newsfirstkannada.com

ನಿನಗೆ ತಾಕತ್‌ ಇದ್ರೆ.. ಬಿಗ್‌ಬಾಸ್‌ ಮನೆಯಲ್ಲಿ ದೊಡ್ಡ ‘ಕಿಚ್ಚು’ ಹಚ್ಚಿದ್ದೇ ವಿನಯ್​​ ಗೌಡ ಈ ಮಾತು; ಅಸಲಿಗೆ ಆಗಿದ್ದೇನು?

Share :

02-11-2023

    ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಗೊಂಡ ಶೋ ಈಗ ಇಬ್ಭಾಗ

    ಹಳ್ಳಿಯಲ್ಲಿ ಎರಡು ಮನೆತನ, ಎರಡು ಮನೆತನಕ್ಕೆ ಇಬ್ಬರು ಮುಖ್ಯಸ್ಥರು

    ಸಂಗೀತಾ v/s ವಿನಯ್ ತಂಡಗಳ ನಡುವೆ ನಡೆಯುತ್ತಿದೆ ದೊಡ್ಡ ಯುದ್ಧ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ ಶುರುವಾಗಿ ಈವರೆಗೂ ಒಟ್ಟು 26 ದಿನಗಳು ಕಳೆದಿವೆ. ಇದೀಗ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಇದ್ದಾರೆ. ಬಿಗ್​ಬಾಸ್​ ಮನೆಯಲ್ಲಿ 4ನೇ ವಾರದ ನಾಮಿನೇಷನ್ ಕೂಡ ಮುಗಿದಿದೆ. ಈ ಬಾರಿ ವಿಭಿನ್ನವಾಗಿ ನಾಮಿನೇಷನ್ ಮಾಡಲಾಗಿದೆ. ಈ ವಾರ ನಾಮಿನೆಟ್ ಆಗಿರೋ ಸ್ಪರ್ಧಿಗಳು ಅಂದ್ರೆ ವಿನಯ್, ಸಿರಿ, ಮೈಕಲ್, ತುಕಾಲಿ ಸಂತೋಷ್, ಸ್ನೇಹಿತ್, ರಕ್ಷಕ್, ತನಿಷಾ, ವರ್ತೂರು ಸಂತೋಷ್ ಹಾಗೂ ಕ್ಯಾಪ್ಟನ್ ನೀತು ಅವರಿಂದ ನೇರವಾಗಿ ನಾಮಿನೆಟ್ ಆಗಿರೋ ಕಾರ್ತಿಕ್. ಇಷ್ಟು ಈ ವಾರ ಮನೆಯಿಂದ ಹೊರ ಹೋಗಲು ನಾಮಿನೆಟ್ ಆಗಿರೋ ಸ್ಪರ್ಧಿಗಳು ಇವರು.

ಇದನ್ನು ಓದಿ: ಮೊದಲು ನೆಟ್ಟಗೆ ಮಾತಾಡು ಆಮೇಲೆ ಮಿಕ್ಕಿದ್ದು.. ಡ್ರೋನ್ ಪ್ರತಾಪ್, ವಿನಯ್‌ ಮಧ್ಯೆ ಮಾತಿನ ಚಕಮಕಿ

