newsfirstkannada.com

ಸಂಗೀತಾಗೆ ಕಾರ್ತಿಕ್ ಟಿಶ್ಯೂ ಪೇಪರ್ ಇದ್ದ ಹಾಗೆ- ವರ್ತೂರ್​ ಸಂತೋಷ್​ ಹೀಗೆ ಹೇಳಿದ್ದೇಕೆ?

Share :

08-11-2023

    ವರ್ತೂರು ಸಂತೋಷ್ ಮಾತು ಕೇಳಿ ಬಿದ್ದು ಬಿದ್ದು ನಕ್ಕ ತುಕಾಲಿ

    ಒಂದಲ್ಲಾ ಒಂದು ವಿಚಾರಕ್ಕೆ ಸಂಗೀತಾ ಹಾಗೂ ಕಾರ್ತಿಕ್​ ಜಗಳ

    ಸಂಗೀತಾರ ನಡೆಗೆ ಬೇಸರ ವ್ಯಕ್ತಪಡಿಸಿದ ಕಾರ್ತಿಕ್​ ಮಹೇಶ್​​

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್​ಬಾಸ್​. ಈ ಬಿಗ್​ಬಾಸ್​ ಸೀಸನ್ 10ರಲ್ಲಿ ಇಂದೆಂದಿಗೂ ನಡೆಯದ ಟ್ವಿಸ್ಟ್​ ಆ್ಯಂಡ್​ ಟರ್ನ್ ಈ ಸೀಸನ್​ನಲ್ಲಿ ನಡೆಯುತ್ತಿದೆ. ಬಿಗ್​​ಬಾಸ್​​ ಶುರುವಾಗಿದ್ದಾಗಿನಿಂದ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ​ಏನೋ ನಡೆಯುತ್ತಿದೆ ಎಂದು ಹೇಳಲಾಗಿತ್ತು.

ಅದೇ ರೀತಿ ​ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಪ್ರೀತಿ ಇದೆ ಎಂಬ ಫೋಟೋಗಳು ಸಹ ವೈರಲ್​ ಆಗಿತ್ತು. ಆದರೆ ದಿನ ಕಳೆದಂತೆ ಸಂಗೀತಾ ಹಾಗೂ ಕಾರ್ತಿಕ್​ ಮಧ್ಯೆ ಆಗಾಗ ಗಲಾಟೆ ನಡೆಯುತ್ತಲೆ ಇರುತ್ತದೆ. ಆದರೆ ಇದೀಗ ಸಂಗೀತಾ ತಮ್ಮ ಆಟವನ್ನು ಆಡುತ್ತಿದ್ದಾರೆ. ಕಾರ್ತಿಕ್​ ಸುಮ್ಮನೆ ಟಿಶ್ಯೂ ಪೇಪರ್ ಇದ್ದಾನೆ ಎಂಬ ಹೇಳಿಕೆಯನ್ನು ವರ್ತೂರ್​ ಸಂತೋಷ್ ನೀಡಿದ್ದಾರೆ.

ಹೌದು, ನಿನ್ನೆ ನಡೆದ ಬಿಗ್​ಬಾಸ್​ ಶೋನಲ್ಲಿ ಮುಂಜಾನೆ ಎಪಿಸೋಡ್​ನಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಬೆಡ್​ನಿಂದ ಒಟ್ಟಿಗೆ ಏಳುತ್ತಾರೆ. ಆಗ ಸಂಗೀತಾ ಅವರನ್ನು ಕಾರ್ತಿಕ್ ಮಾತನಾಡಿಸಲು ಪ್ರಯತ್ನಿಸುತ್ತಾರೆ. ಎಲ್ಲರೂ ಮಲಗಿದ್ದಾರೆ ಮಾತನಾಡಬೇಡ ಎಂದು ಕಾರ್ತಿಕ್​ಗೆ ಸಂಗೀತಾ ಸನ್ನೆ ಮಾಡುತ್ತಾರೆ. ಅಷ್ಟಾದರ ಕಾರ್ತಿಕ್​ ಮಾತನಾಡೋಕೆ ಶುರು ಮಾಡುತ್ತಾರೆ. ಇದು ಸಂಗೀತಾಗೆ ಕೋಪ ತರಿಸಿತು. ಅದೇ ಸಿಟ್ಟಿನಿಂದ ಬೆಡ್​ ರೂಮ್​ನಿಂದ ಸಂಗೀತಾ ಹೊರಟು ಹೋಗುತ್ತಾರೆ. ಆಗ ಸಂಗೀತಾರ ಈ ರೀತಿ ನಡೆಗೆ ಕಾರ್ತಿಕ್​​​ ತನಿಶಾ ಮುಂಚೆ ಬೇಸರ ಹೊರ ಹಾಕಿದ್ದಾರೆ.

