newsfirstkannada.com

RAIN ALERT: ರಾಜ್ಯದಲ್ಲಿ ಇನ್ನೂ 5 ದಿನ ಗುಡುಗು ಸಹಿತ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

Share :

31-05-2023

    5 ದಿನ ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆ!

    ಹವಾಮಾನ ಇಲಾಖೆ ತಜ್ಞ ಕೊಟ್ಟ ಎಚ್ಚರಿಕೆ ಏನು?

    ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮಳೆಯಾಗಲಿದೆ?

ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್​​ 1 ಮತ್ತು 4ನೇ ತಾರೀಕಿನಂದು ಧಾರಾಕಾರ ಮಳೆಯಾದರೆ, 2 ಮತ್ತು 3ರಂದು ಸಾಧಾರಣ ಹನಿಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.

ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಅತೀ ಹೆಚ್ಚು ಮಳೆಯಾಗಲಿದ್ದು, ಜನ ಎಚ್ಚರಿಕೆಯಿಂದ ಇರಬೇಕು. ಈಗಾಗಲೇ ರಾಮನಗರದ ಮಾಗಡಿಯಲ್ಲಿ ಅತ್ಯಧಿಕ ಎಂದರೆ 7 ಸೆಂಟಿ ಮೀಟರ್​​​ ಮಳೆ ಸುರಿದಿದೆ.​ ಬೆಂಗಳೂರು 7, ಚಿಂತಾಮಣಿ ಮತ್ತು ವಿರಾಜಪೇಟೆ 5, ದೇವನಹಳ್ಳಿ ಕಡೆ 5 ಸೆಂಟಿ ಮೀಟರ್​​​ ಮಳೆ ಬಿದ್ದಿದೆ. ಕರಾವಳಿ ಕರ್ನಾಟಕದಲ್ಲೂ ಮುಂದಿನ ಒಂದು ವಾರ ಗುಡುಗು ಸಹಿತ ಜೋರು ಮಳೆ ಆಗಲಿದೆ ಎಂದು ಅಲರ್ಟ್​​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

RAIN ALERT: ರಾಜ್ಯದಲ್ಲಿ ಇನ್ನೂ 5 ದಿನ ಗುಡುಗು ಸಹಿತ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

https://newsfirstlive.com/wp-content/uploads/2023/05/rain.jpg

    5 ದಿನ ರಾಜ್ಯದಲ್ಲಿ ಗುಡುಗು ಸಹಿತ ಭಾರೀ ಮಳೆ!

    ಹವಾಮಾನ ಇಲಾಖೆ ತಜ್ಞ ಕೊಟ್ಟ ಎಚ್ಚರಿಕೆ ಏನು?

    ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮಳೆಯಾಗಲಿದೆ?

ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್​​ 1 ಮತ್ತು 4ನೇ ತಾರೀಕಿನಂದು ಧಾರಾಕಾರ ಮಳೆಯಾದರೆ, 2 ಮತ್ತು 3ರಂದು ಸಾಧಾರಣ ಹನಿಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ.

ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಅತೀ ಹೆಚ್ಚು ಮಳೆಯಾಗಲಿದ್ದು, ಜನ ಎಚ್ಚರಿಕೆಯಿಂದ ಇರಬೇಕು. ಈಗಾಗಲೇ ರಾಮನಗರದ ಮಾಗಡಿಯಲ್ಲಿ ಅತ್ಯಧಿಕ ಎಂದರೆ 7 ಸೆಂಟಿ ಮೀಟರ್​​​ ಮಳೆ ಸುರಿದಿದೆ.​ ಬೆಂಗಳೂರು 7, ಚಿಂತಾಮಣಿ ಮತ್ತು ವಿರಾಜಪೇಟೆ 5, ದೇವನಹಳ್ಳಿ ಕಡೆ 5 ಸೆಂಟಿ ಮೀಟರ್​​​ ಮಳೆ ಬಿದ್ದಿದೆ. ಕರಾವಳಿ ಕರ್ನಾಟಕದಲ್ಲೂ ಮುಂದಿನ ಒಂದು ವಾರ ಗುಡುಗು ಸಹಿತ ಜೋರು ಮಳೆ ಆಗಲಿದೆ ಎಂದು ಅಲರ್ಟ್​​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More