newsfirstkannada.com

ಇಬ್ಬರು ಸಹೋದರ ದಂಪತಿಯನ್ನು ಒಂದು ಮಾಡಿದ ಲೋಕ‌ ಅದಾಲತ್; ಫ್ಯಾಮಿಲಿ ಕಲಹಕ್ಕೆ ಹ್ಯಾಪಿ ಎಂಡಿಂಗ್ ಕೊಟ್ಟ ಕೋರ್ಟ್..!

Share :

10-07-2023

    ಅಪರೂಪದ ರಾಜಿ ಸಂಧಾನಕ್ಕೆ ಸಾಕ್ಷಿಯಾದ ವಿಜಯನಗರ

    6 ವರ್ಷಗಳ ದಾಂಪತ್ಯ ಕಲಹ ಅಂತ್ಯ.. ಮುಖದಲ್ಲಿ ಅರಳಿತು ನಗು

    ಒಂದೇ ಕುಟುಂಬದ ಇಬ್ಬರು ಹೆಣ್ಮಕ್ಕಳ ಬಾಳಲ್ಲಿ ಎದ್ದಿತ್ತು ಬಿರುಗಾಳಿ

ವಿಜಯನಗರ: ವಿಚ್ಛೇದನಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಎರಡು ಜೋಡಿಯನ್ನು ಒಂದು ಮಾಡಿದ ಅಪರೂಪದ ಘಟನೆ ಹೊಸಪೇಟೆ ನ್ಯಾಯಾಲಯದಲ್ಲಿ ನಡೆದಿದೆ.

6 ವರ್ಷಗಳಿಂದ‌ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್​ ಮೊರೆ ಹೋಗಿದ್ದ ಎರಡು ಜೋಡಿ, ಒಂದಾಗಿರೋದ್ಕೆ ಕುಟುಂಬಸ್ಥರು ಸಂತಸ ವ್ಯಕ್ತಡಿದ್ದಾರೆ. ಕೌಟುಂಬಿಕ‌ ಕಲಹದಿಂದ ಈ ದಂಪತಿ ಬೇರೆ ಬೇರೆಯಾಗಿದ್ದರು. ಒಂದೇ ಕುಟುಂಬದ ಇಬ್ಬರು ಹೆಣ್ಮಕ್ಕಳನ್ನು ಒಂದೇ ಕುಟುಂಬದ ಇಬ್ಬರು‌ ಸಹೋದರರಿಗೆ ಮದ್ವೆ ಮಾಡಲಾಗಿತ್ತು. ವಿಜಯನಗರದ ಹೂವಿನ ಹಡಗಲಿಯ ಜಾತಪ್ಪ ಕೋಗಳಿ ಮತ್ತು ಕೊಟ್ರಮ್ಮ ದಂಪತಿ ತಮ್ಮ ಇಬ್ಬರು ಪುತ್ರಿಯರಾದ ಅಶ್ವಿನಿ ಮತ್ತು ನಂದಿನಿ ಎಂಬುವವರನ್ನು ಹುಬ್ಬಳ್ಳಿಯ ಸಿದ್ದಬಸಪ್ಪ ಕೆರೂರು- ಕಮಲಾಪಕ್ಷಮ್ಮ ದಂಪತಿಯ ಮಕ್ಕಳಾದ ಶ್ರೀಧರ್ ಕೆರೂರ್, ಶಶಿಧರ್ ಕೆರೂರ್ ಎಂಬುವವರಿಗೆ ವಿವಾಹ‌‌ ಮಾಡಿ ಕೊಡಲಾಗಿತ್ತು.

ಕುಟುಂಬದಲ್ಲಿ‌ ನಡೆದ ಸಣ್ಣ-ಪುಟ್ಟ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹ ಏರ್ಪಟ್ಟು ವಿಚ್ಛದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕೋರ್ಟ್​, ಎರಡೂ ಜೋಡಿಯನ್ನೂ ಒಂದು ಮಾಡಿದೆ. ಸತತ ಆರು ವರ್ಷಗಳ ಕಾಲ ದೂರವಾಗಿದ್ದ ಅಶ್ವಿನಿ ಹಾಗೂ ಶ್ರೀಧರ್ ಕೆರೂರ್, ನಂದಿನಿ ಶಶಿಧರ್ ಕೆರೂರ್ ಒಂದು ಮಾಡಿದೆ.

