newsfirstkannada.com

ಸಿಎಂರನ್ನು ಭೇಟಿ ಮಾಡಿದ ಕೊಹ್ಲಿ.. ಈ ಬಾರಿ ವರ್ಲ್ಡ್​ಕಪ್​ ಗೆದ್ದೇ ಗೆಲ್ಲುತ್ತೇವೆಂದ ಮುಖ್ಯಮಂತ್ರಿ!

Share :

25-10-2023

    ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು

    ಕಪ್​ ಗೆದ್ದೇ ಗೆಲ್ಲುತ್ತೇವೆ ಎಂದು ವಿರಾಟ್​ ಕೊಹ್ಲಿ ಮುಂದೆ ಹೇಳಿದ ಸಿಎಂ.!

    ಕಿವೀಸ್ ವಿರುದ್ಧದ ಪಂದ್ಯದಲ್ಲಿ 95 ರನ್​ಗಳನ್ನ ಬಾರಿಸಿದ್ದ ವಿರಾಟ್ ಕೊಹ್ಲಿ

ತಂಡದ ಸ್ಟಾರ್ ಪ್ಲೇಯರ್​ ವಿರಾಟ್ ಕೊಹ್ಲಿಯವರ ನಿರ್ಣಾಯಕ ಆಟದಿಂದ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾದ ಗೆಲುವು ಸಾಧಿಸಿದೆ. ಓಪನರ್​ ಬ್ಯಾಟ್ಸ್​ಮನ್​ಗಳ ಬೇಗ ಔಟ್ ಆಗಿದ್ದರಿಂದ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಿ ನಿಂತು ತಮ್ಮ ಅಮೋಘ 95 ರನ್​ಗಳಿಂದ ಭಾರತವನ್ನು ಗೆಲ್ಲಿಸಿದರು. ಸದ್ಯ ವಿರಾಟ್ ಕೊಹ್ಲಿಯವರು ಹಿಮಾಚಲ ಪ್ರದೇಶದ ಸಿಎಂ ಠಾಕೂರ್ ಸುಖವಿಂದರ್ ಸಿಂಗ್ ಸುಖು ಅವರನ್ನು ಭೇಟಿ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಧರ್ಮಶಾಲಾದಲ್ಲಿ ಸಿಎಂ ಠಾಕೂರ್ ಸುಖವಿಂದರ್ ಸಿಂಗ್ ಸುಖುರನ್ನ ಭೇಟಿ ಮಾಡಿದ್ದು ಈ ವೇಳೆ ಇಬ್ಬರು ಕೆಲ ಹೊತ್ತು ಕ್ರಿಕೆಟ್​ ಬಗ್ಗೆ ಕುಳಿತು ಚರ್ಚೆ ಮಾಡಿದ್ದಾರೆ. ನ್ಯೂಜಿಲೆಂಡ್​ ವಿರುದ್ಧ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಕೊಹ್ಲಿಗೆ ಸಿಎಂ ಶುಭ ಕೋರಿದರು. ಅಲ್ಲದೇ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದರಿಂದ ಈ ಬಾರಿ ಭಾರತ ವಿಶ್ವಕಪ್​ ಅನ್ನು ಗೆದ್ದೇ ಗೆಲ್ಲುತ್ತದೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.

ವಿರಾಟ್ ಕೊಹ್ಲಿ

ಸದ್ಯ ವರ್ಲ್ಡ್​ಕಪ್​ಗೆ ಆಯ್ಕೆಯಾದ ಆಟಗಾರರೆಲ್ಲ ಚೆನ್ನಾಗಿ ಆಡುತ್ತಿದ್ದರಿಂದ ಒಳ್ಳೆಯ ತಂಡವನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ವರ್ಲ್ಡ್​​ಕಪ್​ ಅನ್ನು ಮತ್ತೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಇನ್ನು ಇದೇ ವೇಳೆ ಸಿಎಂ ಜೊತೆ ಹಿಮಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ತೇಜೇಂದ್ರ ಬಿಟ್ಟು, ಸುನಿಲ್ ಶರ್ಮಾ, ಶಾಸಕ ಸುಧೀರ್​ ಶರ್ಮಾ ಇದ್ದರು. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಭಾರತ 274 ರನ್​ ಗಳಿಸುವ ಮೂಲಕ ವಿಜಯಮಾಲೆ ಧರಿಸಿತು. ಇದು ವಿಶ್ವಕಪ್​ನಲ್ಲಿ ಭಾರತದ 5ನೇ ಗೆಲುವು ಆಗಿರುವುದು ಇನ್ನೊಂದು ವಿಶೇಷ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಿಎಂರನ್ನು ಭೇಟಿ ಮಾಡಿದ ಕೊಹ್ಲಿ.. ಈ ಬಾರಿ ವರ್ಲ್ಡ್​ಕಪ್​ ಗೆದ್ದೇ ಗೆಲ್ಲುತ್ತೇವೆಂದ ಮುಖ್ಯಮಂತ್ರಿ!

