿರೋ ಸವಾಲಾಗಿದೆ. ಇದೆಲ್ಲವನ್ನ ಕ್ಯಾಪ್ಟನ್​ ಪಾಂಡ್ಯ ಹೇಗೆ ನಿಭಾಯಿಸ್ತಾರೆ ಅನ್ನೋದೇ ಸದ್ಯದ ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs WI T20: ಇಂದು ಬಲಿಷ್ಠ ಕೆರಿಬಿಯನ್ ಪಡೆ ಎದುರಿಸಲಿದೆ ಪಾಂಡ್ಯ ಟೀಮ್; ಗಿಲ್​, ಜೈಶ್ವಾಲ್, ಕಿಶನ್​ ಓಪನಿಂಗ್​ ಬರೋದು ಯಾರು?

https://newsfirstlive.com/wp-content/uploads/2023/08/GILL_YSHASWI_JAISWAL.jpg

    ಟಿ20ಗೆ ಯುವಕರನ್ನು ಆಯ್ಕೆ ಮಾಡೋದೆ ಕ್ಯಾಪ್ಟನ್​ಗೆ ತಲೆ ಬಿಸಿ

    ಕೆರಿಬಿಯನ್ ವಿರುದ್ಧ ಭಾರತ ಸೋತರೆ ಮುಖಭಂಗ ಗ್ಯಾರಂಟಿ

    ಮೂವರು ಓಪನರ್ಸ್‌​, ಮೂವರು ಮಿಡಲ್​ ಆರ್ಡರ್​ ಸಾಧ್ಯನಾ?

ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​, ಏಕದಿನ ಸರಣಿ ಗೆದ್ದು ಬೀಗಿರುವ ಟೀಮ್​ ಇಂಡಿಯಾಗೆ ಇಂದಿನಿಂದ ಅಸಲಿ ಸವಾಲು ಎದುರಾಗಲಿದೆ. ಅಪಾರ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಟೀಮ್​ ಇಂಡಿಯಾ ಇದೀಗ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಸ್ವಲ್ಪ ಯಾಮಾರಿದ್ರೆ, ಸೋಲಿನ ಮುಖಭಂಗ ಅನುಭವಿಸಬೇಕಾಗುತ್ತದೆ.

ಇಂಡೋ- ವಿಂಡೀಸ್​​ ಟೆಸ್ಟ್​ ಹಾಗೂ ಏಕದಿನ ಸರಣಿಯನ್ನ ಕಬ್ಜ ಮಾಡಿಕೊಂಡ ಟೀಮ್​ ಇಂಡಿಯಾ ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಚುಟುಕು ಸರಣಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ಯಂಗ್​ ಇಂಡಿಯಾ ಇದೆ. ಆದ್ರೆ, ಅಸಲಿ ಅಖಾಡಕ್ಕೆ ಇಳಿಯೋಕೆ ಮುನ್ನವೇ ಹಲವು ಸವಾಲುಗಳು ಕ್ಯಾಪ್ಟನ್ ಹಾರ್ದಿಕ್​ ತಲೆನೋವು ತಂದಿಟ್ಟಿವೆ. ಈ ಗೊಂದಲಗಳಿಗೆ ಸೂಕ್ತವಾದ ಪರಿಹಾರ ಕಂಡುಕೊಂಡು ಕಣಕ್ಕಿಳಿದ್ರೆ ಮಾತ್ರ ಟಿ20 ಸರಣಿ ಗೆಲುವು ನಮ್ಮದಾಗಲಿದೆ.

ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ

ಇರೋ ಮೂವರಲ್ಲಿ ಓಪನರ್ಸ್​​​ ಯಾರು.?

