ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು
ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು
ಪ್ರತಿಭೆಗೆ ತಕ್ಕ ಪ್ರತಿಫಲ ಸಿಗದೇ ಬೇಸರ ಉಂಟಾಗಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ

- ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಲ್ಲಿ ನಿರಾಸಕ್ತಿ ತೋರಬೇಡಿ
- ಹಣಕಾಸಿನ ತೊಂದರೆ ಕಾಣಬಹುದು
- ನಿಮ್ಮ ಅಭ್ಯುದಯದ ಬಗ್ಗೆ ಗಮನಹರಿಸಿ
- ದ್ರವ್ಯ ಲಾಭ, ಉನ್ನತ ಸ್ಥಾನಮಾನ ದೊರಕಬಹುದು
- ಹಲವಾರು ಯೋಜನೆಗಳಿಗೆ ಪ್ರಯತ್ನಿಸುತ್ತೀರಿ ಸಫಲ ಕೂಡ ಆಗ್ತೀರಿ
- ಪ್ರೀತಿ ಪಾತ್ರರೊಂದಿಗೆ ಜಗಳಕ್ಕೆ ಅವಕಾಶವಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ

- ಉದ್ಯೋಗದಲ್ಲಿ ಸ್ವಲ್ಪ ಜವಾಬ್ದಾರಿಯಿರಲಿ
- ಮನೆಯಲ್ಲಿ ಹೊಂದಾಣಿಕೆಯಿರಲಿ
- ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಸರ್ಕಾರಿ ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ದಿನ
- ಮೇಲಾಧಿಕಾರಿಗಳ ಕಿರಿಕಿರಿ ಬೇಸರ ಉಂಟುಮಾಡಬಹುದು
- ಯಾವುದೇ ಕೆಲಸವನ್ನು ಅಲಕ್ಷ್ಯ ಮಾಡಬೇಡಿ
- ಶಿವಾರಾಧನೆ ಮಾಡಿ
ಮಿಥುನ

- ನಿಮ್ಮ ನಿರಂತರ ಪ್ರಯತ್ನದಿಂದ ಕಾರ್ಯ ಸಾಧನೆಯಾಗುತ್ತದೆ
- ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು
- ಶತ್ರುಕಾಟ ಹೆಚ್ಚಾಗಬಹುದು
- ಇಂದು ನಿರೀಕ್ಷೆಗಿಂತ ಹೆಚ್ಚು ಖರ್ಚಾಗಬಹುದು
- ನಿಮ್ಮ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
- ಆರ್ಥಿಕ ಪ್ರಗತಿ ಅದರಿಂದ ಸಮಾಧಾನ ಕೂಡವಾಗುತ್ತದೆ
- ಗಣಪತಿ ಪ್ರಾರ್ಥನೆ ಮಾಡಿ
ಕಟಕ

- ವೃತ್ತಿಕ್ಷೇತ್ರದಲ್ಲಿ ಯಶಸ್ಸಿಲ್ಲದೇ ಬೇಸರವಾಗಬಹುದು
- ನಿಮ್ಮ ಮಾತಿನ ಮೇಲೆ ಹಿಡಿತವಿರಲಿ
- ಮಾನಸಿಕ ಗೊಂದಲದ ನಿವಾರಣೆಗೆ ಪ್ರಯತ್ನ ಮಾಡಬಹುದು
- ಕೌಟುಂಬಿಕ ಸಮಸ್ಯೆ ಕಾಡಬಹುದು
- ವಿವಾದಗಳಿಂದ ದೂರವಿರಿ
- ಅಣ್ಣ, ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
- ಗೋ ಸೇವೆಯನ್ನ ಮಾಡಿ
ಸಿಂಹ

- ಹಿರಿಯರಿಂದ ಧನ ಸಹಾಯ ಸಿಗಬಹುದು
- ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗುವ ಸೂಚನೆಯಿದೆ
- ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ
- ಕಬ್ಬಿಣ ವ್ಯಾಪಾರಿಗಳಿಗೆ ಹೆಚ್ಚು ನಷ್ಟ ಉಂಟಾಗಬಹುದು
- ಇಂದು ರಾಜಕೀಯ ವಿಚಾರಗಳಿಂದ ದೂರವಿರಿ
- ದೂರದ ಪ್ರಯಾಣದಿಂದ ಸಂತಸ ಉಂಟಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಧಾರ್ಮಿಕ ಕಾರ್ಯಗಳನ್ನ ವಿರೋಧಿಸಬಹುದು
- ಪ್ರತಿಭೆಗೆ ತಕ್ಕ ಪ್ರತಿಫಲ ಸಿಗದೇ ಬೇಸರ ಉಂಟಾಗಬಹುದು
- ಇಂದು ಕುಟುಂಬದಲ್ಲಿ ಅಗೌರವ ಅನುಭವಿಸಬಹುದು
- ಅತಿಥಿಗಳ ಆಗಮನದಿಂದ ಬೇಸರವಾಗಬಹುದು
- ಮನೆಯಲ್ಲಿ ನಕಾರಾತ್ಮಕ ವಾತಾವರಣ ಇರುತ್ತದೆ
- ಬಂಧುಗಳ ಜೊತೆಯಲ್ಲಿ ವಿಶ್ವಾಸದಿಂದಿರಬೇಕು
- ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ
ತುಲಾ

