ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ
ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು
ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ

- ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸುತ್ತೀರಿ
- ನಿಮ್ಮ ನಿರ್ಧಾರಗಳನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ
- ಅಗತ್ಯವಿರುವ ಕೆಲಸ ವಿಳಂಬವಾಗಬಹುದು
- ಬಂಧುಗಳ ಜೊತೆಯಲ್ಲಿ ಯಾವುದೇ ವ್ಯವಹಾರ ಬೇಡ
- ಆರ್ಥಿಕವಾಗಿ ಸುಧಾರಿಸುವ ಸೂಚನೆ ಇದೆ
- ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ
- ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಚಿಂತನೆಯನ್ನು ನಡೆಸಬೇಕಾಗಬಹುದು
- ವಿವಾಹ ಅಪೇಕ್ಷಿಗಳಿಗೆ ಕುತೂಹಲ ಇರುವ ದಿನ
- ಆಸ್ತಿಯ ವಿಷಯ ಲಾಭ ತರಬಹುದು
- ಮಕ್ಕಳ ಪ್ರಗತಿಯಿಂದ ಉತ್ಸುಕರಾಗುತ್ತೀರಿ
- ವಿದ್ಯಾರ್ಥಿಗಳು ಅಧ್ಯಯನದಲ್ಲಿ ವಿಶೇಷ ಕಾಳಜಿ ವಹಿಸಬೇಕು
- ಯಾವುದೇ ರೀತಿಯ ಸಾಲದ ವ್ಯವಹಾರ ಬೇಡ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಮನೆಯಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು
- ನಿಮ್ಮ ವರ್ತನೆಯಿಂದ ಬೇರೆಯವರಿಗೆ ಕೋಪ ಬರಬಹುದು
- ಕಾನೂನಾತ್ಮಕ ಹೋರಾಟದಲ್ಲಿ ಎಚ್ಚರಿಕೆವಹಿಸಿ
- ಸಾಮಾಜಿಕ ಹೇಳಿಕೆಗಳು ಸರಿಯಾಗಿರಬೇಕು
- ಯಾವುದೇ ರೀತಿಯ ಆತುರದ ನಿರ್ಧಾರಗಳು ಬೇಡ
- ವೈಯಕ್ತಿಕ ವಿಚಾರಕ್ಕೆ ಕೆಲವರು ಅಡ್ಡಿ ಪಡಿಸಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ಕಟಕ

- ಕೆಲಸದ ಸ್ಥಳದಲ್ಲಿ ಹೊಸಬರ ಪರಿಚಯ ಆಗುವುದರಿಂದ ಲಾಭವಿದೆ
- ಮಕ್ಕಳ ಜೊತೆ ಉತ್ತಮವಾದ ಬಾಂಧವ್ಯದಿಂದ ಸಂತಸ ಆಗಲಿದೆ
- ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರೈಸಬಹುದು
- ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
- ವ್ಯಾವಹಾರಿಕವಾಗಿ ಸಲುಗೆ ಬೇಡ ನಷ್ಟ ಆಗಲಿದೆ
- ಅಪರಿಚಿತರು ವಂಚಿಸಬಹುದು ಎಚ್ಚರವಹಿಸಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ

- ಮನೆಯ ವಾತಾವರಣ ಆನಂದ ತರಲಿದೆ
- ಅನುಪಯುಕ್ತವಾದ ವ್ಯವಹಾರದಲ್ಲಿ ತೊಡಗದಿರಿ
- ಬೇರೆಯವರಿಂದ ಬರಬೇಕಾದ ಬಾಕಿ ಇಂದು ವಸೂಲಾಗುತ್ತದೆ
- ಬೇರೆಯವರ ಜವಾಬ್ದಾರಿ ನಿಮಗೆ ಬೇಡ
- ನಿಮ್ಮ ಅಸಮಾಧಾನ ಹೊರಹಾಕಬೇಡಿ
- ಆರ್ಥಿಕ ಅನುಕೂಲವಿದೆ ಸಂತಸ ಆಗಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ನಿರುದ್ಯೋಗಿಗಳಿಗೆ ಸಿಹಿಸುದ್ದಿ ಸಿಗಲಿದೆ
- ಕೆಲಸದ ಬಗ್ಗೆ ಗೌರವ ಮತ್ತು ನಂಬಿಕೆಗಳಿರಬೇಕು
- ಧನಾತ್ಮಕ ಚಿಂತನೆ ನಿಮಗೆ ಪುಷ್ಟಿ ನೀಡಲಿದೆ
- ಹೊಸ ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಿ
- ಬಹಳಷ್ಟು ಕಲಿಯಲು ಅವಕಾಶಗಳಿವೆ
- ವೈವಾಹಿಕ ಅಥವಾ ಸಾಂಸಾರಿಕ ಜೀವನ ಜಿಗುಪ್ಸೆ ತರಬಹುದು
- ಲಕ್ಷ್ಮಿನಾರಾಯಣನನ್ನು ಪ್ರಾರ್ಥನೆ ಮಾಡಿ
ತುಲಾ

