newsfirstkannada.com

TVS​​ ಶೋರೂಂಗೆ ಬೆಂಕಿ; 400ಕ್ಕೂ ಹೆಚ್ಚು ಬೈಕ್​ಗಳು ಬೆಂಕಿಗಾಹುತಿ

Share :

24-08-2023

    ವಿಜಯವಾಡದಲ್ಲಿರುವ ಬೈಕ್​ ಶೋ ರೂಂನಲ್ಲಿ ಬೆಂಕಿ ಅವಘಡ

    ಹೊತ್ತಿ ಉರಿದ TVS​​​ ಶೋರೂಂ, 400ಕ್ಕೂ ಹೆಚ್ಚು ಬೈಕ್​ಗಳು ಭಸ್ಮ

    ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

ಆಂಧ್ರಪ್ರದೇಶ: 400ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮಗೊಂಡ ಘಟನೆ ವಿಜಯವಾಡದಲ್ಲಿರುವ ಬೈಕ್​ ಶೋ ರೂಂನಲ್ಲಿ ನಡೆದಿದೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಚೆನ್ನೈ-ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕೆಪಿ ನಗರ ಪ್ರದೇಶದಲ್ಲಿ ಟಿವಿಎಸ್​​ ಶೋರೂಂನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೋಟಿಗಟ್ಟಲೆ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸನಕರಾವ್​​ ‘‘ನಾವು ತಲುಪಿದಾಗ, ಶೋರೂಂಗೆ ಸಂಪೂರ್ಣವಾಗಿ ಬೆಂಕಿ ಮತ್ತು ಹೊಗೆ ಆವರಿಸಿತ್ತು. ನಾವು ಬೆಂಕಿಯನ್ನು ಒಂದುವರೆ ಗಂಟೆಯಿಂದ ನಂದಿಸಲು ಪ್ರಯತ್ನಿಸಿದ್ದೇವೆ. ಬೆಂಕಿ ಕಾಣಲು ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. 400ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಕರಕಲಾಗಿದೆ’’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

TVS​​ ಶೋರೂಂಗೆ ಬೆಂಕಿ; 400ಕ್ಕೂ ಹೆಚ್ಚು ಬೈಕ್​ಗಳು ಬೆಂಕಿಗಾಹುತಿ

https://newsfirstlive.com/wp-content/uploads/2023/08/TVS-Bike.jpg

    ವಿಜಯವಾಡದಲ್ಲಿರುವ ಬೈಕ್​ ಶೋ ರೂಂನಲ್ಲಿ ಬೆಂಕಿ ಅವಘಡ

    ಹೊತ್ತಿ ಉರಿದ TVS​​​ ಶೋರೂಂ, 400ಕ್ಕೂ ಹೆಚ್ಚು ಬೈಕ್​ಗಳು ಭಸ್ಮ

    ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

ಆಂಧ್ರಪ್ರದೇಶ: 400ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮಗೊಂಡ ಘಟನೆ ವಿಜಯವಾಡದಲ್ಲಿರುವ ಬೈಕ್​ ಶೋ ರೂಂನಲ್ಲಿ ನಡೆದಿದೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಚೆನ್ನೈ-ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕೆಪಿ ನಗರ ಪ್ರದೇಶದಲ್ಲಿ ಟಿವಿಎಸ್​​ ಶೋರೂಂನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೋಟಿಗಟ್ಟಲೆ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸನಕರಾವ್​​ ‘‘ನಾವು ತಲುಪಿದಾಗ, ಶೋರೂಂಗೆ ಸಂಪೂರ್ಣವಾಗಿ ಬೆಂಕಿ ಮತ್ತು ಹೊಗೆ ಆವರಿಸಿತ್ತು. ನಾವು ಬೆಂಕಿಯನ್ನು ಒಂದುವರೆ ಗಂಟೆಯಿಂದ ನಂದಿಸಲು ಪ್ರಯತ್ನಿಸಿದ್ದೇವೆ. ಬೆಂಕಿ ಕಾಣಲು ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. 400ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಕರಕಲಾಗಿದೆ’’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More