ಇನ್ನೂ ಬೆಡ್​​ ರೂಮ್​​ನಲ್ಲಿ ಆದ ವಿಚಾರದ ಬಗ್ಗೆ ಕಾರ್ತಿಕ್​ ತನಿಶಾ ಮುಂದಿ ಈ ರೀತಿ ಹೇಳಿದ್ದಾರೆ. ಅವಳ ಪ್ರಕಾರ ಶ್ ಅಂದ ತಕ್ಷಣ ನಾನು ಸುಮ್ಮನಿರಬೇಕು. ಮಾತಾಡು ಅಂದ ಕ್ಷಣ ಮಾತಾಡಬೇಕು. ಇಷ್ಟೊಂದು ಡಾಮಿನೇಷನ್ ಆದರೆ ನಾನು ತಗೋಳೋದು ಇಲ್ಲ ಎಂದು ಸಂಗೀತಾ ಬಗ್ಗೆ ಕಾರ್ತಿಕ್ ಅವರು ತನಿಷಾ ಬಳಿ ಹೇಳಿದ್ದಾರೆ. ಇದನ್ನು ದೂರದಿಂದ ಗಮನಿಸಿದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕಾರ್ತಿಕ್​ ಹಾಗೂ ಸಂಗೀತಾ ಬಗ್ಗೆ ಮಾತಾಡಿದ್ದಾರೆ. ಸಂಗೀತಾ ಸ್ಟ್ರಾಂಗ್ ಆಗಿದ್ದಾರೆ. ಟಿಶ್ಯೂ ಪೇಪರ್​ ತರ ಹೀಗೆ ಹಾಗೆ ಒರೆಸಿಕೊಂಡು ಬಿಸಾಕುತ್ತಾಳೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ತಲೆ ಅಲ್ಲಾಡಿಸುತ್ತಾ ಬಿದ್ದು ಬಿದ್ದು ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಗೀತಾಗೆ ಕಾರ್ತಿಕ್ ಟಿಶ್ಯೂ ಪೇಪರ್ ಇದ್ದ ಹಾಗೆ- ವರ್ತೂರ್​ ಸಂತೋಷ್​ ಹೀಗೆ ಹೇಳಿದ್ದೇಕೆ?

https://newsfirstlive.com/wp-content/uploads/2023/11/bigg-boss-2023-11-08T104422.581.jpg

    ವರ್ತೂರು ಸಂತೋಷ್ ಮಾತು ಕೇಳಿ ಬಿದ್ದು ಬಿದ್ದು ನಕ್ಕ ತುಕಾಲಿ

    ಒಂದಲ್ಲಾ ಒಂದು ವಿಚಾರಕ್ಕೆ ಸಂಗೀತಾ ಹಾಗೂ ಕಾರ್ತಿಕ್​ ಜಗಳ

    ಸಂಗೀತಾರ ನಡೆಗೆ ಬೇಸರ ವ್ಯಕ್ತಪಡಿಸಿದ ಕಾರ್ತಿಕ್​ ಮಹೇಶ್​​

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್​ಬಾಸ್​. ಈ ಬಿಗ್​ಬಾಸ್​ ಸೀಸನ್ 10ರಲ್ಲಿ ಇಂದೆಂದಿಗೂ ನಡೆಯದ ಟ್ವಿಸ್ಟ್​ ಆ್ಯಂಡ್​ ಟರ್ನ್ ಈ ಸೀಸನ್​ನಲ್ಲಿ ನಡೆಯುತ್ತಿದೆ. ಬಿಗ್​​ಬಾಸ್​​ ಶುರುವಾಗಿದ್ದಾಗಿನಿಂದ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ​ಏನೋ ನಡೆಯುತ್ತಿದೆ ಎಂದು ಹೇಳಲಾಗಿತ್ತು.

