newsfirstkannada.com

‘ಉತ್ತರನ ಪೌರುಷ’ ತುಕಾಲಿ ಸಂತೋಷ್‌ಗೆ ಡ್ರೋನ್ ಪ್ರತಾಪ್‌ಗೆ ಯಾವ್ದು? ಭೂಮಿಗೆ ಭಾರ ಕೂಳಿಗೆ ದಂಡ ಯಾರು?

Share :

22-10-2023

    ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಗಾದೆ ಮಾತಿನ ಬೋರ್ಡ್ ಯಾರ ಹೆಗಲಿಗೆ?

    ಕಳ್ಳನಿಗೊಂದು ಪಿಳ್ಳೆ ನೆಪ, ಬೆಳ್ಳಗಿರುವುದೆಲ್ಲಾ ಹಾಲಲ್ಲ; ಡ್ರೋನ್ ಪ್ರತಾಪ್‌ಗೆ ಯಾವುದು?

    ಕಿಚ್ಚ ಸುದೀಪ್​​ ಮುಂದೆಯೇ ಬಿಗ್​ಬಾಸ್​ ಸ್ಪರ್ಧಿಗಳ ಅಸಲಿ ಮುಖವಾಡ ಬಯಲು

ಬಿಗ್​ಬಾಸ್​ ಸೀಸನ್ 10 ನೋಡ ನೋಡುತ್ತಿದ್ದಂತೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಮೂರನೇ ಪಂಚಾಯ್ತಿಗೆ ಕಿಚ್ಚ ಸುದೀಪ್‌ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​​ ಮನೆ ನೋಡೋದಕ್ಕೆ ಅರಮನೆ. ಆದರೆ ಒಳಗಡೆ ಇರೋದಕ್ಕೆ ಅದು ಖಂಡಿತಾ ಸೆರೆಮನೆ. ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಎದುರಿಸಿಕೊಂಡು ತೂಗಿಸಿಕೊಂಡು ಮನಸ್ತಾಪಗಳನ್ನ ಬದಿಗಿಟ್ಟು ಆಟ ಆಡೋದೆ ಬಿಗ್​ಬಾಸ್​​ ಮನೆಯ ಆಟ.

ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಲೇಟೆಸ್ಟ್ ಪ್ರೋಮೋವೊಂದು ರಿಲೀಸ್​ ಆಗಿದೆ. ರೀಲಿಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​​ ಬಿಗ್​ಬಾಸ್​​ ಮನೆಯಲ್ಲಿದ್ದ 16 ಸ್ಪರ್ಧಿಗಳಿಗೆ ಈ ಗಾದೆಗೆ ಯಾವ ಸ್ಪರ್ಧಿ ವ್ಯಕ್ತಿತ್ವಕ್ಕೆ ತಕ್ಕ ಸೂಟ್​ ಆಗುತ್ತೆ ಎಂದು ಕೇಳುತ್ತಾರೆ. ಅದಕ್ಕೆ ಒಬ್ಬೊಬ್ಬರಾಗಿ ಎಂದು ನಿಂತು  ಬೋರ್ಡ್​ನಲ್ಲಿ ಸೂಚಿದ ಗಾದೆಯನ್ನು ಸೂಟ್​ ಆಗಿರೋ ವ್ಯಕ್ತಿಗೆ ಹಾಕುತ್ತಾರೆ.

