newsfirstkannada.com

ದಲಿತ 4, ಲಿಂಗಾಯತ 1, ಮುಸ್ಲಿಂ 1; ಸಿದ್ದರಾಮಯ್ಯ ಮೊದಲ ಹಂತದ ಕ್ಯಾಬಿನೆಟ್ ಲೆಕ್ಕಾಚಾರ ಏನು?

Share :

20-05-2023

    ಸಿದ್ದರಾಮಯ್ಯ 2.O ಸರ್ಕಾರದಲ್ಲಿ 8 ಸಚಿವರು

    ಮೊದಲ ಹಂತದಲ್ಲಿ ಯಾವ ಸಮುದಾಯಕ್ಕೆ ಮಣೆ

    ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರವೇ ಬೇರೆ

ಬೆಂಗಳೂರು: ರಾಜ್ಯದಲ್ಲಿ ಇಂದು ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಿದ್ದರಾಮಯ್ಯ 2.O ಸರ್ಕಾರದಲ್ಲಿ 8 ಶಾಸಕರಿಗಷ್ಟೇ ಮಂತ್ರಿ ಪಟ್ಟ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಎಂಟು ನೂತನ ಸಚಿವರ ಯಾರು ಅನ್ನೋದು ಈಗಾಗಲೇ ಅಧಿಕೃತವಾಗಿದೆ.

ಸಿಎಂ, ಡಿಸಿಎಂ ಜೊತೆಗೆ 8 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ 8 ನೂತನ ಸಚಿವರ ಆಯ್ಕೆ ಬಹಳಷ್ಟು ವಿಶೇಷವಾಗಿದೆ. ಕಾಂಗ್ರೆಸ್ ವರಿಷ್ಟರು ಅಳೆದು ತೂಗಿ, ಸಮುದಾಯವಾರು ಪ್ರಾತಿನಿದ್ಯ ನೀಡಿ ಆಯ್ಕೆ ಮಾಡಿದ್ದಾರೆ. ಪ್ರಮುಖವಾಗಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ. ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎರಡೂ ಬಣಗಳ ಬಡಿದಾಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಅವಕಾಶ ನೀಡಿಲ್ಲ. ಮೊದಲ ಹಂತದ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ ನೀಡಲಾಗಿದೆ.

ನೂತನ ಸಚಿವರು

  • ಎಂ.ಬಿ ಪಾಟೀಲ್, ಲಿಂಗಾಯತ
  • ಡಾ.ಜಿ ಪರಮೇಶ್ವರ್, ದಲಿತ ಬಲ
  • ಪ್ರಿಯಾಂಕ್ ಖರ್ಗೆ, ದಲಿತ ಬಲ
  • ಕೆ.ಹೆಚ್ ಮುನಿಯಪ್ಪ, ದಲಿತ ಎಡ
  • ಕೆ.ಜೆ ಜಾರ್ಜ್, ಕ್ರಿಶ್ಚಿಯನ್
  • ಸತೀಶ್ ಜಾರಕಿಹೊಳಿ, ST (ವಾಲ್ಮೀಕಿ)
  • ಜಮೀರ್ ಅಹ್ಮದ್ ಖಾನ್, ಮುಸ್ಲಿಂ ಸಮುದಾಯ
  • ರಾಮಲಿಂಗಾ ರೆಡ್ಡಿ, ರೆಡ್ಡಿ ಒಕ್ಕಲಿಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಲಿತ 4, ಲಿಂಗಾಯತ 1, ಮುಸ್ಲಿಂ 1; ಸಿದ್ದರಾಮಯ್ಯ ಮೊದಲ ಹಂತದ ಕ್ಯಾಬಿನೆಟ್ ಲೆಕ್ಕಾಚಾರ ಏನು?

https://newsfirstlive.com/wp-content/uploads/2023/05/Siddaramaiah-Cabinet.jpg

    ಸಿದ್ದರಾಮಯ್ಯ 2.O ಸರ್ಕಾರದಲ್ಲಿ 8 ಸಚಿವರು

    ಮೊದಲ ಹಂತದಲ್ಲಿ ಯಾವ ಸಮುದಾಯಕ್ಕೆ ಮಣೆ

    ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರವೇ ಬೇರೆ

ಬೆಂಗಳೂರು: ರಾಜ್ಯದಲ್ಲಿ ಇಂದು ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಿದ್ದರಾಮಯ್ಯ 2.O ಸರ್ಕಾರದಲ್ಲಿ 8 ಶಾಸಕರಿಗಷ್ಟೇ ಮಂತ್ರಿ ಪಟ್ಟ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಎಂಟು ನೂತನ ಸಚಿವರ ಯಾರು ಅನ್ನೋದು ಈಗಾಗಲೇ ಅಧಿಕೃತವಾಗಿದೆ.

ಸಿಎಂ, ಡಿಸಿಎಂ ಜೊತೆಗೆ 8 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ 8 ನೂತನ ಸಚಿವರ ಆಯ್ಕೆ ಬಹಳಷ್ಟು ವಿಶೇಷವಾಗಿದೆ. ಕಾಂಗ್ರೆಸ್ ವರಿಷ್ಟರು ಅಳೆದು ತೂಗಿ, ಸಮುದಾಯವಾರು ಪ್ರಾತಿನಿದ್ಯ ನೀಡಿ ಆಯ್ಕೆ ಮಾಡಿದ್ದಾರೆ. ಪ್ರಮುಖವಾಗಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ. ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎರಡೂ ಬಣಗಳ ಬಡಿದಾಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಅವಕಾಶ ನೀಡಿಲ್ಲ. ಮೊದಲ ಹಂತದ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ ನೀಡಲಾಗಿದೆ.

ನೂತನ ಸಚಿವರು

  • ಎಂ.ಬಿ ಪಾಟೀಲ್, ಲಿಂಗಾಯತ
  • ಡಾ.ಜಿ ಪರಮೇಶ್ವರ್, ದಲಿತ ಬಲ
  • ಪ್ರಿಯಾಂಕ್ ಖರ್ಗೆ, ದಲಿತ ಬಲ
  • ಕೆ.ಹೆಚ್ ಮುನಿಯಪ್ಪ, ದಲಿತ ಎಡ
  • ಕೆ.ಜೆ ಜಾರ್ಜ್, ಕ್ರಿಶ್ಚಿಯನ್
  • ಸತೀಶ್ ಜಾರಕಿಹೊಳಿ, ST (ವಾಲ್ಮೀಕಿ)
  • ಜಮೀರ್ ಅಹ್ಮದ್ ಖಾನ್, ಮುಸ್ಲಿಂ ಸಮುದಾಯ
  • ರಾಮಲಿಂಗಾ ರೆಡ್ಡಿ, ರೆಡ್ಡಿ ಒಕ್ಕಲಿಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More