ಮಹೇಂದ್ರ ಸಿಂಗ್ ಧೋನಿಯನ್ನ ನೆನಪಿಸಿದ್ದೇಕೆ ಕೆ.ಎಲ್.ರಾಹುಲ್?
ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಟೆನ್ಶನ್ ಫ್ರೀ!
ಏಷ್ಯಾಕಪ್ ಆರಂಭಕ್ಕೂ ಮುನ್ನ, ನಂತರವೂ ರಾಹುಲ್ ಟ್ರೆಂಡ್
ಏಷ್ಯಾಕಪ್ ಆರಂಭಕ್ಕೂ ಮುನ್ನ.. ಆರಂಭದ ನಂತ್ರ ಟ್ರೆಡಿಂಗ್ನಲ್ಲಿರೋ ಹೆಸರೇ ಕೆ.ಎಲ್.ರಾಹುಲ್.. ಆದ್ರೀಗ ಈ ಕೆ.ಎಲ್.ರಾಹುಲ್, ದಿಗ್ಗಜ ಮಾಹಿಯನ್ನೇ ನೆನಪಿಸಿದ್ದಾರೆ.
ವಿಕೆಟ್ ಕೀಪಿಂಗ್.. ಕ್ರಿಕೆಟ್ನಲ್ಲಿ ಈ ಸ್ಥಾನಕ್ಕಿರುವ ಮಹತ್ವನೇ ಬೇರೆ.. ಪಂದ್ಯದಲ್ಲಿ ಕ್ಷಣಕ್ಷಣಕ್ಕೂ ಟ್ವಿಸ್ಟ್ ನೀಡುವ ಇವರು, ನಿಜಕ್ಕೂ ಮ್ಯಾಚ್ ವಿನ್ನರ್ಗಳು. ಬ್ಯಾಟಿಂಗ್ ಮಾಡದಿರಲಿ, ಬೌಲಿಂಗ್ ಮಾಡದಿಲಿ, ವಿಕೆಟ್ ಕೀಪಿಂಗ್ ಸ್ಕಿಲ್ಸ್ನಿಂದಲೇ ಮ್ಯಾಚ್ ಗೆಲ್ಲಿಸಿಕೊಡುವ ಚಾಕಚಕ್ಯತೆ ಇರೋದು ವಿಕೆಟ್ಸ್ ಕೀಪರ್ಗಳಿಗೆ ಮಾತ್ರ. ಹೀಗಾಗೇ ವಿಕೆಟ್ ಕೀಪರ್ಗಳು ಎಷ್ಟೇ ಮಂದಿ ಟೀಮ್ ಇಂಡಿಯಾವನ್ನು ಪ್ರತಿನಿದಿಸಿದ್ರೂ ನಮ್ಮ ಕಣ್ಮುಂದೆ ಬರೋ ಮೊದಲ ಹೆಸರು ಮಹೇಂದ್ರ ಸಿಂಗ್ ಧೋನಿ.
ಹೌದು! ಮಹೇಂದ್ರ ಸಿಂಗ್ ಧೋನಿ.. ದಿ ಗ್ರೇಟ್ ವಿಕೆಟ್ ಕೀಪರ್, ವಿಕೆಟ್ ಹಿಂದೆ ಗ್ಯಾಂಬ್ಲಿಮ್ ಮಾಡೋ ಮಾಹಿ, ಬ್ಯಾಟ್ಸ್ಮನ್ಗಳನ್ನು ತಾಳಕ್ಕೆ ತಕ್ಕಂತೆ ಕುಣಿಸೋದ್ರಲ್ಲಿ ನಿಜಕ್ಕೂ ಪಂಟರ್. ಆದ್ರೆ ಈ ಧೋನಿ ನಿವೃತ್ತಿಯ ಬಳಿಕ ಉತ್ತರಾಧಿಕಾರಿಯಾಗಿ ಯಾರೇ ಬಿಂಬಿಸಿಕೊಂಡರು. ಧೋನಿಯನ್ನ ನೆನಪಿಸಿದವರು ನಿಜಕ್ಕೂ ಯಾರಿಲ್ಲ. ಆದ್ರೀಗ ಲಂಕಾದಲ್ಲಿ ನಡೆಯುತ್ತಿರೋ ಏಷ್ಯಾಕಪ್ನಲ್ಲಿ ಸೂಪರ್-4 ಮ್ಯಾಚ್ನಲ್ಲಿ ಮಿಸ್ಟರ್ ಮಾಹಿಯನ್ನ ನೆನಪಿಸಿದ್ದಾರೆ. ಅಷ್ಟಕ್ಕೂ ಮಾಹಿಯನ್ನು ನೆನಪಿಸಿದ್ದು ಬೇಱರೂ ಅಲ್ಲ. ಕನ್ನಡಿಗ ಕೆ.ಎಲ್.ರಾಹುಲ್.