ಟ್ರಿನಿಡಾಡ್​ನಲ್ಲಿ ಇಂದು ನಡೆಯೋ ಮೊದಲ ಪಂದ್ಯಕ್ಕೂ ಮುನ್ನ ಹಾರ್ದಿಕ್​ಗಿರೋ ಮೊದಲ ಸವಾಲ್ ಓಪನರ್ಸ್​ ಆಯ್ಕೆ. ಏಕದಿನ ಸರಣಿಯ ಸಕ್ಸಸ್​​ಫುಲ್​ ಜೋಡಿ ಇಶಾನ್​ ಕಿಶನ್​, ಶುಭ್​ಮನ್​ ಗಿಲ್​ ಸದ್ಯ ಸಾಲಿಡ್​ ರಿದಮ್​​ನಲ್ಲಿದ್ದಾರೆ. ಆದ್ರೆ, ಯಂಗ್​ ಡೈನಾಮಿಕ್​​ ಯಶಸ್ವಿ ಜೈಸ್ವಾಲ್​ ಕೂಡ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಶುಭ್​ಮನ್​​ -ಕಿಶನ್​ ಜೋಡಿಗೆ ಹಾರ್ದಿಕ್​ ಮಣೆ ಹಾಕ್ತಾರಾ.? ಅಥವಾ ಜೈಸ್ವಾಲ್​ಗೆ ಚಾನ್ಸ್​​ ಕೊಡ್ತಾರಾ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ಮಿಡಲ್​ ಆರ್ಡರ್​​ನಲ್ಲಿ ಯಾರಿಗೆ ಚಾನ್ಸ್​.?

ವಿಕೆಟ್​​ ಕೀಪರ್​ ಸಂಜು ಸ್ಯಾಮ್ಸನ್​, ಯಂಗ್​ ಡೈನಾಮಿಕ್​ ತಿಲಕ್​ ವರ್ಮಾ ಹಾಗೂ ವೈಸ್​​ ಕ್ಯಾಪ್ಟನ್​ ಸೂರ್ಯ ಕುಮಾರ್​ ಯಾದವ್ ನಡುವೆ ಮಿಡಲ್​ ಆರ್ಡರ್​ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಸಂಜು ಸ್ಯಾಮ್ಸನ್​ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ರೆ, ತಿಲಕ್​​ ವರ್ಮಾಗೂ ಚಾನ್ಸ್​​ ಸಿಗೋ ಸಾಧ್ಯತೆ ದಟ್ಟವಾಗಿವೆ. ಇನ್ನು, ಸೂರ್ಯ ಕುಮಾರ್​ ಫಿನಿಷರ್​ ರೋಲ್​ ಪ್ಲೇ ಮಾಡೋದು ಬಹುತೇಕ ಪಕ್ಕಾ.

ಆಲ್​​ರೌಂಡರ್​ ಕೋಟಾದಲ್ಲಿ ಹಾರ್ದಿಕ್​- ಅಕ್ಷರ್.!

ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಲ್​​ರೌಂಡರ್​​ ಜವಾಬ್ದಾರಿಯನ್ನ ನಿಭಾಯಿಸಿಲಿದ್ದಾರೆ. ಇನ್ನು, ಜಡೇಜಾಗೆ ಟಿ20 ಸರಣಿಯಿಂದ ರೆಸ್ಟ್​ ನೀಡಿರೋದ್ರಿಂದ, ಸ್ಪಿನ್ ಆಲ್​​ರೌಂಡರ್​ ಆಗಿ ಅಕ್ಷರ್​ ಪಟೇಲ್​ ಎಂಟ್ರಿ ಕೊಡೋದು ಕನ್​ಫರ್ಮ್​.!

ಸ್ಪೆಷಲಿಸ್ಟ್​ ಸ್ಪಿನ್ನರ್​ ಆಯ್ಕೆಯೇ ಕಗ್ಗಂಟು.!

15 ಆಟಗಾರರ ತಂಡದಲ್ಲಿ ಮೂವರು ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಿದ್ದಾರೆ. ಕುಲ್​ದೀಪ್​ ಯಾದವ್​, ಯುಜುವೇಂದ್ರ ಚಹಲ್​ ಹಾಗೂ ರವಿ ಬಿಷ್ನೋಯ್​ ತಂಡದಲ್ಲಿದ್ದ್ದು, ಇವರಲ್ಲಿ ಯಾರಿಗೆ ಚಾನ್ಸ್​ ಸಿಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಕುಲ್​ದೀಪ್​ ಏಕದಿನ ಸರಣಿಯಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ್ರೆ, ಚಹಲ್​ ಸರಣಿ ಪೂರ್ತಿ ಬೆಂಚ್​ ಕಾದಿದ್ದಾರೆ. ಕಮ್​ಬ್ಯಾಕ್​ ಮಾಡಿರೋ ಬಿಷ್ನೋಯ್​ ಕೂಡ ಪ್ಲೇಯಿಂಗ್​ ಇಲೆವೆನ್​ ಸ್ಥಾನದ ಕನವರಿಕೆಯಲ್ಲಿದ್ದಾರೆ.

