ಸುಪ್ರೀಂಕೋರ್ಟ್ ಇಯರಿಂಗ್ ವೇಳೆ ವಿಚಿತ್ರ ಘಟನೆ
ನಾನು ಬದುಕಿದ್ದೀನಿ ಎಂದು ಬಾಲಕ ಕೋರ್ಟ್ ಮೊರೆ..!
ನನ್ನನ್ನು ಯಾರು ಕೊಂದಿಲ್ಲ ಎಂದು ಹೇಳಿಕೆ ಕೊಟ್ಟ ಬಾಲಕ
ದೆಹಲಿ: ನಾನು ಬದುಕಿದ್ದೀನಿ ಎಂದು 11 ವರ್ಷದ ಬಾಲಕನೋರ್ವ ಸುಪ್ರೀಂಕೋರ್ಟ್ ಮುಂದೆ ತನ್ನ ಹೇಳಿಕೆ ದಾಖಲಿಸಿದ ವಿಚಿತ್ರ ಘಟನೆ ನಡೆದಿದೆ. ನನ್ನನ್ನು ಕೊಲೆ ಮಾಡಲಾಗಿದೆ ಎಂದು ನನ್ನ ತೊಂದೆ ಸುಳ್ಳು ಹೇಳಿ ಕೇಸ್ ಮಾಡಿದ್ದಾರೆ. ನಾನು ಇನ್ನೂ ಬದುಕಿದ್ದೇನೆ, ನನ್ನನ್ನು ಯಾರು ಕೊಂದಿಲ್ಲ ಎಂದು ಬಾಲಕ ಸುಪ್ರೀಂಕೋರ್ಟ್ ಬೆಂಚ್ ಮುಂದೆ ಹೇಳಿಕೊಂಡಿದ್ದಾನೆ.
ಹೌದು, ಹೀಗೆ ಸುಪ್ರೀಂಕೋರ್ಟ್ ಮುಂದೆ ಹೇಳಿಕೆ ನೀಡಿದ್ದು ಬೇರೆ ಯಾರು ಅಲ್ಲ, ಬದಲಿಗೆ 11 ವರ್ಷದ ಉತ್ತರ ಪ್ರದೇಶ ಮೂಲದ ಅಭಯ್ ಸಿಂಗ್ ಎಂಬ ಬಾಲಕ. ತನ್ನ ತಂದೆ ಮತ್ತು ಅಜ್ಜನಿಗೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ. ಅಭಯ್ ಸಿಂಗ್ ತನ್ನ ಅಜ್ಜಿ, ಅಜ್ಜನೊಂದಿಗೆ ವಾಸಿಸುತ್ತಿದ್ದ. ಇದನ್ನು ಸಹಿಸದ ತಂದೆ ಪೊಲೀಸರಿಗೆ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದ. ಇದು ಕೇಸ್ ಆಗಿ ಕೊನೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಂತಕ್ಕೆ ಹೋಗಿತ್ತು.
ಬಾಲಕ ಹೇಳಿದ್ದೇನು..?
ತಾತನಿಂದಲೇ ಮೊಮ್ಮಗನ ಕೊಲೆ ಆಗಿದೆ ಎಂಬುದು ಕೇಸ್ ಆಗಿತ್ತು. ಇದರ ವಿರುದ್ಧ ಕೊಲೆಯಾಗಿದ್ದಾನೆ ಎನ್ನಲಾದ ಮೊಮ್ಮಗ ಲಕ್ನೋ ಕೋರ್ಟಿಗೆ ಹೋಗಿ ತಾನು ಬದುಕಿರುವುದಾಗಿ ಹೇಳಿದ್ದ. ಅದು ಲಕ್ನೋ ಕೋರ್ಟ್ನಿಂದ ಸುಪ್ರೀಂಕೋರ್ಟ್ಗೆ ಕೇಸ್ ಬಂದಿತ್ತು. ಇದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಂದೆ ಬಾಲಕ ತನ್ನನ್ನು ಯಾರು ಕೊಲೆ ಮಾಡಿಲ್ಲ. ತನ್ನ ತಂದೆ ಮಾಡಿರೋ ಸುಳ್ಳು ಆರೋಪ ಇದು. ಹೀಗಾಗಿ ತನ್ನ ಅಜ್ಜನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ತಾನು ಅಜ್ಜ, ಅಜ್ಜಿಯೊಂದಿಗೆ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸುಪ್ರೀಂಕೋರ್ಟ್ ಇಯರಿಂಗ್ ವೇಳೆ ವಿಚಿತ್ರ ಘಟನೆ
ನಾನು ಬದುಕಿದ್ದೀನಿ ಎಂದು ಬಾಲಕ ಕೋರ್ಟ್ ಮೊರೆ..!