ಬೌಲರ್ಗಳಿಗೆ ಟಿಪ್ಸ್.. ವಿಕೆಟ್ ಬೇಟೆ ಫಿಕ್ಸ್..!
ವಿಕೆಟ್ ಕೀಪಿಂಗ್ ಮಾಡೋ ಆಟಗಾರನ ಮೈಯೆಲ್ಲ ಕಣ್ಣಾಗಿರಬೇಕು. ವಿಕೆಟ್ ಹಿಂದೆ ಗೇಮ್ ರೀಡ್ ಮಾಡ್ತಾ, ಫೀಲ್ಡಿಂಗ್ ಸೆಟ್ ಮಾಡೋದ್ರ ಜೊತೆ ಜೊತೆಗೆ ಬೌಲರ್ಗೆ ಇನ್ಫುಟ್ಸ್ ನೀಡಬೇಕು. ಈ ವಿಚಾರದಲ್ಲಿ ಮಾಹಿಗೆ ಮಾಹಿಯೇ ಸರಿಸಾಟಿ. ಪಾಕ್ ಹಾಗೂ ಲಂಕಾ ವಿರುದ್ಧ ಮ್ಯಾಚ್ನಲ್ಲಿ ಕೆ.ಎಲ್.ರಾಹುಲ್, ಧೋನಿಯನ್ನೇ ನೆನಪಿಸಿದ್ದು ಸುಳ್ಳಲ್ಲ. ಅದರಲ್ಲೂ ಬೌಲರ್ಗೆ ಇನ್ಫುಟ್ಸ್ ನೀಡುತ್ತ ಮಹತ್ವದ ಜೊತೆಯಾಟಗಳಿಗೆ ಬ್ರೇಕ್ ಥ್ರೂ ನೀಡಿದ್ರು.
ನಂಬರ್ 1: ಪಾಕ್ ಎದುರಿನ ಪಂದ್ಯದಲ್ಲಿ ರಾಹುಲ್ ಟಿಪ್ಸ್
ಪಾಕ್ ವಿರುದ್ಧ ಕೆ.ಎಲ್, ಕೇವಲ ಬ್ಯಾಟಿಂಗ್ನಿಂದ ಮಾತ್ರವೇ ಅಲ್ಲ. ತನ್ನ ವಿಕೆಟ್ ಕೀಪಿಂಗ್ ಸ್ಕಿಲ್ಸ್ನಿಂದಲೂ ಗಮನ ಸೆಳೆದ್ರು. ಅದು 28ನೇ ಓವರ್.. ಈ ಓವರ್ನ 2ನೇ ಎಸೆತ ಸಿಂಗಲ್ ತೆಗೆದಿದ್ದ ಶಾದಾಬ್, 4ನೇ ಎಸೆದಲ್ಲಿ ಮತ್ತೆ ಸ್ಟ್ರೈಕ್ಗೆ ಆಗಮಿಸಿದ್ರು. ಈ ವೇಳೆ ಕುಲ್ದೀಪ್ಗೆ ಇನ್ಪುಟ್ಸ್ ಕೊಟ್ಟ ರಾಹುಲ್, ಶಾದಾಬ್ ವಿಕೆಟ್ ಬೇಟೆಗೆ ನೆರವಾದ್ರು.
