ನಿಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ಸಾಬೀತಾಗಲಿದೆ
ವಿದ್ಯಾರ್ಥಿಗಳು ಏಕಮನಸ್ಸಿನಿಂದ ಅಭ್ಯಾಸ ನಡೆಸಬೇಕು
ದೊಡ್ಡ ಕೆಲಸವನ್ನ ಆರಂಭಿಸಲು ಮನಸ್ಸು ಮಾಡಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ

- ಸಾರ್ವಜನಿಕವಾದ ಯಾವುದೇ ಜವಾಬ್ದಾರಿ ಬೇಡ
- ಆಲಸ್ಯ ನಿಮ್ಮನ್ನು ಕಾಡಬಹುದು
- ಪ್ರಮುಖ ಕೆಲಸಗಳ ಚಿಂತನೆ ನಡೆಸುತ್ತೀರಿ
- ಕನಸು ನನಸಾಗಲಿ ಅಂತ ಶ್ರಮ ಪಡುತ್ತೀರಿ
- ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಸಹೋದ್ಯೋಗಿಗಳ ಬೆಂಬಲ ಸಿಗಲಿದೆ
- ಇಂದು ಪ್ರಯಾಣದ ಸಾಧ್ಯತೆಯಿದೆ
- ಆತ್ಮವಿಶ್ವಾಸ ನಿಮಗೆ ಜಯವನ್ನು ತರಲಿದೆ
- ನಿಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ಸಾಬೀತಾಗಲಿದೆ
- ಮಾನಸಿಕವಾದ ನೆಮ್ಮದಿ ಸಿಗಲಿದೆ
- ಮಕ್ಕಳಿಗೆ ತಿಳುವಳಿಕೆ ಹೇಳುವುದಕ್ಕೆ ಮುಂದಾಗುತ್ತೀರಿ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಉದ್ಯೋಗದಲ್ಲಿ ಪ್ರಾಬಲ್ಯ ಹೆಚ್ಚಾಗಬಹುದು
- ನಿಮ್ಮ ದಕ್ಷತೆಯಿಂದ ಎಲ್ಲರನ್ನು ಮೆಚ್ಚಿಸುತ್ತೀರಿ
- ಸಂಬಂಧಿಕರು ನಿಮ್ಮನ್ನು ಹೊಗಳುತ್ತಾರೆ
- ಕೆಲವು ನಿರ್ಧಾರದಿಂದ ಶಾಶ್ವತ ಅನುಕೂಲತೆಗಳಿವೆ
- ಮಕ್ಕಳ ಬಗ್ಗೆ ಚಿಂತನೆ ಮಾಡಿ
- ಆತುರವಾದ ನಿರ್ಧಾರಗಳು ಬೇಡ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ

- ಇಷ್ಟವಾದ ಕೆಲಸ ಪೂರೈಸಿ ಸಮಾಧಾನ ಹೊಂದುತ್ತೀರಿ
- ವ್ಯವಹಾರಿಕವಾಗಿ ಜಯ ಅತೀವ ಸಂತಸ
- ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ
- ವೈದ್ಯಕೀಯ ರಂಗದವರಿಗೆ ಸವಾಲು ಜಯ
- ಅತಿಯಾದ ಪರಿಶ್ರಮದಿಂದ ಆಯಾಸ ಆದರೆ ಸಮಾಧಾನ ವಿರುತ್ತದೆ
- ಇಂದು ತೋರಿಕೆಯ ಕೆಲಸಗಳು ಬೇಡ
- ನರಸಿಂಹನನ್ನು ಆರಾಧನೆ ಮಾಡಿ
ಸಿಂಹ

- ಇಂದು ಹಣ ಹೂಡಿಕೆ ಅಥವಾ ನೇರ ನಗದು ವ್ಯವಹಾರ ಬೇಡ
- ಬೇರೆಯವರಿಗೆ ಸಲಹೆಗಳನ್ನ ನೀಡಬೇಡಿ
- ಆತ್ಮವಿಶ್ವಾಸ ಬೇಕು ಆದರೆ ಅತಿಯಾಗಬಾರದು
- ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಬಹುದು
- ನಿಮ್ಮ ನಿರ್ಧಾರಗಳಿಗೆ ಪುಷ್ಟಿಯನ್ನ ಕೊಡಿ
- ವಿದ್ಯಾರ್ಥಿಗಳು ಏಕಮನಸ್ಸಿನಿಂದ ಅಭ್ಯಾಸ ನಡೆಸಬೇಕು
- ಶಿವಾರಾಧನೆ ಮಾಡಿ
ಕನ್ಯಾ

- ಇಂದು ಭಾವನಾತ್ಮಕ ಶಕ್ತಿ ಹೆಚ್ಚಾಗಬಹುದು
- ಬಂಧುಗಳಲ್ಲಿ ಪ್ರೀತಿ ಕಾಣಲು ಅವಕಾಶವಿದೆ
- ಹೊಸ ವಾಹನ ಖರೀದಿಯ ಬಗ್ಗೆ ಚಿಂತಿಸುತ್ತೀರಿ
- ದೊಡ್ಡ ಕೆಲಸವನ್ನ ಆರಂಭಿಸಲು ಮನಸ್ಸು ಮಾಡಬಹುದು
- ಇಂದು ಹಣದ ಸಮಸ್ಯೆ ಬಗೆಹರಿಯಬಹುದು
- ಬದಲಾವಣೆಗೆ ಪ್ರಯತ್ನ ಮಾಡುತ್ತೀರಿ ಆದರೆ ನಿರಾಸೆಯಾಗಬಹುದು
- ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ
ತುಲಾ

