ಏಕದಿನ ವಿಶ್ವಕಪ್ ಪರ್ಫಾಮೆನ್ಸ್ ಮೇಲೆ ನಾಯಕತ್ವ ಸ್ಥಾನ..!
ಬೂಮ್ರಾಗೆ ಉಪ ನಾಯಕತ್ವದ ಪಟ್ಟಾಭಿಷೇಕ..?
ಪಾಂಡ್ಯ ಕೈಜಾರುತ್ತಿದೆಯಾ ಉಪ ನಾಯಕತ್ವ..?
ಟೀಮ್ ಇಂಡಿಯಾ ಪ್ರಕಟಕ್ಕೆ ಕೌಟ್ಡೌನ್ ಶುರುವಾಗಿದ್ದು, ಏಷ್ಯಾಕಪ್ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ವಲಯದಲ್ಲಿ ಮನೆ ಮಾಡಿದೆ. ಆದರೆ, ಇದೇ ವೇಳೆ ಟೀಮ್ ಇಂಡಿಯಾ, ಮಹತ್ತರ ಬದಲಾವಣೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಹೌದು! ಇಂದು ಏಷ್ಯಾಕಪ್ಗೆ ಟೀಮ್ ಇಂಡಿಯಾ ಪ್ರಕಟಿಸುವ ಜೊತೆ ಜೊತೆಗೆ ಉಪ ನಾಯಕತ್ವಕ್ಕೆ ಹೊಸ ಆಟಗಾರನ ನೇಮಿಸುವ ಬಗ್ಗೆ ಭಾರೀ ಚರ್ಚೆಯೇ ನಡೆಯುತ್ತಿದೆ. ಇದರಂತೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಹಾರ್ದಿಕ್ಗೆ ಶಾಕ್ ನೀಡಿದರು ಅಚ್ಚರಿ ಇಲ್ಲ.
ಹಾರ್ದಿಕ್ ಉಪ ಪಟ್ಟಕ್ಕೆ ಕಾದಿದ್ಯಾ ಸಂಚಕಾರ..?
ಸದ್ಯ ಟೀಮ್ ಇಂಡಿಯಾ ಏಕದಿನ ತಂಡದ ಉಪ ನಾಯಕನಾಗಿ ಹಾರ್ದಿಕ್, ಅಧಿಕಾರ ಚಲಾಯತಿಸುತ್ತಿದ್ದಾರೆ. ಆದರೆ, ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಉಪ ನಾಯಕತ್ವದ ಬದಲಾವಣೆ ಬಗ್ಗೆ ಮಹತ್ವದ ಚರ್ಚೆಗಳೇ ನಡೆಯುತ್ತಿದೆ. ಹೀಗಾಗಿ ನಾಯಕತ್ವದ ಜವಾಬ್ದಾರಿಯಲ್ಲಿ ಎಡವಿದ್ದ ಹಾರ್ದಿಕ್ಗೆ, ಉಪ ನಾಯಕತ್ವದ ಪಟ್ಟ ಕೈಜಾರುವ ಸಾಧ್ಯತೆ ಇದೆ. ಇದಕ್ಕೆಲ್ಲಾ ಕಾರಣ ಹಾರ್ದಿಕ್ರ ಸೇಫ್ ಗೇಮ್ ಸ್ಟ್ರಾಟರ್ಜಿ.
ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇತ್ತೀಚಿಗಿನ ವೆಸ್ಟ್ ಇಂಡೀಸ್ ಟೂರ್. ಈ ಟೂರ್ನ ಟಿ20 ಸರಣಿ ಸೋತಿದ್ದ ಪಾಂಡ್ಯ, ಫ್ಲಾಟ್ ಟ್ರ್ಯಾಕ್ಗಳಲ್ಲಿ ಬ್ಯಾಟಿಂಗ್ ಬಡ್ತಿ ಪಡೆಯುತ್ತಿದ್ದರು. ಬೌಲಿಂಗ್ಗೆ ಅನುಗುಣವಾದ ಪಿಚ್ಗಳಲ್ಲಿ ಪೇಸ್ ಅಟ್ಯಾಕರ್ ಆಗಿ ಬೌಲಿಂಗ್ ಮಾಡುತ್ತಿದ್ದರು. ಈ ಸೆಲ್ಪ್ ಸೇಫ್ಟಿಯೇ ಮುಳುವಾಗ್ತಿದೆ.
ಪಾಂಡ್ಯ ಉಪ ಪಟ್ಟಕ್ಕೆ ಜಸ್ಪ್ರೀತ್ ಬೂಮ್ರಾನೇ ಥ್ರೆಟ್..!