ನಂಬರ್ 2: ಲಂಕಾ ಎದುರು ಕುಲ್ದೀಪ್ಗೆ ಟಿಪ್ಸ್
ಇದು ಪಾಕ್ ಪಂದ್ಯದಲ್ಲಿ ಅಷ್ಟೇ ಅಲ್ಲ. ಲಂಕಾ ಎದುರಿನ ಪಂದ್ಯದಲ್ಲೂ ಮುಂದುವರಿಯಿತು. 4ನೇ ವಿಕೆಟ್ಗೆ ಜೊತೆಯಾಗಿದ್ದ ಸಮರವಿಕ್ರಮ ಹಾಗೂ ಅಸಲಂಕಾ ಅರ್ಧಶತಕದ ಜೊತೆಯಾಟದ್ದ ಮುನ್ನುಗ್ಗುತ್ತಿದ್ದರು. ಈ ವೇಳೆ ಕ್ರೀನ್ನಲ್ಲಿ ನೆಲೆಯೂರಿದ್ದ ಸಮರವಿಕ್ರಮಗೆ ಖೆಡ್ಡಾ ತೋಡಿದ್ದೆ ಕೆ.ಎಲ್.ರಾಹುಲ್.
ರಾಹುಲ್ ಮಾತು ಕೇಳದೆ DRS ಕೈಚೆಲ್ಲಿದ್ದ ರೋಹಿತ್
ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ, ಎರಡು ರಿವ್ಯೂವ್ ಕೈಚೆಲ್ಲಿತ್ತು. ಲಂಕಾ ಪಂದ್ಯದಲ್ಲೂ ಇದು ರಿಪೀಟ್ ಆಯ್ತು. ಕೆ.ಎಲ್.ರಾಹುಲ್ ಮಾತು ಕೇಳದೆ, ನಾಯಕ ತೆಗೆದುಕೊಂಡ ಆತುರ ನಿರ್ಧಾರದಿಂದ ಡಿಆರ್ಎಸ್ ವ್ಯರ್ಥವಾಯ್ತು. ವಿಕೆಟ್ ಹಿಂದಿನಿಂದಲೇ ಗೇಮ್ ರೀಡ್ ಮಾಡ್ತಿದ್ದ ಕೆ.ಎಲ್.ರಾಹುಲ್, ಫೀಲ್ಡಿಂಗ್ ಪ್ಲೇಸ್ಮೆಂಟ್ನಲ್ಲಿ ರೋಹಿತ್ ನೆರವಿಗೆ ನಿಂತಿದ್ದರು. ವಿಕೆಟ್ ಹಿಂದೆ ಫುಲ್ ಆ್ಯಕ್ಟೀವ್ ಆಗಿದ್ದ ರಾಹುಲ್, ಹಿಡಿದ ಎರಡು ಅದ್ಭುತ ಕ್ಯಾಚ್ಗಳ ಜೊತೆಗೆ ಒಂದು ಸ್ಟಂಪಿಂಗ್ ಮೆರೆಯುವಂತೆಯೇ ಇಲ್ಲ. ಈ ಎಲ್ಲ ಅಂಶಗಳೇ ಮಹೇಂದ್ರ ಸಿಂಗ್ ಧೋನಿಯನ್ನ ನೆನಪಿಸಲು ಪ್ರಮುಖ ಕಾರಣ. ಇದನ್ನ ಜಸ್ಟ್ ನಾವ್ ಹೇಳ್ತಿರೋ ಮಾತಲ್ಲ. ಕ್ರಿಕೆಟ್ ಅಭಿಮಾನಿಗಳೇ ಹೇಳ್ತಿರುವ ಮಾತು.
