newsfirstkannada.com

ಮೇಜರ್ ಚೇಂಜಸ್ ಆದ್ರೆ ಮಾತ್ರ ವರ್ಲ್ಡ್​ಕಪ್​ ಗೆಲ್ಲಬಹುದು.. ಟೀಮ್ ಇಂಡಿಯಾ​ಗೆ ಸೆಹ್ವಾಗ್ ಕೊಟ್ಟ ಆ ಟಿಪ್ಸ್‌ ಏನು?

Share :

06-07-2023

    ಇದೇ ಪ್ಲಾನ್ ಮಾಡಿ ​​ 2011ರ ವಿಶ್ವಕಪ್​ ಗೆದ್ದಿದ್ದ ಟೀಮ್ ಇಂಡಿಯಾ

    ವಿಶ್ವಕಪ್​​ಗೂ ಮುನ್ನ 15 ಒನ್​ ಡೇ ಮ್ಯಾಚ್​ ಆಡಲಿದೆ ಭಾರತ ತಂಡ

    ವರ್ಲ್ಡ್​​ಕಪ್​ ಗೆಲ್ಲಲ್ಲು ಹೀಗೆ ಮಾಡಬೇಕಂತೆ, ಏನ್​ ಪ್ಲಾನ್​ ಗೊತ್ತಾ..?

ಟೀಮ್ ಇಂಡಿಯಾದ ಐಸಿಸಿ ಟ್ರೋಫಿ ಬರ ನೀಗೋದ್ಯಾವಾಗ? ಈ ಪ್ರಶ್ನೆ ದಶಕದಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನ ಬಿಟ್ಟುಬಿಡದೇ ಕಾಡ್ತಿದೆ. ಹಾಗಾದ್ರೆ ಈ ವನವಾಸಕ್ಕೆ ಮುಕ್ತಿ ಸಿಗೋದೆ ಇಲ್ವ?. ಖಂಡಿತಾ ಸಿಗುತ್ತೆ. ಸಿಡಿಲ ಮರಿ ಸೆಹ್ವಾಗ್​​​ ಹೇಳಿದ ಈ ಒಂದು ಮಾತನ್ನ ಫಾಲೋಮಾಡಿದರೆ ಡೆಫಿನೆಟ್ಲಿ 2023ರ ಒನ್ಡೇ ವಿಶ್ವಕಪ್​​ ನಮ್ಮದಾಗಲಿದೆ. ಅಷ್ಟಕ್ಕೂ ವಿಸ್ಫೋಟಕ ಬ್ಯಾಟ್ಸ್​​ಮನ್​​​ ವೀರೇಂದ್ರ ಸೆಹ್ವಾಗ್ ಹೇಳಿದ್ದಾದರು ಏನು?

ಕ್ರಿಕೆಟ್ ಮಹಾಜಾತ್ರೆ ಎಂದೇ ಕರೆಯಲ್ಪಡುವ ಒನ್ಡೇ ವಿಶ್ವಕಪ್​​ ಆರಂಭಕ್ಕೆ ಕೌಂಟ್​ಡೌನ್​​ ಶುರುವಾಗಿದೆ. ಅಕ್ಟೋಬರ್​​ 5 ರಿಂದ ಫಿಫಿ ಓವರ್​​​​ ವಿಶ್ವಕಪ್​​ಗೆ ಗ್ರ್ಯಾಂಡ್​​ ಕಿಕ್​​​ ಸ್ಟಾರ್ಟ್​ ಸಿಗಲಿದ್ದು, ಟೀಮ್ ಇಂಡಿಯಾ 12 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಎದುರು ನೋಡ್ತಿದೆ. ಆದರೆ ಅದು ಅಂದುಕೊಂಡಷ್ಟು ಸುಲಭವಿಲ್ಲ. ವಿಶ್ವಕಪ್​​ಗೂ ಮುನ್ನ ಈ ಮೇಜರ್ ಚೇಂಜಸ್ ಮಾಡಿಕೊಂಡ್ರೆ ಮಾತ್ರ ದಶಕದ ಐಸಿಸಿ ಟ್ರೋಫಿ ಕೊರಗು ನೀಗಲಿದೆ.

ಇನ್ನಾದ್ರು ಬದಲಾಗುತ್ತಾ ಟೀಮ್ ಇಂಡಿಯಾದ ಅಪ್ರೋಚ್​​​..?