ಸದ್ಯ ಹಾರ್ದಿಕ್ ಪಾಂಡ್ಯಗೆ ಪ್ರಬಲ ಪೈಪೋಟಿ ನೀಡ್ತಿರುವ ಮತ್ತೊಬ್ಬ ಆಟಗಾರ ಅಂದ್ರೆ, ಅದು ಗುಜರಾತ್ ಮೂಲದ ಜಸ್ಪ್ರೀತ್ ಬೂಮ್ರಾನೇ ಆಗಿದ್ದಾರೆ. ಸದ್ಯ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ಬೂಮ್ರಾ, ಈ ಹಿಂದೆ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲ. ದಕ್ಷಿಣ ಆಫ್ರಿಕಾ ಸಿರೀಸ್ನಲ್ಲಿ ವೈಸ್ ಕ್ಯಾಪ್ಟನ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಬೂಮ್ರಾಗೆ, ಈಗ ಏಷ್ಯಾಕಪ್ನಲ್ಲಿ ಉಪ ನಾಯಕನಾಗಿ ನೇಮಿಸುವ ಉತ್ಸುಕತೆ ಬಿಸಿಸಿಐ ತೋರಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲ. ಭವಿಷ್ಯದ ದೃಷ್ಟಿಯಿಂದಲೂ ಬಿಸಿಸಿಐ ಮೆಗಾ ಪ್ಲಾನ್ ಮಾಡ್ತಿದೆ.
ರೋಹಿತ್ ನಿರ್ಗಮನದ ಬಳಿಕ ಪಾಂಡ್ಯ & ಬೂಮ್ರಾಗೆ ಪಟ್ಟ
ಸದ್ಯ ಇಬ್ಬರು ಫೈಟ್ ಜಸ್ಟ್ ಉಪ ನಾಯಕತ್ವದ ಪಟ್ಟಕ್ಕೇ ಮಾತ್ರವೇ ಸಿಮೀತವಾಗಿಲ್ಲ. 2023ರ ಏಕದಿನ ವಿಶ್ವಕಪ್ ಬಳಿಕ ನಾಯಕತ್ವ ವಹಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಯಾಕಂದ್ರೆ, ಏಕದಿನ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ ಬೈ ಹೇಳಲಿದ್ದು, ಹೊಸ ನಾಯಕ ನೇಮಕ ಮಾಡಬೇಕಾದ ಚಾಲೆಂಜ್ ಬಿಸಿಸಿಐ ಮುಂದಿದೆ. ಹೀಗಾಗಿ ಏಕದಿನ ವಿಶ್ವಕಪ್ನಲ್ಲಿ ನೀಡುವ ಉತ್ತಮ ಪ್ರದರ್ಶನದ ಆಧಾರದ ಮೇಲೆ ನಾಯಕತ್ವದ ಪಟ್ಟ ಕಟ್ಟಲು ಬಿಸಿಸಿಐ ಚಿಂತಿಸುತ್ತಿದೆ. ಈ ಸ್ಥಾನಕ್ಕೆ ಬೂಮ್ರಾ ಅಥವಾ ಪಾಂಡ್ಯ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ನಾಯಕತ್ವದ ರೇಸ್ನಲ್ಲಿದ್ದಾರೆ ಮುಂಬೈಕರ್ ಶ್ರೇಯಸ್..!
ಹೌದು! ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬೂಮ್ರಾ ಮಾತ್ರವಲ್ಲ. ಮುಂಬೈಕರ್ ಶ್ರೇಯಸ್ ಅಯ್ಯರ್ ಕೂಡ ಉಪ ನಾಯಕತ್ವ ಹಾಗೂ ನಾಯಕತ್ವದ ಪಟ್ಟದ ರೇಸ್ನಲ್ಲಿದ್ಧಾರೆ. ಯಾಕಂದ್ರೆ, ರಾಹುಲ್ ಬಳಿಕ ಸ್ಟ್ರಾಂಗ್ ಕಂಟೇಟರ್ ಆಗಿದ್ದ ಶ್ರೇಯಸ್, ಇಂಜುರಿಯಿಂದಾಗಿ ವೈಸ್ ಕ್ಯಾಪ್ಟನ್ ಪಟ್ಟ ತಪ್ಪಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ ಶ್ರೇಯಸ್ ಅದ್ಬುತ ಪ್ರದರ್ಶನ ನೀಡಿದ್ರೆ, ನಾಯಕನಾದರೂ ಅಚ್ಚರಿ ಇಲ್ಲ.
ಒಟ್ನಲ್ಲಿ..! ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾದಲ್ಲಿ ಉಪ ನಾಯಕನ ರೇಸ್ ನಡೆಯುತ್ತಿದ್ದು, ಅಂತಿಮವಾಗಿ ಯಾರು ರೋಹಿತ್ಗೆ ಸಾಥ್ ನೀಡ್ತಾರೆ ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಏಕದಿನ ವಿಶ್ವಕಪ್ ಪರ್ಫಾಮೆನ್ಸ್ ಮೇಲೆ ನಾಯಕತ್ವ ಸ್ಥಾನ..!
