newsfirstkannada.com

ಬೆಂಗಳೂರಿನಲ್ಲಿ ಕಿಂಗ್​ ಕೊಹ್ಲಿ! ಯೋ-ಯೋ ಟೆಸ್ಟ್​ನಲ್ಲಿ ಪಡೆದ ಅಂಕವನ್ನ ರಿವೀಲ್​ ಮಾಡಿದ ವಿರಾಟ್​

Share :

24-08-2023

    ಯೋ-ಯೋ ಟೆಸ್ಟ್​ ಮುಗಿಸಿದ ವಿರಾಟ್​ ಕೊಹ್ಲಿ

    ಕಿಂಗ್​ ಕೊಹ್ಲಿಯನ್ನು ಕಂಡು ಅಚ್ಚರಿಗೊಂಡ ಕ್ರಿಕೆಟ್​ ಪ್ರಿಯರು

    ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗಾಗಿ ಯೋ-ಯೋ ಟೆಸ್ಟ್​

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್​ ವಿರಾಟ್​​ ಕೊಹ್ಲಿ ಬೆಂಗಳೂರಿನಲ್ಲಿದ್ದಾರೆ. ಮುಂಬರುವ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗೆ ಸಂಬಂಧಿಸಿ ಯೋ-ಯೋ ಟೆಸ್ಟ್​ ಮುಗಿಸಿದ್ದಾರೆ. ಈ ಸಂತಸದ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿರಾಟ್​​ ಕೊಹ್ಲಿ ಯೋ-ಯೋ ಟೆಸ್ಟ್​ನಲ್ಲಿ ತಾವು ಪಡೆದ ಅಂಕಗಳನ್ನ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಭಯಾನಕ ಕೋನ್​ಗಳ ನಡುವೆಯು ಯೋ ಟೆಸ್ಟ್​ ಮುಗಿಸಿದ್ದೇನೆ. 17.2 ಅಂಕ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆಯೇ ಕೊಹ್ಲಿ ಮಾತ್ರವಲ್ಲ, ಭಾರತದ ತಂಡದ ಆಟಗಾರರು ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿನ ನ್ಯಾಷನಲ್​ ಅಕಾಡೆಮಿಗೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ.

ಮುಂಬರುವ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿ ನಡೆಯಲಿದ್ದು, ಇದರ ನಿಮಿತ್ತ ಟೀಂ ಇಂಡಿಯಾದ ಆಟಗಾರರು ಕರ್ನಾಟಕದ ರಾಜಧಾನಿಗೆ ಬಂದಿಳಿದಿದ್ದಾರೆ. ಇಲ್ಲಿ ಟ್ರೈನಿಂಗ್​ ಪಡೆದ ಬಳಿಕ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ.

ಆಗಸ್ಟ್​ 30ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿ ಆತಿಥ್ಯದಲ್ಲಿ ಏಪ್ಯಾಕಪ್​​​ ಟೂರ್ನಿ ನಡೆಯಲಿಕ್ಕಿದೆ. ಸೆಪ್ಟೆಂಬರ್​ 2ರಂದು ಪಾಕಿಸ್ತಾನದ ಜೊತೆಗೆ ಟೀಂ ಇಂಡಿಯಾದ ಕಲಿಗಳು ಸೆಣೆಸಾಡಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೆಂಗಳೂರಿನಲ್ಲಿ ಕಿಂಗ್​ ಕೊಹ್ಲಿ! ಯೋ-ಯೋ ಟೆಸ್ಟ್​ನಲ್ಲಿ ಪಡೆದ ಅಂಕವನ್ನ ರಿವೀಲ್​ ಮಾಡಿದ ವಿರಾಟ್​

https://newsfirstlive.com/wp-content/uploads/2023/08/Virat-Kohli.jpg

    ಯೋ-ಯೋ ಟೆಸ್ಟ್​ ಮುಗಿಸಿದ ವಿರಾಟ್​ ಕೊಹ್ಲಿ

    ಕಿಂಗ್​ ಕೊಹ್ಲಿಯನ್ನು ಕಂಡು ಅಚ್ಚರಿಗೊಂಡ ಕ್ರಿಕೆಟ್​ ಪ್ರಿಯರು

    ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗಾಗಿ ಯೋ-ಯೋ ಟೆಸ್ಟ್​

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್​ ವಿರಾಟ್​​ ಕೊಹ್ಲಿ ಬೆಂಗಳೂರಿನಲ್ಲಿದ್ದಾರೆ. ಮುಂಬರುವ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗೆ ಸಂಬಂಧಿಸಿ ಯೋ-ಯೋ ಟೆಸ್ಟ್​ ಮುಗಿಸಿದ್ದಾರೆ. ಈ ಸಂತಸದ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿರಾಟ್​​ ಕೊಹ್ಲಿ ಯೋ-ಯೋ ಟೆಸ್ಟ್​ನಲ್ಲಿ ತಾವು ಪಡೆದ ಅಂಕಗಳನ್ನ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಭಯಾನಕ ಕೋನ್​ಗಳ ನಡುವೆಯು ಯೋ ಟೆಸ್ಟ್​ ಮುಗಿಸಿದ್ದೇನೆ. 17.2 ಅಂಕ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆಯೇ ಕೊಹ್ಲಿ ಮಾತ್ರವಲ್ಲ, ಭಾರತದ ತಂಡದ ಆಟಗಾರರು ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿನ ನ್ಯಾಷನಲ್​ ಅಕಾಡೆಮಿಗೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ.

ಮುಂಬರುವ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿ ನಡೆಯಲಿದ್ದು, ಇದರ ನಿಮಿತ್ತ ಟೀಂ ಇಂಡಿಯಾದ ಆಟಗಾರರು ಕರ್ನಾಟಕದ ರಾಜಧಾನಿಗೆ ಬಂದಿಳಿದಿದ್ದಾರೆ. ಇಲ್ಲಿ ಟ್ರೈನಿಂಗ್​ ಪಡೆದ ಬಳಿಕ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ.

ಆಗಸ್ಟ್​ 30ರಿಂದ ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿ ಆತಿಥ್ಯದಲ್ಲಿ ಏಪ್ಯಾಕಪ್​​​ ಟೂರ್ನಿ ನಡೆಯಲಿಕ್ಕಿದೆ. ಸೆಪ್ಟೆಂಬರ್​ 2ರಂದು ಪಾಕಿಸ್ತಾನದ ಜೊತೆಗೆ ಟೀಂ ಇಂಡಿಯಾದ ಕಲಿಗಳು ಸೆಣೆಸಾಡಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More