ಹೊಸಪೇಟೆ ‌ನ್ಯಾಯವಾದಿಗಳ, ನ್ಯಾಯಾದೀಶರ‌ ಮಾತಿಗೆ ಎರಡು ಜೋಡಿಗಳು ಒಂದೇ ಗೂಡು ಸೇರಿ‌ ಸಂಸ್ಕಾರ ನಡೆಸಲು ಮುಂದಾಗಿದೆ. ಲೋಕ ಅದಾಲತ್​ನಲ್ಲಿ ಒಂದಾದ ಜೋಡಿ ಖುಷಿಯಿಂದ ತಂದೆ- ತಾಯಿ ಜತೆ ಮನೆಗೆ ತೆರಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಬ್ಬರು ಸಹೋದರ ದಂಪತಿಯನ್ನು ಒಂದು ಮಾಡಿದ ಲೋಕ‌ ಅದಾಲತ್; ಫ್ಯಾಮಿಲಿ ಕಲಹಕ್ಕೆ ಹ್ಯಾಪಿ ಎಂಡಿಂಗ್ ಕೊಟ್ಟ ಕೋರ್ಟ್..!

https://newsfirstlive.com/wp-content/uploads/2023/07/PROMISING.jpg

    ಅಪರೂಪದ ರಾಜಿ ಸಂಧಾನಕ್ಕೆ ಸಾಕ್ಷಿಯಾದ ವಿಜಯನಗರ

    6 ವರ್ಷಗಳ ದಾಂಪತ್ಯ ಕಲಹ ಅಂತ್ಯ.. ಮುಖದಲ್ಲಿ ಅರಳಿತು ನಗು

    ಒಂದೇ ಕುಟುಂಬದ ಇಬ್ಬರು ಹೆಣ್ಮಕ್ಕಳ ಬಾಳಲ್ಲಿ ಎದ್ದಿತ್ತು ಬಿರುಗಾಳಿ

ವಿಜಯನಗರ: ವಿಚ್ಛೇದನಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಎರಡು ಜೋಡಿಯನ್ನು ಒಂದು ಮಾಡಿದ ಅಪರೂಪದ ಘಟನೆ ಹೊಸಪೇಟೆ ನ್ಯಾಯಾಲಯದಲ್ಲಿ ನಡೆದಿದೆ.

6 ವರ್ಷಗಳಿಂದ‌ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್​ ಮೊರೆ ಹೋಗಿದ್ದ ಎರಡು ಜೋಡಿ, ಒಂದಾಗಿರೋದ್ಕೆ ಕುಟುಂಬಸ್ಥರು ಸಂತಸ ವ್ಯಕ್ತಡಿದ್ದಾರೆ. ಕೌಟುಂಬಿಕ‌ ಕಲಹದಿಂದ ಈ ದಂಪತಿ ಬೇರೆ ಬೇರೆಯಾಗಿದ್ದರು. ಒಂದೇ ಕುಟುಂಬದ ಇಬ್ಬರು ಹೆಣ್ಮಕ್ಕಳನ್ನು ಒಂದೇ ಕುಟುಂಬದ ಇಬ್ಬರು‌ ಸಹೋದರರಿಗೆ ಮದ್ವೆ ಮಾಡಲಾಗಿತ್ತು. ವಿಜಯನಗರದ ಹೂವಿನ ಹಡಗಲಿಯ ಜಾತಪ್ಪ ಕೋಗಳಿ ಮತ್ತು ಕೊಟ್ರಮ್ಮ ದಂಪತಿ ತಮ್ಮ ಇಬ್ಬರು ಪುತ್ರಿಯರಾದ ಅಶ್ವಿನಿ ಮತ್ತು ನಂದಿನಿ ಎಂಬುವವರನ್ನು ಹುಬ್ಬಳ್ಳಿಯ ಸಿದ್ದಬಸಪ್ಪ ಕೆರೂರು- ಕಮಲಾಪಕ್ಷಮ್ಮ ದಂಪತಿಯ ಮಕ್ಕಳಾದ ಶ್ರೀಧರ್ ಕೆರೂರ್, ಶಶಿಧರ್ ಕೆರೂರ್ ಎಂಬುವವರಿಗೆ ವಿವಾಹ‌‌ ಮಾಡಿ ಕೊಡಲಾಗಿತ್ತು.

ಕುಟುಂಬದಲ್ಲಿ‌ ನಡೆದ ಸಣ್ಣ-ಪುಟ್ಟ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹ ಏರ್ಪಟ್ಟು ವಿಚ್ಛದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕೋರ್ಟ್​, ಎರಡೂ ಜೋಡಿಯನ್ನೂ ಒಂದು ಮಾಡಿದೆ. ಸತತ ಆರು ವರ್ಷಗಳ ಕಾಲ ದೂರವಾಗಿದ್ದ ಅಶ್ವಿನಿ ಹಾಗೂ ಶ್ರೀಧರ್ ಕೆರೂರ್, ನಂದಿನಿ ಶಶಿಧರ್ ಕೆರೂರ್ ಒಂದು ಮಾಡಿದೆ.

ಹೊಸಪೇಟೆ ‌ನ್ಯಾಯವಾದಿಗಳ, ನ್ಯಾಯಾದೀಶರ‌ ಮಾತಿಗೆ ಎರಡು ಜೋಡಿಗಳು ಒಂದೇ ಗೂಡು ಸೇರಿ‌ ಸಂಸ್ಕಾರ ನಡೆಸಲು ಮುಂದಾಗಿದೆ. ಲೋಕ ಅದಾಲತ್​ನಲ್ಲಿ ಒಂದಾದ ಜೋಡಿ ಖುಷಿಯಿಂದ ತಂದೆ- ತಾಯಿ ಜತೆ ಮನೆಗೆ ತೆರಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More