ಬಿಗ್​ಬಾಸ್​​ ಶುರುವಾದ ದಿನದಿಂದ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಬಿಗ್​ಬಾಸ್​​ ಮನೆಯ ಸ್ಪರ್ಧಿಗಳು ಸದ್ದು ಮಾಡುತ್ತಿದ್ದಾರೆ. ವಿನಯ್​​ ಗೌಡ ಹಾಗೂ ಸಂಗೀತಾ ನಡುವೆ ಬಿಗ್​ ಫೈಟ್​ ನಡೆಯುತ್ತಲೇ ಇರುತ್ತದೆ. ಇತ್ತ ವಿನಯ್​ ಹಾಗೂ ಕಾರ್ತಿಕ್​​ ಮಧ್ಯೆ ಕೆಟ್ಟ ಕೆಟ್ಟ ಮಾತಿನಿಂದ ನಿಂದನೆ ಮಾಡುತ್ತಾ ಇರುತ್ತಾರೆ. ಮತ್ತೆ ವಿನಯ್​​ ಹಾಗೂ ತನಿಶಾ ನಡುವೆ ಕೂಡ ಟಾಸ್ಕ್​​ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು. ನಮ್ರತಾ ಹಾಗೂ ಸಂಗೀತಾ ಅವರ ಜಗಳ ಕೂಡ ತಾರಕಕ್ಕೇರಿತ್ತು. ಇದೀಗ ವಿನಯ್​​​ ಗೌಡ ಹೇಳಿರೋ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಹೌದು, ಬಿಗ್​ಬಾಸ್​ ಕೊಟ್ಟ​ ಹಳ್ಳಿಗೆ ಸಂಬಂಧಪಟ್ಟ ಟಾಸ್ಕ್​​ಗಳನ್ನು ಮನೆ ಮಂದಿ ಜಗಳ ಮಾಡಿಕೊಂಡು ಆಡುತ್ತಿದ್ದಾರೆ. ನಿನ್ನೆಯ ಟಾಸ್ಕ್​​ನಲ್ಲಿಯೂ ಕೂಡ ವಿನಯ್, ಕಾರ್ತಿಕ್, ಸಂಗೀತಾ, ನಮ್ರತಾ ಹಾಗೂ ತನಿಶಾ ನಡುವೆ ಸಿಕ್ಕಾಪಟ್ಟೆ ವಾದ ವಿವಾದಗಳು ಆಗಿವೆ. ಹೀಗೆ ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಮುಗಿದ ಬಳಿಕ ವಿನಯ್​​ ಟೀಮ್​​ ಹೊರಗಡೆ ಬಂದು ಮಾತಾಡುತ್ತಿದ್ದರು. ಇದೇ ವೇಳೆ ನಮ್ರತಾ ಅವರು ಟಾಸ್ಕ್​​ ವಿಚಾರವಾಗಿ ಮಾತಾಡಿದ್ದರು. ಬಳಿಕ ವಿನಯ್​​ ಗೌಡ ಹೀಗೆ ಮಾತನಾಡುತ್ತಾ ಒಂದೇ ಒಂದು ದಿನ ಅವಳು ನನ್ನ ಮುಂದೆ ಬಂದು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಿ. ಅವಳಿಗೆ ತಾಕತ್ತು ಇದ್ದರೆ ನನ್ನ ಜೊತೆ ಮಾತಾಡಲಿ ಎಂದು ವಿನಯ್​ ಗೌಡ ಹೇಳಿದ್ದಾರೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನಗೆ ತಾಕತ್‌ ಇದ್ರೆ.. ಬಿಗ್‌ಬಾಸ್‌ ಮನೆಯಲ್ಲಿ ದೊಡ್ಡ ‘ಕಿಚ್ಚು’ ಹಚ್ಚಿದ್ದೇ ವಿನಯ್​​ ಗೌಡ ಈ ಮಾತು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/11/bigg-boss-2023-11-02T161503.070.jpg

    ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಗೊಂಡ ಶೋ ಈಗ ಇಬ್ಭಾಗ

    ಹಳ್ಳಿಯಲ್ಲಿ ಎರಡು ಮನೆತನ, ಎರಡು ಮನೆತನಕ್ಕೆ ಇಬ್ಬರು ಮುಖ್ಯಸ್ಥರು

    ಸಂಗೀತಾ v/s ವಿನಯ್ ತಂಡಗಳ ನಡುವೆ ನಡೆಯುತ್ತಿದೆ ದೊಡ್ಡ ಯುದ್ಧ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ ಶುರುವಾಗಿ ಈವರೆಗೂ ಒಟ್ಟು 26 ದಿನಗಳು ಕಳೆದಿವೆ. ಇದೀಗ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಇದ್ದಾರೆ. ಬಿಗ್​ಬಾಸ್​ ಮನೆಯಲ್ಲಿ 4ನೇ ವಾರದ ನಾಮಿನೇಷನ್ ಕೂಡ ಮುಗಿದಿದೆ. ಈ ಬಾರಿ ವಿಭಿನ್ನವಾಗಿ ನಾಮಿನೇಷನ್ ಮಾಡಲಾಗಿದೆ. ಈ ವಾರ ನಾಮಿನೆಟ್ ಆಗಿರೋ ಸ್ಪರ್ಧಿಗಳು ಅಂದ್ರೆ ವಿನಯ್, ಸಿರಿ, ಮೈಕಲ್, ತುಕಾಲಿ ಸಂತೋಷ್, ಸ್ನೇಹಿತ್, ರಕ್ಷಕ್, ತನಿಷಾ, ವರ್ತೂರು ಸಂತೋಷ್ ಹಾಗೂ ಕ್ಯಾಪ್ಟನ್ ನೀತು ಅವರಿಂದ ನೇರವಾಗಿ ನಾಮಿನೆಟ್ ಆಗಿರೋ ಕಾರ್ತಿಕ್. ಇಷ್ಟು ಈ ವಾರ ಮನೆಯಿಂದ ಹೊರ ಹೋಗಲು ನಾಮಿನೆಟ್ ಆಗಿರೋ ಸ್ಪರ್ಧಿಗಳು ಇವರು.

