newsfirstkannada.com

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೆಚ್ಚಿದ ಉದಯನಿಧಿ ಸ್ಟಾಲಿನ್​​; ಎಷ್ಟು ಮಾರ್ಕ್ಸ್​​ ಕೊಟ್ರು..?

Share :

04-09-2023

    ಕನ್ನಡಿಗರ ಮನಗೆದ್ದ ಸಪ್ತ ಸಾಗರದಾಚೆ ಎಲ್ಲೋ ಮೂವಿ

    ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​​​ ನಟನೆಗೆ ಜನ ಫುಲ್​ ಫಿದಾ

    ಸಿನಿಮಾವನ್ನು ಹಾಡಿಹೊಗಳಿದ ಉದಯನಿಧಿ ಸ್ಟಾಲಿನ್​​..!

ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಡೈರೆಕ್ಟರ್ ಹೇಮಂತ್​ ರಾವ್​​ ನಿರ್ದೇಶನದ ನಟ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್​ ಆಗಿ ಡೀಸೆಂಟ್​ ಹಿಟ್​ ಆಗಿದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಲು ಥಿಯೇಟರ್​​ಗೆ ಬರೋ ಜನರ ಸಂಖ್ಯೆ ಹೆಚ್ಚಾಗಿದೆ. ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ಪುತ್ರ ಮಿನಿಸ್ಟರ್ ಉದಯನಿಧಿ ಸ್ಟಾಲಿನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್​​ (X) ಮಾಡಿರೋ ಉದಯನಿಧಿ ಸ್ಟಾಲಿನ್​​, ರಕ್ಷಿತ್ ಶೆಟ್ಟಿ ಬ್ರದರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತುಂಬಾ ಚೆನ್ನಾಗಿದೆ. ಇಂತಹ ಅತ್ಯುತ್ತಮ ಸಿನಿಮಾ ನಿರ್ಮಾಣ ಮಾಡಿದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದಲ್ಲಿ ರಕ್ಷಿತ್​​ ಶೆಟ್ಟಿ, ರುಕ್ಮಿಣಿ ಅಂತೂ ಮನು ಮತ್ತು ಪ್ರಿಯಾ ಪಾತ್ರಗಳನ್ನು ಜೀವಿಸಿದ್ದಾರೆ. ಇಬ್ಬರು ಕೊನೆಗೆ ಸೇರ್ತಾರಾ ಇಲ್ವೋ ಅನ್ನೋ ಅನುಮಾನಭರಿತ ಕುತೂಹಲ ಮೂಡಿಸಿದೆ. ಹೇಮಂತ್ ರಾವ್ ಜಾಣ್ಮೆ ಕಾರಣಕ್ಕೆ ಸಿನಿಮಾದ ಕ್ಲೈಮ್ಯಾಕ್ಸ್​​ ಏನಿರಬಹುದು? ಎಂದು ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರೇಕ್ಷಕರು ಸೈಡ್-ಬಿ ಗಾಗಿಯೇ ಕಾಯುತ್ತಿದ್ದಾರೆ.

ಸನಾತನ ಧರ್ಮವೂ ಡೆಂಗ್ಯೂ, ಮಲೇರಿಯಾ ಇದ್ದಂಗೆ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸುದ್ದಿಯಾಗಿದ್ದರು. ಈಗ ರಕ್ಷಿತ್​ ಶೆಟ್ಟಿ ಸಿನಿಮಾ ಮೆಚ್ಚಿ ಮತ್ತೆ ಸುದ್ದಿಯಲ್ಲಿ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೆಚ್ಚಿದ ಉದಯನಿಧಿ ಸ್ಟಾಲಿನ್​​; ಎಷ್ಟು ಮಾರ್ಕ್ಸ್​​ ಕೊಟ್ರು..?

https://newsfirstlive.com/wp-content/uploads/2023/09/Udhayanidhi_Rakshith.jpg

    ಕನ್ನಡಿಗರ ಮನಗೆದ್ದ ಸಪ್ತ ಸಾಗರದಾಚೆ ಎಲ್ಲೋ ಮೂವಿ

    ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​​​ ನಟನೆಗೆ ಜನ ಫುಲ್​ ಫಿದಾ

    ಸಿನಿಮಾವನ್ನು ಹಾಡಿಹೊಗಳಿದ ಉದಯನಿಧಿ ಸ್ಟಾಲಿನ್​​..!

ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಡೈರೆಕ್ಟರ್ ಹೇಮಂತ್​ ರಾವ್​​ ನಿರ್ದೇಶನದ ನಟ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್​ ಆಗಿ ಡೀಸೆಂಟ್​ ಹಿಟ್​ ಆಗಿದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಲು ಥಿಯೇಟರ್​​ಗೆ ಬರೋ ಜನರ ಸಂಖ್ಯೆ ಹೆಚ್ಚಾಗಿದೆ. ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ಪುತ್ರ ಮಿನಿಸ್ಟರ್ ಉದಯನಿಧಿ ಸ್ಟಾಲಿನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್​​ (X) ಮಾಡಿರೋ ಉದಯನಿಧಿ ಸ್ಟಾಲಿನ್​​, ರಕ್ಷಿತ್ ಶೆಟ್ಟಿ ಬ್ರದರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತುಂಬಾ ಚೆನ್ನಾಗಿದೆ. ಇಂತಹ ಅತ್ಯುತ್ತಮ ಸಿನಿಮಾ ನಿರ್ಮಾಣ ಮಾಡಿದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದಲ್ಲಿ ರಕ್ಷಿತ್​​ ಶೆಟ್ಟಿ, ರುಕ್ಮಿಣಿ ಅಂತೂ ಮನು ಮತ್ತು ಪ್ರಿಯಾ ಪಾತ್ರಗಳನ್ನು ಜೀವಿಸಿದ್ದಾರೆ. ಇಬ್ಬರು ಕೊನೆಗೆ ಸೇರ್ತಾರಾ ಇಲ್ವೋ ಅನ್ನೋ ಅನುಮಾನಭರಿತ ಕುತೂಹಲ ಮೂಡಿಸಿದೆ. ಹೇಮಂತ್ ರಾವ್ ಜಾಣ್ಮೆ ಕಾರಣಕ್ಕೆ ಸಿನಿಮಾದ ಕ್ಲೈಮ್ಯಾಕ್ಸ್​​ ಏನಿರಬಹುದು? ಎಂದು ಚರ್ಚೆ ನಡೆಸುತ್ತಿದ್ದಾರೆ. ಹೀಗಾಗಿ ಪ್ರೇಕ್ಷಕರು ಸೈಡ್-ಬಿ ಗಾಗಿಯೇ ಕಾಯುತ್ತಿದ್ದಾರೆ.

ಸನಾತನ ಧರ್ಮವೂ ಡೆಂಗ್ಯೂ, ಮಲೇರಿಯಾ ಇದ್ದಂಗೆ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸುದ್ದಿಯಾಗಿದ್ದರು. ಈಗ ರಕ್ಷಿತ್​ ಶೆಟ್ಟಿ ಸಿನಿಮಾ ಮೆಚ್ಚಿ ಮತ್ತೆ ಸುದ್ದಿಯಲ್ಲಿ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More