ಒನ್ಡೇ ವಿಶ್ವಕಪ್​​ಗೂ ಮುನ್ನ 3 ಏಕದಿನ ಸರಣಿ ಮತ್ತು ಏಷ್ಯಾಕಪ್ ಟೂರ್ನಿಯನ್ನ ಆಡಲಿದೆ. ಒಟ್ಟು 15 ಏಕದಿನ ಪಂದ್ಯಗಳಲ್ಲಿ ಭಾರತ ಕಾದಾಡಲಿದೆ. ಇಂಡೀಸ್​​​ 3, ಅಪ್ಘಾನಿಸ್ತಾನ 3, ಏಷ್ಯಾಕಪ್​ ಫೈನಲ್​​​ ಸೇರಿ 6 ಹಾಗೂ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳನ್ನ ಸರಣಿಯನ್ನಾಡಲಿದೆ. ಮುಂಬರುವ ಈ ಎಲ್ಲ ಸರಣಿಗಳು ಭಾರತಕ್ಕೆ ವೆರಿ ವೆರಿ ಇಂಪಾರ್ಟೆಂಟ್​​.

ಈ ಯಾವ ಪಂದ್ಯವನ್ನು ಲೈಟ್ ಆಗಿ ಪರಿಗಣಿಸುವಂತಿಲ್ಲ. ಎಲ್ಲ ಸರಣಿಗಳು ವಿಶ್ವಕಪ್​ಗೆ​ ರಹದಾರಿ. ಬರೀ ಗೆಲುವಿನ ತೋರಣ ಕಟ್ಟಿದ್ರೆ ಸಾಲದು. ಇಡೀ ತಂಡವೇ ಆಟದ ಅಪ್ರೋಚ್​​​​​ ಚೇಂಜ್ ಆಗಬೇಕಿದೆ. ಮುಂಬರೋ ಪ್ರತಿ ಒನ್ಡೇಯನ್ನ ರೋಹಿತ್ & ಗ್ಯಾಂಗ್​​ ನಾಕೌಟ್​​​ ಗೇಮ್​​ನಂತೆ ಟ್ರೀಟ್ ಮಾಡುವ ಅಗತ್ಯವಿದೆ. ಆಗಲಷ್ಟೇ ಭಾರತ ವಿಶ್ವಕಪ್ ಟ್ರೋಫಿ ಬಳಿ ಸುಳಿಯಬಹುದು.

‘ಪ್ರತಿ ಒನ್ಡೇಯನ್ನ ನಾಕೌಟ್​​​ನಂತೆ ಆಡಬೇಕು’

ಇವತ್ತಿನಿಂದಲೇ ಟೀಮ್ ಇಂಡಿಯಾ ಮುಂಬರುವ ಪ್ರತಿ ಏಕದಿನ ಪಂದ್ಯವನ್ನ ನಾಕೌಟ್​​ ಪಂದ್ಯದಂತೆ ಟ್ರೀಟ್ ಮಾಡ್ಬೇಕು. ಆಗ ಏಕದಿನ ವಿಶ್ವಕಪ್​​ನಲ್ಲಿ ಸುಲಭವಾಗಿ ನಾಕೌಟ್​​ ಹಂತಕ್ಕೆ ತಲುಪಲಿದೆ. ಜತೆಗೆ ಈ ಮೈಂಡ್​ಸೆಟ್​ ನಾಕೌಟ್​​ ಪಂದ್ಯಗಳನ್ನ ಒತ್ತಡವನ್ನ ಕಡಿಮೆ ಮಾಡಲು ಸಹಕಾರಿ ಆಗಲಿದೆ.