https://newsfirstlive.com/wp-content/uploads/2023/10/VIRAT_KOHLI_HP_CM.jpg

    ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು

    ಕಪ್​ ಗೆದ್ದೇ ಗೆಲ್ಲುತ್ತೇವೆ ಎಂದು ವಿರಾಟ್​ ಕೊಹ್ಲಿ ಮುಂದೆ ಹೇಳಿದ ಸಿಎಂ.!

    ಕಿವೀಸ್ ವಿರುದ್ಧದ ಪಂದ್ಯದಲ್ಲಿ 95 ರನ್​ಗಳನ್ನ ಬಾರಿಸಿದ್ದ ವಿರಾಟ್ ಕೊಹ್ಲಿ

ತಂಡದ ಸ್ಟಾರ್ ಪ್ಲೇಯರ್​ ವಿರಾಟ್ ಕೊಹ್ಲಿಯವರ ನಿರ್ಣಾಯಕ ಆಟದಿಂದ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾದ ಗೆಲುವು ಸಾಧಿಸಿದೆ. ಓಪನರ್​ ಬ್ಯಾಟ್ಸ್​ಮನ್​ಗಳ ಬೇಗ ಔಟ್ ಆಗಿದ್ದರಿಂದ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಿ ನಿಂತು ತಮ್ಮ ಅಮೋಘ 95 ರನ್​ಗಳಿಂದ ಭಾರತವನ್ನು ಗೆಲ್ಲಿಸಿದರು. ಸದ್ಯ ವಿರಾಟ್ ಕೊಹ್ಲಿಯವರು ಹಿಮಾಚಲ ಪ್ರದೇಶದ ಸಿಎಂ ಠಾಕೂರ್ ಸುಖವಿಂದರ್ ಸಿಂಗ್ ಸುಖು ಅವರನ್ನು ಭೇಟಿ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಧರ್ಮಶಾಲಾದಲ್ಲಿ ಸಿಎಂ ಠಾಕೂರ್ ಸುಖವಿಂದರ್ ಸಿಂಗ್ ಸುಖುರನ್ನ ಭೇಟಿ ಮಾಡಿದ್ದು ಈ ವೇಳೆ ಇಬ್ಬರು ಕೆಲ ಹೊತ್ತು ಕ್ರಿಕೆಟ್​ ಬಗ್ಗೆ ಕುಳಿತು ಚರ್ಚೆ ಮಾಡಿದ್ದಾರೆ. ನ್ಯೂಜಿಲೆಂಡ್​ ವಿರುದ್ಧ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಕೊಹ್ಲಿಗೆ ಸಿಎಂ ಶುಭ ಕೋರಿದರು. ಅಲ್ಲದೇ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದರಿಂದ ಈ ಬಾರಿ ಭಾರತ ವಿಶ್ವಕಪ್​ ಅನ್ನು ಗೆದ್ದೇ ಗೆಲ್ಲುತ್ತದೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.

ವಿರಾಟ್ ಕೊಹ್ಲಿ

ಸದ್ಯ ವರ್ಲ್ಡ್​ಕಪ್​ಗೆ ಆಯ್ಕೆಯಾದ ಆಟಗಾರರೆಲ್ಲ ಚೆನ್ನಾಗಿ ಆಡುತ್ತಿದ್ದರಿಂದ ಒಳ್ಳೆಯ ತಂಡವನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ವರ್ಲ್ಡ್​​ಕಪ್​ ಅನ್ನು ಮತ್ತೆ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಇನ್ನು ಇದೇ ವೇಳೆ ಸಿಎಂ ಜೊತೆ ಹಿಮಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ತೇಜೇಂದ್ರ ಬಿಟ್ಟು, ಸುನಿಲ್ ಶರ್ಮಾ, ಶಾಸಕ ಸುಧೀರ್​ ಶರ್ಮಾ ಇದ್ದರು. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಭಾರತ 274 ರನ್​ ಗಳಿಸುವ ಮೂಲಕ ವಿಜಯಮಾಲೆ ಧರಿಸಿತು. ಇದು ವಿಶ್ವಕಪ್​ನಲ್ಲಿ ಭಾರತದ 5ನೇ ಗೆಲುವು ಆಗಿರುವುದು ಇನ್ನೊಂದು ವಿಶೇಷ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More