- ನಿಮ್ಮ ಕೆಲಸದ ಬಗ್ಗೆ ಅಸಮಾಧಾನವಿರುತ್ತದೆ
- ಅನಗತ್ಯ ವಿಚಾರಗಳು ಬೇಡವೇ ಬೇಡ
- ಆಸ್ತಿ ವಿಚಾರದಲ್ಲಿ ಬುದ್ದಿವಂತಿಕೆಯನ್ನು ತೋರಿಸಿ
- ಅತಿಯಾದ ಒತ್ತಡದಿಂದ ಬಳಲುತ್ತೀರಿ
- ಹಣಕ್ಕೆ ಕೊರತೆ ಇಲ್ಲ ಆದರೆ ಮಾನಸಿಕವಾಗಿ ಸಮಾಧಾನ ಇರಬೇಕು
- ಬಂಧುಗಳಲ್ಲಿ ವಿಶೇಷವಾದ ಬೆಳವಣಿಗೆ ಇದೆ ಸಂತಸವನ್ನು ಕೊಡಲಿದೆ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ

- ಕೆಲವು ಬದಲಾವಣೆಗೆ ಚಿಂತಿಸುತ್ತೀರಿ ಆದರೆ ನಿರಾಸೆ ಆಗಲಿದೆ
- ವಿವಾಹ ವಿಚಾರದಲ್ಲಿ ಕೆಲವು ಗೊಂದಲಗಳಿರುತ್ತವೆ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ನಿಮ್ಮ ಪರಿಶ್ರಮ ವ್ಯರ್ಥ ಅನ್ನುವ ಅನುಭವ ಬರಲಿದೆ
- ಹಣಕ್ಕೆ ಕೊರತೆ ಇಲ್ಲ ಸ್ವತಂತ್ರವಿಲ್ಲ
- ಸಹೋದರ ವರ್ಗದಿಂದ ಉತ್ತಮವಾದ ಸಲಹೆ ಸಿಗಬಹುದು
- ಲಕ್ಷ್ಮಿನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ
ಧನುಸ್ಸು

- ತಾಳ್ಮೆಯಿಂದ ವರ್ತಿಸಿ ಒಳ್ಳೆಯದಿದೆ
- ಮಾತಿನ ಬಗ್ಗೆ ನಿಗಾ ಇರಲಿ
- ವ್ಯಕ್ತಿತ್ವವನ್ನು ವೃದ್ಧಿ ಪಡಿಸಿಕೊಳ್ಳಲು ಪ್ರಯತ್ನಿಸಿ
- ಅಪಾಯಗಳನ್ನು ತಪ್ಪಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
- ವ್ಯಾವಹಾರಿಕವಾಗಿ ಅಸಮಾಧಾನದಿಂದ ಬೇಸರ
- ನಿಮ್ಮ ವ್ಯಂಗ್ಯದಿಂದಲೇ ನೀವು ಮೋಸ ಹೋಗುತ್ತೀರಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಕರ

- ಪ್ರೇಮಿಸಿ ಮದುವೆಯಾದವರಿಗೆ ಕಷ್ಟದ ಪರಿಸ್ಥಿತಿ
- ಇಂದು ಆರೋಗ್ಯ ಹದಗೆಡಬಹುದು
- ಜನರು ಪ್ರೀತಿಸುತ್ತಾರೆ ಅದನ್ನ ಉಳಿಸಿಕೊಳ್ಳಬೇಕು
- ನಿಮ್ಮ ಕರ್ತವ್ಯದ ಬಗ್ಗೆ ನಿಗಾಇರಲಿ
- ಕೆಲವು ಪ್ರಮುಖವಾದ ಕೆಲಸಗಳಿಗೆ ಶುಭವಿದೆ
- ಉನ್ನತವಾದ ಶಿಕ್ಷಣಕ್ಕೆ ಅವಕಾಶಗಳಿವೆ
- ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ಈಗಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳಿ
- ದೊಡ್ಡವರ ಜೊತೆ ವಾದ ಬೇಡ
- ಸ್ಥಗಿತಗೊಂಡಿರುವ ಕೆಲಸದ ಬಗ್ಗೆ ಚಿಂತಿಸಿ
- ನಿಮ್ಮ ಸಂತೋಷ ದುಃಖ ಒಂದೇ ರೀತಿ ಇರಬಹುದು
- ಕೆಲವು ಬೇಡದ ಚಟುವಟಿಕೆಗಳಿಂದ ದೂರವಿರಿ
- ಮಕ್ಕಳಿಂದ ಯೋಚನೆ ಹೆಚ್ಚಾಗಬಹುದು
- ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಮೀನ

- ಇಂದು ವಿದ್ಯಾರ್ಥಿಗಳಿಗೆ ಅನುಕೂಲವಿದೆ
- ಸಾಂಸಾರಿಕವಾದ ಬಿಕ್ಕಟ್ಟು ಹೆಚ್ಚಾಗಬಹುದು
- ಒಳ್ಳೆಯ ಸುದ್ದಿಗಳು ನಿಮಗೆ ಬರಲಿದೆ
- ದೂರದ ಪ್ರಯಾಣದ ಸಿದ್ಧತೆಗೆ ಅವಕಾಶವಿದೆ
- ವ್ಯಾವಹಾರಿಕ ನಿರ್ಧಾರದಿಂದ ಸಂತಸ ಆಗಲಿದೆ
- ಮಕ್ಕಳ ಸಹಕಾರ ಖುಷಿ ಕೊಡಲಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