ವಿರೇಂದ್ರ ಸೆಹ್ವಾಗ್​, ಭಾರತದ ಮಾಜಿ ಕ್ರಿಕೆಟಿಗ

ಸ್ಫೋಟಕ ಬ್ಯಾಟ್ಸ್​ಮನ್ ವಿರೇಂದ್ರ ಸೆಹ್ವಾಗ್​​​ ಹೇಳಿದ ಮಾತಿನಲ್ಲಿ ನಿಜಕ್ಕೂ ಅರ್ಥವಿದೆ. ಯಾಕಂದ್ರೆ ಈಗಿನ ಭಾರತ ತಂಡದಲ್ಲಿ ಅಗ್ರೆಸ್ಸಿವ್​ ಅಪ್ರೋಚ್​​​​​ ಕಾಣಿಸ್ತಿಲ್ಲ. ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಅಗ್ರೆಸ್ಸಿವ್​ನೆಸ್​​​​​ ಮರೆಯಾಗ್ತಿದೆ. ಆದರೆ ವಿಶ್ವಕಪ್​​ನಂತ ಬಿಗ್ ಟೂರ್ನಿಯನ್ನ ಗೆಲ್ಲಬೇಕಾದ್ರೆ ಅಗ್ರೆಸ್ಸಿವ್ ಅಪ್ರೋಚ್​​ ಬಹುಮುಖ್ಯ.

ಅಪ್ರೋಚ್​ ಬದಲಿಸಿ 2011ರ ವಿಶ್ವಕಪ್​ ಗೆದ್ದ ‘ಮಹೇಂದ್ರ’ ಪಡೆ

2 ನವೆಂಬರ್​​, 2011 ರಂದು ಭಾರತ ವಿಶ್ವವನ್ನೇ ಗೆದ್ದ ಸುದೀನ. ಫೈನಲ್​​ನಲ್ಲಿ ಬಲಿಷ್ಠ ಶ್ರೀಲಂಕಾ ತಂಡವನ್ನ ಮಣಿಸಿ ಹಿಸ್ಟಾರಿಕಲ್​ ಒನ್ಡೇ ವಿಶ್ವಕಪ್​​​​​​​​​ ಜಯಿಸಿತ್ತು. ಅಂದಿನ ಧೋನಿ ಪಡೆ ಅಪ್ರೋಚ್​​​​​ ಬದಲಿಸಿದ್ದರಿಂದಲೇ ಚರಿತ್ರೆ ಸೃಷ್ಟಿಸಿತು ಅನ್ನೋ ಇನ್​ಸೈಡ್​ ಸ್ಟೋರಿಯನ್ನ ಸೆಹ್ವಾಗ್​​​ ರಿವೀಲ್ ಮಾಡಿದ್ದಾರೆ.

‘ಅಪ್ರೋಚ್​ ಬದಲಿಸಿ ಟ್ರೋಫಿ ಗೆದ್ದೆವು’

2008 ರಲ್ಲಿ ಗ್ಯಾರಿ ಕರ್ಸ್ಟನ್​​​ ತಂಡದ ಕೋಚ್​​​​​ ಆಗಿದ್ದರು. ವಿಶ್ವಕಪ್​ ಆರಂಭಕ್ಕೆ ಇನ್ನೂ 3 ವರ್ಷ ಬಾಕಿ ಇತ್ತು. ಆದರೆ ನಾವು ಸುದೀರ್ಘ ಸಮಯ ಇದೆ ಎಂದು ನಿರ್ಲಕ್ಷಿಸಲಿಲ್ಲ. ಅಂದಿನಿಂದಲೇ ಪ್ರತಿ ಏಕದಿನ ಪಂದ್ಯವನ್ನ ನಾಕೌಟ್​​ ಗೇಮ್​​ನಂತೆ ಆಡಲು ಶುರು ಮಾಡಿದೆವು. ವಿಶ್ವಕಪ್​ ಗೆಲ್ಲಲು ಅದು ಸಹಕಾರಿ ಆಯ್ತು.

ವಿರೇಂದ್ರ ಸೆಹ್ವಾಗ್​, ಮಾಜಿ ಕ್ರಿಕೆಟಿಗ

ತವರಿನಲ್ಲಿ ನಡೆಯುವ ಒನ್ಡೇ ವಿಶ್ವಕಪ್​ ಗೆಲ್ಲಲು ಟೀಮ್ ಇಂಡಿಯಾ ಹವಣಿಸ್ತಿದೆ. ಆ ಮಹಾದಾಸೆ ಈಡೇರಬೇಕಾದ್ರೆ ಸೆಹ್ವಾಗ್ ಹೇಳಿದಂತೆ ತಂಡ ಅಪ್ರೋಚ್ ಚೇಂಜ್ ಆಗಲೇಬೇಕಿದೆ. ಇನ್ನಾದ್ರು ರೋಹಿತ್ ಪಡೆ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸುತ್ತಾ ಅಥವಾ ಇಲ್ವಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮೇಜರ್ ಚೇಂಜಸ್ ಆದ್ರೆ ಮಾತ್ರ ವರ್ಲ್ಡ್​ಕಪ್​ ಗೆಲ್ಲಬಹುದು.. ಟೀಮ್ ಇಂಡಿಯಾ​ಗೆ ಸೆಹ್ವಾಗ್ ಕೊಟ್ಟ ಆ ಟಿಪ್ಸ್‌ ಏನು?