ಬೂಮ್ರಾಗೆ ಉಪ ನಾಯಕತ್ವದ ಪಟ್ಟಾಭಿಷೇಕ..?
ಪಾಂಡ್ಯ ಕೈಜಾರುತ್ತಿದೆಯಾ ಉಪ ನಾಯಕತ್ವ..?
ಟೀಮ್ ಇಂಡಿಯಾ ಪ್ರಕಟಕ್ಕೆ ಕೌಟ್ಡೌನ್ ಶುರುವಾಗಿದ್ದು, ಏಷ್ಯಾಕಪ್ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ವಲಯದಲ್ಲಿ ಮನೆ ಮಾಡಿದೆ. ಆದರೆ, ಇದೇ ವೇಳೆ ಟೀಮ್ ಇಂಡಿಯಾ, ಮಹತ್ತರ ಬದಲಾವಣೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಹೌದು! ಇಂದು ಏಷ್ಯಾಕಪ್ಗೆ ಟೀಮ್ ಇಂಡಿಯಾ ಪ್ರಕಟಿಸುವ ಜೊತೆ ಜೊತೆಗೆ ಉಪ ನಾಯಕತ್ವಕ್ಕೆ ಹೊಸ ಆಟಗಾರನ ನೇಮಿಸುವ ಬಗ್ಗೆ ಭಾರೀ ಚರ್ಚೆಯೇ ನಡೆಯುತ್ತಿದೆ. ಇದರಂತೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಹಾರ್ದಿಕ್ಗೆ ಶಾಕ್ ನೀಡಿದರು ಅಚ್ಚರಿ ಇಲ್ಲ.
ಹಾರ್ದಿಕ್ ಉಪ ಪಟ್ಟಕ್ಕೆ ಕಾದಿದ್ಯಾ ಸಂಚಕಾರ..?
ಸದ್ಯ ಟೀಮ್ ಇಂಡಿಯಾ ಏಕದಿನ ತಂಡದ ಉಪ ನಾಯಕನಾಗಿ ಹಾರ್ದಿಕ್, ಅಧಿಕಾರ ಚಲಾಯತಿಸುತ್ತಿದ್ದಾರೆ. ಆದರೆ, ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಉಪ ನಾಯಕತ್ವದ ಬದಲಾವಣೆ ಬಗ್ಗೆ ಮಹತ್ವದ ಚರ್ಚೆಗಳೇ ನಡೆಯುತ್ತಿದೆ. ಹೀಗಾಗಿ ನಾಯಕತ್ವದ ಜವಾಬ್ದಾರಿಯಲ್ಲಿ ಎಡವಿದ್ದ ಹಾರ್ದಿಕ್ಗೆ, ಉಪ ನಾಯಕತ್ವದ ಪಟ್ಟ ಕೈಜಾರುವ ಸಾಧ್ಯತೆ ಇದೆ. ಇದಕ್ಕೆಲ್ಲಾ ಕಾರಣ ಹಾರ್ದಿಕ್ರ ಸೇಫ್ ಗೇಮ್ ಸ್ಟ್ರಾಟರ್ಜಿ.
ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇತ್ತೀಚಿಗಿನ ವೆಸ್ಟ್ ಇಂಡೀಸ್ ಟೂರ್. ಈ ಟೂರ್ನ ಟಿ20 ಸರಣಿ ಸೋತಿದ್ದ ಪಾಂಡ್ಯ, ಫ್ಲಾಟ್ ಟ್ರ್ಯಾಕ್ಗಳಲ್ಲಿ ಬ್ಯಾಟಿಂಗ್ ಬಡ್ತಿ ಪಡೆಯುತ್ತಿದ್ದರು. ಬೌಲಿಂಗ್ಗೆ ಅನುಗುಣವಾದ ಪಿಚ್ಗಳಲ್ಲಿ ಪೇಸ್ ಅಟ್ಯಾಕರ್ ಆಗಿ ಬೌಲಿಂಗ್ ಮಾಡುತ್ತಿದ್ದರು. ಈ ಸೆಲ್ಪ್ ಸೇಫ್ಟಿಯೇ ಮುಳುವಾಗ್ತಿದೆ.
ಪಾಂಡ್ಯ ಉಪ ಪಟ್ಟಕ್ಕೆ ಜಸ್ಪ್ರೀತ್ ಬೂಮ್ರಾನೇ ಥ್ರೆಟ್..!
