ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಗೌರವ ಹೆಚ್ಚಾಗಲಿದೆ
ಪ್ರಾಮಾಣಿಕತೆಗೆ ಬೆಲೆ ಇದೆ ಎಂದು ತಿಳಿಯಬೇಕು
ಸಣ್ಣ ಪ್ರಮಾಣದ ಹೂಡಿಕೆಯಿಂದ ಸಮಾಧಾನವಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ

- ಬೇರೆಯವರಿಂದ ಹಣದ ಸಹಾಯ ಪಡೆಯುತ್ತೀರಿ
- ನಿರುದ್ಯೋಗಿಗಳು ತಮ್ಮ ಜೀವನದ ಬಗ್ಗೆ ಚಿಂತಿಸುತ್ತೀರಿ
- ಗೌರವಾನ್ವಿತರಿಂದ ಮಾರ್ಗದರ್ಶನ ಪಡೆಯಿರಿ
- ನಿಮ್ಮ ಯೋಜನೆಗಳನ್ನು ಬಹಿರಂಗಪಡಿಸದಿರಿ
- ಕುಟುಂಬದ ವಾತಾವರಣ ಚೆನ್ನಾಗಿರಲಿದೆ
- ಲಕ್ಷ್ಮೀ ನಾರಾಯಣರನ್ನು ಪ್ರಾರ್ಥನೆ ಮಾಡಿ
ವೃಷಭ

- ಬೇರೆಯವರ ಮೇಲೆ ಅವಲಂಬಿತರಾಗಬೇಡಿ
- ಉತ್ತಮವಾದ ಕೆಲಸಗಾರರಿಗೆ ಮನ್ನಣೆ ಇರಲಿದೆ
- ಮಧ್ಯಾಹ್ನದ ನಂತರ ಮಹತ್ತರವಾದ ಕೆಲಸಗಳಾಗಬಹುದು
- ಹಿಂದೆ ಮಾಡಿದ ನಿರ್ಧಾರಗಳು ಉಪಕಾರ ಆಗಲಿದೆ
- ಸಣ್ಣ ಪ್ರಮಾಣದ ಹೂಡಿಕೆಯಿಂದ ಸಮಾಧಾನವಿದೆ
- ಆರಾಮವಾಗಿ ವಿರಾಮವಾಗಿರಲು ಅವಕಾಶಗಳು ಕಡಿಮೆ
- ಗೋ ಸೇವೆಯನ್ನು ಮಾಡಿ
ಮಿಥುನ

- ಮನೆಯವರಿಗೆ ಸಮಯ ಮೀಸಲಿಡಿ
- ಇಂದು ನಿದ್ರಾಹೀನತೆಯಿಂದ ಬಳಲುತ್ತೀರಿ
- ವಿದೇಶದಲ್ಲಿರುವವರಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು
- ಹಿರಿಯರು ಅಥವಾ ಅಧಿಕಾರಿಗಳು ನಿಮ್ಮ ಬಗ್ಗೆ ಹೊಗಳುತ್ತಾರೆ
- ಪ್ರಾಮಾಣಿಕತೆಗೆ ಬೆಲೆ ಇದೆ ಎಂದು ತಿಳಿಯಬೇಕು
- ಆರ್ಥಿಕವಾಗಿ ಸದೃಢರಾಗುತ್ತೀರಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ಮಂಗಳ ಕಾರ್ಯದ ಬಗ್ಗೆ ಚರ್ಚೆ ಮಾಡುತ್ತೀರಿ ಶುಭವಿದೆ
- ಜನಾಕರ್ಷಣೆಯನ್ನು ನೋಡಿ ಸಂತೋಷ ಪಡುತ್ತೀರಿ
- ಜನರು ನಿಮ್ಮ ಸಲಹೆಗಳನ್ನು ಅನುಸರಿಸುತ್ತಾರೆ
- ಸ್ನೇಹಿತರು ಬಂಧುಗಳು ಒಟ್ಟಿಗೆ ಸೇರುವ ಸಮಯ
- ಕೆಲವು ಸೂಕ್ತವಾದ ಅನುಕೂಲ ಮತ್ತು ಲಾಭ ನಿಮ್ಮದಾಗಲಿದೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಕುಲದೇವತಾ ಆರಾಧನೆ ಮಾಡಿ
ಸಿಂಹ