https://newsfirstlive.com/wp-content/uploads/2023/07/VEERENDRA_SEHWAGH.jpg

    ಇದೇ ಪ್ಲಾನ್ ಮಾಡಿ ​​ 2011ರ ವಿಶ್ವಕಪ್​ ಗೆದ್ದಿದ್ದ ಟೀಮ್ ಇಂಡಿಯಾ

    ವಿಶ್ವಕಪ್​​ಗೂ ಮುನ್ನ 15 ಒನ್​ ಡೇ ಮ್ಯಾಚ್​ ಆಡಲಿದೆ ಭಾರತ ತಂಡ

    ವರ್ಲ್ಡ್​​ಕಪ್​ ಗೆಲ್ಲಲ್ಲು ಹೀಗೆ ಮಾಡಬೇಕಂತೆ, ಏನ್​ ಪ್ಲಾನ್​ ಗೊತ್ತಾ..?

ಟೀಮ್ ಇಂಡಿಯಾದ ಐಸಿಸಿ ಟ್ರೋಫಿ ಬರ ನೀಗೋದ್ಯಾವಾಗ? ಈ ಪ್ರಶ್ನೆ ದಶಕದಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನ ಬಿಟ್ಟುಬಿಡದೇ ಕಾಡ್ತಿದೆ. ಹಾಗಾದ್ರೆ ಈ ವನವಾಸಕ್ಕೆ ಮುಕ್ತಿ ಸಿಗೋದೆ ಇಲ್ವ?. ಖಂಡಿತಾ ಸಿಗುತ್ತೆ. ಸಿಡಿಲ ಮರಿ ಸೆಹ್ವಾಗ್​​​ ಹೇಳಿದ ಈ ಒಂದು ಮಾತನ್ನ ಫಾಲೋಮಾಡಿದರೆ ಡೆಫಿನೆಟ್ಲಿ 2023ರ ಒನ್ಡೇ ವಿಶ್ವಕಪ್​​ ನಮ್ಮದಾಗಲಿದೆ. ಅಷ್ಟಕ್ಕೂ ವಿಸ್ಫೋಟಕ ಬ್ಯಾಟ್ಸ್​​ಮನ್​​​ ವೀರೇಂದ್ರ ಸೆಹ್ವಾಗ್ ಹೇಳಿದ್ದಾದರು ಏನು?

ಕ್ರಿಕೆಟ್ ಮಹಾಜಾತ್ರೆ ಎಂದೇ ಕರೆಯಲ್ಪಡುವ ಒನ್ಡೇ ವಿಶ್ವಕಪ್​​ ಆರಂಭಕ್ಕೆ ಕೌಂಟ್​ಡೌನ್​​ ಶುರುವಾಗಿದೆ. ಅಕ್ಟೋಬರ್​​ 5 ರಿಂದ ಫಿಫಿ ಓವರ್​​​​ ವಿಶ್ವಕಪ್​​ಗೆ ಗ್ರ್ಯಾಂಡ್​​ ಕಿಕ್​​​ ಸ್ಟಾರ್ಟ್​ ಸಿಗಲಿದ್ದು, ಟೀಮ್ ಇಂಡಿಯಾ 12 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಎದುರು ನೋಡ್ತಿದೆ. ಆದರೆ ಅದು ಅಂದುಕೊಂಡಷ್ಟು ಸುಲಭವಿಲ್ಲ. ವಿಶ್ವಕಪ್​​ಗೂ ಮುನ್ನ ಈ ಮೇಜರ್ ಚೇಂಜಸ್ ಮಾಡಿಕೊಂಡ್ರೆ ಮಾತ್ರ ದಶಕದ ಐಸಿಸಿ ಟ್ರೋಫಿ ಕೊರಗು ನೀಗಲಿದೆ.

ಇನ್ನಾದ್ರು ಬದಲಾಗುತ್ತಾ ಟೀಮ್ ಇಂಡಿಯಾದ ಅಪ್ರೋಚ್​​​..?