ಇದನ್ನು ಓದಿ: ಮೊದಲು ನೆಟ್ಟಗೆ ಮಾತಾಡು ಆಮೇಲೆ ಮಿಕ್ಕಿದ್ದು.. ಡ್ರೋನ್ ಪ್ರತಾಪ್, ವಿನಯ್‌ ಮಧ್ಯೆ ಮಾತಿನ ಚಕಮಕಿ

ಬಿಗ್​ಬಾಸ್​​ ಶುರುವಾದ ದಿನದಿಂದ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಬಿಗ್​ಬಾಸ್​​ ಮನೆಯ ಸ್ಪರ್ಧಿಗಳು ಸದ್ದು ಮಾಡುತ್ತಿದ್ದಾರೆ. ವಿನಯ್​​ ಗೌಡ ಹಾಗೂ ಸಂಗೀತಾ ನಡುವೆ ಬಿಗ್​ ಫೈಟ್​ ನಡೆಯುತ್ತಲೇ ಇರುತ್ತದೆ. ಇತ್ತ ವಿನಯ್​ ಹಾಗೂ ಕಾರ್ತಿಕ್​​ ಮಧ್ಯೆ ಕೆಟ್ಟ ಕೆಟ್ಟ ಮಾತಿನಿಂದ ನಿಂದನೆ ಮಾಡುತ್ತಾ ಇರುತ್ತಾರೆ. ಮತ್ತೆ ವಿನಯ್​​ ಹಾಗೂ ತನಿಶಾ ನಡುವೆ ಕೂಡ ಟಾಸ್ಕ್​​ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು. ನಮ್ರತಾ ಹಾಗೂ ಸಂಗೀತಾ ಅವರ ಜಗಳ ಕೂಡ ತಾರಕಕ್ಕೇರಿತ್ತು. ಇದೀಗ ವಿನಯ್​​​ ಗೌಡ ಹೇಳಿರೋ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಹೌದು, ಬಿಗ್​ಬಾಸ್​ ಕೊಟ್ಟ​ ಹಳ್ಳಿಗೆ ಸಂಬಂಧಪಟ್ಟ ಟಾಸ್ಕ್​​ಗಳನ್ನು ಮನೆ ಮಂದಿ ಜಗಳ ಮಾಡಿಕೊಂಡು ಆಡುತ್ತಿದ್ದಾರೆ. ನಿನ್ನೆಯ ಟಾಸ್ಕ್​​ನಲ್ಲಿಯೂ ಕೂಡ ವಿನಯ್, ಕಾರ್ತಿಕ್, ಸಂಗೀತಾ, ನಮ್ರತಾ ಹಾಗೂ ತನಿಶಾ ನಡುವೆ ಸಿಕ್ಕಾಪಟ್ಟೆ ವಾದ ವಿವಾದಗಳು ಆಗಿವೆ. ಹೀಗೆ ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಮುಗಿದ ಬಳಿಕ ವಿನಯ್​​ ಟೀಮ್​​ ಹೊರಗಡೆ ಬಂದು ಮಾತಾಡುತ್ತಿದ್ದರು. ಇದೇ ವೇಳೆ ನಮ್ರತಾ ಅವರು ಟಾಸ್ಕ್​​ ವಿಚಾರವಾಗಿ ಮಾತಾಡಿದ್ದರು. ಬಳಿಕ ವಿನಯ್​​ ಗೌಡ ಹೀಗೆ ಮಾತನಾಡುತ್ತಾ ಒಂದೇ ಒಂದು ದಿನ ಅವಳು ನನ್ನ ಮುಂದೆ ಬಂದು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಿ. ಅವಳಿಗೆ ತಾಕತ್ತು ಇದ್ದರೆ ನನ್ನ ಜೊತೆ ಮಾತಾಡಲಿ ಎಂದು ವಿನಯ್​ ಗೌಡ ಹೇಳಿದ್ದಾರೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More