ಸದ್ಯ ಹಾರ್ದಿಕ್ ಪಾಂಡ್ಯಗೆ ಪ್ರಬಲ ಪೈಪೋಟಿ ನೀಡ್ತಿರುವ ಮತ್ತೊಬ್ಬ ಆಟಗಾರ ಅಂದ್ರೆ, ಅದು ಗುಜರಾತ್ ಮೂಲದ ಜಸ್ಪ್ರೀತ್ ಬೂಮ್ರಾನೇ ಆಗಿದ್ದಾರೆ. ಸದ್ಯ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ಬೂಮ್ರಾ, ಈ ಹಿಂದೆ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲ. ದಕ್ಷಿಣ ಆಫ್ರಿಕಾ ಸಿರೀಸ್ನಲ್ಲಿ ವೈಸ್ ಕ್ಯಾಪ್ಟನ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಬೂಮ್ರಾಗೆ, ಈಗ ಏಷ್ಯಾಕಪ್ನಲ್ಲಿ ಉಪ ನಾಯಕನಾಗಿ ನೇಮಿಸುವ ಉತ್ಸುಕತೆ ಬಿಸಿಸಿಐ ತೋರಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲ. ಭವಿಷ್ಯದ ದೃಷ್ಟಿಯಿಂದಲೂ ಬಿಸಿಸಿಐ ಮೆಗಾ ಪ್ಲಾನ್ ಮಾಡ್ತಿದೆ.
ರೋಹಿತ್ ನಿರ್ಗಮನದ ಬಳಿಕ ಪಾಂಡ್ಯ & ಬೂಮ್ರಾಗೆ ಪಟ್ಟ
ಸದ್ಯ ಇಬ್ಬರು ಫೈಟ್ ಜಸ್ಟ್ ಉಪ ನಾಯಕತ್ವದ ಪಟ್ಟಕ್ಕೇ ಮಾತ್ರವೇ ಸಿಮೀತವಾಗಿಲ್ಲ. 2023ರ ಏಕದಿನ ವಿಶ್ವಕಪ್ ಬಳಿಕ ನಾಯಕತ್ವ ವಹಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಯಾಕಂದ್ರೆ, ಏಕದಿನ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್ ಬೈ ಹೇಳಲಿದ್ದು, ಹೊಸ ನಾಯಕ ನೇಮಕ ಮಾಡಬೇಕಾದ ಚಾಲೆಂಜ್ ಬಿಸಿಸಿಐ ಮುಂದಿದೆ. ಹೀಗಾಗಿ ಏಕದಿನ ವಿಶ್ವಕಪ್ನಲ್ಲಿ ನೀಡುವ ಉತ್ತಮ ಪ್ರದರ್ಶನದ ಆಧಾರದ ಮೇಲೆ ನಾಯಕತ್ವದ ಪಟ್ಟ ಕಟ್ಟಲು ಬಿಸಿಸಿಐ ಚಿಂತಿಸುತ್ತಿದೆ. ಈ ಸ್ಥಾನಕ್ಕೆ ಬೂಮ್ರಾ ಅಥವಾ ಪಾಂಡ್ಯ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ನಾಯಕತ್ವದ ರೇಸ್ನಲ್ಲಿದ್ದಾರೆ ಮುಂಬೈಕರ್ ಶ್ರೇಯಸ್..!
ಹೌದು! ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬೂಮ್ರಾ ಮಾತ್ರವಲ್ಲ. ಮುಂಬೈಕರ್ ಶ್ರೇಯಸ್ ಅಯ್ಯರ್ ಕೂಡ ಉಪ ನಾಯಕತ್ವ ಹಾಗೂ ನಾಯಕತ್ವದ ಪಟ್ಟದ ರೇಸ್ನಲ್ಲಿದ್ಧಾರೆ. ಯಾಕಂದ್ರೆ, ರಾಹುಲ್ ಬಳಿಕ ಸ್ಟ್ರಾಂಗ್ ಕಂಟೇಟರ್ ಆಗಿದ್ದ ಶ್ರೇಯಸ್, ಇಂಜುರಿಯಿಂದಾಗಿ ವೈಸ್ ಕ್ಯಾಪ್ಟನ್ ಪಟ್ಟ ತಪ್ಪಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ ಶ್ರೇಯಸ್ ಅದ್ಬುತ ಪ್ರದರ್ಶನ ನೀಡಿದ್ರೆ, ನಾಯಕನಾದರೂ ಅಚ್ಚರಿ ಇಲ್ಲ.
ಒಟ್ನಲ್ಲಿ..! ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾದಲ್ಲಿ ಉಪ ನಾಯಕನ ರೇಸ್ ನಡೆಯುತ್ತಿದ್ದು, ಅಂತಿಮವಾಗಿ ಯಾರು ರೋಹಿತ್ಗೆ ಸಾಥ್ ನೀಡ್ತಾರೆ ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