ಒನ್ಡೇ ವಿಶ್ವಕಪ್​​ಗೂ ಮುನ್ನ 3 ಏಕದಿನ ಸರಣಿ ಮತ್ತು ಏಷ್ಯಾಕಪ್ ಟೂರ್ನಿಯನ್ನ ಆಡಲಿದೆ. ಒಟ್ಟು 15 ಏಕದಿನ ಪಂದ್ಯಗಳಲ್ಲಿ ಭಾರತ ಕಾದಾಡಲಿದೆ. ಇಂಡೀಸ್​​​ 3, ಅಪ್ಘಾನಿಸ್ತಾನ 3, ಏಷ್ಯಾಕಪ್​ ಫೈನಲ್​​​ ಸೇರಿ 6 ಹಾಗೂ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳನ್ನ ಸರಣಿಯನ್ನಾಡಲಿದೆ. ಮುಂಬರುವ ಈ ಎಲ್ಲ ಸರಣಿಗಳು ಭಾರತಕ್ಕೆ ವೆರಿ ವೆರಿ ಇಂಪಾರ್ಟೆಂಟ್​​.

ಈ ಯಾವ ಪಂದ್ಯವನ್ನು ಲೈಟ್ ಆಗಿ ಪರಿಗಣಿಸುವಂತಿಲ್ಲ. ಎಲ್ಲ ಸರಣಿಗಳು ವಿಶ್ವಕಪ್​ಗೆ​ ರಹದಾರಿ. ಬರೀ ಗೆಲುವಿನ ತೋರಣ ಕಟ್ಟಿದ್ರೆ ಸಾಲದು. ಇಡೀ ತಂಡವೇ ಆಟದ ಅಪ್ರೋಚ್​​​​​ ಚೇಂಜ್ ಆಗಬೇಕಿದೆ. ಮುಂಬರೋ ಪ್ರತಿ ಒನ್ಡೇಯನ್ನ ರೋಹಿತ್ & ಗ್ಯಾಂಗ್​​ ನಾಕೌಟ್​​​ ಗೇಮ್​​ನಂತೆ ಟ್ರೀಟ್ ಮಾಡುವ ಅಗತ್ಯವಿದೆ. ಆಗಲಷ್ಟೇ ಭಾರತ ವಿಶ್ವಕಪ್ ಟ್ರೋಫಿ ಬಳಿ ಸುಳಿಯಬಹುದು.

‘ಪ್ರತಿ ಒನ್ಡೇಯನ್ನ ನಾಕೌಟ್​​​ನಂತೆ ಆಡಬೇಕು’

ಇವತ್ತಿನಿಂದಲೇ ಟೀಮ್ ಇಂಡಿಯಾ ಮುಂಬರುವ ಪ್ರತಿ ಏಕದಿನ ಪಂದ್ಯವನ್ನ ನಾಕೌಟ್​​ ಪಂದ್ಯದಂತೆ ಟ್ರೀಟ್ ಮಾಡ್ಬೇಕು. ಆಗ ಏಕದಿನ ವಿಶ್ವಕಪ್​​ನಲ್ಲಿ ಸುಲಭವಾಗಿ ನಾಕೌಟ್​​ ಹಂತಕ್ಕೆ ತಲುಪಲಿದೆ. ಜತೆಗೆ ಈ ಮೈಂಡ್​ಸೆಟ್​ ನಾಕೌಟ್​​ ಪಂದ್ಯಗಳನ್ನ ಒತ್ತಡವನ್ನ ಕಡಿಮೆ ಮಾಡಲು ಸಹಕಾರಿ ಆಗಲಿದೆ.