ಅದೇ ರೀತಿ ​ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಪ್ರೀತಿ ಇದೆ ಎಂಬ ಫೋಟೋಗಳು ಸಹ ವೈರಲ್​ ಆಗಿತ್ತು. ಆದರೆ ದಿನ ಕಳೆದಂತೆ ಸಂಗೀತಾ ಹಾಗೂ ಕಾರ್ತಿಕ್​ ಮಧ್ಯೆ ಆಗಾಗ ಗಲಾಟೆ ನಡೆಯುತ್ತಲೆ ಇರುತ್ತದೆ. ಆದರೆ ಇದೀಗ ಸಂಗೀತಾ ತಮ್ಮ ಆಟವನ್ನು ಆಡುತ್ತಿದ್ದಾರೆ. ಕಾರ್ತಿಕ್​ ಸುಮ್ಮನೆ ಟಿಶ್ಯೂ ಪೇಪರ್ ಇದ್ದಾನೆ ಎಂಬ ಹೇಳಿಕೆಯನ್ನು ವರ್ತೂರ್​ ಸಂತೋಷ್ ನೀಡಿದ್ದಾರೆ.

ಹೌದು, ನಿನ್ನೆ ನಡೆದ ಬಿಗ್​ಬಾಸ್​ ಶೋನಲ್ಲಿ ಮುಂಜಾನೆ ಎಪಿಸೋಡ್​ನಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಬೆಡ್​ನಿಂದ ಒಟ್ಟಿಗೆ ಏಳುತ್ತಾರೆ. ಆಗ ಸಂಗೀತಾ ಅವರನ್ನು ಕಾರ್ತಿಕ್ ಮಾತನಾಡಿಸಲು ಪ್ರಯತ್ನಿಸುತ್ತಾರೆ. ಎಲ್ಲರೂ ಮಲಗಿದ್ದಾರೆ ಮಾತನಾಡಬೇಡ ಎಂದು ಕಾರ್ತಿಕ್​ಗೆ ಸಂಗೀತಾ ಸನ್ನೆ ಮಾಡುತ್ತಾರೆ. ಅಷ್ಟಾದರ ಕಾರ್ತಿಕ್​ ಮಾತನಾಡೋಕೆ ಶುರು ಮಾಡುತ್ತಾರೆ. ಇದು ಸಂಗೀತಾಗೆ ಕೋಪ ತರಿಸಿತು. ಅದೇ ಸಿಟ್ಟಿನಿಂದ ಬೆಡ್​ ರೂಮ್​ನಿಂದ ಸಂಗೀತಾ ಹೊರಟು ಹೋಗುತ್ತಾರೆ. ಆಗ ಸಂಗೀತಾರ ಈ ರೀತಿ ನಡೆಗೆ ಕಾರ್ತಿಕ್​​​ ತನಿಶಾ ಮುಂಚೆ ಬೇಸರ ಹೊರ ಹಾಕಿದ್ದಾರೆ.

ಇನ್ನೂ ಬೆಡ್​​ ರೂಮ್​​ನಲ್ಲಿ ಆದ ವಿಚಾರದ ಬಗ್ಗೆ ಕಾರ್ತಿಕ್​ ತನಿಶಾ ಮುಂದಿ ಈ ರೀತಿ ಹೇಳಿದ್ದಾರೆ. ಅವಳ ಪ್ರಕಾರ ಶ್ ಅಂದ ತಕ್ಷಣ ನಾನು ಸುಮ್ಮನಿರಬೇಕು. ಮಾತಾಡು ಅಂದ ಕ್ಷಣ ಮಾತಾಡಬೇಕು. ಇಷ್ಟೊಂದು ಡಾಮಿನೇಷನ್ ಆದರೆ ನಾನು ತಗೋಳೋದು ಇಲ್ಲ ಎಂದು ಸಂಗೀತಾ ಬಗ್ಗೆ ಕಾರ್ತಿಕ್ ಅವರು ತನಿಷಾ ಬಳಿ ಹೇಳಿದ್ದಾರೆ. ಇದನ್ನು ದೂರದಿಂದ ಗಮನಿಸಿದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕಾರ್ತಿಕ್​ ಹಾಗೂ ಸಂಗೀತಾ ಬಗ್ಗೆ ಮಾತಾಡಿದ್ದಾರೆ. ಸಂಗೀತಾ ಸ್ಟ್ರಾಂಗ್ ಆಗಿದ್ದಾರೆ. ಟಿಶ್ಯೂ ಪೇಪರ್​ ತರ ಹೀಗೆ ಹಾಗೆ ಒರೆಸಿಕೊಂಡು ಬಿಸಾಕುತ್ತಾಳೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ತಲೆ ಅಲ್ಲಾಡಿಸುತ್ತಾ ಬಿದ್ದು ಬಿದ್ದು ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More