- ಇಂದು ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನು ನಂಬಬೇಡಿ
- ಮಾಡುವ ಕೆಲಸಗಳಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು
- ಮಕ್ಕಳಿಗೆ ಪ್ರೋತ್ಸಾಹ ನೀಡಿ ಯಶಸ್ಸಿದೆ
- ಹೆಚ್ಚು ಶ್ರಮದಿಂದ ಕಾರ್ಯನಿರ್ವಹಿಸುತ್ತೀರಿ
- ಇಂದು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯಿರಲಿ
- ಇಂದು ಒತ್ತಡ ಮತ್ತು ಕೋಪ ಎರಡು ಕಡಿಮೆಯಿರಲಿ
- ದುರ್ಗಾರಾಧನೆ ಮಾಡಿ
ವೃಶ್ಚಿಕ

- ಇಂದು ಮನೆಯಲ್ಲಿ ಶಿಸ್ತುಬದ್ಧ ವಾತಾವರಣ ಇರುವುದಿಲ್ಲ
- ಪ್ರಯಾಣದಿಂದ ಮನಸ್ಸಿಗೆ ಹಿತ ಉಂಟಾಗಬಹುದು
- ವಸ್ತುವನ್ನ ಕಳೆದುಕೊಳ್ಳುವ ಸಾಧ್ಯತೆಯಿದೆ
- ನಿಮ್ಮ ಪ್ರತಿಭೆಗೆ ಪುರಸ್ಕಾರದ ಸೂಚನೆಯಿದೆ
- ಹೊಸ ವ್ಯಾಪಾರ, ವ್ಯವಹಾರಕ್ಕೆ ಅವಕಾಶಗಳಿವೆ
- ಇಂದು ನಿಮ್ಮ ಬೆಂಬಲಕ್ಕೆ ಬೇರೆಯವರು ಕಾಯುತ್ತಾರೆ
- ನವಗ್ರಹರ ಆರಾಧನೆ ಮಾಡಿ
ಧನುಸ್ಸು

- ಇಂದು ಕುಟುಂಬದಲ್ಲಿ ಹೆಚ್ಚಿನ ಒತ್ತಡಯಿರಬಹುದು
- ಸಂಬಂಧಿಕರು ಮನೆಗೆ ಆಗಮಿಸಬಹುದು ಅದರಿಂದ ಸಂತಸವಾಗಬಹುದು
- ಅಸೂಯೆ ಭಾವನೆಗಳಿಂದ ಗೌರವ ಕಳೆದುಕೊಳ್ಳುತ್ತೀರಿ
- ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ
- ಕೆಲವು ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಒಳ್ಳೆಯದು
- ವಿವಾದಗಳಿಗೆ ಕಾರಣವಾಗುತ್ತೀರಿ ಅದನ್ನ ಇಂದು ತಪ್ಪಿಸಿ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಮಕರ

- ಕಾರ್ಯಕ್ಷೇತ್ರದಲ್ಲಿ ಸುಧಾರಣೆ ಕಾಣುತ್ತೀರಿ
- ಇಂದು ವಿನಾಕಾರಣ ಖರ್ಚು, ದುಂದು ವೆಚ್ಚ ಅದಕ್ಕೆ ಕಡಿವಾಣ ಹಾಕಿ
- ದಿನಚರಿಯಲ್ಲಿ ಬದಲಾವಣೆ ಕಾಣಬಹುದು
- ಸಾಧಕರ ಭೇಟಿಗೆ ಅವಕಾಶವಿದೆ
- ಇಂದು ವಿವಾದಾತ್ಮಕ ಹೇಳಿಕೆಗಳನ್ನು ತಪ್ಪಿಸಿ
- ಭಯದಿಂದ ಬದುಕುವ ಪರಿಸ್ಥಿತಿಯನ್ನ ಮಾಡಿಕೊಳ್ಳಬೇಡಿ
- ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ಕುಂಭ

- ದೊಡ್ಡ ಕಾರ್ಯಗಳನ್ನ ಮಾಡುವ ಆಸೆ ಹುಟ್ಟಬಹುದು
- ಇಂದು ಅಧ್ಯಯನಕ್ಕೆ ಆದ್ಯತೆ ನೀಡಿ
- ದೂರದ ಪ್ರಯಾಣದ ಸಾಧ್ಯತೆಯಿದೆ
- ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
- ಇಂದು ಮಕ್ಕಳ ಸಹಕಾರವಿರುತ್ತದೆ
- ಇಂದು ಕೌಟುಂಬಿಕವಾದ ಜಗಳಕ್ಕೆ ತೆರೆ ಎಳೆಯಿರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮೀನ

- ಉದ್ಯೋಗದಲ್ಲಿ ಸಮಸ್ಯೆ ಅಥವಾ ತೊಂದರೆ ಸಾಧ್ಯತೆಯಿದೆ
- ಇಂದು ಆರೋಗ್ಯ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
- ಅನುಪಯುಕ್ತ ಚಟುವಟಿಕೆಗಳಲ್ಲಿ ಹಣವ್ಯಯ್ಯ ಮಾಡಬಹುದು
- ಅಪರಿಚಿತರೊಂದಿಗೆ ಕ್ಷುಲಕ ಕಾರಣಕ್ಕೆ ಜಗಳವಾಗಬಹುದು
- ವಿವಾದಾತ್ಮ ವಿಚಾರಗಳ ಕಡೆ ಆಸಕ್ತಿ ಹೆಚ್ಚಾಗಬಹುದು
- ಬೇರೆಯವರ ವಿಷಯಕ್ಕೆ ಹೋಗದಿದ್ರೆ ಕ್ಷೇಮ
- ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