ವಿರೇಂದ್ರ ಸೆಹ್ವಾಗ್​, ಭಾರತದ ಮಾಜಿ ಕ್ರಿಕೆಟಿಗ

ಸ್ಫೋಟಕ ಬ್ಯಾಟ್ಸ್​ಮನ್ ವಿರೇಂದ್ರ ಸೆಹ್ವಾಗ್​​​ ಹೇಳಿದ ಮಾತಿನಲ್ಲಿ ನಿಜಕ್ಕೂ ಅರ್ಥವಿದೆ. ಯಾಕಂದ್ರೆ ಈಗಿನ ಭಾರತ ತಂಡದಲ್ಲಿ ಅಗ್ರೆಸ್ಸಿವ್​ ಅಪ್ರೋಚ್​​​​​ ಕಾಣಿಸ್ತಿಲ್ಲ. ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ಅಗ್ರೆಸ್ಸಿವ್​ನೆಸ್​​​​​ ಮರೆಯಾಗ್ತಿದೆ. ಆದರೆ ವಿಶ್ವಕಪ್​​ನಂತ ಬಿಗ್ ಟೂರ್ನಿಯನ್ನ ಗೆಲ್ಲಬೇಕಾದ್ರೆ ಅಗ್ರೆಸ್ಸಿವ್ ಅಪ್ರೋಚ್​​ ಬಹುಮುಖ್ಯ.

ಅಪ್ರೋಚ್​ ಬದಲಿಸಿ 2011ರ ವಿಶ್ವಕಪ್​ ಗೆದ್ದ ‘ಮಹೇಂದ್ರ’ ಪಡೆ

2 ನವೆಂಬರ್​​, 2011 ರಂದು ಭಾರತ ವಿಶ್ವವನ್ನೇ ಗೆದ್ದ ಸುದೀನ. ಫೈನಲ್​​ನಲ್ಲಿ ಬಲಿಷ್ಠ ಶ್ರೀಲಂಕಾ ತಂಡವನ್ನ ಮಣಿಸಿ ಹಿಸ್ಟಾರಿಕಲ್​ ಒನ್ಡೇ ವಿಶ್ವಕಪ್​​​​​​​​​ ಜಯಿಸಿತ್ತು. ಅಂದಿನ ಧೋನಿ ಪಡೆ ಅಪ್ರೋಚ್​​​​​ ಬದಲಿಸಿದ್ದರಿಂದಲೇ ಚರಿತ್ರೆ ಸೃಷ್ಟಿಸಿತು ಅನ್ನೋ ಇನ್​ಸೈಡ್​ ಸ್ಟೋರಿಯನ್ನ ಸೆಹ್ವಾಗ್​​​ ರಿವೀಲ್ ಮಾಡಿದ್ದಾರೆ.

‘ಅಪ್ರೋಚ್​ ಬದಲಿಸಿ ಟ್ರೋಫಿ ಗೆದ್ದೆವು’

2008 ರಲ್ಲಿ ಗ್ಯಾರಿ ಕರ್ಸ್ಟನ್​​​ ತಂಡದ ಕೋಚ್​​​​​ ಆಗಿದ್ದರು. ವಿಶ್ವಕಪ್​ ಆರಂಭಕ್ಕೆ ಇನ್ನೂ 3 ವರ್ಷ ಬಾಕಿ ಇತ್ತು. ಆದರೆ ನಾವು ಸುದೀರ್ಘ ಸಮಯ ಇದೆ ಎಂದು ನಿರ್ಲಕ್ಷಿಸಲಿಲ್ಲ. ಅಂದಿನಿಂದಲೇ ಪ್ರತಿ ಏಕದಿನ ಪಂದ್ಯವನ್ನ ನಾಕೌಟ್​​ ಗೇಮ್​​ನಂತೆ ಆಡಲು ಶುರು ಮಾಡಿದೆವು. ವಿಶ್ವಕಪ್​ ಗೆಲ್ಲಲು ಅದು ಸಹಕಾರಿ ಆಯ್ತು.

ವಿರೇಂದ್ರ ಸೆಹ್ವಾಗ್​, ಮಾಜಿ ಕ್ರಿಕೆಟಿಗ

ತವರಿನಲ್ಲಿ ನಡೆಯುವ ಒನ್ಡೇ ವಿಶ್ವಕಪ್​ ಗೆಲ್ಲಲು ಟೀಮ್ ಇಂಡಿಯಾ ಹವಣಿಸ್ತಿದೆ. ಆ ಮಹಾದಾಸೆ ಈಡೇರಬೇಕಾದ್ರೆ ಸೆಹ್ವಾಗ್ ಹೇಳಿದಂತೆ ತಂಡ ಅಪ್ರೋಚ್ ಚೇಂಜ್ ಆಗಲೇಬೇಕಿದೆ. ಇನ್ನಾದ್ರು ರೋಹಿತ್ ಪಡೆ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸುತ್ತಾ ಅಥವಾ ಇಲ್ವಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More