ನಿಮ್ಮ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ನಡೆಯಲಿದೆ
ಮನೆಯಲ್ಲಿ ತುಂಬಾ ಹೊಂದಾಣಿಕೆ ವಾತಾವರಣ
ಆಸೆಗಳು ಈಡೇರದೆ ಮನಃಶಾಂತಿ ಕೆಟ್ಟು ಹೋಗಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ

- ಮಕ್ಕಳಿಂದ ಸಹಾಯವನ್ನು ಬಯಸಿ ನಿರಾಸೆಯನ್ನು ಹೊಂದುತ್ತೀರಿ
- ಅನಾವಶ್ಯಕವಾಗಿ ಮಾತಿಗೆ ಇಳಿಯುತ್ತೀರಿ
- ಕೆಲಸ ಕಾರ್ಯಗಳ ಬಗ್ಗೆ ಜವಾಬ್ದಾರಿ ಕುಂಠಿತ ಆಗಲಿದೆ
- ಧನಹಾನಿಯ ಭೀತಿ ನಿಮ್ಮನ್ನು ಕಾಡಬಹುದು
- ಆಸೆಗಳು ಈಡೇರದೆ ಮನಃಶಾಂತಿ ಕೆಟ್ಟು ಹೋಗಲಿದೆ
- ಮನೆಯಲ್ಲಿ ಹೆಂಗಸರು ಸಮಾಧಾನವಾಗಿರುತ್ತಾರೆ
- ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ವ್ಯಾವಹಾರಿಕವಾಗಿ, ಕಾರ್ಯಕ್ಷೇತ್ರದಲ್ಲಿ ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತೀರಿ
- ಸ್ಥಗಿತಗೊಂಡ ಕೆಲಸ ಆಗಬಹುದೆಂಬ ನಂಬಿಕೆ ಇರಲಿದೆ
- ಮನಸ್ಸಿನ ಆತಂಕ ದೂರ ಆಗಬಹುದು
- ಮನೆಯಲ್ಲಿ ಒಗ್ಗಟ್ಟಿನ ಬಲ ಪ್ರದರ್ಶನ ಆಗಲಿದೆ
- ಪ್ರಯಾಣದ ಅನಿವಾರ್ಯತೆ ಇರಲಿದೆ
- ವಾಹನ ದುರಸ್ಥಿಯಿಂದ ಬೇಸರ ಆಗಲಿದೆ
- ಶಕ್ತಿದೇವತಾ ಪ್ರಾರ್ಥನೆ ಮಾಡಿ
ಮಿಥುನ

- ಸ್ಥಿರಾಸ್ತಿಯ ಲಾಭದ ಸೂಚನೆ ಇದೆ
- ಮಂಗಳ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ
- ಮಾನಸಿಕವಾದ ಸ್ಥಿಮಿತತೆ ಕಾಪಾಡಿಕೊಳ್ಳಿ
- ನ್ಯಾಯಕ್ಕಾಗಿ ಹೋರಾಟ ಮಾಡುವುದರಿಂದ ಫಲ ಸಿಗಲಿದೆ
- ನಿಮ್ಮ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ನಡೆಯಲಿದೆ
- ಹಲವರಿಗೆ ನಿಮ್ಮಿಂದ ಸಹಾಯವಾಗಬಹುದು
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ಕಟಕ

- ಹಲವಾರು ಜನ ನಿಮ್ಮಿಂದ ಉಪಕಾರವನ್ನು ಪಡೆಯುತ್ತಾರೆ
- ದೊಡ್ಡ ಉದ್ಯಮಿಗಳಿಗೆ ಅಪಾಯವಿದೆ
- ನಿಮ್ಮ ಸಾಮರ್ಥ್ಯದಲ್ಲಿ ನೀವು ನಂಬಿಕೆ ಇಡಿ
- ಸ್ನೇಹಿತರಿಂದ ನಿಮ್ಮ ಗೌರವ ಹೆಚ್ಚಾಗಬಹುದು
- ಮನೆಯಲ್ಲಿ ತುಂಬಾ ಹೊಂದಾಣಿಕೆ ವಾತಾವರಣ
- ದೊಡ್ಡ ಯೋಜನೆಗಳು ನಿಮ್ಮ ಮುಂದೆ ಬರಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ

- ಚರ್ಚೆಗಳಲ್ಲಿ ಭಾಗಿಗಳಾಗಿ ಜಯಸಾಧನೆ ಮಾಡುತ್ತೀರಿ
- ಚುರುಕುತನದಿಂದಲೇ ನೀವು ಪ್ರಸಿದ್ದಿಯಾಗಬಹುದು
- ಬುದ್ದಿವಂತಿಕೆಯನ್ನು ಒಳ್ಳೆಯದಕ್ಕೆ ವಿನಿಯೋಗಿಸಿ
- ಮಿತ್ರರಿಗೆ ಸಲಹೆ ಕೊಡುವುದರಿಂದ ನಿಮಗೂ ಅನುಕೂಲ ಆಗಲಿದೆ
- ಆರೋಗ್ಯ ವ್ಯತ್ಯಾಸ ಆಗದಂತೆ ಗಮನಿಸಿಕೊಳ್ಳಿ
- ಶತ್ರುಗಳು ರಾಜಿಯಾಗಲು ಕಾಯಬಹುದು
- ದುರ್ಗಾರಾಧನೆ ಮಾಡಿ
ಕನ್ಯಾ

- ಆರ್ಥಿಕವಾಗಿ ಸ್ವಲ್ಪ ಸಮಸ್ಯೆ ಮಾಡಿಕೊಳ್ಳುತ್ತೀರಿ
- ವಾಹನ ಅಪಘಾತದಿಂದ ಮಾನಸಿಕ ನೆಮ್ಮದಿಗೆ ಭಂಗ ಆಗಬಹುದು
- ಮಕ್ಕಳು ಸಹಕರಿಸುವುದಿಲ್ಲ ಬೇಸರ ಆಗಲಿದೆ
- ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ
- ಬೇಡದ ವಿಚಾರಗಳಲ್ಲಿ ಆಸಕ್ತಿ ಬೇಡ
- ತಾಳ್ಮೆ ಇರಲಿ ಜಯವಿದೆ
- ನವಗ್ರಹರನ್ನು ಪ್ರಾರ್ಥನೆ ಮಾಡಿ
ತುಲಾ

- ನಿಮ್ಮ ಗೌರವಕ್ಕೆ ಧಕ್ಕೆ ತರಲು ಹಲವಾರು ಜನ ಕಾಯುತ್ತಿರಬಹುದು
- ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡಲಿದೆ
- ಸಂಶೋಧನಾ ಕಾರ್ಯದಿಂದ ಮನಸ್ಸಿಗೆ ಸಮಾಧಾನ
- ದೂರದ ಪ್ರಯಾಣದಿಂದ ಶುಭ ಮತ್ತು ಲಾಭವಿದೆ
- ಮನೆಯಲ್ಲಿ ಅನ್ಯೋನ್ಯತೆಯಿಂದ ಸಂತೋಷ ಆಗಲಿದೆ
- ಮಹತ್ತರ ಕಾರ್ಯಗಳಿಗಾಗಿ ಯೋಜನೆ ರೂಪಿಸುತ್ತೀರಿ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಅನಗತ್ಯ ಖರ್ಚು ಮನಸ್ಸಿಗೆ ಸಮಾಧಾನ ಇಲ್ಲದೇ ಇರುವುದು
- ಕಳ್ಳತನ ಅಥವಾ ಕಳ್ಳರ ಭಯ ಕಾಡಬಹುದು
- ಮನೆಯಲ್ಲಿ ಯಾರಿಗೂ ಹೊಂದಾಣಿಕೆ ಇರುವುದಿಲ್ಲ
- ಮದುವೆಯ ವಿಚಾರದಿಂದ ಮನಸ್ತಾಪ
- ಸಹೋದರ ವರ್ಗದ ಮಾತುಕತೆಯಿಂದ ಸ್ವಲ್ಪ ಸಮಾಧಾನ
- ಒಂಟಿತನ ಹೆಚ್ಚಾಗಿ ಕಾಡಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ಆಲಸ್ಯ ಮನೋಭಾವದಿಂದ ಸಮಯ ವ್ಯರ್ಥ ಆಗಲಿದೆ
- ಬೇರೆಯವರಿಗೆ ಮಾಡಿದ ಉಪಕಾರಗಳು ಫಲಿಸುವುದಿಲ್ಲ
- ದೂರದ ಪ್ರಯಾಣಕ್ಕೆ ಯೋಜನೆ ಮಾಡುತ್ತೀರಿ
- ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಕಾಳಜಿವಹಿಸಿ
- ಮಕ್ಕಳಿಂದ ಹಲವಾರು ಯೋಜನೆಗಳು ಶುಭ ಆಗಲಿದೆ
- ಗೆಳೆಯರಿಂದ ಸಹಾಯ ಆಗಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಕರ

- ವೃತ್ತಿಗೆ ಪೂರಕವಾದ ಅನುಕೂಲತೆಗಳಿರಲಿದೆ
- ಹಣಕಾಸಿನ ವ್ಯವಹಾರ ಕೈಹಿಡಿಯಲಿದೆ
- ಯೋಗ್ಯರನ್ನು ದುರುಪಯೋಗ ಮಾಡಿಕೊಳ್ಳಬೇಡಿ
- ಕೆಲಸದ ಒತ್ತಡದಿಂದ ಮನಸ್ಸು ಹತೋಟಿಯಲ್ಲಿರುವುದಿಲ್ಲ
- ವಾಹನ ದುರಸ್ಥಿಯಿಂದ ಬೇಸರ ಆಗಲಿದೆ
- ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
- ಹಣಕಾಸು ಸಕಾಲಕ್ಕೆ ಸಿಗುವುದಿಲ್ಲ
- ದುರ್ಗಾ ಪ್ರಾರ್ಥನೆ ಮಾಡಿ
ಕುಂಭ

- ಹಣಕಾಸು ಸಕಾಲಕ್ಕೆ ಸಿಗುವುದಿಲ್ಲ
- ಕೆಲಸ ಕಾರ್ಯಗಳು ಮಂದಗತಿ ಪಡೆಯಲಿದೆ
- ಮಾತೆಯರಿಗೆ ಉದ್ಯೋಗದಿಂದ ಲಾಭವಿದೆ
- ಉದ್ಯಮಿಗಳಿಗೆ ಹಲವಾರು ರೀತಿಯ ಸವಾಲುಗಳು ಎದುರಾಗಬಹುದು
- ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ
- ಪ್ರೇಮಿಗಳು ಕಷ್ಟವನ್ನು ದಾಟಿ ದಡ ಸೇರುವ ದಿನ
- ಕುಬೇರಲಕ್ಷ್ಮಿಯನ್ನು ಆರಾಧನೆ ಮಾಡಿ
ಮೀನಾ

- ನಿರ್ಧಾರ ಗಟ್ಟಿಯಾಗಿದ್ದರೆ ನಿಮ್ಮ ವ್ಯವಹಾರದಲ್ಲಿ ಅನುಕೂಲ
- ಭಯದ ವಾತಾವರಣ ಕಾಡಲಿದೆ
- ವಿರೋಧಿಗಳನ್ನು ಹೆಚ್ಚು ಮಾಡಿಕೊಳ್ಳುತ್ತೀರಿ
- ಮಾನಸಿಕವಾಗಿ ದುರ್ಬಲರಾಗುತ್ತೀರಿ ಎಚ್ಚರಿಕೆವಹಿಸಿ
- ಕೈ ಹಾಕಿದ ಕೆಲಸಕ್ಕೆ ಮುಕ್ತಿ ಸಿಗುವುದಿಲ್ಲ
- ಮನೆಯವರ ಸಹಕಾರ ಇರುವುದರಿಂದ ನೆಮ್ಮದಿ ಕಾಣುತ್ತೀರಿ
- ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