ರಾಹುಲ್ನಿಂದ ಮ್ಯಾನೇಜ್ಮೆಂಟ್ ಟೆನ್ಶನ್ ರಿಲೀಫ್
ಮೆಗಾ ಟೂರ್ನಿಗಳಲ್ಲಿ ವಿಕೆಟ್ ಕೀಪರ್ನ ರೋಲ್ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡುತ್ತದೆ. ಹೀಗಾಗಿ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಚಾಣಾಕ್ಷ ವಿಕೆಟ್ ಕೀಪರ್ನ ಕೊರತೆ ಟೀಮ್ ಇಂಡಿಯಾಗೆ ಕಾಡಲಿದೆ ಅನ್ನೋ ಮಾತಿತ್ತು. ಆದ್ರೀಗ ಕೆ.ಎಲ್.ರಾಹುಲ್ರ, ಚಾಕಚಕ್ಯತೆ ನೋಡಿದ್ಮೇಲೆ ವಿಶ್ವಕಪ್ನಲ್ಲಿ ಮೇನ್ ರೋಲ್ ಪ್ಲೇ ಮಾಡೋದ್ರಲ್ಲಿ ಅನುಮಾನ ಇಲ್ಲ. ವಿಶ್ವಕಪ್ಗೂ ಮುನ್ನ ಕೆ.ಎಲ್.ರಾಹುಲ್, ವಿಕೆಟ್ ಹಿಂದೆ ಮತ್ತಷ್ಟು ಪಳಗಬೇಕಿದೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಒಟ್ನಲ್ಲಿ, ಕೆ.ಎಲ್.ರಾಹುಲ್ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಅಲ್ಲದಿದ್ರೂ, ತಮ್ಮ ಅನುಭವ ಟೀಮ್ ಇಂಡಿಯಾ ಗೆಲುವಿಗೆ ಧಾರೆ ಎಳೆಯುತ್ತಾ, ಟೀಮ್ ಮ್ಯಾನ್ ಆಗಿ ಗುರುತಿಸಿಕೊಂಡಿರೋದಂತು ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಮಹೇಂದ್ರ ಸಿಂಗ್ ಧೋನಿಯನ್ನ ನೆನಪಿಸಿದ್ದೇಕೆ ಕೆ.ಎಲ್.ರಾಹುಲ್?
ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಟೆನ್ಶನ್ ಫ್ರೀ!
ಏಷ್ಯಾಕಪ್ ಆರಂಭಕ್ಕೂ ಮುನ್ನ, ನಂತರವೂ ರಾಹುಲ್ ಟ್ರೆಂಡ್
ಏಷ್ಯಾಕಪ್ ಆರಂಭಕ್ಕೂ ಮುನ್ನ.. ಆರಂಭದ ನಂತ್ರ ಟ್ರೆಡಿಂಗ್ನಲ್ಲಿರೋ ಹೆಸರೇ ಕೆ.ಎಲ್.ರಾಹುಲ್.. ಆದ್ರೀಗ ಈ ಕೆ.ಎಲ್.ರಾಹುಲ್, ದಿಗ್ಗಜ ಮಾಹಿಯನ್ನೇ ನೆನಪಿಸಿದ್ದಾರೆ.
