ರಾಜಕೀಯ ಕಾರ್ಯಕ್ರಮ ಮುಗಿಸಿ ಬರುವಾಗ ಬ್ಯಾಡ್ ಟೈಂ
ಪೈಲೆಟ್ ಜಾಗೃತಿಯಿಂದ ತಪ್ಪಿದ ಭಾರೀ ಅನಾಹುತ
SSKM ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಮಮತಾ
ಕೋಲ್ಕತ್ತಾ: ಕೆಟ್ಟ ಹವಾಮಾನದಿಂದ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಕೋಲ್ಕತ್ತಾದಲ್ಲಿನ SSKM ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದಾರೆ.
ನಿನ್ನೆ ಸಿಎಂ ಮಮತಾ ಬ್ಯಾನರ್ಜಿ ಅವರು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಅನ್ನು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಬರುವ ಸಿಲಿಗುರಿ ಬಳಿಯ ಸೆವೋಕ್ ಏರ್ಫೋರ್ಸ್ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಈ ವೇಳೆ ಸಿಎಂ ಅವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಅಲ್ಲಿನ ಆರ್ಮಿ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಅವರನ್ನು ಕಾರಿನ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಬಳಿ ಬಂದಾಗ ವೀಲ್ ಚೇರ್ ತರಲಾಯಿತು. ಆದ್ರೆ ಸಿಎಂ ಅದನ್ನು ನಿರಾಕರಿಸಿ ನಡೆದುಕೊಂಡೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಈ ಬಗ್ಗೆ ಮಾತನಾಡಿದ ಸಿಎಂ ಮಮತಾ ಅವರು, ಇಂಡಿಯನ್ ಆರ್ಮಿಗೆ ಥ್ಯಾಂಕ್ಸ್ ಹೇಳಿದರು. ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದಿಂದಾಗಿ ನಾನು ಆಕಸ್ಮಿಕವಾಗಿ ಈ ಏರ್ಬೇಸ್ಗೆ ಬರಬೇಕಾಯಿತು. ಇದು ಹೆಮ್ಮೆಯ ವಿಷಯದ ಜೊತೆ ನನಗೊಲಿದ ಭಾಗ್ಯ. ಹೆಚ್ಚಿನ ಕಾಳಜಿ ವಹಿಸಿದ್ದಕ್ಕಾಗಿ ಅವರಿಗೆ ಕೃತಜ್ಞಳಾಗಿದ್ದೇನೆ. ಭಾರತಕ್ಕಾಗಿ ದುಡಿಯುವ ಇಂತಹ ಯೋಧರನ್ನು ಭೇಟಿ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ದೇಶದ ಗಡಿಗಳಲ್ಲಿ ನಿತ್ಯ ಕಾರ್ಯವಹಿಸುವ ಸೇನೆಯ ಎಲ್ಲ ಸಿಬ್ಬಂದಿಗೆ ಧನ್ಯವಾದಗಳು ಎಂದಿದ್ದಾರೆ.
ಮುಂಬರುವ ಪಂಚಾಯತ್ ಎಲೆಕ್ಷನ್ ಹಿನ್ನೆಲೆಯಲ್ಲಿ ಜಲ್ಪೈಗುರಿ ಜಿಲ್ಲೆಯಲ್ಲಿ ರಾಜಕೀಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದನ್ನು ಮುಗಿಸಿ ಕೋಲ್ಕತ್ತಾಗೆ ಹೆಲಿಕಾಪ್ಟರ್ನಲ್ಲಿ ವಾಪಸ್ ಆಗುವಾಗ ಮೋಡ ಮುಸುಕಿದ ವಾತಾವರಣ ಉಂಟಾಗಿ ಮಳೆ ಬಂದಿದೆ. ಹೀಗಾಗಿ ಪೈಲೆಟ್ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಬೇಕಾಗಿ ಬಂತು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Thanks to God!
Didi's Safe!🙏Our Hon'ble CM @MamataOfficial's helicopter makes emergency landing at Sevoke Airbase, now didi lands in #Kolkata!
