ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಸೋಲು
ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟರ್ ಭಾರೀ ಆಕ್ರೋಶ!
ಹಣ & ಅಧಿಕಾರ ಅಲ್ಲ, ದೇಶಕ್ಕಾಗಿ ಕ್ರಿಕೆಟ್ ಆಡಿ ಅಂದ್ರು
ಬೆಂಗಳೂರು: ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತ ಟೀಂ ಇಂಡಿಯಾ ವಿರುದ್ಧ ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕ್ರಿಕೆಟ್ ದಿಗ್ಗಜ ವೆಂಕಟೇಶ್ ಪ್ರಸಾದ್ ಅವರು, ಟೆಸ್ಟ್ ಕ್ರಿಕೆಟ್ ಹೊರತುಪಡಿಸಿ ಒನ್ ಡೇ, ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಬಹಳ ಕಳಪೆ ಪ್ರದರ್ಶನ ನೀಡುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ನಡೆದ ಬಾಂಗ್ಲಾದೇಶ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಜತೆಗೆ ಕಳೆದ ಎರಡು T20 ವಿಶ್ವಕಪ್ನಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸೋತು ಹೋಯ್ತು. ಟೀಂ ಇಂಡಿಯಾ ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡದ ರೀತಿಯಲ್ಲಿ ದೇಶಕ್ಕಾಗಿ ಆಡುತ್ತಿಲ್ಲ ಎಂದು ವೆಂಕಟೇಶ್ ಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.
Test cricket aside, India has been very ordinary in the other two formats for quite sometime now.
Lost odi series against ban, SA and Aus. Poor in the last two T20 World Cups.
Neither are we an exciting team like England nor brutal like how the Aussies used to be. Cont— Venkatesh Prasad (@venkateshprasad) July 30, 2023
ಟೀಂ ಇಂಡಿಯಾ ಶೂನ್ಯ
ಇನ್ನು, ದುಡ್ಡು ಮತ್ತು ಅಧಿಕಾರ ಹೊರತು ಟೀಂ ಇಂಡಿಯಾ ಶೂನ್ಯವಾಗಿದೆ. ಎಂದಿಗೂ ಚಾಂಪಿಯನ್ ತಂಡದ ರೀತಿಯಲ್ಲಿ ಪ್ರದರ್ಶನ ನೀಡಿಲ್ಲ. ಒಂದು ತಂಡ ಗೆಲ್ಲಲು ಆಡುತ್ತದೆ, ಆದರೆ, ಭಾರತ ಎಂದಿಗೂ ಹಾಗೇ ಇಲ್ಲ. ನಮ್ಮ ಆ್ಯಟಿಟ್ಯೂಡ್ ಟೀಂ ಇಂಡಿಯಾದ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಟೆಸ್ಟ್ ಸೀರೀಸ್ ಗೆದ್ದಿದ್ದ ಟೀಂ ಇಂಡಿಯಾ ಈಗ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ 2ನೇ ಒನ್ ಡೇ ಮ್ಯಾಚ್ನಲ್ಲಿ ಭಾರೀ ಮುಖಭಂಗ ಆಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲು
ಯೆಸ್, 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದೆ. ಸುಮಾರು 6 ವಿಕೆಟ್ಗಳ ಗೆಲುವಿನ ಜತೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆದರೀಗ, ಟೀಂ ಇಂಡಿಯಾದಲ್ಲಿ ಯಂಗ್ಸ್ಟರ್ಸ್ಗೆ ಚಾನ್ಸ್ ಸಿಕ್ಕರೂ ಯಾಕೆ ಆಡುತ್ತಿಲ್ಲ? ತಂಡದ ಸೋಲಿಗೆ ಕಾರಣವೇನು? ಎಂಬ ಚರ್ಚೆ ಜೋರಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಸೋಲು
ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟರ್ ಭಾರೀ ಆಕ್ರೋಶ!
ಹಣ & ಅಧಿಕಾರ ಅಲ್ಲ, ದೇಶಕ್ಕಾಗಿ ಕ್ರಿಕೆಟ್ ಆಡಿ ಅಂದ್ರು
ಬೆಂಗಳೂರು: ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತ ಟೀಂ ಇಂಡಿಯಾ ವಿರುದ್ಧ ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕ್ರಿಕೆಟ್ ದಿಗ್ಗಜ ವೆಂಕಟೇಶ್ ಪ್ರಸಾದ್ ಅವರು, ಟೆಸ್ಟ್ ಕ್ರಿಕೆಟ್ ಹೊರತುಪಡಿಸಿ ಒನ್ ಡೇ, ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಬಹಳ ಕಳಪೆ ಪ್ರದರ್ಶನ ನೀಡುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ನಡೆದ ಬಾಂಗ್ಲಾದೇಶ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಜತೆಗೆ ಕಳೆದ ಎರಡು T20 ವಿಶ್ವಕಪ್ನಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸೋತು ಹೋಯ್ತು. ಟೀಂ ಇಂಡಿಯಾ ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡದ ರೀತಿಯಲ್ಲಿ ದೇಶಕ್ಕಾಗಿ ಆಡುತ್ತಿಲ್ಲ ಎಂದು ವೆಂಕಟೇಶ್ ಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.
Test cricket aside, India has been very ordinary in the other two formats for quite sometime now.
Lost odi series against ban, SA and Aus. Poor in the last two T20 World Cups.
Neither are we an exciting team like England nor brutal like how the Aussies used to be. Cont— Venkatesh Prasad (@venkateshprasad) July 30, 2023
ಟೀಂ ಇಂಡಿಯಾ ಶೂನ್ಯ
ಇನ್ನು, ದುಡ್ಡು ಮತ್ತು ಅಧಿಕಾರ ಹೊರತು ಟೀಂ ಇಂಡಿಯಾ ಶೂನ್ಯವಾಗಿದೆ. ಎಂದಿಗೂ ಚಾಂಪಿಯನ್ ತಂಡದ ರೀತಿಯಲ್ಲಿ ಪ್ರದರ್ಶನ ನೀಡಿಲ್ಲ. ಒಂದು ತಂಡ ಗೆಲ್ಲಲು ಆಡುತ್ತದೆ, ಆದರೆ, ಭಾರತ ಎಂದಿಗೂ ಹಾಗೇ ಇಲ್ಲ. ನಮ್ಮ ಆ್ಯಟಿಟ್ಯೂಡ್ ಟೀಂ ಇಂಡಿಯಾದ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಟೆಸ್ಟ್ ಸೀರೀಸ್ ಗೆದ್ದಿದ್ದ ಟೀಂ ಇಂಡಿಯಾ ಈಗ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ 2ನೇ ಒನ್ ಡೇ ಮ್ಯಾಚ್ನಲ್ಲಿ ಭಾರೀ ಮುಖಭಂಗ ಆಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲು
ಯೆಸ್, 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದೆ. ಸುಮಾರು 6 ವಿಕೆಟ್ಗಳ ಗೆಲುವಿನ ಜತೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆದರೀಗ, ಟೀಂ ಇಂಡಿಯಾದಲ್ಲಿ ಯಂಗ್ಸ್ಟರ್ಸ್ಗೆ ಚಾನ್ಸ್ ಸಿಕ್ಕರೂ ಯಾಕೆ ಆಡುತ್ತಿಲ್ಲ? ತಂಡದ ಸೋಲಿಗೆ ಕಾರಣವೇನು? ಎಂಬ ಚರ್ಚೆ ಜೋರಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