- ನಿಮ್ಮದೇ ಆದ ಕೆಲವು ಆಲೋಚನೆಗಳು ಸಾಕಾರವಾಗಲಿದೆ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿದೆ
- ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಗೌರವ ಹೆಚ್ಚಾಗಲಿದೆ
- ಹಲವಾರು ಸ್ನೇಹಿತರು ನಿಮ್ಮನ್ನು ಅನುಸರಿಸುತ್ತಾರೆ
- ಹೊಸ ಹೊಸ ಯೋಜನೆಗಳು ಅನುಷ್ಠಾನಗೊಳ್ಳಲಿದೆ
- ಆರ್ಥಿಕವಾಗಿ ಯಾವ ಯೋಜನೆಯೂ ಇರುವುದಿಲ್ಲ
- ಭೂದೇವಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಇಷ್ಟವಿಲ್ಲದ ಯಾವ ಕೆಲಸವನ್ನು ಮಾಡಬೇಡಿ
- ಮನೆಗೆ ಬಂದ ಅತಿಥಿಗಳನ್ನು ಗೌರವಿಸಿ ಸತ್ಕಾರ ಮಾಡಿ
- ಅನಗತ್ಯವಾದ ಯೋಜನೆ, ಯೋಚನೆ, ಮಾತು ಬೇಡ
- ಮಕ್ಕಳ ಬಗ್ಗೆ ಕಾಳಜಿ ಇರಲಿ
- ಮಂಗಳ ಕಾರ್ಯದ ಬಗ್ಗೆ ಚಿಂತನೆ ಇರಲಿ
- ಕೆಲವು ವಿಚಾರದಲ್ಲಿ ಜನ ನಿಮ್ಮ ವಿರುದ್ಧ ಮಾಡುತ್ತಾರೆ
- ಹಿರಿಯರ ವಿಚಾರದಲ್ಲಿ ತಾಳ್ಮೆ ಇರಲಿ ಜಯವಿದೆ
- ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಗುರು ಗ್ರಹವನ್ನು ಪ್ರಾರ್ಥನೆ ಮಾಡಿ
ತುಲಾ

- ಹಿಂದಿನ ಕೆಲವು ಯೋಜನೆಗಳಿಂದ ಲಾಭ
- ಯಾರು ನಿಮ್ಮ ವಿರೋಧ ಮಾಡಿಕೊಂಡಿರುತ್ತಾರೋ ಅವರಿಗೆ ಹಿನ್ನಡೆಯಾಗಬಹುದು
- ವಿವಾದಾತ್ಮಕ ವಿಚಾರಗಳನ್ನು ಚರ್ಚಿಸಬೇಡಿ
- ಹಠ ಮತ್ತು ಕೋಪ ಇರುವವರನ್ನು ದೂರವಿಡಿ
- ಸಣ್ಣ ವಿಚಾರಗಳು ನಿಮ್ಮನ್ನು ಕೆರಳಿಸಬಹುದು
- ಮನೆಯವರು ನಿಮಗೆ ಸಹಕರಿಸುತ್ತಾರೆ
- ಗಣಪತಿಯನ್ನು ಆರಾಧನೆ ಮಾಡಿ
ವೃಶ್ಚಿಕ

- ಆಸ್ತಿ ವಿಚಾರದಲ್ಲಿ ಅನುಕೂಲವಿದೆ
- ರಾಜಕಾರಣಿಗಳಿಗೆ ನಿರೀಕ್ಷಿತವಾದ ಲಾಭವಿದೆ
- ಸಂಗೀತಾಸಕ್ತಿ ಬೆಳಸಿಕೊಳ್ಳಿ ಸಮಾಧಾನ ಸಿಗಲಿದೆ
- ಮಾನಸಿಕವಾಗಿ ಯಾವುದನ್ನು ಕೂಡ ದೂಷಿಸಬೇಡಿ
- ಪ್ರತಿ ಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
- ಅಂದುಕೊಂಡ ಕೆಲಸ ಸಾಧಿಸಿ ಶುಭವಿದೆ
- ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ
ಧನುಸ್ಸು