ಭಾರತ ತಂಡದ ಆಟಗಾರರು

T20ಗೂ ಡೆಬ್ಯೂ ಮಾಡ್ತಾರಾ ಮುಖೇಶ್​ ಕುಮಾರ್.?

ಆರ್ಷ್​ದೀಪ್​ ಸಿಂಗ್​, ಉಮ್ರಾನ್​ ಮಲಿಕ್, ಆವೇಶ್​ ಖಾನ್​ ಹಾಗೂ ಮುಖೇಶ್​ ಕುಮಾರ್​ ಸ್ಥಾನ ಗಿಟ್ಟಿಸಿಕೊಂಡಿರುವ ವೇಗಿಗಳಾಗಿದ್ದಾರೆ. ಟೆಸ್ಟ್​ ಹಾಗೂ ಏಕದಿನ ಸರಣಿಯಲ್ಲಿ ಸಖತ್​​ ಪರ್ಫಾಮೆನ್ಸ್​ ನೀಡಿರುವ ಮುಖೇಶ್​​ ಕುಮಾರ್​​​ ಸ್ಥಾನಗಿಟ್ಟಿಸಿಕೊಳ್ಳೋ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸ್ಪೀಡ್​ ಸ್ಟರ್​​ ಉಮ್ರಾನ್​ ಮಲಿಕ್​ಗೆ ಸ್ಥಾನ ಸಿಗೋ ಸಾಧ್ಯತೆಯಿದ್ದು, ಕಮ್​ಬ್ಯಾಕ್​ ಮಾಡಿರೋ ಆರ್ಷ್​ದೀಪ್​, ಆವೇಶ್​ ಖಾನ್​ ಸೆಲೆಕ್ಷನ್​ ಸದ್ಯ ಹೆಡ್ಡೇಕ್​ ತಂದಿಟ್ಟಿದೆ.

T20 ಮಾದರಿಯಲ್ಲಿ ವಿಂಡೀಸ್​​ ಬಲಿಷ್ಟ.!

ಟೆಸ್ಟ್​ ಹಾಗೂ ಏಕದಿನ ಮಾದರಿಗೆ ಹೋಲಿಸಿದ್ರೆ, ವೆಸ್ಟ್​ ಇಂಡೀಸ್​ ತಂಡ ಹೆಚ್ಚು ಬಲಿಷ್ಠವಾಗಿದೆ. ಟೀಮ್​ ಇಂಡಿಯಾದಲ್ಲಿ ಯಂಗ್​​ಸ್ಟರ್​ಗಳು ತುಂಬಿದ್ರೆ, ವಿಂಡೀಸ್​ ಪಡೆಯಲ್ಲಿ ಟಿ20 ಸ್ಪೆಷಲಿಸ್ಟ್​ಗಳ ದಂಡೇ ಇದೆ. ಬಲಿಷ್ಟ ಟೀಮ್​ ಸೆಲೆಕ್ಷನ್​ ಜೊತೆಗೆ ನಿಕೋಲಸ್​ ಪೂರನ್​, ಶಿಮ್ರಾನ್​ ಹೆಟ್ಮೆಯರ್​ರಂತ ಸ್ಫೋಟಕ ಆಟಗಾರರನ್ನ ಕಟ್ಟಿ ಹಾಕಲು ರಣತಂತ್ರ ರೂಪಿಸೋದು ಕೂಡ ಹಾರ್ದಿಕ್​ ಮುಂದಿರೋ ಸವಾಲಾಗಿದೆ. ಇದೆಲ್ಲವನ್ನ ಕ್ಯಾಪ್ಟನ್​ ಪಾಂಡ್ಯ ಹೇಗೆ ನಿಭಾಯಿಸ್ತಾರೆ ಅನ್ನೋದೇ ಸದ್ಯದ ಕುತೂಹಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More