newsfirstkannada.com

ಪತ್ನಿಯ ಸೀಮಂತಕ್ಕೆ ಹೂ ತರಲು ಹೊರಟ್ಟಿದ್ದ ಪತಿ ಬಸ್ ಚಕ್ರದಡಿ ಸಿಲುಕಿ ಸಾವು

Share :

29-10-2023

    BMTC ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಪತಿ

    ಪತ್ನಿಗೆ ಸೀಮಂತ ಮಾಡಲು ಸ್ಕೂಟಿಯಲ್ಲಿ ಹೂ ತರುತ್ತಿದ್ದ ಗಂಡ

    ಗೋವಿಂದರಾಜ ನಗರದ ಬಳಿ BMTC ಬಸ್​ ನಡಿಗೆ ಸಿಲುಕಿ ಸ್ಥಳದಲ್ಲೇ ಸಾವು

ವಿಜಯನಗರ: ಹೆಂಡತಿಯ ಸೀಮಂತ ಕಾರ್ಯಕ್ರಮದ ಸಂತಸದಲ್ಲಿದ್ದ ಪತಿ ಬಿಎಂಟಿಸಿ ಬಸ್​ನಡಿಗೆ ಸಿಲುಕಿ ಪ್ರಾಣ ಬಿಟ್ಟ ಘಟನೆ ಗೋವಿಂದರಾಜ ನಗರದ ಬೈಟು ಕಾಫಿ ಅಂಗಡಿಯ ಮುಂದೆ ನಡೆದಿದೆ. ಕುಮಾರ್​ ಎಂಬಾತ ಸಾವನ್ನಪ್ಪಿದ್ದಾನೆ.

ಮೃತ ಕುಮಾರ್ ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿದ್ದು, ಪತ್ನಿಗೆ ಸೀಮಂತ ಮಾಡಬೇಕು ಎಂದು ಮಾರ್ಕೆಟ್​ನಿಂದ ಹೂ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಬಿಎಂಟಿಸಿ ಬಸ್​ನಡಿಗೆ ಕುಮಾರ್​ ಬಿದ್ದಿದ್ದಾನೆ. ಪರಿಣಾಮ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಸದ್ಯ ಬಿಎಂಟಿಸಿ ಚಾಲಕ ಶ್ರೀನಿವಾಸ್​ನನ್ನು ವಿಜಯನಗರ ಸಂಚಾರಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಕುಮಾರ್​ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಪತ್ನಿಯ ಸೀಮಂತಕ್ಕೆ ಹೂ ತರಲು ಹೊರಟ್ಟಿದ್ದ ಪತಿ ಬಸ್ ಚಕ್ರದಡಿ ಸಿಲುಕಿ ಸಾವು

https://newsfirstlive.com/wp-content/uploads/2023/10/Kumar.jpg

    BMTC ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಪತಿ

    ಪತ್ನಿಗೆ ಸೀಮಂತ ಮಾಡಲು ಸ್ಕೂಟಿಯಲ್ಲಿ ಹೂ ತರುತ್ತಿದ್ದ ಗಂಡ

    ಗೋವಿಂದರಾಜ ನಗರದ ಬಳಿ BMTC ಬಸ್​ ನಡಿಗೆ ಸಿಲುಕಿ ಸ್ಥಳದಲ್ಲೇ ಸಾವು

ವಿಜಯನಗರ: ಹೆಂಡತಿಯ ಸೀಮಂತ ಕಾರ್ಯಕ್ರಮದ ಸಂತಸದಲ್ಲಿದ್ದ ಪತಿ ಬಿಎಂಟಿಸಿ ಬಸ್​ನಡಿಗೆ ಸಿಲುಕಿ ಪ್ರಾಣ ಬಿಟ್ಟ ಘಟನೆ ಗೋವಿಂದರಾಜ ನಗರದ ಬೈಟು ಕಾಫಿ ಅಂಗಡಿಯ ಮುಂದೆ ನಡೆದಿದೆ. ಕುಮಾರ್​ ಎಂಬಾತ ಸಾವನ್ನಪ್ಪಿದ್ದಾನೆ.

ಮೃತ ಕುಮಾರ್ ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿದ್ದು, ಪತ್ನಿಗೆ ಸೀಮಂತ ಮಾಡಬೇಕು ಎಂದು ಮಾರ್ಕೆಟ್​ನಿಂದ ಹೂ ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಬಿಎಂಟಿಸಿ ಬಸ್​ನಡಿಗೆ ಕುಮಾರ್​ ಬಿದ್ದಿದ್ದಾನೆ. ಪರಿಣಾಮ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಸದ್ಯ ಬಿಎಂಟಿಸಿ ಚಾಲಕ ಶ್ರೀನಿವಾಸ್​ನನ್ನು ವಿಜಯನಗರ ಸಂಚಾರಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಕುಮಾರ್​ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More