- ವ್ಯಾವಹಾರಿಕವಾಗಿ ಏನು ತೋಚದ ಸ್ಥಿತಿ ಆಗಬಹುದು
- ಯಾವುದೇ ಬಲವಂತಕ್ಕೆ ಒಳಗಾಗಬೇಡಿ
- ಆರ್ಥಿಕ ದೃಷ್ಟಿ ಕೋನದಿಂದ ಈ ದಿನ ಚೆನ್ನಾಗಿದೆ
- ಸಣ್ಣ ಪುಟ್ಟ ಕೆಲಸಗಳಿಗೆ ಒತ್ತಡ ಇರಲಿದೆ
- ನೆಮ್ಮದಿಯಿಂದ ಇರಲು ಪ್ರಯತ್ನಿಸಿ
- ಕಾಲು ನೋವು ನಿಮಗೆ ತೊಂದರೆಯಾಗಬಹುದು
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಮಕರ

- ವ್ಯಾಪಾರಸ್ಥರಿಗೆ ದೈನಂದಿನ ಆದಾಯ ಹೆಚ್ಚಳ ಆಗಲಿದೆ
- ಕೌಟುಂಬಿಕವಾದ ಹೊಂದಾಣಿಕೆ ಮುಖ್ಯ
- ಪ್ರೇಮಿಗಳಿಗೆ ಒತ್ತಡ ದೂರ ಆಗಬಹುದು
- ಕಷ್ಟಕರವಾದ ಕೆಲಸಗಳು ಸುಗಮವಾಗಲಿದೆ
- ಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಿಲ್ಲ
- ಸೂಕ್ಷ್ಮ ಬುದ್ಧಿಯವರನ್ನು ವಿರೋಧ ಮಾಡಿಕೊಳ್ಳಬೇಡಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಮಾನಸಿಕ ಒತ್ತಡ ದೂರವಾಗಲಿದೆ
- ಕುಟುಂಬದವರ ಬಾಂಧವ್ಯ ಚೆನ್ನಾಗಿರಲಿ
- ವ್ಯಾವಹಾರಿಕವಾಗಿ ಕೆಲವು ದಾಖಲಾತಿಗಳ ಕೊರತೆಯಿಂದ ಸಮಸ್ಯೆ ಕಾಡಬಹುದು
- ಹವಾಮಾನದ ವೈಪರೀತ್ಯಕ್ಕೆ ಹೊಂದಿಕೊಳ್ಳಬೇಕು
- ದುಂದು ವೆಚ್ಚಕ್ಕೆ ಕಡಿವಾಣ ಹಾಕಿ
- ಮನಸ್ಸನ್ನು ಕೇಂದ್ರೀಕರಿಸಲು ಪ್ರಯತ್ನಿಸಿ ಶುಭವಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮೀನಾ

- ಆದಷ್ಟು ಬೇಗ ನಿಮ್ಮೆಲ್ಲ ಕೆಲಸಗಳನ್ನು ಪೂರೈಸಿಕೊಳ್ಳಿ
- ವ್ಯಾವಹಾರಿಕ ವಿಚಾರದಲ್ಲಿ ಭಾವುಕತೆ ಬೇಡ
- ಉದ್ಯೋಗದ ವಿಚಾರದಲ್ಲಿ ಕಷ್ಟವಿದೆ
- ಲಾಭ ಪಡೆಯುತ್ತೀರಿ ಸಮಾಧಾನವಿಲ್ಲ
- ಆಸೆಗಳು ಈಡೇರದೆ ಬೇಸರ ಹೊಂದುತ್ತೀರಿ
- ಮಾನಸಿಕ ಉದ್ವೇಗ ಬೇಡ ತಾಳ್ಮೆ ಇರಲಿ
- ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