ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್
ರಜನಿ ಸಿನಿಮಾ ರಿಲೀಸ್ಗೆ ವಾಟಾಳ್ ವಿರೋಧ..!
ಶಿವಣ್ಣ ನಟಿಸಬಾರದಿತ್ತು ಎಂದು ವಾಟಾಳ್ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಈ ಹಿಂದೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತಮಿಳುನಾಡು ಆಚರಿಸಿದ್ದ ಬಂದ್ ವೇಳೆ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದರು. ತಮಿಳುನಾಡು ಪರ ಕರ್ನಾಟಕದ ವಿರುದ್ಧ ಮಾತಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ ಸದ್ಯ ರಿಲೀಸ್ ಆಗಿರೋ ರಜನಿಕಾಂತ್ ಜೈಲರ್ ಸಿನಿಮಾಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಇಂದು ವಿಧಾನಸೌಧದಲ್ಲಿ ಈ ಸಂಬಂಧ ಮಾತಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನಾನು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಪಾರ ಕೆಲಸ ಮಾಡಿದ್ದೇನೆ. ಈ ಹಿಂದೆಯೇ ಕನ್ನಡ ಸಿನಿಮಾಗೆ ಸಬ್ಸಿಡಿ ನೀಡಿ ಎಂದು ಮನವಿ ಮಾಡಿದ್ದೆ. ಅಂದು ರಾಮಕೃಷ್ಣಾ ಹೆಗ್ಡೆ ಸರ್ಕಾರ ನನ್ನ ಮನವಿಗೆ ಒಪ್ಪಿಗೆ ನೀಡಿತ್ತು ಎಂದರು.
ಕನ್ನಡ ಸಿನಿಮಾ ಇಂಡಸ್ಟ್ರೀ ಗಾಂಭೀರ್ಯತೆ ಹೋಗಿದೆ. ರಜನಿಕಾಂತ್ ಕನ್ನಡ ದ್ರೋಹಿ. ಶಿವಣ್ಣ ರಜನಿ ಸಿನಿಮಾದಲ್ಲಿ ನಟಿಸೋ ಮುನ್ನ ಯೋಚನೆ ಮಾಡಬೇಕಿತ್ತು. ಜೈಲರ್ 2.5 ಸಾವಿರ ಪರದೆಗಳ ಮೇಲೆ ರಿಲೀಸ್ ಆಗಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗಿಲ್ಲ. ಕರ್ನಾಟಕದಲ್ಲಿ ಆಗಿರೋ ಕಾರಣ ಇದರಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಆಗಲಿದೆ. ಕಾವೇರಿ ವಿರುದ್ಧ ಮಾತಾಡಿದ ರಜನಿಕಾಂತ್ ಸಿನಿಮಾ ರಿಲೀಸ್ಗೆ ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂದು ಗುಡುಗಿದರು ವಾಟಾಳ್.
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್
ರಜನಿ ಸಿನಿಮಾ ರಿಲೀಸ್ಗೆ ವಾಟಾಳ್ ವಿರೋಧ..!
ಶಿವಣ್ಣ ನಟಿಸಬಾರದಿತ್ತು ಎಂದು ವಾಟಾಳ್ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಈ ಹಿಂದೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತಮಿಳುನಾಡು ಆಚರಿಸಿದ್ದ ಬಂದ್ ವೇಳೆ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದರು. ತಮಿಳುನಾಡು ಪರ ಕರ್ನಾಟಕದ ವಿರುದ್ಧ ಮಾತಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ ಸದ್ಯ ರಿಲೀಸ್ ಆಗಿರೋ ರಜನಿಕಾಂತ್ ಜೈಲರ್ ಸಿನಿಮಾಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಇಂದು ವಿಧಾನಸೌಧದಲ್ಲಿ ಈ ಸಂಬಂಧ ಮಾತಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನಾನು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಪಾರ ಕೆಲಸ ಮಾಡಿದ್ದೇನೆ. ಈ ಹಿಂದೆಯೇ ಕನ್ನಡ ಸಿನಿಮಾಗೆ ಸಬ್ಸಿಡಿ ನೀಡಿ ಎಂದು ಮನವಿ ಮಾಡಿದ್ದೆ. ಅಂದು ರಾಮಕೃಷ್ಣಾ ಹೆಗ್ಡೆ ಸರ್ಕಾರ ನನ್ನ ಮನವಿಗೆ ಒಪ್ಪಿಗೆ ನೀಡಿತ್ತು ಎಂದರು.
ಕನ್ನಡ ಸಿನಿಮಾ ಇಂಡಸ್ಟ್ರೀ ಗಾಂಭೀರ್ಯತೆ ಹೋಗಿದೆ. ರಜನಿಕಾಂತ್ ಕನ್ನಡ ದ್ರೋಹಿ. ಶಿವಣ್ಣ ರಜನಿ ಸಿನಿಮಾದಲ್ಲಿ ನಟಿಸೋ ಮುನ್ನ ಯೋಚನೆ ಮಾಡಬೇಕಿತ್ತು. ಜೈಲರ್ 2.5 ಸಾವಿರ ಪರದೆಗಳ ಮೇಲೆ ರಿಲೀಸ್ ಆಗಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗಿಲ್ಲ. ಕರ್ನಾಟಕದಲ್ಲಿ ಆಗಿರೋ ಕಾರಣ ಇದರಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಆಗಲಿದೆ. ಕಾವೇರಿ ವಿರುದ್ಧ ಮಾತಾಡಿದ ರಜನಿಕಾಂತ್ ಸಿನಿಮಾ ರಿಲೀಸ್ಗೆ ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂದು ಗುಡುಗಿದರು ವಾಟಾಳ್.