- ಅಂದುಕೊಂಡ ಕೆಲಸ ಪರಿಪೂರ್ಣ ಆಗತ್ತೆ ಯಶಸ್ಸನ್ನು ಹೊಂದುತ್ತೀರಿ
- ವಾಹನದಿಂದ ಖರ್ಚು ಆಗಲಿದೆ
- ಸಮಾಧಾನವಾಗಿದ್ದ ಮನಸ್ಸಿಗೆ ಘಾಸಿಯಾಗಬಹುದು
- ಮನೆಯಲ್ಲಿ ಸಂಭ್ರಮದ ವಾತಾವರಣಕ್ಕೆ ಭಂಗ ಆಗಲಿದೆ
- ಚಿಂತಿಸಿದ ಕೆಲಸಗಳು ಸರಿಯಾಗುವುದಿಲ್ಲ
- ಹಣ ಮತ್ತು ವ್ಯವಹಾರದಲ್ಲಿ ಅನುಕೂಲವಿದೆ
- ಕುಲದೇವತಾ ಆರಾಧನೆ ಮಾಡಿ
ವೃಶ್ಚಿಕ

- ಮಾನಸಿಕವಾದ ನೆಮ್ಮದಿ ಸಿಗುವ ದಿನ
- ನಿಮ್ಮ ಕೆಲಸ ಕಾರ್ಯಗಳು ಈಡೇರಲಿದೆ
- ಪ್ರವಾಸ ಅಥವಾ ಪ್ರಯಾಣದಿಂದ ಸಂತೋಷ ಪಡುತ್ತೀರಿ
- ಆಲೋಚನೆ ಮಾಡಿ ಎಲ್ಲಾ ಕೆಲಸಗಳನ್ನು ಪೂರೈಸಿ
- ಮನೆಯವರ ಜೊತೆ ಹೊಂದಾಣಿಕೆ ಇರಲಿ
- ನಿಮ್ಮ ಅಭಿಪ್ರಾಯಕ್ಕೆ ಬೆಲೆ ಕಡಿಮೆ ಅದನ್ನ ಗಮನಿಸಿ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು

- ನೀವಂದುಕೊಂಡ ಕೆಲಸದಿಂದ ಸಮಾಧಾನ ಆಗಲಿದೆ
- ಮನೆಯಲ್ಲಿ ಜಗಳಕ್ಕೆ ಕಾರಣರಾಗಬೇಡಿ
- ಚಿಕ್ಕ ಮಕ್ಕಳಿಂದ ನಿಮಗೆ ಸಂತೋಷವಾಗಲಿದೆ
- ಹೊರಗಿನ ಆಹಾರದಿಂದ ಸಮಸ್ಯೆಯಾಗಬಹುದು
- ಸಹೋದರ ವರ್ಗದವರು ನಿಮ್ಮನ್ನ ಸಹಾಯ ಕೇಳಬಹುದು
- ಯಾರಿಗೂ ಕೂಡ ಯಾವ ಸಲಹೆಯನ್ನು ಕೊಡಬೇಡಿ ನಿಮಗೆ ಒಳ್ಳೆಯದು
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಮಕರ

- ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
- ಪ್ರಾಮಾಣಿಕವಾದ ಪ್ರಯತ್ನವಿರಲಿ ಯಶಸ್ಸಿದೆ
- ತಂದೆ ತಾಯಿಯವರ ಜೊತೆ ನಿಷ್ಠೂರರಾಗುತ್ತೀರಿ
- ಆಸ್ತಿಯ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಿ
- ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಆಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕುಂಭ

- ದಾಯಾದಿಗಳಲ್ಲಿ ವ್ಯಾವಹಾರಿಕವಾದ ಸಮಸ್ಯೆಯನ್ನು ಮಾಡಿಕೊಳ್ಳುತ್ತೀರಿ
- ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ
- ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದುತ್ತೀರಿ
- ರಾಜಕಾರಣಿಗಳಿಗೆ ಸಮಸ್ಯೆ ಉಂಟಾಗಬಹುದು
- ಮಾತೆಯರಿಗೆ ವಸ್ತ್ರಾಭರಣದ ಖರೀದಿ ಮಾಡುವುದರಿಂದ ಖುಷಿ ಆಗಲಿದೆ
- ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ ಗಮನಹರಿಸಿ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ

- ಬಂಧುಗಳನ್ನು ಭೇಟಿ ಆಗುವುದರಿಂದ ಸಂತೋಷ ಆಗಲಿದೆ
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಸಹೋದರರ ವಿಚಾರದಲ್ಲಿ ಅಸಮಾಧಾನ
- ಆಸ್ತಿಯ ಬಗ್ಗೆ ತುಂಬಾ ಚಿಂತಿಸುತ್ತೀರಿ
- ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ
- ಯಾವುದೇ ಅಸಂಬದ್ಧವಾದ ನಿರ್ಣಯಗಳು ಬೇಡ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