ನಮ್ರತಾ ಗೌಡ ಅವರು ಭೂಮಿಗೆ ಭಾರ ಕೂಳಿಗೆ ದಂಡ ಎಂಬ ಗಾದೆ ಹೋಲುವಂತಹ ಬೋರ್ಡ್ ಅನ್ನು ತುಕಾಲಿ ಸಂತೋಷ್​​ಗೆ ನೀಡಿದ್ದಾರೆ. ವಿನಯ್​​ ಗೌಡ ಅವರು ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎಂಬ ಬೋರ್ಡ್ ಅನ್ನು ಭಾಗ್ಯಶ್ರೀ ಅವರಿಗೆ ನೀಡಿದ್ದಾರೆ. ಕಾರ್ತಿಕ್​​ ಅವರು ಉತ್ತರನ ಪೌರುಷ ಒಲೆಯ ಮುಂದೆ ಎಂಬ ಬೋರ್ಡ್ ಅನ್ನು ತುಕಾಲಿ ಸಂತೋಷ್​​ಗೆ ನೀಡಿದ್ದಾರೆ. ತನಿಶಾ ಅವರು ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಬೋರ್ಡ್ ಅನ್ನು ಡ್ರೋನ್​ ಪ್ರತಾಪ್​ ಅವರಿಗೆ ಕೊಟ್ಟಿದ್ದಾರೆ. ನೀತು ಅವರು ಕಳ್ಳನಿಗೊಂದು ಪಿಳ್ಳೆ ನೆಪ ಗಾದೆ ಬೋರ್ಡ್ ಅನ್ನು ಸಂಗೀತಾ ಅವರಿಗೆ ನೀಡಿದ್ದಾರೆ. ಇನ್ನೂ ನೀತು ಅವರು ಕಳ್ಳನಿಗೊಂದು ಪಿಳ್ಳೆ ನೆಪ ನೀಡುತ್ತಿದ್ದಂತೆ ಸಂಗೀತಾ ಫುಲ್​ ಗರಂ ಆಗಿದ್ದಾರೆ. ಇತ್ತ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆಯ ಬೋರ್ಡ್​ ಅನ್ನು ಸ್ನೇಹಿತ್​ ಪಡೆದುಕೊಂಡಿದ್ದಾರೆ. ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ ಎಂಬ ಗಾದೆಯ ಬೋರ್ಡ್​ ಅನ್ನು ನೀತು ಪಡೆದುಕೊಂಡಿದ್ದಾರೆ. ಇತ್ತ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆಯ ಬೋರ್ಡ್​ ಅನ್ನು ವಿನಯ್​​ ಅವರು ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಉತ್ತರನ ಪೌರುಷ’ ತುಕಾಲಿ ಸಂತೋಷ್‌ಗೆ ಡ್ರೋನ್ ಪ್ರತಾಪ್‌ಗೆ ಯಾವ್ದು? ಭೂಮಿಗೆ ಭಾರ ಕೂಳಿಗೆ ದಂಡ ಯಾರು?

https://newsfirstlive.com/wp-content/uploads/2023/10/bigg-boss-2023-10-22T152705.894.jpg

    ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಗಾದೆ ಮಾತಿನ ಬೋರ್ಡ್ ಯಾರ ಹೆಗಲಿಗೆ?

    ಕಳ್ಳನಿಗೊಂದು ಪಿಳ್ಳೆ ನೆಪ, ಬೆಳ್ಳಗಿರುವುದೆಲ್ಲಾ ಹಾಲಲ್ಲ; ಡ್ರೋನ್ ಪ್ರತಾಪ್‌ಗೆ ಯಾವುದು?

    ಕಿಚ್ಚ ಸುದೀಪ್​​ ಮುಂದೆಯೇ ಬಿಗ್​ಬಾಸ್​ ಸ್ಪರ್ಧಿಗಳ ಅಸಲಿ ಮುಖವಾಡ ಬಯಲು

ಬಿಗ್​ಬಾಸ್​ ಸೀಸನ್ 10 ನೋಡ ನೋಡುತ್ತಿದ್ದಂತೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ಬಿಗ್​ಬಾಸ್​ ಮೂರನೇ ಪಂಚಾಯ್ತಿಗೆ ಕಿಚ್ಚ ಸುದೀಪ್‌ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​​ ಮನೆ ನೋಡೋದಕ್ಕೆ ಅರಮನೆ. ಆದರೆ ಒಳಗಡೆ ಇರೋದಕ್ಕೆ ಅದು ಖಂಡಿತಾ ಸೆರೆಮನೆ. ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಎದುರಿಸಿಕೊಂಡು ತೂಗಿಸಿಕೊಂಡು ಮನಸ್ತಾಪಗಳನ್ನ ಬದಿಗಿಟ್ಟು ಆಟ ಆಡೋದೆ ಬಿಗ್​ಬಾಸ್​​ ಮನೆಯ ಆಟ.

ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಲೇಟೆಸ್ಟ್ ಪ್ರೋಮೋವೊಂದು ರಿಲೀಸ್​ ಆಗಿದೆ. ರೀಲಿಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​​ ಬಿಗ್​ಬಾಸ್​​ ಮನೆಯಲ್ಲಿದ್ದ 16 ಸ್ಪರ್ಧಿಗಳಿಗೆ ಈ ಗಾದೆಗೆ ಯಾವ ಸ್ಪರ್ಧಿ ವ್ಯಕ್ತಿತ್ವಕ್ಕೆ ತಕ್ಕ ಸೂಟ್​ ಆಗುತ್ತೆ ಎಂದು ಕೇಳುತ್ತಾರೆ. ಅದಕ್ಕೆ ಒಬ್ಬೊಬ್ಬರಾಗಿ ಎಂದು ನಿಂತು  ಬೋರ್ಡ್​ನಲ್ಲಿ ಸೂಚಿದ ಗಾದೆಯನ್ನು ಸೂಟ್​ ಆಗಿರೋ ವ್ಯಕ್ತಿಗೆ ಹಾಕುತ್ತಾರೆ.

ನಮ್ರತಾ ಗೌಡ ಅವರು ಭೂಮಿಗೆ ಭಾರ ಕೂಳಿಗೆ ದಂಡ ಎಂಬ ಗಾದೆ ಹೋಲುವಂತಹ ಬೋರ್ಡ್ ಅನ್ನು ತುಕಾಲಿ ಸಂತೋಷ್​​ಗೆ ನೀಡಿದ್ದಾರೆ. ವಿನಯ್​​ ಗೌಡ ಅವರು ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎಂಬ ಬೋರ್ಡ್ ಅನ್ನು ಭಾಗ್ಯಶ್ರೀ ಅವರಿಗೆ ನೀಡಿದ್ದಾರೆ. ಕಾರ್ತಿಕ್​​ ಅವರು ಉತ್ತರನ ಪೌರುಷ ಒಲೆಯ ಮುಂದೆ ಎಂಬ ಬೋರ್ಡ್ ಅನ್ನು ತುಕಾಲಿ ಸಂತೋಷ್​​ಗೆ ನೀಡಿದ್ದಾರೆ. ತನಿಶಾ ಅವರು ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಬೋರ್ಡ್ ಅನ್ನು ಡ್ರೋನ್​ ಪ್ರತಾಪ್​ ಅವರಿಗೆ ಕೊಟ್ಟಿದ್ದಾರೆ. ನೀತು ಅವರು ಕಳ್ಳನಿಗೊಂದು ಪಿಳ್ಳೆ ನೆಪ ಗಾದೆ ಬೋರ್ಡ್ ಅನ್ನು ಸಂಗೀತಾ ಅವರಿಗೆ ನೀಡಿದ್ದಾರೆ. ಇನ್ನೂ ನೀತು ಅವರು ಕಳ್ಳನಿಗೊಂದು ಪಿಳ್ಳೆ ನೆಪ ನೀಡುತ್ತಿದ್ದಂತೆ ಸಂಗೀತಾ ಫುಲ್​ ಗರಂ ಆಗಿದ್ದಾರೆ. ಇತ್ತ ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆಯ ಬೋರ್ಡ್​ ಅನ್ನು ಸ್ನೇಹಿತ್​ ಪಡೆದುಕೊಂಡಿದ್ದಾರೆ. ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ ಎಂಬ ಗಾದೆಯ ಬೋರ್ಡ್​ ಅನ್ನು ನೀತು ಪಡೆದುಕೊಂಡಿದ್ದಾರೆ. ಇತ್ತ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆಯ ಬೋರ್ಡ್​ ಅನ್ನು ವಿನಯ್​​ ಅವರು ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More