ವಿಕೆಟ್ ಕೀಪಿಂಗ್.. ಕ್ರಿಕೆಟ್ನಲ್ಲಿ ಈ ಸ್ಥಾನಕ್ಕಿರುವ ಮಹತ್ವನೇ ಬೇರೆ.. ಪಂದ್ಯದಲ್ಲಿ ಕ್ಷಣಕ್ಷಣಕ್ಕೂ ಟ್ವಿಸ್ಟ್ ನೀಡುವ ಇವರು, ನಿಜಕ್ಕೂ ಮ್ಯಾಚ್ ವಿನ್ನರ್ಗಳು. ಬ್ಯಾಟಿಂಗ್ ಮಾಡದಿರಲಿ, ಬೌಲಿಂಗ್ ಮಾಡದಿಲಿ, ವಿಕೆಟ್ ಕೀಪಿಂಗ್ ಸ್ಕಿಲ್ಸ್ನಿಂದಲೇ ಮ್ಯಾಚ್ ಗೆಲ್ಲಿಸಿಕೊಡುವ ಚಾಕಚಕ್ಯತೆ ಇರೋದು ವಿಕೆಟ್ಸ್ ಕೀಪರ್ಗಳಿಗೆ ಮಾತ್ರ. ಹೀಗಾಗೇ ವಿಕೆಟ್ ಕೀಪರ್ಗಳು ಎಷ್ಟೇ ಮಂದಿ ಟೀಮ್ ಇಂಡಿಯಾವನ್ನು ಪ್ರತಿನಿದಿಸಿದ್ರೂ ನಮ್ಮ ಕಣ್ಮುಂದೆ ಬರೋ ಮೊದಲ ಹೆಸರು ಮಹೇಂದ್ರ ಸಿಂಗ್ ಧೋನಿ.
ಹೌದು! ಮಹೇಂದ್ರ ಸಿಂಗ್ ಧೋನಿ.. ದಿ ಗ್ರೇಟ್ ವಿಕೆಟ್ ಕೀಪರ್, ವಿಕೆಟ್ ಹಿಂದೆ ಗ್ಯಾಂಬ್ಲಿಮ್ ಮಾಡೋ ಮಾಹಿ, ಬ್ಯಾಟ್ಸ್ಮನ್ಗಳನ್ನು ತಾಳಕ್ಕೆ ತಕ್ಕಂತೆ ಕುಣಿಸೋದ್ರಲ್ಲಿ ನಿಜಕ್ಕೂ ಪಂಟರ್. ಆದ್ರೆ ಈ ಧೋನಿ ನಿವೃತ್ತಿಯ ಬಳಿಕ ಉತ್ತರಾಧಿಕಾರಿಯಾಗಿ ಯಾರೇ ಬಿಂಬಿಸಿಕೊಂಡರು. ಧೋನಿಯನ್ನ ನೆನಪಿಸಿದವರು ನಿಜಕ್ಕೂ ಯಾರಿಲ್ಲ. ಆದ್ರೀಗ ಲಂಕಾದಲ್ಲಿ ನಡೆಯುತ್ತಿರೋ ಏಷ್ಯಾಕಪ್ನಲ್ಲಿ ಸೂಪರ್-4 ಮ್ಯಾಚ್ನಲ್ಲಿ ಮಿಸ್ಟರ್ ಮಾಹಿಯನ್ನ ನೆನಪಿಸಿದ್ದಾರೆ. ಅಷ್ಟಕ್ಕೂ ಮಾಹಿಯನ್ನು ನೆನಪಿಸಿದ್ದು ಬೇಱರೂ ಅಲ್ಲ. ಕನ್ನಡಿಗ ಕೆ.ಎಲ್.ರಾಹುಲ್.
ಬೌಲರ್ಗಳಿಗೆ ಟಿಪ್ಸ್.. ವಿಕೆಟ್ ಬೇಟೆ ಫಿಕ್ಸ್..!
ವಿಕೆಟ್ ಕೀಪಿಂಗ್ ಮಾಡೋ ಆಟಗಾರನ ಮೈಯೆಲ್ಲ ಕಣ್ಣಾಗಿರಬೇಕು. ವಿಕೆಟ್ ಹಿಂದೆ ಗೇಮ್ ರೀಡ್ ಮಾಡ್ತಾ, ಫೀಲ್ಡಿಂಗ್ ಸೆಟ್ ಮಾಡೋದ್ರ ಜೊತೆ ಜೊತೆಗೆ ಬೌಲರ್ಗೆ ಇನ್ಫುಟ್ಸ್ ನೀಡಬೇಕು. ಈ ವಿಚಾರದಲ್ಲಿ ಮಾಹಿಗೆ ಮಾಹಿಯೇ ಸರಿಸಾಟಿ. ಪಾಕ್ ಹಾಗೂ ಲಂಕಾ ವಿರುದ್ಧ ಮ್ಯಾಚ್ನಲ್ಲಿ ಕೆ.ಎಲ್.ರಾಹುಲ್, ಧೋನಿಯನ್ನೇ ನೆನಪಿಸಿದ್ದು ಸುಳ್ಳಲ್ಲ. ಅದರಲ್ಲೂ ಬೌಲರ್ಗೆ ಇನ್ಫುಟ್ಸ್ ನೀಡುತ್ತ ಮಹತ್ವದ ಜೊತೆಯಾಟಗಳಿಗೆ ಬ್ರೇಕ್ ಥ್ರೂ ನೀಡಿದ್ರು.