ನನ್ನನ್ನು ಯಾರು ಕೊಂದಿಲ್ಲ ಎಂದು ಹೇಳಿಕೆ ಕೊಟ್ಟ ಬಾಲಕ
ದೆಹಲಿ: ನಾನು ಬದುಕಿದ್ದೀನಿ ಎಂದು 11 ವರ್ಷದ ಬಾಲಕನೋರ್ವ ಸುಪ್ರೀಂಕೋರ್ಟ್ ಮುಂದೆ ತನ್ನ ಹೇಳಿಕೆ ದಾಖಲಿಸಿದ ವಿಚಿತ್ರ ಘಟನೆ ನಡೆದಿದೆ. ನನ್ನನ್ನು ಕೊಲೆ ಮಾಡಲಾಗಿದೆ ಎಂದು ನನ್ನ ತೊಂದೆ ಸುಳ್ಳು ಹೇಳಿ ಕೇಸ್ ಮಾಡಿದ್ದಾರೆ. ನಾನು ಇನ್ನೂ ಬದುಕಿದ್ದೇನೆ, ನನ್ನನ್ನು ಯಾರು ಕೊಂದಿಲ್ಲ ಎಂದು ಬಾಲಕ ಸುಪ್ರೀಂಕೋರ್ಟ್ ಬೆಂಚ್ ಮುಂದೆ ಹೇಳಿಕೊಂಡಿದ್ದಾನೆ.
ಹೌದು, ಹೀಗೆ ಸುಪ್ರೀಂಕೋರ್ಟ್ ಮುಂದೆ ಹೇಳಿಕೆ ನೀಡಿದ್ದು ಬೇರೆ ಯಾರು ಅಲ್ಲ, ಬದಲಿಗೆ 11 ವರ್ಷದ ಉತ್ತರ ಪ್ರದೇಶ ಮೂಲದ ಅಭಯ್ ಸಿಂಗ್ ಎಂಬ ಬಾಲಕ. ತನ್ನ ತಂದೆ ಮತ್ತು ಅಜ್ಜನಿಗೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ. ಅಭಯ್ ಸಿಂಗ್ ತನ್ನ ಅಜ್ಜಿ, ಅಜ್ಜನೊಂದಿಗೆ ವಾಸಿಸುತ್ತಿದ್ದ. ಇದನ್ನು ಸಹಿಸದ ತಂದೆ ಪೊಲೀಸರಿಗೆ ಮಗನ ಕೊಲೆಯಾಗಿದೆ ಎಂದು ದೂರು ನೀಡಿದ್ದ. ಇದು ಕೇಸ್ ಆಗಿ ಕೊನೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಂತಕ್ಕೆ ಹೋಗಿತ್ತು.
ಬಾಲಕ ಹೇಳಿದ್ದೇನು..?
ತಾತನಿಂದಲೇ ಮೊಮ್ಮಗನ ಕೊಲೆ ಆಗಿದೆ ಎಂಬುದು ಕೇಸ್ ಆಗಿತ್ತು. ಇದರ ವಿರುದ್ಧ ಕೊಲೆಯಾಗಿದ್ದಾನೆ ಎನ್ನಲಾದ ಮೊಮ್ಮಗ ಲಕ್ನೋ ಕೋರ್ಟಿಗೆ ಹೋಗಿ ತಾನು ಬದುಕಿರುವುದಾಗಿ ಹೇಳಿದ್ದ. ಅದು ಲಕ್ನೋ ಕೋರ್ಟ್ನಿಂದ ಸುಪ್ರೀಂಕೋರ್ಟ್ಗೆ ಕೇಸ್ ಬಂದಿತ್ತು. ಇದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಂದೆ ಬಾಲಕ ತನ್ನನ್ನು ಯಾರು ಕೊಲೆ ಮಾಡಿಲ್ಲ. ತನ್ನ ತಂದೆ ಮಾಡಿರೋ ಸುಳ್ಳು ಆರೋಪ ಇದು. ಹೀಗಾಗಿ ತನ್ನ ಅಜ್ಜನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ತಾನು ಅಜ್ಜ, ಅಜ್ಜಿಯೊಂದಿಗೆ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