newsfirstkannada.com

Video: ಹಾರಂಗಿ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಸಂದೀಪ್​ ಬದುಕಲು ಹೋರಾಟ ನಡೆಸಿದ ವಿಡಿಯೋ ವೈರಲ್​

Share :

04-08-2023

    ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಸಂದೀಪ್​

    ಸಂದೀಪ್​ ಕೊನೆಯ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ

    ಕೊನೆಗೂ ಸಿಕ್ತು ಬೆಂಗಳೂರು ಮೂಲದ ಪ್ರವಾಸಿಗನ ಮೃತದೇಹ

ಕೊಡಗು: ನಿನ್ನೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಬಳಿ ಬೆಂಗಳೂರು ಮೂಲದ ಪ್ರವಾಸಿಗ ಸಂದೀಪ್ ಎಂಬಾತ ಸ್ನೇಹಿತರೊಂದಿಗೆ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿತ್ತು. ಇಂದು ನೀರು ಪಾಲಾಗಿ ಸಾವನ್ನಪ್ಪಿದ ಸಂದೀಪ್​ ಮೃತದೇಹ ಸಿಕ್ಕಿದೆ. ಆದರೆ ನೀರಿನಲ್ಲಿ ಕೊಚ್ಚಿ ಹೋದ ಸಂದೀಪ್ ಸಾವಿಗೂ ಮುನ್ನ​ ಬದುಕಲು ನೀರಿನಲ್ಲಿ ಹೋರಾಡುತ್ತಿರುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಏನಿದು ಘಟನೆ?

ಸಂದೀಪ್ ಮೂವರು ಸ್ನೇಹಿತರೊಂದಿಗೆ ಹಾರಂಗಿ ಜಲಾಶಯಕ್ಕೆ ಬಂದಿದ್ದ. ಈ ವೇಳೆ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆಯ ತಪ್ಪಿ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.

ನಿನ್ನೆಯಿಂದ ಅಗ್ನಿಶಾಮಕ ದಳ ಮತ್ತು ನುರಿತ ಈಜುಗಾರರು ಸಂದೀಪ್​ಗಾಗಿ ಹುಡುಕಾಟ ನಡೆಸಿದ್ದರು. ಆದರೆ ನೀರಿನ ರಭಸ ಹೆಚ್ಚಿದ್ದ ಕಾರಣ ಸಂದೀಪ್​ ಸಿಕ್ಕಿರಲಿಲ್ಲ. ಮಾತ್ರವಲ್ಲದೆ ಜಲಾಶಯದ ಹೊರಹರಿವನ್ನು ತಡೆಹಿಡಿದು ಹುಡುಕಲಾಗಿತ್ತು. ಆದರೂ ಮೃತದೇಹ ಸಿಕ್ಕಿರಲಿಲ್ಲ. ಇಂದು ಸಂದೀಪ್​ ಮೃತದೇಹ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Video: ಹಾರಂಗಿ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಸಂದೀಪ್​ ಬದುಕಲು ಹೋರಾಟ ನಡೆಸಿದ ವಿಡಿಯೋ ವೈರಲ್​

https://newsfirstlive.com/wp-content/uploads/2023/08/Kodagu-Sandeep.jpg

    ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಸಂದೀಪ್​

    ಸಂದೀಪ್​ ಕೊನೆಯ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ

    ಕೊನೆಗೂ ಸಿಕ್ತು ಬೆಂಗಳೂರು ಮೂಲದ ಪ್ರವಾಸಿಗನ ಮೃತದೇಹ

ಕೊಡಗು: ನಿನ್ನೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಬಳಿ ಬೆಂಗಳೂರು ಮೂಲದ ಪ್ರವಾಸಿಗ ಸಂದೀಪ್ ಎಂಬಾತ ಸ್ನೇಹಿತರೊಂದಿಗೆ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿತ್ತು. ಇಂದು ನೀರು ಪಾಲಾಗಿ ಸಾವನ್ನಪ್ಪಿದ ಸಂದೀಪ್​ ಮೃತದೇಹ ಸಿಕ್ಕಿದೆ. ಆದರೆ ನೀರಿನಲ್ಲಿ ಕೊಚ್ಚಿ ಹೋದ ಸಂದೀಪ್ ಸಾವಿಗೂ ಮುನ್ನ​ ಬದುಕಲು ನೀರಿನಲ್ಲಿ ಹೋರಾಡುತ್ತಿರುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಏನಿದು ಘಟನೆ?

ಸಂದೀಪ್ ಮೂವರು ಸ್ನೇಹಿತರೊಂದಿಗೆ ಹಾರಂಗಿ ಜಲಾಶಯಕ್ಕೆ ಬಂದಿದ್ದ. ಈ ವೇಳೆ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆಯ ತಪ್ಪಿ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.

ನಿನ್ನೆಯಿಂದ ಅಗ್ನಿಶಾಮಕ ದಳ ಮತ್ತು ನುರಿತ ಈಜುಗಾರರು ಸಂದೀಪ್​ಗಾಗಿ ಹುಡುಕಾಟ ನಡೆಸಿದ್ದರು. ಆದರೆ ನೀರಿನ ರಭಸ ಹೆಚ್ಚಿದ್ದ ಕಾರಣ ಸಂದೀಪ್​ ಸಿಕ್ಕಿರಲಿಲ್ಲ. ಮಾತ್ರವಲ್ಲದೆ ಜಲಾಶಯದ ಹೊರಹರಿವನ್ನು ತಡೆಹಿಡಿದು ಹುಡುಕಲಾಗಿತ್ತು. ಆದರೂ ಮೃತದೇಹ ಸಿಕ್ಕಿರಲಿಲ್ಲ. ಇಂದು ಸಂದೀಪ್​ ಮೃತದೇಹ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More