ನಂಬರ್ 1: ಪಾಕ್ ಎದುರಿನ ಪಂದ್ಯದಲ್ಲಿ ರಾಹುಲ್ ಟಿಪ್ಸ್
ಪಾಕ್ ವಿರುದ್ಧ ಕೆ.ಎಲ್, ಕೇವಲ ಬ್ಯಾಟಿಂಗ್ನಿಂದ ಮಾತ್ರವೇ ಅಲ್ಲ. ತನ್ನ ವಿಕೆಟ್ ಕೀಪಿಂಗ್ ಸ್ಕಿಲ್ಸ್ನಿಂದಲೂ ಗಮನ ಸೆಳೆದ್ರು. ಅದು 28ನೇ ಓವರ್.. ಈ ಓವರ್ನ 2ನೇ ಎಸೆತ ಸಿಂಗಲ್ ತೆಗೆದಿದ್ದ ಶಾದಾಬ್, 4ನೇ ಎಸೆದಲ್ಲಿ ಮತ್ತೆ ಸ್ಟ್ರೈಕ್ಗೆ ಆಗಮಿಸಿದ್ರು. ಈ ವೇಳೆ ಕುಲ್ದೀಪ್ಗೆ ಇನ್ಪುಟ್ಸ್ ಕೊಟ್ಟ ರಾಹುಲ್, ಶಾದಾಬ್ ವಿಕೆಟ್ ಬೇಟೆಗೆ ನೆರವಾದ್ರು.
ನಂಬರ್ 2: ಲಂಕಾ ಎದುರು ಕುಲ್ದೀಪ್ಗೆ ಟಿಪ್ಸ್
ಇದು ಪಾಕ್ ಪಂದ್ಯದಲ್ಲಿ ಅಷ್ಟೇ ಅಲ್ಲ. ಲಂಕಾ ಎದುರಿನ ಪಂದ್ಯದಲ್ಲೂ ಮುಂದುವರಿಯಿತು. 4ನೇ ವಿಕೆಟ್ಗೆ ಜೊತೆಯಾಗಿದ್ದ ಸಮರವಿಕ್ರಮ ಹಾಗೂ ಅಸಲಂಕಾ ಅರ್ಧಶತಕದ ಜೊತೆಯಾಟದ್ದ ಮುನ್ನುಗ್ಗುತ್ತಿದ್ದರು. ಈ ವೇಳೆ ಕ್ರೀನ್ನಲ್ಲಿ ನೆಲೆಯೂರಿದ್ದ ಸಮರವಿಕ್ರಮಗೆ ಖೆಡ್ಡಾ ತೋಡಿದ್ದೆ ಕೆ.ಎಲ್.ರಾಹುಲ್.