Didi's minor injured in leg & waist, we pray to God for her speedy recovery!🙏🙏@AITCofficial#MamataBanerjee pic.twitter.com/dUlMygZJ5i
— DIPANKAR KUMAR DAS (TITU) (@titu_dipankar) June 27, 2023
ರಾಜಕೀಯ ಕಾರ್ಯಕ್ರಮ ಮುಗಿಸಿ ಬರುವಾಗ ಬ್ಯಾಡ್ ಟೈಂ
ಪೈಲೆಟ್ ಜಾಗೃತಿಯಿಂದ ತಪ್ಪಿದ ಭಾರೀ ಅನಾಹುತ
SSKM ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಮಮತಾ
ಕೋಲ್ಕತ್ತಾ: ಕೆಟ್ಟ ಹವಾಮಾನದಿಂದ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಕೋಲ್ಕತ್ತಾದಲ್ಲಿನ SSKM ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದಾರೆ.
ನಿನ್ನೆ ಸಿಎಂ ಮಮತಾ ಬ್ಯಾನರ್ಜಿ ಅವರು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಅನ್ನು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಬರುವ ಸಿಲಿಗುರಿ ಬಳಿಯ ಸೆವೋಕ್ ಏರ್ಫೋರ್ಸ್ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಈ ವೇಳೆ ಸಿಎಂ ಅವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಅಲ್ಲಿನ ಆರ್ಮಿ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಅವರನ್ನು ಕಾರಿನ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಬಳಿ ಬಂದಾಗ ವೀಲ್ ಚೇರ್ ತರಲಾಯಿತು. ಆದ್ರೆ ಸಿಎಂ ಅದನ್ನು ನಿರಾಕರಿಸಿ ನಡೆದುಕೊಂಡೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಈ ಬಗ್ಗೆ ಮಾತನಾಡಿದ ಸಿಎಂ ಮಮತಾ ಅವರು, ಇಂಡಿಯನ್ ಆರ್ಮಿಗೆ ಥ್ಯಾಂಕ್ಸ್ ಹೇಳಿದರು. ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದಿಂದಾಗಿ ನಾನು ಆಕಸ್ಮಿಕವಾಗಿ ಈ ಏರ್ಬೇಸ್ಗೆ ಬರಬೇಕಾಯಿತು. ಇದು ಹೆಮ್ಮೆಯ ವಿಷಯದ ಜೊತೆ ನನಗೊಲಿದ ಭಾಗ್ಯ. ಹೆಚ್ಚಿನ ಕಾಳಜಿ ವಹಿಸಿದ್ದಕ್ಕಾಗಿ ಅವರಿಗೆ ಕೃತಜ್ಞಳಾಗಿದ್ದೇನೆ. ಭಾರತಕ್ಕಾಗಿ ದುಡಿಯುವ ಇಂತಹ ಯೋಧರನ್ನು ಭೇಟಿ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ದೇಶದ ಗಡಿಗಳಲ್ಲಿ ನಿತ್ಯ ಕಾರ್ಯವಹಿಸುವ ಸೇನೆಯ ಎಲ್ಲ ಸಿಬ್ಬಂದಿಗೆ ಧನ್ಯವಾದಗಳು ಎಂದಿದ್ದಾರೆ.
ಮುಂಬರುವ ಪಂಚಾಯತ್ ಎಲೆಕ್ಷನ್ ಹಿನ್ನೆಲೆಯಲ್ಲಿ ಜಲ್ಪೈಗುರಿ ಜಿಲ್ಲೆಯಲ್ಲಿ ರಾಜಕೀಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದನ್ನು ಮುಗಿಸಿ ಕೋಲ್ಕತ್ತಾಗೆ ಹೆಲಿಕಾಪ್ಟರ್ನಲ್ಲಿ ವಾಪಸ್ ಆಗುವಾಗ ಮೋಡ ಮುಸುಕಿದ ವಾತಾವರಣ ಉಂಟಾಗಿ ಮಳೆ ಬಂದಿದೆ. ಹೀಗಾಗಿ ಪೈಲೆಟ್ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಬೇಕಾಗಿ ಬಂತು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Thanks to God!
Didi's Safe!🙏Our Hon'ble CM @MamataOfficial's helicopter makes emergency landing at Sevoke Airbase, now didi lands in #Kolkata!
Didi's minor injured in leg & waist, we pray to God for her speedy recovery!🙏🙏@AITCofficial#MamataBanerjee pic.twitter.com/dUlMygZJ5i
— DIPANKAR KUMAR DAS (TITU) (@titu_dipankar) June 27, 2023