newsfirstkannada.com

ಎಣ್ಣೆ ಏಟಲ್ಲಿ ಕಚ್ಚು ಕಚ್ಚು ಎಂದು ಹುಚ್ಚಾಟ; ರೊಚ್ಚಿಗೆದ್ದು ಕಚ್ಚಿದ ಹಾವು; ಸ್ಥಳದಲ್ಲೇ ಯುವಕ ಸಾವು!

Share :

06-11-2023

    ಕುಡಿದ ಅಮಲಿನಲ್ಲಿ ಹಾವಿನೊಂದಿಗೆ ಸರಸವಾಡಿದ ಯುವಕ

    ಇದರಿಂದ ರೊಚ್ಚಿಗೆದ್ದ ಹಾವು ಕುಡಿದಿದ್ದ ಯುವಕನಿಗೆ ಕಚ್ಚಿದೆ!

    ಇದರ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಯುವಕ.. ಯಾರೀತ?

ಬೆಂಗಳೂರು: ಎಣ್ಣೆ ಅಮಲು.. ಕುಡಿತದ ನಶೆ.. ಜೀವದ ಭಯವಿಲ್ಲದೆ ನಶೆಯಲ್ಲಿ ವಿಷ ಸರ್ಪ ಹಿಡಿದು ಯುಕವನೊಬ್ಬ ಹುಚ್ಚಾಟ ಮೆರೆದಿದ್ದಾನೆ. ನಾನು ಮಹಾದೇವನ ಅವತಾರ ನನ್ನನ್ನು ಕಚ್ಚು ಕಚ್ಚು ಅಂತ ವಿಷ ಸರ್ಪಕ್ಕೆ ಈ ಯುವಕ ಸವಾಲು ಹಾಕಿದ್ದಾನೆ.

ಈತನ ಹೆಸರು ರೋಹಿತ್ ಜೈಸ್ವಾಲ್ ಅಂತಾ.. ವರ್ಷ 22.. ಕಂಠಪೂರ್ತಿ ಕುಡಿದು ಬಂದ ಈತನ ಹಾವಿನ ಮರಿ ಬಾಲವನ್ನು ಹಿಡಿದು ಕೈಯಲ್ಲಿ ಗಾಳಿಯಲ್ಲಿ ಆಟವಾಡಿದ್ದ. ಆ ಕಡೆಯಿಂದ ಈ ಕಡೆ ಬೀಸ್ತಿದ್ದ. ಅಷ್ಟೇ ಆಗಿದ್ರೆ ಪರವಾಗಿರಲಿಲ್ಲವೇನೋ? ಹಾವನ್ನು ಬಾಯಿಯಲ್ಲಿ ಹಾಕಿ ಕಚ್ಚು ಕಚ್ಚು ಅಂತ ಹೇಳುತ್ತಾ ಹಾವಿಗೆ ತೊಂದರೆ ಕೊಟ್ಟಿದ್ದಾನೆ.

ಇನ್ನು, ಇದರಿಂದ ರೊಚ್ಚಿಗೆದ್ದ ಹಾವು ಆತನಿಗೆ ಕಚ್ಚಿದ್ದು, ಯುವಕ ಮೃತಪಟ್ಟಿದ್ದಾನೆ. ಇಂಥದ್ದೊಂದು ವಿಚಿತ್ರ ಸಾವಿಗೆ ಉತ್ತರಪ್ರದೇಶದ ಡಿಯೋರಿಯಾ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಏಟಲ್ಲಿ ಕಚ್ಚು ಕಚ್ಚು ಎಂದು ಹುಚ್ಚಾಟ; ರೊಚ್ಚಿಗೆದ್ದು ಕಚ್ಚಿದ ಹಾವು; ಸ್ಥಳದಲ್ಲೇ ಯುವಕ ಸಾವು!

https://newsfirstlive.com/wp-content/uploads/2023/11/Snake-bites-man.jpg

    ಕುಡಿದ ಅಮಲಿನಲ್ಲಿ ಹಾವಿನೊಂದಿಗೆ ಸರಸವಾಡಿದ ಯುವಕ

    ಇದರಿಂದ ರೊಚ್ಚಿಗೆದ್ದ ಹಾವು ಕುಡಿದಿದ್ದ ಯುವಕನಿಗೆ ಕಚ್ಚಿದೆ!

    ಇದರ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಯುವಕ.. ಯಾರೀತ?

ಬೆಂಗಳೂರು: ಎಣ್ಣೆ ಅಮಲು.. ಕುಡಿತದ ನಶೆ.. ಜೀವದ ಭಯವಿಲ್ಲದೆ ನಶೆಯಲ್ಲಿ ವಿಷ ಸರ್ಪ ಹಿಡಿದು ಯುಕವನೊಬ್ಬ ಹುಚ್ಚಾಟ ಮೆರೆದಿದ್ದಾನೆ. ನಾನು ಮಹಾದೇವನ ಅವತಾರ ನನ್ನನ್ನು ಕಚ್ಚು ಕಚ್ಚು ಅಂತ ವಿಷ ಸರ್ಪಕ್ಕೆ ಈ ಯುವಕ ಸವಾಲು ಹಾಕಿದ್ದಾನೆ.

ಈತನ ಹೆಸರು ರೋಹಿತ್ ಜೈಸ್ವಾಲ್ ಅಂತಾ.. ವರ್ಷ 22.. ಕಂಠಪೂರ್ತಿ ಕುಡಿದು ಬಂದ ಈತನ ಹಾವಿನ ಮರಿ ಬಾಲವನ್ನು ಹಿಡಿದು ಕೈಯಲ್ಲಿ ಗಾಳಿಯಲ್ಲಿ ಆಟವಾಡಿದ್ದ. ಆ ಕಡೆಯಿಂದ ಈ ಕಡೆ ಬೀಸ್ತಿದ್ದ. ಅಷ್ಟೇ ಆಗಿದ್ರೆ ಪರವಾಗಿರಲಿಲ್ಲವೇನೋ? ಹಾವನ್ನು ಬಾಯಿಯಲ್ಲಿ ಹಾಕಿ ಕಚ್ಚು ಕಚ್ಚು ಅಂತ ಹೇಳುತ್ತಾ ಹಾವಿಗೆ ತೊಂದರೆ ಕೊಟ್ಟಿದ್ದಾನೆ.

ಇನ್ನು, ಇದರಿಂದ ರೊಚ್ಚಿಗೆದ್ದ ಹಾವು ಆತನಿಗೆ ಕಚ್ಚಿದ್ದು, ಯುವಕ ಮೃತಪಟ್ಟಿದ್ದಾನೆ. ಇಂಥದ್ದೊಂದು ವಿಚಿತ್ರ ಸಾವಿಗೆ ಉತ್ತರಪ್ರದೇಶದ ಡಿಯೋರಿಯಾ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More