ರಾಹುಲ್ ಮಾತು ಕೇಳದೆ DRS ಕೈಚೆಲ್ಲಿದ್ದ ರೋಹಿತ್
ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ, ಎರಡು ರಿವ್ಯೂವ್ ಕೈಚೆಲ್ಲಿತ್ತು. ಲಂಕಾ ಪಂದ್ಯದಲ್ಲೂ ಇದು ರಿಪೀಟ್ ಆಯ್ತು. ಕೆ.ಎಲ್.ರಾಹುಲ್ ಮಾತು ಕೇಳದೆ, ನಾಯಕ ತೆಗೆದುಕೊಂಡ ಆತುರ ನಿರ್ಧಾರದಿಂದ ಡಿಆರ್ಎಸ್ ವ್ಯರ್ಥವಾಯ್ತು. ವಿಕೆಟ್ ಹಿಂದಿನಿಂದಲೇ ಗೇಮ್ ರೀಡ್ ಮಾಡ್ತಿದ್ದ ಕೆ.ಎಲ್.ರಾಹುಲ್, ಫೀಲ್ಡಿಂಗ್ ಪ್ಲೇಸ್ಮೆಂಟ್ನಲ್ಲಿ ರೋಹಿತ್ ನೆರವಿಗೆ ನಿಂತಿದ್ದರು. ವಿಕೆಟ್ ಹಿಂದೆ ಫುಲ್ ಆ್ಯಕ್ಟೀವ್ ಆಗಿದ್ದ ರಾಹುಲ್, ಹಿಡಿದ ಎರಡು ಅದ್ಭುತ ಕ್ಯಾಚ್ಗಳ ಜೊತೆಗೆ ಒಂದು ಸ್ಟಂಪಿಂಗ್ ಮೆರೆಯುವಂತೆಯೇ ಇಲ್ಲ. ಈ ಎಲ್ಲ ಅಂಶಗಳೇ ಮಹೇಂದ್ರ ಸಿಂಗ್ ಧೋನಿಯನ್ನ ನೆನಪಿಸಲು ಪ್ರಮುಖ ಕಾರಣ. ಇದನ್ನ ಜಸ್ಟ್ ನಾವ್ ಹೇಳ್ತಿರೋ ಮಾತಲ್ಲ. ಕ್ರಿಕೆಟ್ ಅಭಿಮಾನಿಗಳೇ ಹೇಳ್ತಿರುವ ಮಾತು.
ರಾಹುಲ್ನಿಂದ ಮ್ಯಾನೇಜ್ಮೆಂಟ್ ಟೆನ್ಶನ್ ರಿಲೀಫ್
ಮೆಗಾ ಟೂರ್ನಿಗಳಲ್ಲಿ ವಿಕೆಟ್ ಕೀಪರ್ನ ರೋಲ್ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡುತ್ತದೆ. ಹೀಗಾಗಿ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಚಾಣಾಕ್ಷ ವಿಕೆಟ್ ಕೀಪರ್ನ ಕೊರತೆ ಟೀಮ್ ಇಂಡಿಯಾಗೆ ಕಾಡಲಿದೆ ಅನ್ನೋ ಮಾತಿತ್ತು. ಆದ್ರೀಗ ಕೆ.ಎಲ್.ರಾಹುಲ್ರ, ಚಾಕಚಕ್ಯತೆ ನೋಡಿದ್ಮೇಲೆ ವಿಶ್ವಕಪ್ನಲ್ಲಿ ಮೇನ್ ರೋಲ್ ಪ್ಲೇ ಮಾಡೋದ್ರಲ್ಲಿ ಅನುಮಾನ ಇಲ್ಲ. ವಿಶ್ವಕಪ್ಗೂ ಮುನ್ನ ಕೆ.ಎಲ್.ರಾಹುಲ್, ವಿಕೆಟ್ ಹಿಂದೆ ಮತ್ತಷ್ಟು ಪಳಗಬೇಕಿದೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಒಟ್ನಲ್ಲಿ, ಕೆ.ಎಲ್.ರಾಹುಲ್ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಅಲ್ಲದಿದ್ರೂ, ತಮ್ಮ ಅನುಭವ ಟೀಮ್ ಇಂಡಿಯಾ ಗೆಲುವಿಗೆ ಧಾರೆ ಎಳೆಯುತ್ತಾ, ಟೀಮ್ ಮ್ಯಾನ್ ಆಗಿ ಗುರುತಿಸಿಕೊಂಡಿರೋದಂತು ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್